ETV Bharat / bharat

ದಶಕದಿಂದ ಕೋಣೆಯಲ್ಲೇ ಬಂಧಿಯಾಗಿದ್ದ ಒಡಹುಟ್ಟಿದ ಮೂವರು ಮಾನಸಿಕ ಅಸ್ವಸ್ಥರ ರಕ್ಷಣೆ..

ನಾನು ಪ್ರತಿನಿತ್ಯ ಬಾಗಿಲ ಹೊರಗಡೆ ಆಹಾರವನ್ನು ತಂದಿಡುತ್ತಿದ್ದೆ ಎಂದು ನಿವೃತ್ತ ಸರ್ಕಾರಿ ನೌಕರರಾಗಿರುವ ಈ ಮೂವರ ತಂದೆ ಹೇಳುತ್ತಾರೆ. ಆದರೆ, ಇದು ಸುಳ್ಳೋ ನಿಜವೋ ಎಂಬುದು ತಿಳಿದು ಬಂದಿಲ್ಲ..

author img

By

Published : Dec 29, 2020, 11:35 AM IST

rajkot latest news
ದಶಕದಿಂದ ಕೋಣೆಯಲ್ಲೇ ಬಂಧಿಯಾಗಿದ್ದ ಮಾನಸಿಕ ಅಸ್ವಸ್ಥ ಒಡಹುಟ್ಟಿದವರ ರಕ್ಷಣೆ

ರಾಜ್​​ಕೋಟ್​ (ಗುಜರಾತ್​): ಕಳೆದ 10 ವರ್ಷಗಳಿಂದ ಕೋಣೆಯೊಂದರಲ್ಲಿ ಮೂವರು ಮಾನಸಿಕ ಅಸ್ವಸ್ಥರು ಲಾಕ್​ ಆಗಿದ್ದ ಶಾಕಿಂಗ್​ ಘಟನೆಯೊಂದು ಗುಜರಾತ್​ನ ರಾಜ್​ಕೋಟ್​​ನಲ್ಲಿ ಬೆಳಕಿಗೆ ಬಂದಿದ್ದು, ​ಇದೀಗ ಅವರನ್ನು ರಕ್ಷಿಸಲಾಗಿದೆ.

ಇವರ ತಂದೆ ನೀಡಿದ ಮಾಹಿತಿ ಮೇರೆಗೆ ರಾಜ್​ಕೋಟ್​​ನ 'ಸಾಥಿ ಸೇವಾ ತಂಡ' (ಎನ್​ಜಿಒ) ಭಾನುವಾರ ಸಂಜೆ ಸಂತ್ರಸ್ತರನ್ನು ರಕ್ಷಿಸಿದೆ. ಉದ್ದನೆಯ ಸಿಕ್ಕುಸಿಕ್ಕಾದ ಕೂದಲು ಹಾಗೂ ಗಡ್ಡ ಬೆಳೆದಿತ್ತು. ಎದ್ದು ನಿಲ್ಲುವಷ್ಟು ಶಕ್ತಿ ಮೂವರಲ್ಲಿರಲಿಲ್ಲ. ನಮ್ಮ ಸದಸ್ಯರು ಈ ಮೂವರನ್ನು ಹೊರಗೆ ಕರೆತಂದು ಸ್ವಚ್ಛಗೊಳಿಸಿದ್ದಾರೆ ಎಂದು ಎನ್​ಜಿಒ ಅಧಿಕಾರಿ ಜಲ್ಪಾ ಪಟೇಲ್ ಮಾಹಿತಿ ನೀಡಿದ್ದಾರೆ.

ಒಡಹುಟ್ಟಿದವರಾದ ಅಂಬರೀಶ್ (42)​, ಭಾವೇಶ್​ ಹಾಗೂ ಇವರ ಸಹೋದರಿ ಮೇಘನಾ (39) ಎಂಬುವರು ದಶಕದ ಹಿಂದೆ ತಾವೇ ಬಾಗಿಲು ಲಾಕ್​ ಮಾಡಿಕೊಂಡು ಕೋಣೆಯೊಳಗೆ ಬಂಧಿಯಾಗಿದ್ದರು. ತಮ್ಮ ತಾಯಿಯ ಮರಣದ ನಂತರ ಇವರು ಮಾನಸಿಕ ಅಸ್ವಸ್ಥರಾಗಿದ್ದು, ಈ ನಿರ್ಧಾರ ತೆಗೆದುಕೊಂಡಿದ್ದರು.

ನಾನು ಪ್ರತಿನಿತ್ಯ ಬಾಗಿಲ ಹೊರಗಡೆ ಆಹಾರವನ್ನು ತಂದಿಡುತ್ತಿದ್ದೆ ಎಂದು ನಿವೃತ್ತ ಸರ್ಕಾರಿ ನೌಕರರಾಗಿರುವ ಈ ಮೂವರ ತಂದೆ ಹೇಳುತ್ತಾರೆ. ಆದರೆ, ಇದು ಸುಳ್ಳೋ ನಿಜವೋ ಎಂಬುದು ತಿಳಿದು ಬಂದಿಲ್ಲ.

ಇದನ್ನೂ ಓದಿ: 'ನ್ಯುಮೋಸಿಲ್' ಲಸಿಕೆ ಬಿಡುಗಡೆಗೊಳಿದ ಸಚಿವ ಡಾ.ಹರ್ಷವರ್ಧನ್

ನನ್ನ ಹಿರಿಯ ಮಗ ಅಂಬರೀಶ್ ಬಿಎ, ಎಲ್ಎಲ್​​ಬಿ ಪದವಿ ಪಡೆದಿದ್ದಾರೆ. ಮೇಘನಾ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ. ಕಿರಿಯ ಮಗ ಭಾವೇಶ್​ ಬಿ.ಎ ಪದವಿ ಪಡೆದಿದ್ದು, ಭರವಸೆಯ ಕ್ರಿಕೆಟ್ ಆಟಗಾರ. ಇವರಿಗೆ ತುರ್ತಾಗಿ ಚಿಕಿತ್ಸೆ ಕೊಡಿಸಬೇಕು ಎಂದು ತಂದೆ ಹೇಳುತ್ತಾರೆ. ಆದರೆ, ಈವರೆಗೆ ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ರಾಜ್​​ಕೋಟ್​ (ಗುಜರಾತ್​): ಕಳೆದ 10 ವರ್ಷಗಳಿಂದ ಕೋಣೆಯೊಂದರಲ್ಲಿ ಮೂವರು ಮಾನಸಿಕ ಅಸ್ವಸ್ಥರು ಲಾಕ್​ ಆಗಿದ್ದ ಶಾಕಿಂಗ್​ ಘಟನೆಯೊಂದು ಗುಜರಾತ್​ನ ರಾಜ್​ಕೋಟ್​​ನಲ್ಲಿ ಬೆಳಕಿಗೆ ಬಂದಿದ್ದು, ​ಇದೀಗ ಅವರನ್ನು ರಕ್ಷಿಸಲಾಗಿದೆ.

ಇವರ ತಂದೆ ನೀಡಿದ ಮಾಹಿತಿ ಮೇರೆಗೆ ರಾಜ್​ಕೋಟ್​​ನ 'ಸಾಥಿ ಸೇವಾ ತಂಡ' (ಎನ್​ಜಿಒ) ಭಾನುವಾರ ಸಂಜೆ ಸಂತ್ರಸ್ತರನ್ನು ರಕ್ಷಿಸಿದೆ. ಉದ್ದನೆಯ ಸಿಕ್ಕುಸಿಕ್ಕಾದ ಕೂದಲು ಹಾಗೂ ಗಡ್ಡ ಬೆಳೆದಿತ್ತು. ಎದ್ದು ನಿಲ್ಲುವಷ್ಟು ಶಕ್ತಿ ಮೂವರಲ್ಲಿರಲಿಲ್ಲ. ನಮ್ಮ ಸದಸ್ಯರು ಈ ಮೂವರನ್ನು ಹೊರಗೆ ಕರೆತಂದು ಸ್ವಚ್ಛಗೊಳಿಸಿದ್ದಾರೆ ಎಂದು ಎನ್​ಜಿಒ ಅಧಿಕಾರಿ ಜಲ್ಪಾ ಪಟೇಲ್ ಮಾಹಿತಿ ನೀಡಿದ್ದಾರೆ.

ಒಡಹುಟ್ಟಿದವರಾದ ಅಂಬರೀಶ್ (42)​, ಭಾವೇಶ್​ ಹಾಗೂ ಇವರ ಸಹೋದರಿ ಮೇಘನಾ (39) ಎಂಬುವರು ದಶಕದ ಹಿಂದೆ ತಾವೇ ಬಾಗಿಲು ಲಾಕ್​ ಮಾಡಿಕೊಂಡು ಕೋಣೆಯೊಳಗೆ ಬಂಧಿಯಾಗಿದ್ದರು. ತಮ್ಮ ತಾಯಿಯ ಮರಣದ ನಂತರ ಇವರು ಮಾನಸಿಕ ಅಸ್ವಸ್ಥರಾಗಿದ್ದು, ಈ ನಿರ್ಧಾರ ತೆಗೆದುಕೊಂಡಿದ್ದರು.

ನಾನು ಪ್ರತಿನಿತ್ಯ ಬಾಗಿಲ ಹೊರಗಡೆ ಆಹಾರವನ್ನು ತಂದಿಡುತ್ತಿದ್ದೆ ಎಂದು ನಿವೃತ್ತ ಸರ್ಕಾರಿ ನೌಕರರಾಗಿರುವ ಈ ಮೂವರ ತಂದೆ ಹೇಳುತ್ತಾರೆ. ಆದರೆ, ಇದು ಸುಳ್ಳೋ ನಿಜವೋ ಎಂಬುದು ತಿಳಿದು ಬಂದಿಲ್ಲ.

ಇದನ್ನೂ ಓದಿ: 'ನ್ಯುಮೋಸಿಲ್' ಲಸಿಕೆ ಬಿಡುಗಡೆಗೊಳಿದ ಸಚಿವ ಡಾ.ಹರ್ಷವರ್ಧನ್

ನನ್ನ ಹಿರಿಯ ಮಗ ಅಂಬರೀಶ್ ಬಿಎ, ಎಲ್ಎಲ್​​ಬಿ ಪದವಿ ಪಡೆದಿದ್ದಾರೆ. ಮೇಘನಾ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ. ಕಿರಿಯ ಮಗ ಭಾವೇಶ್​ ಬಿ.ಎ ಪದವಿ ಪಡೆದಿದ್ದು, ಭರವಸೆಯ ಕ್ರಿಕೆಟ್ ಆಟಗಾರ. ಇವರಿಗೆ ತುರ್ತಾಗಿ ಚಿಕಿತ್ಸೆ ಕೊಡಿಸಬೇಕು ಎಂದು ತಂದೆ ಹೇಳುತ್ತಾರೆ. ಆದರೆ, ಈವರೆಗೆ ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.