ETV Bharat / bharat

ತಮಿಳುನಾಡಲ್ಲಿ ನಾಲ್ವರನ್ನು ಕೊಂದಿದ್ದ ಹುಲಿಗೆ ಕೊನೆಗೂ ಅರವಳಿಕೆ; ಸೆರೆಗೆ ಶೋಧ

author img

By

Published : Oct 15, 2021, 6:48 AM IST

ತಮಿಳುನಾಡಿನಲ್ಲಿ ನಾಲ್ವರನ್ನು ಕೊಂದಿದ್ದ ಹುಲಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಅರವಳಿಕೆ ನೀಡಿದ್ದು, ಹುಲಿಯನ್ನು ಹುಡುಕಲು ಶೋಧ ಕಾರ್ಯ ಮುಂದುವರೆದಿದೆ.

T-23 tiger tranquilized near Masinagudi forest
ಸತತ 20 ದಿನಗಳ ಕಾರ್ಯಾಚರಣೆ ನಂತರ ಕೊನೆಗೂ ನರಭಕ್ಷಕ ಹುಲಿಗೆ ಅರವಳಿಕೆ: ಮುಂದುವರೆದ ಶೋಧ ಕಾರ್ಯ

ನೀಲಗಿರಿ(ತಮಿಳುನಾಡು): ಇಲ್ಲಿನ ಅರಣ್ಯದ ಸುತ್ತಲಿನ ಗ್ರಾಮಗಳ ಸುಮಾರು ನಾಲ್ವರನ್ನು ಬಲಿ ಪಡೆದಿದ್ದ ಹುಲಿಗೆ ಅರವಳಿಕೆ ನೀಡಲಾಗಿದೆ ಎಂದು ತಮಿಳುನಾಡು ಅರಣ್ಯ ಇಲಾಖೆ ತಿಳಿಸಿದೆ.

ಈ ಹುಲಿಯನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು 20 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ವಾಘ್ರ ಯಾರ ಕಣ್ಣಿಗೂ ಬೀಳದಂತೆ ಓಡಾಡುತ್ತಿತ್ತು. ಹಲವು ದಿನಗಳ ಕಾರ್ಯಾಚರಣೆ ಬಳಿಕ ಮಸಿನಗುಡಿ ಅರಣ್ಯದಲ್ಲಿ ಟಿ-23 ಹುಲಿಗೆ ಯಶಸ್ವಿಯಾಗಿ ಅರವಳಿಕೆ ನೀಡಲಾಗಿದೆ. ಈಗ ಅರವಳಿಕೆ ಪಡೆದ ಹುಲಿಗೆ ಹುಡುಕಾಟ ಆರಂಭವಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಮಿಳುನಾಡು ಚೀಫ್ ವೈಲ್ಡ್‌​ಲೈಫ್ ವಾರ್ಡನ್ ಶೇಖರ್ ಕುಮಾರ್ ನೀರಜ್ ಅವರು ಈ ಕುರಿತ ಆದೇಶವೊಂದನ್ನು ನೀಡಿದ್ದು, ಮೊದಲಿಗೆ ಹುಲಿ ಪತ್ತೆ ಮಾಡಲು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು.

ಇದಕ್ಕೂ ಮೊದಲು ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್,​ ಹುಲಿಯನ್ನು ಕೊಲ್ಲದೇ ಜೀವಂತವಾಗಿ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿತ್ತು. ನೀಲಗಿರಿ ಜಿಲ್ಲೆಯ ಮಸಿನಗುಡಿ ಮತ್ತು ಸಿಂಗಾರ ಪ್ರದೇಶದಲ್ಲಿ ಈ ಹುಲಿಯು 4 ಜನರನ್ನು ಮತ್ತು 50ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಭಯೋತ್ಪಾದಕ ದಾಳಿ ಬಗ್ಗೆ ಗುಪ್ತಚರ ಮಾಹಿತಿ... ದೆಹಲಿಯಲ್ಲಿ ಹೈ ಅಲರ್ಟ್​

ನೀಲಗಿರಿ(ತಮಿಳುನಾಡು): ಇಲ್ಲಿನ ಅರಣ್ಯದ ಸುತ್ತಲಿನ ಗ್ರಾಮಗಳ ಸುಮಾರು ನಾಲ್ವರನ್ನು ಬಲಿ ಪಡೆದಿದ್ದ ಹುಲಿಗೆ ಅರವಳಿಕೆ ನೀಡಲಾಗಿದೆ ಎಂದು ತಮಿಳುನಾಡು ಅರಣ್ಯ ಇಲಾಖೆ ತಿಳಿಸಿದೆ.

ಈ ಹುಲಿಯನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು 20 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ವಾಘ್ರ ಯಾರ ಕಣ್ಣಿಗೂ ಬೀಳದಂತೆ ಓಡಾಡುತ್ತಿತ್ತು. ಹಲವು ದಿನಗಳ ಕಾರ್ಯಾಚರಣೆ ಬಳಿಕ ಮಸಿನಗುಡಿ ಅರಣ್ಯದಲ್ಲಿ ಟಿ-23 ಹುಲಿಗೆ ಯಶಸ್ವಿಯಾಗಿ ಅರವಳಿಕೆ ನೀಡಲಾಗಿದೆ. ಈಗ ಅರವಳಿಕೆ ಪಡೆದ ಹುಲಿಗೆ ಹುಡುಕಾಟ ಆರಂಭವಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಮಿಳುನಾಡು ಚೀಫ್ ವೈಲ್ಡ್‌​ಲೈಫ್ ವಾರ್ಡನ್ ಶೇಖರ್ ಕುಮಾರ್ ನೀರಜ್ ಅವರು ಈ ಕುರಿತ ಆದೇಶವೊಂದನ್ನು ನೀಡಿದ್ದು, ಮೊದಲಿಗೆ ಹುಲಿ ಪತ್ತೆ ಮಾಡಲು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು.

ಇದಕ್ಕೂ ಮೊದಲು ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್,​ ಹುಲಿಯನ್ನು ಕೊಲ್ಲದೇ ಜೀವಂತವಾಗಿ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿತ್ತು. ನೀಲಗಿರಿ ಜಿಲ್ಲೆಯ ಮಸಿನಗುಡಿ ಮತ್ತು ಸಿಂಗಾರ ಪ್ರದೇಶದಲ್ಲಿ ಈ ಹುಲಿಯು 4 ಜನರನ್ನು ಮತ್ತು 50ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಭಯೋತ್ಪಾದಕ ದಾಳಿ ಬಗ್ಗೆ ಗುಪ್ತಚರ ಮಾಹಿತಿ... ದೆಹಲಿಯಲ್ಲಿ ಹೈ ಅಲರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.