ETV Bharat / bharat

ಆರೋಗ್ಯ ಮಂತ್ರಿಯನ್ನು ಪ್ರಚಾರದಿಂದ ಮುಕ್ತಗೊಳಿಸಿ ವಿಷವರ್ತುಲದಿಂದ ಕಾಪಾಡಿ: ತೇಜಸ್ವಿ ಯಾದವ್

author img

By

Published : Apr 15, 2021, 5:34 PM IST

Updated : Apr 15, 2021, 5:50 PM IST

ಇಬ್ಬರು ಐಎಸ್​ಎಸ್​ ಅಧಿಕಾರಿಗಳು ಸೇರಿದಂತೆ ಹಲವರು ಕೊರೊನಾ ವೈರಸ್​ಗೆ ಬಲಿಯಾಗಿದ್ದು ಈ ಆತಂಕಕಾರಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತೇಜಶ್ವಿ ಯಾದವ್ ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಟ್ವೀಟ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ತೇಜಶ್ವಿ ಯಾದವ್
ತೇಜಶ್ವಿ ಯಾದವ್

ಪಾಟ್ನಾ: ರಾಜ್ಯವು ಕೋವಿಡ್​ ಎಂಬ ವಿಷ ವರ್ತುಲದಲ್ಲಿ ಸಿಲುಕಿದ್ದು, ಆರೋಗ್ಯ ಮಂತ್ರಿ ಮಂಗಲ್​ ಪಾಂಡ್ಯ ಅವರನ್ನು ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಿಂದ ಮುಕ್ತಗೊಳಿಸುವಂತೆ ರಾಷ್ಟ್ರೀಯ ಜನತಾದಳದ ಮುಖಂಡ ತೇಜಶ್ವಿ ಯಾದವ್​ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆಪಿ ನಡ್ಡಾಗೆ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ಹರಿದ್ವಾರ ಗಂಗಾ ಆರತಿಯಲ್ಲಿ ಭಾಗಿಯಾದ ಭಕ್ತರಲ್ಲಿ 1,700 ಜನರಿಗೆ ಕೋವಿಡ್​ ಪಾಸಿಟಿವ್​ !

ಈ ಬಗ್ಗೆ ಟ್ವೀಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ತೇಜಶ್ವಿ ಯಾದವ್, ಬಿಹಾರ್​ ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಸರಣಿ ಸಾವುಗಳಿಂದ ಜನ ತತ್ತರಿಸಿ ಹೋಗಿದ್ದು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ಸೂಕ್ತ ಆರೋಗ್ಯ ನೀಡಬೇಕಿದ್ದ ಜನಪ್ರತಿನಿಧಿಗಳು ಚುನಾವಣಾ ಪ್ರಚಾರದಲ್ಲಿ ಮುಳುಗಿದ್ದಾರೆ.

Tejashwi urges Modi to free Bihar health minister from Bengal campaign
ತೇಜಶ್ವಿ ಯಾದವ್ ಟ್ವೀಟ್​

ಸೋಂಕಿತರ ಸಂಖ್ಯೆ ಹೆಚ್ಚಳದೊಂದಿಗೆ ಸಾವುಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಇಬ್ಬರು ಐಎಸ್​ಎಸ್​ ಅಧಿಕಾರಿಗಳು ಸೇರಿದಂತೆ ಹಲವರು ಕೊರೊನಾ ವೈರಸ್​ಗೆ ಬಲಿಯಾಗಿದ್ದು ಈ ಆತಂಕಕಾರಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತೇಜಶ್ವಿ ಯಾದವ್ ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಟ್ವೀಟ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕೋವಿಡ್ ರೋಗಿ ಬದುಕಿದ್ದಾಗಲೇ ಸಾವನ್ನಪ್ಪಿದ್ದಾನೆಂದು ಎರಡೆರಡು ಬಾರಿ ವರದಿ: ಆಸ್ಪತ್ರೆ ಮಹಾ ಎಡವಟ್ಟು!

ಆರೋಗ್ಯ ಮಂತ್ರಿ ಮಂಗಲ್​ ಪಾಂಡ್ಯ ಅವರನ್ನು ಚುನಾವಣಾ ಪ್ರಚಾರದಿಂದ ಬಿಡುಗಡೆ ಮಾಡಿ ಎಂದು ಟ್ವೀಟ್​ ಮಾಡಿರುವ ತೇಜಶ್ವಿ ಯಾದವ್, ಬಿಹಾರದಲ್ಲಿ ಕೋವಿಡ್​ ರೋಗಿಗಳಿಗೆ ಹಾಸಿಗೆ ಸೇರಿದಂತೆ ಆರೋಗ್ಯಯುತ ಮೂಲಸೌಕರ್ಯವನ್ನು ವದಗಿಸಲು ಸಾಧ್ಯವಾಗಿಲ್ಲ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಈ ಸರ್ಕಾರ ಸಂಪೂರ್ಣ ಸೋತಿದೆ. ರೋಗಿಗಳಿಂದ ತುಂಬಿರುವ ಆಸ್ಪತ್ರೆಗಳನ್ನು ಪರಿಶೀಲಿಸುವಂತೆ ಒತ್ತಾಯ ಮಾಡಿದ್ದಾರೆ.

ಪಾಟ್ನಾ: ರಾಜ್ಯವು ಕೋವಿಡ್​ ಎಂಬ ವಿಷ ವರ್ತುಲದಲ್ಲಿ ಸಿಲುಕಿದ್ದು, ಆರೋಗ್ಯ ಮಂತ್ರಿ ಮಂಗಲ್​ ಪಾಂಡ್ಯ ಅವರನ್ನು ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಿಂದ ಮುಕ್ತಗೊಳಿಸುವಂತೆ ರಾಷ್ಟ್ರೀಯ ಜನತಾದಳದ ಮುಖಂಡ ತೇಜಶ್ವಿ ಯಾದವ್​ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆಪಿ ನಡ್ಡಾಗೆ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ಹರಿದ್ವಾರ ಗಂಗಾ ಆರತಿಯಲ್ಲಿ ಭಾಗಿಯಾದ ಭಕ್ತರಲ್ಲಿ 1,700 ಜನರಿಗೆ ಕೋವಿಡ್​ ಪಾಸಿಟಿವ್​ !

ಈ ಬಗ್ಗೆ ಟ್ವೀಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ತೇಜಶ್ವಿ ಯಾದವ್, ಬಿಹಾರ್​ ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಸರಣಿ ಸಾವುಗಳಿಂದ ಜನ ತತ್ತರಿಸಿ ಹೋಗಿದ್ದು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ಸೂಕ್ತ ಆರೋಗ್ಯ ನೀಡಬೇಕಿದ್ದ ಜನಪ್ರತಿನಿಧಿಗಳು ಚುನಾವಣಾ ಪ್ರಚಾರದಲ್ಲಿ ಮುಳುಗಿದ್ದಾರೆ.

Tejashwi urges Modi to free Bihar health minister from Bengal campaign
ತೇಜಶ್ವಿ ಯಾದವ್ ಟ್ವೀಟ್​

ಸೋಂಕಿತರ ಸಂಖ್ಯೆ ಹೆಚ್ಚಳದೊಂದಿಗೆ ಸಾವುಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಇಬ್ಬರು ಐಎಸ್​ಎಸ್​ ಅಧಿಕಾರಿಗಳು ಸೇರಿದಂತೆ ಹಲವರು ಕೊರೊನಾ ವೈರಸ್​ಗೆ ಬಲಿಯಾಗಿದ್ದು ಈ ಆತಂಕಕಾರಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತೇಜಶ್ವಿ ಯಾದವ್ ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಟ್ವೀಟ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕೋವಿಡ್ ರೋಗಿ ಬದುಕಿದ್ದಾಗಲೇ ಸಾವನ್ನಪ್ಪಿದ್ದಾನೆಂದು ಎರಡೆರಡು ಬಾರಿ ವರದಿ: ಆಸ್ಪತ್ರೆ ಮಹಾ ಎಡವಟ್ಟು!

ಆರೋಗ್ಯ ಮಂತ್ರಿ ಮಂಗಲ್​ ಪಾಂಡ್ಯ ಅವರನ್ನು ಚುನಾವಣಾ ಪ್ರಚಾರದಿಂದ ಬಿಡುಗಡೆ ಮಾಡಿ ಎಂದು ಟ್ವೀಟ್​ ಮಾಡಿರುವ ತೇಜಶ್ವಿ ಯಾದವ್, ಬಿಹಾರದಲ್ಲಿ ಕೋವಿಡ್​ ರೋಗಿಗಳಿಗೆ ಹಾಸಿಗೆ ಸೇರಿದಂತೆ ಆರೋಗ್ಯಯುತ ಮೂಲಸೌಕರ್ಯವನ್ನು ವದಗಿಸಲು ಸಾಧ್ಯವಾಗಿಲ್ಲ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಈ ಸರ್ಕಾರ ಸಂಪೂರ್ಣ ಸೋತಿದೆ. ರೋಗಿಗಳಿಂದ ತುಂಬಿರುವ ಆಸ್ಪತ್ರೆಗಳನ್ನು ಪರಿಶೀಲಿಸುವಂತೆ ಒತ್ತಾಯ ಮಾಡಿದ್ದಾರೆ.

Last Updated : Apr 15, 2021, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.