ETV Bharat / bharat

ಸುಪ್ರೀಂಕೋರ್ಟ್​ನಲ್ಲಿ ಶ್ರವಣ ಮತ್ತು ವಾಕ್​ ದೋಷವುಳ್ಳ ವಕೀಲೆಯಿಂದ ವಾದ ಮಂಡನೆ .. ದೇಶದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲು

author img

By ETV Bharat Karnataka Team

Published : Sep 26, 2023, 8:26 PM IST

ಮೂಕ ವಕೀಲೆಯೊಬ್ಬರು ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಿ ಮೆಚ್ಚುಗೆಗೆ ಪಾತ್ರರಾದರು. ನ್ಯಾಯಾಂಗ ಇತಿಹಾಸದಲ್ಲೇ ಇಂತಹ ಘಟನೆ ಮೊದಲಾಗಿದೆ.

ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಿದ ಮೂಕ ವಕೀಲೆ
ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಿದ ಮೂಕ ವಕೀಲೆ

ನವದೆಹಲಿ: ದೇಶದ ನ್ಯಾಯಾಂಗ ಇತಿಹಾಸದಲ್ಲೇ ಇದು ಮೊದಲ ವಿದ್ಯಮಾನ. ಪ್ರಕರಣವೊಂದರ ವಿಚಾರಣೆಯ ವೇಳೆ ಮೂಕ ವಕೀಲೆಯೊಬ್ಬರು ತಮ್ಮ ವ್ಯಾಖ್ಯಾನಕಾರನ ಸಹಾಯದಿಂದ ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಿದ್ದಾರೆ. ಇದೀಗ ಭಾರಿ ಪ್ರಶಂಸೆಗೆ ಒಳಗಾಗಿದೆ. ಜೊತೆಗೆ ದೈಹಿಕ ದೋಷವುಳ್ಳವರೂ ಕೂಡ ಕೋರ್ಟ್​ ಮುಂದೆ ವಾದ ಮಂಡನೆ ಮಾಡಬಹುದು ಎಂಬುದಕ್ಕೆ ನಾಂದಿ ಹಾಡಿದೆ.

ವಿಶೇಷಚೇತನರ ಹಕ್ಕುಗಳ ಪ್ರಕರಣದ ಅರ್ಜಿಯೊಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​ ಅವರು ಸೋಮವಾರ ವರ್ಚುವಲ್​ ವಿಚಾರಣೆಗೆ ತೆಗೆದುಕೊಂಡಿದ್ದರು. ಸಾರಾ ಸನ್ನಿ ಎಂಬ ಶ್ರವಣ ಮತ್ತು ವಾಕ್​ ದೋಷವುಳ್ಳ ವಕೀಲೆ ಸಂಕೇತ ಭಾಷೆಯ (ಸಂಜ್ಞೆ ಭಾಷೆ) ಮೂಲಕ ವಾದ ಮಂಡಿಸಿದರು. ಮೊದಲು ಪರದೆಯ ಮೇಲೆ ವಕೀಲೆಯ ವ್ಯಾಖ್ಯಾನಕಾರರನ್ನು ಮಾತ್ರ ತೋರಿಸಲಾಯಿತು. ಇದನ್ನು ಗಮನಿಸಿದ ನ್ಯಾಯಮೂರ್ತಿ ಚಂದ್ರಚೂಡ್​ ಅವರು ಸಾರಾ ಅವರನ್ನು ಪರದೆಯ ಮೇಲೆ ತೋರಿಸುವಂತೆ ಹೇಳಿದರು.

ಬಳಿಕ ಇಬ್ಬರನ್ನೂ ವರ್ಚುಯಲ್​ ವಿಚಾರಣೆ ತೆಗೆದುಕೊಳ್ಳಲಾಯಿತು. ಕೇಸ್​ ಬಗ್ಗೆ ಸಂಕೇತ ಭಾಷೆಯ ಮೂಲಕವೇ ಸಾರಾ ಅವರು ತೀಕ್ಷ್ಣವಾಗಿ ವಾದಿಸಿದರು. ಅವರು ಬಳಸುತ್ತಿದ್ದ ಸಂಕೇತಗಳನ್ನು ಅರ್ಥ ಮಾಡಿಕೊಂಡು ವ್ಯಾಖ್ಯಾನಕಾರರು ಮಾತಿನಲ್ಲಿ ಹೇಳುತ್ತಿದ್ದರು.

ಮಾತು ಬಾರದಿದ್ದರೂ ವಾದ ಮಂಡಿಸಿದ್ದು ಇದೇ ಮೊದಲು: ಮೂಕ ವಕೀಲೆ ಸಾರಾ ಸನ್ನಿ ಅವರು ಮಾತು ಬಾರದಿದ್ದರೂ, ತಮ್ಮ ಕಕ್ಷಿದಾರರ ಪರವಾಗಿ ಕೋರ್ಟ್​ನಲ್ಲಿ ನ್ಯಾಯಕ್ಕಾಗಿ ವಾದ ಮಂಡನೆ ಮಾಡಿದ್ದು, ದೇಶದ ನ್ಯಾಯಾಂಗ ಇತಿಹಾಸದಲ್ಲೇ ಇದೇ ಮೊದಲಾಗಿದೆ. ದೈಹಿಕ ನ್ಯೂನತೆಗಳನ್ನೂ ಮೀರಿ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಬಹುದು ಎಂಬುದನ್ನು ಈ ಪ್ರಕರಣ ಸಾಬೀತು ಮಾಡಿದೆ. ಸಾರಾ ಸನ್ನಿ ಅವರ ಪ್ರತಿವಾದಿಯಾಗಿ ನ್ಯಾಯಾಲಯದ ಸಭಾಂಗಣದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೀಠದ ಮುಂದೆ ವಾದಿಸಿದರು.

ವಕೀಲೆಯ ಸಾಹಸಕ್ಕೆ ಮೆಚ್ಚುಗೆ: ವಾಕ್​ ದೋಷವುಳ್ಳ ಸಾರಾ ಸನ್ನಿ ಅವರ ಈ ಸಾಹಸಕ್ಕೆ ಖುದ್ದು ನ್ಯಾಯಮೂರ್ತಿ ಚಂದ್ರಚೂಡ್​ ಅವರೇ ಬೆರಗಾದರು. ಅವರು ಪ್ರತಿವಾದಿ ವಕೀಲರ ವಾದವನ್ನು ಅರ್ಥ ಮಾಡಿಕೊಂಡು ಕೈ ಬೆರಳುಗಳ ಮೂಲಕ ತಮ್ಮ ವ್ಯಾಖ್ಯಾನಕಾರರಿಗೆ ತಿಳಿಸುತ್ತಿದ್ದರು. ಸಾರಾ ಅವರ ಸಂಕೇತಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದ ವ್ಯಾಖ್ಯಾನಕಾರ ಸೌರವ್​ ಅವರಿಗೂ ಮೆಚ್ಚುಗೆ ಬಂದಿದೆ.

ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಸಮಾನ ನ್ಯಾಯದ ಪ್ರತಿಪಾದಕರು. ಅಲ್ಲದೇ ವೈಯಕ್ತಿಕವಾಗಿಯೂ ಅವರು ದೈಹಿಕ ನ್ಯೂನತೆವುಳ್ಳವರ ಪರವಾಗಿದ್ದಾರೆ. ಎಲ್ಲದಕ್ಕೂ ಹೆಚ್ಚಾಗಿ ಇಬ್ಬರು ವಿಶೇಷಚೇತನರ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಅವರನ್ನು ಇತ್ತೀಚೆಗೆ ಕೋರ್ಟ್ ಹಾಲ್​​ಗೆ ಕರೆದುಕೊಂಡು ಬಂದು ನಿತ್ಯ ವಿಚಾರಣೆಯ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದರು. ಇದು ಅಲ್ಲಿದ್ದ ಎಲ್ಲ ವಕೀಲರಿಗೆ ಅಚ್ಚರಿ ತಂದಿತ್ತು.

ಇದನ್ನೂ ಓದಿ: ಗೋಡೆ ಕೊರೆದು ಒಳ ನುಗ್ಗಿದ ಚಾಲಾಕಿಗಳು.. ₹25 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಖದೀಮರು!

ನವದೆಹಲಿ: ದೇಶದ ನ್ಯಾಯಾಂಗ ಇತಿಹಾಸದಲ್ಲೇ ಇದು ಮೊದಲ ವಿದ್ಯಮಾನ. ಪ್ರಕರಣವೊಂದರ ವಿಚಾರಣೆಯ ವೇಳೆ ಮೂಕ ವಕೀಲೆಯೊಬ್ಬರು ತಮ್ಮ ವ್ಯಾಖ್ಯಾನಕಾರನ ಸಹಾಯದಿಂದ ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಿದ್ದಾರೆ. ಇದೀಗ ಭಾರಿ ಪ್ರಶಂಸೆಗೆ ಒಳಗಾಗಿದೆ. ಜೊತೆಗೆ ದೈಹಿಕ ದೋಷವುಳ್ಳವರೂ ಕೂಡ ಕೋರ್ಟ್​ ಮುಂದೆ ವಾದ ಮಂಡನೆ ಮಾಡಬಹುದು ಎಂಬುದಕ್ಕೆ ನಾಂದಿ ಹಾಡಿದೆ.

ವಿಶೇಷಚೇತನರ ಹಕ್ಕುಗಳ ಪ್ರಕರಣದ ಅರ್ಜಿಯೊಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​ ಅವರು ಸೋಮವಾರ ವರ್ಚುವಲ್​ ವಿಚಾರಣೆಗೆ ತೆಗೆದುಕೊಂಡಿದ್ದರು. ಸಾರಾ ಸನ್ನಿ ಎಂಬ ಶ್ರವಣ ಮತ್ತು ವಾಕ್​ ದೋಷವುಳ್ಳ ವಕೀಲೆ ಸಂಕೇತ ಭಾಷೆಯ (ಸಂಜ್ಞೆ ಭಾಷೆ) ಮೂಲಕ ವಾದ ಮಂಡಿಸಿದರು. ಮೊದಲು ಪರದೆಯ ಮೇಲೆ ವಕೀಲೆಯ ವ್ಯಾಖ್ಯಾನಕಾರರನ್ನು ಮಾತ್ರ ತೋರಿಸಲಾಯಿತು. ಇದನ್ನು ಗಮನಿಸಿದ ನ್ಯಾಯಮೂರ್ತಿ ಚಂದ್ರಚೂಡ್​ ಅವರು ಸಾರಾ ಅವರನ್ನು ಪರದೆಯ ಮೇಲೆ ತೋರಿಸುವಂತೆ ಹೇಳಿದರು.

ಬಳಿಕ ಇಬ್ಬರನ್ನೂ ವರ್ಚುಯಲ್​ ವಿಚಾರಣೆ ತೆಗೆದುಕೊಳ್ಳಲಾಯಿತು. ಕೇಸ್​ ಬಗ್ಗೆ ಸಂಕೇತ ಭಾಷೆಯ ಮೂಲಕವೇ ಸಾರಾ ಅವರು ತೀಕ್ಷ್ಣವಾಗಿ ವಾದಿಸಿದರು. ಅವರು ಬಳಸುತ್ತಿದ್ದ ಸಂಕೇತಗಳನ್ನು ಅರ್ಥ ಮಾಡಿಕೊಂಡು ವ್ಯಾಖ್ಯಾನಕಾರರು ಮಾತಿನಲ್ಲಿ ಹೇಳುತ್ತಿದ್ದರು.

ಮಾತು ಬಾರದಿದ್ದರೂ ವಾದ ಮಂಡಿಸಿದ್ದು ಇದೇ ಮೊದಲು: ಮೂಕ ವಕೀಲೆ ಸಾರಾ ಸನ್ನಿ ಅವರು ಮಾತು ಬಾರದಿದ್ದರೂ, ತಮ್ಮ ಕಕ್ಷಿದಾರರ ಪರವಾಗಿ ಕೋರ್ಟ್​ನಲ್ಲಿ ನ್ಯಾಯಕ್ಕಾಗಿ ವಾದ ಮಂಡನೆ ಮಾಡಿದ್ದು, ದೇಶದ ನ್ಯಾಯಾಂಗ ಇತಿಹಾಸದಲ್ಲೇ ಇದೇ ಮೊದಲಾಗಿದೆ. ದೈಹಿಕ ನ್ಯೂನತೆಗಳನ್ನೂ ಮೀರಿ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಬಹುದು ಎಂಬುದನ್ನು ಈ ಪ್ರಕರಣ ಸಾಬೀತು ಮಾಡಿದೆ. ಸಾರಾ ಸನ್ನಿ ಅವರ ಪ್ರತಿವಾದಿಯಾಗಿ ನ್ಯಾಯಾಲಯದ ಸಭಾಂಗಣದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೀಠದ ಮುಂದೆ ವಾದಿಸಿದರು.

ವಕೀಲೆಯ ಸಾಹಸಕ್ಕೆ ಮೆಚ್ಚುಗೆ: ವಾಕ್​ ದೋಷವುಳ್ಳ ಸಾರಾ ಸನ್ನಿ ಅವರ ಈ ಸಾಹಸಕ್ಕೆ ಖುದ್ದು ನ್ಯಾಯಮೂರ್ತಿ ಚಂದ್ರಚೂಡ್​ ಅವರೇ ಬೆರಗಾದರು. ಅವರು ಪ್ರತಿವಾದಿ ವಕೀಲರ ವಾದವನ್ನು ಅರ್ಥ ಮಾಡಿಕೊಂಡು ಕೈ ಬೆರಳುಗಳ ಮೂಲಕ ತಮ್ಮ ವ್ಯಾಖ್ಯಾನಕಾರರಿಗೆ ತಿಳಿಸುತ್ತಿದ್ದರು. ಸಾರಾ ಅವರ ಸಂಕೇತಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದ ವ್ಯಾಖ್ಯಾನಕಾರ ಸೌರವ್​ ಅವರಿಗೂ ಮೆಚ್ಚುಗೆ ಬಂದಿದೆ.

ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಸಮಾನ ನ್ಯಾಯದ ಪ್ರತಿಪಾದಕರು. ಅಲ್ಲದೇ ವೈಯಕ್ತಿಕವಾಗಿಯೂ ಅವರು ದೈಹಿಕ ನ್ಯೂನತೆವುಳ್ಳವರ ಪರವಾಗಿದ್ದಾರೆ. ಎಲ್ಲದಕ್ಕೂ ಹೆಚ್ಚಾಗಿ ಇಬ್ಬರು ವಿಶೇಷಚೇತನರ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಅವರನ್ನು ಇತ್ತೀಚೆಗೆ ಕೋರ್ಟ್ ಹಾಲ್​​ಗೆ ಕರೆದುಕೊಂಡು ಬಂದು ನಿತ್ಯ ವಿಚಾರಣೆಯ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದರು. ಇದು ಅಲ್ಲಿದ್ದ ಎಲ್ಲ ವಕೀಲರಿಗೆ ಅಚ್ಚರಿ ತಂದಿತ್ತು.

ಇದನ್ನೂ ಓದಿ: ಗೋಡೆ ಕೊರೆದು ಒಳ ನುಗ್ಗಿದ ಚಾಲಾಕಿಗಳು.. ₹25 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಖದೀಮರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.