ಹೈದರಾಬಾದ್( ತೆಲಂಗಾಣ): ನದಿ ಸಂಪರ್ಕಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಅಂಕಿ- ಅಂಶಗಳೆಲ್ಲವೂ ತಪ್ಪಾಗಿದೆ ಎಂದು ವಾಟರ್ ಮ್ಯಾನ್ ಆಫ್ ಇಂಡಿಯಾ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ದೇಶದ ನೀರಿನ ಸಮಸ್ಯೆಗೆ ನದಿಗಳ ಸಂಪರ್ಕವೇ ಪರಿಹಾರವಲ್ಲ. ಜಲ ಸಂರಕ್ಷಣೆ ಅತ್ಯಂತ ನಿರ್ಣಾಯಕವಾಗಿದ್ದು, ನಾಡಿನಲ್ಲಿ ಜಲ ಸಾಕ್ಷರತಾ ಆಂದೋಲನ ನಡೆಯಬೇಕು. ಜೊತೆಗೆ ಭಾರತದಲ್ಲಿ ಜಲ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಸಲಹೆ ನೀಡಿದರು.