ಕರ್ನೂಲು(ಆಂಧ್ರಪ್ರದೇಶ): ಜಿಲ್ಲೆಯ ಶ್ರೀಶೈಲ ಮಹಾಕ್ಷೇತ್ರದಲ್ಲಿ ಕಾರ್ತಿಕ ಮಾಸೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ತಿಕ ಮಾಸದಲ್ಲಿ 10 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದು, ಭ್ರಮರಾಂಬ ಮತ್ತು ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದಿದ್ದಾರೆ. ಅಚ್ಚರಿ ಸಂಗತಿಯೆಂದ್ರೆ ಈ ಕಾರ್ತಿಕ ಮಾಸದಲ್ಲಿ ದೇವಾಲಯದಲ್ಲಿ 30 ಕೋಟಿಗೂ ಅಧಿಕ ಆದಾಯ ಬಂದಿದೆ.
ಶ್ರೀಶೈಲ ದೇವಸ್ಥಾನಕ್ಕೆ ರೂ.30,89,27,503 ಆದಾಯ ಬಂದಿದೆ. ಕಳೆದ ವರ್ಷಕ್ಕಿಂತ 11.02 ಕೋಟಿ ರೂ.ಗಳ ಆದಾಯ ಹೆಚ್ಚಿಗೆ ಬಂದಿದೆ ಎಂದು ದೇವಸ್ಥಾನದ ಇಒ ಎಸ್ ಲವಣ್ಣ ತಿಳಿಸಿದ್ದಾರೆ.

ದರ್ಶನದ ಟಿಕೆಟ್, ಅರ್ಜಿತ ಸೇವೆ, ಲಡ್ಡು ಪ್ರಸಾದ, ಸುಂಕದಕಟ್ಟೆ, ವಿಭೂತಿ, ಬಳೆ, ಪ್ರಕಟಣೆಗಳ ಮಾರಾಟ, ತುಲಾಭಾರ, ಕೇಶಮುಂಡನ, ಆನ್ಲೈನ್ ಸೇವೆ, ಹುಂಡಿ ಆದಾಯ ಹಾಗೂ ವಿವಿಧ ಯೋಜನೆಗಳಿಂದ ಈ ಒಟ್ಟು 30 ಕೋಟಿಗೂ ಅಧಿಕ ಆದಾಯ ಬಂದಿದೆ ಎಂದು ಇಒ ಮಾಹಿತಿ ನೀಡಿದ್ದಾರೆ.
ಓದಿ: ಹಾವೇರಿ: ಬಟನ್ ರೋಜ್ ಬೆಳೆದು ತಿಂಗಳಿಗೆ ಲಕ್ಷಾಂತರ ರೂ ಲಾಭ ಗಳಿಸುತ್ತಿರುವ ಮಾದರಿ ರೈತ