ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ರಾಣಿ ಗ್ರಾಮದಲ್ಲಿ ಹಿಮನದಿ ಒಡೆದಿದ್ದು, ಈವರೆಗೆ 8 ಜನರ ಮೃತದೇಹಗಳು ಪತ್ತೆಯಾಗಿವೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಚಮೋಲಿಯ ತಪೋವನ್ ಅಣೆಕಟ್ಟು ಬಳಿಯ ಸುರಂಗದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಎಸ್ಡಿಆರ್ಎಫ್ ಸದಸ್ಯರು ಮಂದಾಕಿನಿ ನದಿಯ ಮಟ್ಟ ಕಡಿಮೆಯಾಗಲು ಕಾಯುತ್ತಿದ್ದಾರೆ.
ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಚಮೋಲಿಯ ತಪೋವನ್ ಬಳಿ ಸುರಂಗಕ್ಕೆ ದಾರಿ ಹುಡುಕಲೆಂದು ಅಗೆಯಲು ಪ್ರಾರಂಭಿಸಿದ್ದಾರೆ.
![ಉತ್ತರಾಖಂಡ ಹಿಮನದಿ ದುರಂತ The Uttarakhand Glacier Disaster](https://etvbharatimages.akamaized.net/etvbharat/prod-images/10539954_rescue.jpg)
ಚಮೋಲಿಯ ತಪೋವನ್ ಅಣೆಕಟ್ಟಿನ ಬಳಿ ಸುರಂಗವನ್ನು ತೆರೆಯಲು, ಅವಶೇಷಗಳನ್ನು ಹೊರತೆಗೆಯಲು ಭಾರಿ ಗಾತ್ರದ ಅಗೆಯುವ ಯಂತ್ರಗಳನ್ನು ತರಲಾಗಿದೆ. ಸ್ಥಳೀಯ ನದಿಯಲ್ಲಿ ಹೆಚ್ಚಿದ ನೀರು ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ.
ಇದನ್ನೂ ಓದಿ: ಕೆಂಪುಕೋಟೆ ಬಳಿ ಹಿಂಸಾಚಾರ ಪ್ರಕರಣ: ಆರೋಪಿ ಸುಖ್ದೇವ್ ಸಿಂಗ್ ಬಂಧನ
ಹಿಮನದಿ ಸ್ಫೋಟವು ಧೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹವನ್ನು ಉಂಟುಮಾಡಿತು ಮತ್ತು ಹಿಮಾಲಯದ ಮೇಲ್ಭಾಗದಲ್ಲಿ ದೊಡ್ಡ ಪ್ರಮಾಣದ ವಿನಾಶಕ್ಕೆ ಕಾರಣವಾಗಿದೆ.
ಚಮೋಲಿ ಜಿಲ್ಲೆಯ ತಪೋವನ್ನ ಧೌಲಿಗಂಗಾದಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ 8 ಶವಗಳನ್ನು ಹೊರತೆಗೆಯಲಾಗಿದೆ. ಐಟಿಬಿಪಿ, ಭಾರತೀಯ ಸೇನೆ, ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.