ETV Bharat / bharat

ಮಹಿಳಾ ಭದ್ರತಾ ಸಿಬ್ಬಂದಿ ಕೈ ಕಚ್ಚಿದ ಸೂರತ್​ನ ಆಪ್​ ಕಾರ್ಪೋರೇಟರ್​! - Surat municipal corporation General meeting

ಸೂರತ್​ ಮುನ್ಸಿಪಲ್​ ಕಾರ್ಪೋರೇಷನ್​ನ ಸಾಮಾನ್ಯ ಸಭೆಯಿಂದ ಹೊರಹಾಕಿದ್ದಕ್ಕೆ, ಆಪ್​ ಸದಸ್ಯೆಯೊಬ್ಬರು ಭದ್ರತಾ ಸಿಬ್ಬಂದಿಯ ಕೈಯನ್ನು ಕಚ್ಚಿ ಗಾಯಗೊಳಿಸಿದ್ದಾರೆ.

surat-aap-corporator-bites-security-guard
ಕೈ ಕಚ್ಚಿದ ಸೂರತ್​ ಆಪ್​ ಕಾರ್ಪೋರೇಟರ್​
author img

By

Published : Oct 22, 2022, 6:22 PM IST

ಸೂರತ್ (ಗುಜರಾತ್): ಗುಜರಾತ್​ ಚುನಾವಣೆಯಲ್ಲಿ ಬಿಜೆಪಿಗೆ ಟಕ್ಕರ್​ ನೀಡಲು ಆಮ್​ ಆದ್ಮಿ ಪಕ್ಷ ಯೋಜಿಸುತ್ತಿದ್ದರೆ, ಸೂರತ್​ ಮುನ್ಸಿಪಲ್​ ಕಾರ್ಪೋರೇಷನ್​ನ ಆಪ್​ ಸದಸ್ಯೆ ಸೆಜಲ್​ ಮಾಳವೀಯ ಭದ್ರತಾ ಸಿಬ್ಬಂದಿಯ ಕೈಗೆ ಕಚ್ಚಿ ಗಾಯಗೊಳಿಸಿ ಟೀಕೆಗೆ ಗುರಿಯಾಗಿದ್ದಾರೆ.

ಇಂದು ನಡೆದ ಸೂರತ್ ಮುನ್ಸಿಪಲ್ ಕಾರ್ಪೊರೇಷನ್​ನ ಸಾಮಾನ್ಯ ಸಭೆಯ ಶೂನ್ಯ ವೇಳೆಯಲ್ಲಿ ಆಪ್​ ಸದಸ್ಯರು ಗದ್ದಲವೆಬ್ಬಿಸಿದರು. ಈ ವೇಳೆ ಮೇಯರ್​ ಆಪ್​ ಸದಸ್ಯರನ್ನು ಸಭೆಯಿಂದ ಹೊರಹಾಕಲು ಆದೇಶಿಸಿದರು. ಇದನ್ನು ವಿರೋಧಿಸಿ ಮತ್ತಷ್ಟು ಗದ್ದಲ ಉಂಟು ಮಾಡಿ ಆಪ್​ ಸದಸ್ಯರನ್ನು ಭದ್ರತಾ ಸಿಬ್ಬಂದಿ ಹೊರಗೆ ಕರೆದೊಯ್ದರು. ಈ ವೇಳೆ ಕಾರ್ಪೋರೇಟರ್​ ಸೆಜಲ್ ಮಾಳವೀಯ ಅವರು ಮಹಿಳಾ ಭದ್ರತಾ ಸಿಬ್ಬಂದಿ ಕೈಯನ್ನು ಬಲವಾಗಿ ಕಚ್ಚಿ ಗಾಯಗೊಳಿಸಿದ್ದಾರೆ.

ಸೆಜಲ್​ ಮಾಳವೀಯಾ ಅವರ ಈ ಕೃತ್ಯವನ್ನು ಎಲ್ಲ ಪಕ್ಷಗಳು ಖಂಡಿಸಿವೆ. ಭದ್ರತಾ ಸಿಬ್ಬಂದಿಯ ಮೇಲೆ ಆಪ್​ ಸದಸ್ಯರ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳಲು ಮೇಯರ್​ರನ್ನು ಆಗ್ರಹಿಸಿದರು.

ಸಾಮಾನ್ಯ ಸಭೆಯ ಶೂನ್ಯ ವೇಳೆಯಲ್ಲಿ ಬಿಜೆಪಿ ನಾಯಕ ಅಮಿತ್ ರಜಪೂತ್ ಅವರು ದೆಹಲಿಯ ಮಾಜಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರ ಪ್ರಮಾಣವಚನ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದು, ಗದ್ದಲಕ್ಕೆ ಕಾರಣವಾಯಿತು.

ಓದಿ: ಸರ್ಕಾರಿ ಶಾಲೆಯಲ್ಲಿ ಹಣ ಸಂಗ್ರಹಕ್ಕೆ ಸುತ್ತೋಲೆ.. ಅದಕ್ಕೂ ನಮಗೂ ಸಂಬಂಧವೇ ಇಲ್ಲ- ಸಚಿವ ನಾಗೇಶ್

ಸೂರತ್ (ಗುಜರಾತ್): ಗುಜರಾತ್​ ಚುನಾವಣೆಯಲ್ಲಿ ಬಿಜೆಪಿಗೆ ಟಕ್ಕರ್​ ನೀಡಲು ಆಮ್​ ಆದ್ಮಿ ಪಕ್ಷ ಯೋಜಿಸುತ್ತಿದ್ದರೆ, ಸೂರತ್​ ಮುನ್ಸಿಪಲ್​ ಕಾರ್ಪೋರೇಷನ್​ನ ಆಪ್​ ಸದಸ್ಯೆ ಸೆಜಲ್​ ಮಾಳವೀಯ ಭದ್ರತಾ ಸಿಬ್ಬಂದಿಯ ಕೈಗೆ ಕಚ್ಚಿ ಗಾಯಗೊಳಿಸಿ ಟೀಕೆಗೆ ಗುರಿಯಾಗಿದ್ದಾರೆ.

ಇಂದು ನಡೆದ ಸೂರತ್ ಮುನ್ಸಿಪಲ್ ಕಾರ್ಪೊರೇಷನ್​ನ ಸಾಮಾನ್ಯ ಸಭೆಯ ಶೂನ್ಯ ವೇಳೆಯಲ್ಲಿ ಆಪ್​ ಸದಸ್ಯರು ಗದ್ದಲವೆಬ್ಬಿಸಿದರು. ಈ ವೇಳೆ ಮೇಯರ್​ ಆಪ್​ ಸದಸ್ಯರನ್ನು ಸಭೆಯಿಂದ ಹೊರಹಾಕಲು ಆದೇಶಿಸಿದರು. ಇದನ್ನು ವಿರೋಧಿಸಿ ಮತ್ತಷ್ಟು ಗದ್ದಲ ಉಂಟು ಮಾಡಿ ಆಪ್​ ಸದಸ್ಯರನ್ನು ಭದ್ರತಾ ಸಿಬ್ಬಂದಿ ಹೊರಗೆ ಕರೆದೊಯ್ದರು. ಈ ವೇಳೆ ಕಾರ್ಪೋರೇಟರ್​ ಸೆಜಲ್ ಮಾಳವೀಯ ಅವರು ಮಹಿಳಾ ಭದ್ರತಾ ಸಿಬ್ಬಂದಿ ಕೈಯನ್ನು ಬಲವಾಗಿ ಕಚ್ಚಿ ಗಾಯಗೊಳಿಸಿದ್ದಾರೆ.

ಸೆಜಲ್​ ಮಾಳವೀಯಾ ಅವರ ಈ ಕೃತ್ಯವನ್ನು ಎಲ್ಲ ಪಕ್ಷಗಳು ಖಂಡಿಸಿವೆ. ಭದ್ರತಾ ಸಿಬ್ಬಂದಿಯ ಮೇಲೆ ಆಪ್​ ಸದಸ್ಯರ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳಲು ಮೇಯರ್​ರನ್ನು ಆಗ್ರಹಿಸಿದರು.

ಸಾಮಾನ್ಯ ಸಭೆಯ ಶೂನ್ಯ ವೇಳೆಯಲ್ಲಿ ಬಿಜೆಪಿ ನಾಯಕ ಅಮಿತ್ ರಜಪೂತ್ ಅವರು ದೆಹಲಿಯ ಮಾಜಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರ ಪ್ರಮಾಣವಚನ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದು, ಗದ್ದಲಕ್ಕೆ ಕಾರಣವಾಯಿತು.

ಓದಿ: ಸರ್ಕಾರಿ ಶಾಲೆಯಲ್ಲಿ ಹಣ ಸಂಗ್ರಹಕ್ಕೆ ಸುತ್ತೋಲೆ.. ಅದಕ್ಕೂ ನಮಗೂ ಸಂಬಂಧವೇ ಇಲ್ಲ- ಸಚಿವ ನಾಗೇಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.