ETV Bharat / bharat

ಆನ್​ಲೈನ್​ನಲ್ಲಿ ಚಾಕು ಆರ್ಡರ್ ಮಾಡಿ ತಂದೆಯನ್ನೇ ಕೊಂದ ಮಗ..

author img

By

Published : Apr 1, 2023, 6:55 AM IST

ಆನ್​ಲೈನ್​ನಲ್ಲಿ ಚಾಕು ಆರ್ಡರ್ ಮಾಡಿ ತನ್ನ ತಂದೆಯನ್ನೇ ಕೊಂದ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ಬಿಹಾರದ ನಳಂದದಲ್ಲಿ ನಡೆದಿದೆ.

ಗಿರಿಯಕ್ ಪೊಲೀಸ್ ಠಾಣೆ
ಗಿರಿಯಕ್ ಪೊಲೀಸ್ ಠಾಣೆ

ನಳಂದ (ಬಿಹಾರ): ಬಿಹಾರದ ನಳಂದದಲ್ಲಿ 15 ದಿನಗಳ ಹಿಂದಷ್ಟೇ ನಡೆದಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕೊಲೆ ಪ್ರಕರಣದ ತನಿಖೆ ವೇಳೆ ಹೊರಬಿದ್ದಿರುವ ಅಂಶಗಳು ಬೆಚ್ಚಿ ಬೀಳಿಸುವಂತಿವೆ. ವಾಸ್ತವವಾಗಿ, ಗಿರಿಯಕ್ ಪೊಲೀಸ್ ಠಾಣೆ ವ್ಯಾಪ್ತಿಯ ಧೋರಾಹಿ ಗ್ರಾಮದ ಬಳಿ NH-31 ನಲ್ಲಿ ಮಗನೇ ತನ್ನ ತಂದೆಯನ್ನು ಕೊಂದಿದ್ದಾನೆ.

ನಿರ್ಮಾಣ ಹಂತದಲ್ಲಿರುವ ಸೇತುವೆಯ ರಾತ್ರಿ ಕಾವಲುಗಾರ ಸಾವು: ಮಾರ್ಚ್ 15 ರಂದು ರಾತ್ರಿ ಗಿರಿಯಕ್ ಪೊಲೀಸ್ ಠಾಣೆ ವ್ಯಾಪ್ತಿಯ ಧೋರಾಹಿ ಗ್ರಾಮದ ಬಳಿ ನಿರ್ಮಾಣ ಹಂತದ ಸೇತುವೆಯ ಭದ್ರತಾ ಸಿಬ್ಬಂದಿ ಸನೋಜ್ ಸಿಂಗ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಎನ್‌ಎಚ್‌-31ರಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯಲ್ಲಿ ರಾತ್ರಿ ಕಾವಲು ಕರ್ತವ್ಯದಲ್ಲಿದ್ದ ಗಾರ್ಡ್‌ ಸನೋಜ್‌ ಸಿಂಗ್‌ ಅವರನ್ನು ಅಪರಿಚಿತ ಕ್ರಿಮಿನಲ್‌ಗಳು ಇರಿದು ಹತ್ಯೆ ಮಾಡಿದ್ದಾರೆ ಎಂದು ರಾಜ್‌ಗಿರ್‌ ಡಿಎಸ್‌ಪಿ ಪ್ರದೀಪ್‌ ಕುಮಾರ್‌ ಶುಕ್ರವಾರ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು. ಎಸ್‌ಪಿ ನಳಂದ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಸ್‌ಐಟಿ ರಚಿಸಿ ತಡಮಾಡದೆ ಅದರ ತನಿಖೆ ಆರಂಭಿಸಿದರು.

ತಂದೆಯನ್ನು ಕೊಂದ ಮಗ: ತನಿಖೆಯ ವೇಳೆ ತಾಂತ್ರಿಕ ಸಂಶೋಧನೆ ಮತ್ತು ಕೃತಕ ಬುದ್ಧಿಮತ್ತೆಯ(AI) ಆಧಾರದ ಮೇಲೆ ತ್ವರಿತ ಕ್ರಮ ಕೈಗೊಂಡು ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಲಾಗಿದೆ ಎಂದು ಡಿಎಸ್ಪಿ ತಿಳಿಸಿದರು. ಈ ಘಟನೆಯಲ್ಲಿ ಕೊಲೆ ಆರೋಪಿ ಮೃತನ ಮಗ ಎಂದು ತಿಳಿದು ಬಂದಿದೆ. ಹೀಗಾಗಿ, ಮೃತರ ಪುತ್ರ ಶ್ರೀಕೇಶ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಕೊಲೆಗೆ ಕಾರಣಗಳ ಕುರಿತು ಡಿಎಸ್ಪಿ ಅವರು, ಮನೆಯಲ್ಲಿ ಆಂತರಿಕ ಭಿನ್ನಾಭಿಪ್ರಾಯದಿಂದ ಮಗನು ಕೃತ್ಯ ಎಸಗಿದ್ದಾನೆ ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : 12ನೇ ತರಗತಿಯ ಇಂಗ್ಲಿಷ್‌ನಲ್ಲಿ 21 ಅಂಕ ಪಡೆದು ಫೇಲ್​ ಆಗಿದ್ದ ಯುವಕ ಎಸ್​ಪಿ ಆದ ಸ್ಫೂರ್ತಿಯ ಕತೆ!

ಆನ್‌ಲೈನ್‌ನಲ್ಲಿ ಚಾಕು ಆರ್ಡರ್: ಈ ಘಟನೆಯ ದೊಡ್ಡ ವಿಷಯವೆಂದರೆ ಕೊಲೆಗೆ ಚಾಕು ಬಳಸಲಾಗಿದೆ ಎಂದು ಡಿಎಸ್‌ಪಿ ಹೇಳಿದರು. ಆರೋಪಿಗಳು ಆನ್‌ಲೈನ್ ಶಾಪಿಂಗ್ ಆಪ್‌ನಿಂದ ಚಾಕು ಆರ್ಡರ್ ಮಾಡಿದ್ದರು. ವಿಚಾರಣೆ ವೇಳೆ ಬಂಧಿತ ಆರೋಪಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಾದ ನಂತರ, ಕೊಲೆಗೆ ಬಳಸಿದ ಚಾಕುವಿನ ಜೊತೆಗೆ, ಇ-ಕಾಮರ್ಸ್ ಅಪ್ಲಿಕೇಶನ್‌ನ ಆನ್‌ಲೈನ್ ಆರ್ಡರ್‌ಗೆ ಸಂಬಂಧಿಸಿದ ಸರಕುಪಟ್ಟಿಯನ್ನೂ ಆರೋಪಿಯ ಮೊಬೈಲ್ ಫೋನ್‌ನಿಂದ ಹೊರತೆಗೆಯಲಾಯಿತು. ಇದರೊಂದಿಗೆ ಚಾಕು, ಮೊಬೈಲ್ ಹಾಗೂ ಸರಕುಪಟ್ಟಿ ವಶಪಡಿಸಿಕೊಂಡಿದ್ದಾರೆ.

"NH-31 ರ ನಿರ್ಮಾಣ ಹಂತದಲ್ಲಿರುವ ಸೇತುವೆಯಲ್ಲಿ ರಾತ್ರಿ ಕಾವಲು ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದ ಗಾರ್ಡ್ ಸನೋಜ್ ಸಿಂಗ್ ಅವರನ್ನು ಅವರ ಮಗನೇ ಕೊಲೆ ಮಾಡಿದ್ದಾನೆ. ಇದೀಗ ಅವರನ್ನು ಬಂಧಿಸಲಾಗಿದೆ. ಆರೋಪಿ ಆನ್​ಲೈನ್​ ಮೂಲಕ ಚಾಕುವನ್ನು ಆರ್ಡರ್ ಮಾಡಿದ್ದ ಎಂದು ಡಿಎಸ್​ಪಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ : ಮದುವೆಯಿಂದ ಬರುತ್ತಿದ್ದಾಗ ಮರಕ್ಕೆ ಕಾರು ಡಿಕ್ಕಿ: ಏಳು ಜನ ಸ್ನೇಹಿತರ ದುರ್ಮರಣ

ನಳಂದ (ಬಿಹಾರ): ಬಿಹಾರದ ನಳಂದದಲ್ಲಿ 15 ದಿನಗಳ ಹಿಂದಷ್ಟೇ ನಡೆದಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕೊಲೆ ಪ್ರಕರಣದ ತನಿಖೆ ವೇಳೆ ಹೊರಬಿದ್ದಿರುವ ಅಂಶಗಳು ಬೆಚ್ಚಿ ಬೀಳಿಸುವಂತಿವೆ. ವಾಸ್ತವವಾಗಿ, ಗಿರಿಯಕ್ ಪೊಲೀಸ್ ಠಾಣೆ ವ್ಯಾಪ್ತಿಯ ಧೋರಾಹಿ ಗ್ರಾಮದ ಬಳಿ NH-31 ನಲ್ಲಿ ಮಗನೇ ತನ್ನ ತಂದೆಯನ್ನು ಕೊಂದಿದ್ದಾನೆ.

ನಿರ್ಮಾಣ ಹಂತದಲ್ಲಿರುವ ಸೇತುವೆಯ ರಾತ್ರಿ ಕಾವಲುಗಾರ ಸಾವು: ಮಾರ್ಚ್ 15 ರಂದು ರಾತ್ರಿ ಗಿರಿಯಕ್ ಪೊಲೀಸ್ ಠಾಣೆ ವ್ಯಾಪ್ತಿಯ ಧೋರಾಹಿ ಗ್ರಾಮದ ಬಳಿ ನಿರ್ಮಾಣ ಹಂತದ ಸೇತುವೆಯ ಭದ್ರತಾ ಸಿಬ್ಬಂದಿ ಸನೋಜ್ ಸಿಂಗ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಎನ್‌ಎಚ್‌-31ರಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯಲ್ಲಿ ರಾತ್ರಿ ಕಾವಲು ಕರ್ತವ್ಯದಲ್ಲಿದ್ದ ಗಾರ್ಡ್‌ ಸನೋಜ್‌ ಸಿಂಗ್‌ ಅವರನ್ನು ಅಪರಿಚಿತ ಕ್ರಿಮಿನಲ್‌ಗಳು ಇರಿದು ಹತ್ಯೆ ಮಾಡಿದ್ದಾರೆ ಎಂದು ರಾಜ್‌ಗಿರ್‌ ಡಿಎಸ್‌ಪಿ ಪ್ರದೀಪ್‌ ಕುಮಾರ್‌ ಶುಕ್ರವಾರ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು. ಎಸ್‌ಪಿ ನಳಂದ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಸ್‌ಐಟಿ ರಚಿಸಿ ತಡಮಾಡದೆ ಅದರ ತನಿಖೆ ಆರಂಭಿಸಿದರು.

ತಂದೆಯನ್ನು ಕೊಂದ ಮಗ: ತನಿಖೆಯ ವೇಳೆ ತಾಂತ್ರಿಕ ಸಂಶೋಧನೆ ಮತ್ತು ಕೃತಕ ಬುದ್ಧಿಮತ್ತೆಯ(AI) ಆಧಾರದ ಮೇಲೆ ತ್ವರಿತ ಕ್ರಮ ಕೈಗೊಂಡು ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಲಾಗಿದೆ ಎಂದು ಡಿಎಸ್ಪಿ ತಿಳಿಸಿದರು. ಈ ಘಟನೆಯಲ್ಲಿ ಕೊಲೆ ಆರೋಪಿ ಮೃತನ ಮಗ ಎಂದು ತಿಳಿದು ಬಂದಿದೆ. ಹೀಗಾಗಿ, ಮೃತರ ಪುತ್ರ ಶ್ರೀಕೇಶ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಕೊಲೆಗೆ ಕಾರಣಗಳ ಕುರಿತು ಡಿಎಸ್ಪಿ ಅವರು, ಮನೆಯಲ್ಲಿ ಆಂತರಿಕ ಭಿನ್ನಾಭಿಪ್ರಾಯದಿಂದ ಮಗನು ಕೃತ್ಯ ಎಸಗಿದ್ದಾನೆ ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : 12ನೇ ತರಗತಿಯ ಇಂಗ್ಲಿಷ್‌ನಲ್ಲಿ 21 ಅಂಕ ಪಡೆದು ಫೇಲ್​ ಆಗಿದ್ದ ಯುವಕ ಎಸ್​ಪಿ ಆದ ಸ್ಫೂರ್ತಿಯ ಕತೆ!

ಆನ್‌ಲೈನ್‌ನಲ್ಲಿ ಚಾಕು ಆರ್ಡರ್: ಈ ಘಟನೆಯ ದೊಡ್ಡ ವಿಷಯವೆಂದರೆ ಕೊಲೆಗೆ ಚಾಕು ಬಳಸಲಾಗಿದೆ ಎಂದು ಡಿಎಸ್‌ಪಿ ಹೇಳಿದರು. ಆರೋಪಿಗಳು ಆನ್‌ಲೈನ್ ಶಾಪಿಂಗ್ ಆಪ್‌ನಿಂದ ಚಾಕು ಆರ್ಡರ್ ಮಾಡಿದ್ದರು. ವಿಚಾರಣೆ ವೇಳೆ ಬಂಧಿತ ಆರೋಪಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಾದ ನಂತರ, ಕೊಲೆಗೆ ಬಳಸಿದ ಚಾಕುವಿನ ಜೊತೆಗೆ, ಇ-ಕಾಮರ್ಸ್ ಅಪ್ಲಿಕೇಶನ್‌ನ ಆನ್‌ಲೈನ್ ಆರ್ಡರ್‌ಗೆ ಸಂಬಂಧಿಸಿದ ಸರಕುಪಟ್ಟಿಯನ್ನೂ ಆರೋಪಿಯ ಮೊಬೈಲ್ ಫೋನ್‌ನಿಂದ ಹೊರತೆಗೆಯಲಾಯಿತು. ಇದರೊಂದಿಗೆ ಚಾಕು, ಮೊಬೈಲ್ ಹಾಗೂ ಸರಕುಪಟ್ಟಿ ವಶಪಡಿಸಿಕೊಂಡಿದ್ದಾರೆ.

"NH-31 ರ ನಿರ್ಮಾಣ ಹಂತದಲ್ಲಿರುವ ಸೇತುವೆಯಲ್ಲಿ ರಾತ್ರಿ ಕಾವಲು ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದ ಗಾರ್ಡ್ ಸನೋಜ್ ಸಿಂಗ್ ಅವರನ್ನು ಅವರ ಮಗನೇ ಕೊಲೆ ಮಾಡಿದ್ದಾನೆ. ಇದೀಗ ಅವರನ್ನು ಬಂಧಿಸಲಾಗಿದೆ. ಆರೋಪಿ ಆನ್​ಲೈನ್​ ಮೂಲಕ ಚಾಕುವನ್ನು ಆರ್ಡರ್ ಮಾಡಿದ್ದ ಎಂದು ಡಿಎಸ್​ಪಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ : ಮದುವೆಯಿಂದ ಬರುತ್ತಿದ್ದಾಗ ಮರಕ್ಕೆ ಕಾರು ಡಿಕ್ಕಿ: ಏಳು ಜನ ಸ್ನೇಹಿತರ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.