ETV Bharat / bharat

ನಿಂದಿಸಿದರೆಂದು ರುಬ್ಬುವ ಕಲ್ಲಿನಿಂದ ತಂದೆಯನ್ನೇ ಹೊಡೆದು ಕೊಂದ ಮಗ!

author img

By

Published : Feb 23, 2023, 3:59 PM IST

ನಿರಂತರವಾಗಿ ನಿಂದಿಸುತ್ತಿದ್ದಾರೆ ಎಂದು ಕೋಪಗೊಂಡ ಮಗ ತಂದೆಯನ್ನೇ ಹತ್ಯೆ ಮಾಡಿರುವ ಪ್ರಕರಣ ಥಾಣೆಯಲ್ಲಿ ನಡೆದಿದೆ.

ತಂದೆಯನ್ನೆ ಕೊಂಡ ಮಗ
ತಂದೆಯನ್ನೆ ಕೊಂಡ ಮಗ

ಥಾಣೆ (ಮಹಾರಾಷ್ಟ್ರ): 20 ವರ್ಷದ ಹುಡುಗ ತನ್ನ ತಂದೆಯನ್ನೇ ಹತ್ಯೆ ಮಾಡಿರುವ ಘಟನೆ ಇಲ್ಲಿಯ ಡೊಂಬಿವಿಲಿ ಪೂರ್ವದ ಖಂಬಲ್ಪಾಡಾ ಪ್ರದೇಶದ ಚಾಲಿಯಲ್ಲಿ ನಡೆದಿದೆ. ಆರೋಪಿ ತೇಜಸ್​ ಶ್ಯಾಮಸುಂದರ್​ ಶಿಂಧೆಯನ್ನು ಪೊಲೀಸರು ಬಂಧಿಸಿದ್ದಾರೆ. ಶ್ಯಾಮಸುಂದರ್​ ಶಿಂಧೆ (68) ಕೊಲೆಯಾದ ವ್ಯಕ್ತಿ.

ವಿವರ: ತಂದೆ ಶ್ಯಾಮಸುಂದರ್​, ಮಗ ತೇಜಸ್​ನನ್ನು ಪದೇ ಪದೆ ನಿಂದಿಸುತ್ತಿದ್ದರಂತೆ. ಬುಧವಾರ ತೇಜಸ್​ ಅವರ ತಾಯಿ ಕೆಲಸದ ನಿಮಿತ್ತ ಸಂಜೆ ಹೊರಹೋಗಿದ್ದಾಗ ಅಪ್ಪ- ಮಗನ​ ನಡುವೆ ಜಗಳ ನಡೆದಿದೆ. ಕೋಪಗೊಂಡ​ ಮಗ ತೇಜಸ್ ತಂದೆ​ ಶ್ಯಾಮಸುಂದರ್​ರನ್ನು ಹತ್ಯೆ ಮಾಡಿದ್ದಾನೆ ಎಂದು ತಿಲಕ್ ನಗರ ಪೊಲೀಸ್​ ಠಾಣೆಯ ​ಇನ್ಸ್​ಪೆಕ್ಟರ್​ ಪಾಂಡುರಂಗ ತಿಥೆ ತಿಳಿಸಿದರು.

ಇನ್ಸ್​ಪೆಕ್ಟರ್​ ಪಾಂಡುರಂಗ ತಿಥೆ ಹೇಳುವಂತೆ, ಶ್ಯಾಮಸುಂದರ್ ಶಿಂಧೆ ತನ್ನ ಪತ್ನಿ ಮತ್ತು ಮಗ ತೇಜಸ್‌ನೊಂದಿಗೆ ಡೊಂಬಿವಿಲಿ ಪೂರ್ವದ ಖಂಬಲ್ಪಾಡ ಪ್ರದೇಶದ ಭೋರ್‌ವಾಡಿ ಎಂಬ ಪ್ರದೇಶದಲ್ಲಿ ಚಿಕ್ಕ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದಾರೆ. ಶ್ಯಾಮಸುಂದರ್​ ಮುಂಬೈನ ಮಹಾನಗರ ಪಾಲಿಕೆಯ ಭದ್ರತಾ ವಿಭಾಗದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದು, 10 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ಪತ್ನಿ ಮನೆ ಕೆಲಸ ಮಾಡಿಕೊಂಡಿದ್ದರು. ಆರೋಪಿ ತೇಜಸ್‌​ನನ್ನು ಶ್ಯಾಮಸುಂದರ್​ ಶಿಂದೆ ನಿರಂತರವಾಗಿ ನಿಂದಿಸಿ ತೊಂದರೆ ಕೊಡುತ್ತಿದ್ದರು.

ನಿನ್ನೆ ಸಂಜೆಯೂ ತೇಜಸ್‌ಗೆ ಬೈದಿದ್ದಾರೆ. ಇದರಿಂದ ಕೋಪಗೊಂಡ ಆತ​ ರುಬ್ಬುವ ಕಲ್ಲಿನಿಂದ ತಂದೆಯ ತಲೆಗೆ ಹೊಡೆದು ನಂತರ ಹರಿತ ವಸ್ತುವಿನಿಂದ ಇರಿದಿದ್ದಾನೆ. ಹತ್ಯೆಯ ಬಳಿಕ ಸ್ವತಃ ಆರೋಪಿ​ ಪೊಲೀಸ್​ ಠಾಣೆಗೆ ಕರೆ ಮಾಡಿ ಕೃತ್ಯವನ್ನು ತಿಳಿಸಿದ್ದಾನೆ. ಮಾಹಿತಿ ಪಡೆದ ಪೊಲೀಸ್​ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತೇಜಸ್​ನನ್ನು ಬಂಧಿಸಿದ್ದಾರೆ. ಶಾಮ್​ಸುಂದರ್​ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಆರೋಪಿಯನ್ನು ಕಲ್ಯಾಣ್ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಸೂರತ್‌ನಲ್ಲೂ ಇಂಥದ್ದೇ ಘಟನೆ: ಕೆಲ ದಿನಗಳ ಹಿಂದೆ ಇಲ್ಲಿನ ಅಮ್ರೋಲಿ ಎಂಬಲ್ಲಿ ಲೈಟ್ ಆನ್​ ಆಫ್ ಮಾಡುತ್ತಿದ್ದ ಮಗನಿಗೆ ತಂದೆ ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡ ಆತ ತಂದೆಗೆ ಹೊಡೆದು ಕೊಲೆ ಮಾಡಿದ್ದ. ಅಮ್ರೋಲಿ ಮತ್ತು ಒಡಿಶಾ ಮೂಲದ ಸವಾಯಿ ಕುಟುಂಬದ ಶಂಕರ್​ ಮುಕಬದಿರ್ ಎಂಬಾತ ಮನೆಯಲ್ಲಿನ ಲೈಟ್​ ಸ್ವಿಚ್ ಅ​ನ್ನು ಆನ್​ ಆಫ್ ಮಾಡುತ್ತಿದ್ದ. ಇದನ್ನು ಕಂಡು ತಂದೆ ಮಗ ಮುಕಬದಿರ್​ಗೆ ಬೈದಿದ್ದಾರೆ. ಇಬ್ಬರ ನಡುವೆ ಗಲಾಟೆ ನಡೆದು ಕೋಪಗೊಂಡ ಮಗ ತಂದೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದ.

ಇದನ್ನೂ ಓದಿ: ಲೈಟ್​ ಆನ್​ ಆಫ್​ ಮಾಡುತ್ತಿದ್ದ ಮಗನಿಗೆ ಬುದ್ಧಿವಾದ ಹೇಳಿದ ತಂದೆ: ಮಸಾಲೆ ರುಬ್ಬುವ ಕಲ್ಲಿನಿಂದ ಅಪ್ಪನ ಕೊಲೆ

ಥಾಣೆ (ಮಹಾರಾಷ್ಟ್ರ): 20 ವರ್ಷದ ಹುಡುಗ ತನ್ನ ತಂದೆಯನ್ನೇ ಹತ್ಯೆ ಮಾಡಿರುವ ಘಟನೆ ಇಲ್ಲಿಯ ಡೊಂಬಿವಿಲಿ ಪೂರ್ವದ ಖಂಬಲ್ಪಾಡಾ ಪ್ರದೇಶದ ಚಾಲಿಯಲ್ಲಿ ನಡೆದಿದೆ. ಆರೋಪಿ ತೇಜಸ್​ ಶ್ಯಾಮಸುಂದರ್​ ಶಿಂಧೆಯನ್ನು ಪೊಲೀಸರು ಬಂಧಿಸಿದ್ದಾರೆ. ಶ್ಯಾಮಸುಂದರ್​ ಶಿಂಧೆ (68) ಕೊಲೆಯಾದ ವ್ಯಕ್ತಿ.

ವಿವರ: ತಂದೆ ಶ್ಯಾಮಸುಂದರ್​, ಮಗ ತೇಜಸ್​ನನ್ನು ಪದೇ ಪದೆ ನಿಂದಿಸುತ್ತಿದ್ದರಂತೆ. ಬುಧವಾರ ತೇಜಸ್​ ಅವರ ತಾಯಿ ಕೆಲಸದ ನಿಮಿತ್ತ ಸಂಜೆ ಹೊರಹೋಗಿದ್ದಾಗ ಅಪ್ಪ- ಮಗನ​ ನಡುವೆ ಜಗಳ ನಡೆದಿದೆ. ಕೋಪಗೊಂಡ​ ಮಗ ತೇಜಸ್ ತಂದೆ​ ಶ್ಯಾಮಸುಂದರ್​ರನ್ನು ಹತ್ಯೆ ಮಾಡಿದ್ದಾನೆ ಎಂದು ತಿಲಕ್ ನಗರ ಪೊಲೀಸ್​ ಠಾಣೆಯ ​ಇನ್ಸ್​ಪೆಕ್ಟರ್​ ಪಾಂಡುರಂಗ ತಿಥೆ ತಿಳಿಸಿದರು.

ಇನ್ಸ್​ಪೆಕ್ಟರ್​ ಪಾಂಡುರಂಗ ತಿಥೆ ಹೇಳುವಂತೆ, ಶ್ಯಾಮಸುಂದರ್ ಶಿಂಧೆ ತನ್ನ ಪತ್ನಿ ಮತ್ತು ಮಗ ತೇಜಸ್‌ನೊಂದಿಗೆ ಡೊಂಬಿವಿಲಿ ಪೂರ್ವದ ಖಂಬಲ್ಪಾಡ ಪ್ರದೇಶದ ಭೋರ್‌ವಾಡಿ ಎಂಬ ಪ್ರದೇಶದಲ್ಲಿ ಚಿಕ್ಕ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದಾರೆ. ಶ್ಯಾಮಸುಂದರ್​ ಮುಂಬೈನ ಮಹಾನಗರ ಪಾಲಿಕೆಯ ಭದ್ರತಾ ವಿಭಾಗದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದು, 10 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ಪತ್ನಿ ಮನೆ ಕೆಲಸ ಮಾಡಿಕೊಂಡಿದ್ದರು. ಆರೋಪಿ ತೇಜಸ್‌​ನನ್ನು ಶ್ಯಾಮಸುಂದರ್​ ಶಿಂದೆ ನಿರಂತರವಾಗಿ ನಿಂದಿಸಿ ತೊಂದರೆ ಕೊಡುತ್ತಿದ್ದರು.

ನಿನ್ನೆ ಸಂಜೆಯೂ ತೇಜಸ್‌ಗೆ ಬೈದಿದ್ದಾರೆ. ಇದರಿಂದ ಕೋಪಗೊಂಡ ಆತ​ ರುಬ್ಬುವ ಕಲ್ಲಿನಿಂದ ತಂದೆಯ ತಲೆಗೆ ಹೊಡೆದು ನಂತರ ಹರಿತ ವಸ್ತುವಿನಿಂದ ಇರಿದಿದ್ದಾನೆ. ಹತ್ಯೆಯ ಬಳಿಕ ಸ್ವತಃ ಆರೋಪಿ​ ಪೊಲೀಸ್​ ಠಾಣೆಗೆ ಕರೆ ಮಾಡಿ ಕೃತ್ಯವನ್ನು ತಿಳಿಸಿದ್ದಾನೆ. ಮಾಹಿತಿ ಪಡೆದ ಪೊಲೀಸ್​ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತೇಜಸ್​ನನ್ನು ಬಂಧಿಸಿದ್ದಾರೆ. ಶಾಮ್​ಸುಂದರ್​ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಆರೋಪಿಯನ್ನು ಕಲ್ಯಾಣ್ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಸೂರತ್‌ನಲ್ಲೂ ಇಂಥದ್ದೇ ಘಟನೆ: ಕೆಲ ದಿನಗಳ ಹಿಂದೆ ಇಲ್ಲಿನ ಅಮ್ರೋಲಿ ಎಂಬಲ್ಲಿ ಲೈಟ್ ಆನ್​ ಆಫ್ ಮಾಡುತ್ತಿದ್ದ ಮಗನಿಗೆ ತಂದೆ ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡ ಆತ ತಂದೆಗೆ ಹೊಡೆದು ಕೊಲೆ ಮಾಡಿದ್ದ. ಅಮ್ರೋಲಿ ಮತ್ತು ಒಡಿಶಾ ಮೂಲದ ಸವಾಯಿ ಕುಟುಂಬದ ಶಂಕರ್​ ಮುಕಬದಿರ್ ಎಂಬಾತ ಮನೆಯಲ್ಲಿನ ಲೈಟ್​ ಸ್ವಿಚ್ ಅ​ನ್ನು ಆನ್​ ಆಫ್ ಮಾಡುತ್ತಿದ್ದ. ಇದನ್ನು ಕಂಡು ತಂದೆ ಮಗ ಮುಕಬದಿರ್​ಗೆ ಬೈದಿದ್ದಾರೆ. ಇಬ್ಬರ ನಡುವೆ ಗಲಾಟೆ ನಡೆದು ಕೋಪಗೊಂಡ ಮಗ ತಂದೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದ.

ಇದನ್ನೂ ಓದಿ: ಲೈಟ್​ ಆನ್​ ಆಫ್​ ಮಾಡುತ್ತಿದ್ದ ಮಗನಿಗೆ ಬುದ್ಧಿವಾದ ಹೇಳಿದ ತಂದೆ: ಮಸಾಲೆ ರುಬ್ಬುವ ಕಲ್ಲಿನಿಂದ ಅಪ್ಪನ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.