ETV Bharat / bharat

ಕೋವಿಡ್‌ ಸೋಂಕಿತರನ್ನ ಪತ್ತೆ ಹಚ್ಚಲು ತೆಲಂಗಾಣದಲ್ಲಿ ಇಂದಿನಿಂದ ಮನೆ-ಮನೆ 'ಜ್ವರ' ಸರ್ವೆ

ಕೋವಿಡ್‌ ಸೋಂಕಿತರನ್ನು ಪತ್ತೆ ಹಚ್ಚುವ ಸಲುವಾಗಿ ತೆಲಂಗಾಣದಲ್ಲಿ ಇಂದಿನಿಂದ ಜ್ವರ ಸರ್ವೆ ಆರಂಭವಾಗಿದೆ. ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಜ್ವರ ಇರುವ ಬಗ್ಗೆ ಮಾಹಿತಿ ಪಡೆದು ಔಷಧಿ ಕಿಟ್‌ ನೀಡಲಿದ್ದಾರೆ..

author img

By

Published : Jan 21, 2022, 3:33 PM IST

Telangana govt launches fever survey to assess intensity of Covid cases from today
ಸೋಂಕಿತರನ್ನ ಪತ್ತೆ ಹಚ್ಚುವ ಸವಾಲು; ತೆಲಂಗಾಣದಲ್ಲಿ ಇಂದಿನಿಂದ ಮನೆ-ಮನೆ 'ಜ್ವರ' ಸರ್ವೆ

ಹೈದರಾಬಾದ್‌ : ಕೋವಿಡ್ ಪ್ರಕರಣಗಳ ತೀವ್ರತೆ ಹಾಗೂ ಸೋಂಕಿತರನ್ನು ಪತ್ತೆ ಹಚ್ಚಲು ತೆಲಂಗಾಣ ಸರ್ಕಾರ ಇಂದಿನಿಂದ ಮನೆ-ಮನೆ ಜ್ವರ ಸಮೀಕ್ಷೆಗೆ ಮುಂದಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೌರಾಡಳಿತ, ನಗರಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇಂದಿನಿಂದ ಸಮೀಕ್ಷೆ ಪ್ರಾರಂಭವಾಗಿದೆ. ಕೋವಿಡ್ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚುವುದೇ ಇದರ ಮುಖ್ಯ ಗುರಿಯಾಗಿದೆ.

ಜ್ವರ ಸಮೀಕ್ಷೆಯ ಸಹಾಯದಿಂದ ವೈದ್ಯಕೀಯ ಸಿಬ್ಬಂದಿ ಔಷಧಿ ಕಿಟ್‌ಗಳನ್ನು ಪೂರೈಸುತ್ತಾರೆ. ಕೋವಿಡ್‌ನಿಂದ ಬಳಲುತ್ತಿರುವವರನ್ನು ತಕ್ಷಣವೇ ಪ್ರತ್ಯೇಕಿಸುತ್ತಾರೆ. ಇದು ಒಮಿಕ್ರಾನ್ ರೂಪಾಂತರ ಹರಡುವಿಕೆಯ ಸರಪಳಿ ಮುರಿಯಲು ನೆರವಾಗಲಿದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಕೆಸಿಆರ್‌ ಅವರ ನಿರ್ದೇಶನದಂತೆ ಇಂದಿನಿಂದ ರಾಜ್ಯಾದ್ಯಂತ ಜ್ವರ ಸಮೀಕ್ಷೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಟಿ ಹರೀಶ್ ರಾವ್ ತಿಳಿಸಿದ್ದಾರೆ.

ಸೌಮ್ಯ ರೋಗಲಕ್ಷಣಗಳು ಅಥವಾ ಇತರ ಕಾರಣಗಳಿಗಾಗಿ ಕೋವಿಡ್ ಪರೀಕ್ಷೆಗೆ ಒಳಗಾಗದ ಜನಸಂಖ್ಯೆಯ ದೊಡ್ಡ ಭಾಗವೇ ಇದೆ. ಜ್ವರ ಸಮೀಕ್ಷೆಯು ಅಂತಹ ವ್ಯಕ್ತಿಗಳ ಮನೆ ಬಾಗಿಲಿಗೆ ಕೋವಿಡ್ ಆರೋಗ್ಯ ಸೇವೆಗಳನ್ನು ಒದಗಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಹೈದರಾಬಾದ್‌ : ಕೋವಿಡ್ ಪ್ರಕರಣಗಳ ತೀವ್ರತೆ ಹಾಗೂ ಸೋಂಕಿತರನ್ನು ಪತ್ತೆ ಹಚ್ಚಲು ತೆಲಂಗಾಣ ಸರ್ಕಾರ ಇಂದಿನಿಂದ ಮನೆ-ಮನೆ ಜ್ವರ ಸಮೀಕ್ಷೆಗೆ ಮುಂದಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೌರಾಡಳಿತ, ನಗರಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇಂದಿನಿಂದ ಸಮೀಕ್ಷೆ ಪ್ರಾರಂಭವಾಗಿದೆ. ಕೋವಿಡ್ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚುವುದೇ ಇದರ ಮುಖ್ಯ ಗುರಿಯಾಗಿದೆ.

ಜ್ವರ ಸಮೀಕ್ಷೆಯ ಸಹಾಯದಿಂದ ವೈದ್ಯಕೀಯ ಸಿಬ್ಬಂದಿ ಔಷಧಿ ಕಿಟ್‌ಗಳನ್ನು ಪೂರೈಸುತ್ತಾರೆ. ಕೋವಿಡ್‌ನಿಂದ ಬಳಲುತ್ತಿರುವವರನ್ನು ತಕ್ಷಣವೇ ಪ್ರತ್ಯೇಕಿಸುತ್ತಾರೆ. ಇದು ಒಮಿಕ್ರಾನ್ ರೂಪಾಂತರ ಹರಡುವಿಕೆಯ ಸರಪಳಿ ಮುರಿಯಲು ನೆರವಾಗಲಿದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಕೆಸಿಆರ್‌ ಅವರ ನಿರ್ದೇಶನದಂತೆ ಇಂದಿನಿಂದ ರಾಜ್ಯಾದ್ಯಂತ ಜ್ವರ ಸಮೀಕ್ಷೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಟಿ ಹರೀಶ್ ರಾವ್ ತಿಳಿಸಿದ್ದಾರೆ.

ಸೌಮ್ಯ ರೋಗಲಕ್ಷಣಗಳು ಅಥವಾ ಇತರ ಕಾರಣಗಳಿಗಾಗಿ ಕೋವಿಡ್ ಪರೀಕ್ಷೆಗೆ ಒಳಗಾಗದ ಜನಸಂಖ್ಯೆಯ ದೊಡ್ಡ ಭಾಗವೇ ಇದೆ. ಜ್ವರ ಸಮೀಕ್ಷೆಯು ಅಂತಹ ವ್ಯಕ್ತಿಗಳ ಮನೆ ಬಾಗಿಲಿಗೆ ಕೋವಿಡ್ ಆರೋಗ್ಯ ಸೇವೆಗಳನ್ನು ಒದಗಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.