ETV Bharat / bharat

ವಿಜಯಕಾಂತ್ ಅಂತಿಮ ದರ್ಶನ ಪಡೆಯಲು ಬಂದಿದ್ದ ನಟ ವಿಜಯ್ ಅವರತ್ತ ಚಪ್ಪಲಿ ಎಸೆತ

author img

By ETV Bharat Karnataka Team

Published : Dec 29, 2023, 9:38 PM IST

Vijayakanth farewell: ಖ್ಯಾತ ತಮಿಳು ನಟ, ರಾಜಕಾರಣಿ ವಿಜಯಕಾಂತ್ ನಿಧನರಾದ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ನಟ ದಳಪತಿ ವಿಜಯ್ ಅವರತ್ತ ಚಪ್ಪಲಿ ಎಸೆದ ಘಟನೆಯ ವಿಡಿಯೋ ವೈರಲ್​ ಆಗಿದೆ.

Etv Bharat
Etv Bharat

ಚೆನ್ನೈ(ತಮಿಳುನಾಡು): ಗುರುವಾರ ನಿಧನರಾದ ಖ್ಯಾತ ತಮಿಳು ನಟ, ರಾಜಕಾರಣಿ ವಿಜಯಕಾಂತ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಅಹಿತಕರ ಘಟನೆ ವರದಿಯಾಗಿದೆ. ನಟ ದಳಪತಿ ವಿಜಯ್ ಅವರತ್ತ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದಾನೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ತುಣಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

71 ವರ್ಷದ ವಯಸ್ಸಿನ ವಿಜಯಕಾಂತ್ ಅನಾರೋಗ್ಯದಿಂದ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದರು. ರಾತ್ರಿ 10.30ರ ಸುಮಾರಿಗೆ ದಳಪತಿ ವಿಜಯ್ ಸಹ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ಗೌರವ ಸಲ್ಲಿಸಿದ್ದರು. ದಿವಂಗತ ರಾಜಕಾರಣಿಯ ಪತ್ನಿ ಪ್ರೇಮಲತಾ ವಿಜಯಕಾಂತ್ ಅವರಿಗೆ ಸಾಂತ್ವನ ಹೇಳಿ ಅಲ್ಲಿಂದ ತೆರಳಿದ್ದರು.

ವಿಜಯಕಾಂತ್ ಅವರ ದರ್ಶನ ಪಡೆದ ಸಿಎಂ  ಎಂ.ಕೆ.ಸ್ಟಾಲಿನ್
ವಿಜಯಕಾಂತ್ ಅವರ ದರ್ಶನ ಪಡೆದ ಸಿಎಂ ಎಂ.ಕೆ.ಸ್ಟಾಲಿನ್

ಇದನ್ನೂ ಓದಿ: ಕೋವಿಡ್​ನಿಂದ ಬಳಲುತ್ತಿದ್ದ ಹಿರಿಯ ನಟ, ಡಿಎಂಡಿಕೆ ನಾಯಕ ವಿಜಯಕಾಂತ್ ವಿಧಿವಶ ​

ಇದಾದ ಬಳಿಕ ಜನಸಂದಣಿಯ ನಡುವೆ ತಮ್ಮ ಕಾರು ಹತ್ತಲು ಯತ್ನಿಸಿದ ವಿಜಯ್ ಅವರತ್ತ ಅಪರಿಚಿತ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದಾನೆ ಎಂದು ಹೇಳಲಾಗಿದೆ. ಇದರ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಈ ಘಟನೆಗೆ ಸಂಬಂಧ ವಿಡಿಯೋ ತುಣುಕು ಕೂಡ ವೈರಲ್ ಆಗಿದೆ. ಇದರಲ್ಲಿ ವಿಜಯ್ ಕಡೆಗೆ ಚಪ್ಪಲಿ ತೂರಿ ಬರುತ್ತಿರುವುದು ಹಾಗೂ ಅದನ್ನು ವ್ಯಕ್ತಿಯೊಬ್ಬರು ತಡೆದಿರುವುದನ್ನು ಕಾಣಬಹುದು. ಮತ್ತೊಂದೆಡೆ, ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ವಿಜಯ್ ಬೆಂಬಲಿಗರು ಮಾತ್ರವಲ್ಲದೆ ವಿವಿಧ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ವಿಜಯಕಾಂತ್ ಅವರ ಪಾರ್ಥಿವ ಶರೀರ
ವಿಜಯಕಾಂತ್ ಅವರ ಪಾರ್ಥಿವ ಶರೀರ

ಕಚೇರಿ ಆವರಣದಲ್ಲಿ ಅಂತ್ಯ ಸಂಸ್ಕಾರ-72 ಗನ್ ಸೆಲ್ಯೂಟ್‌ ಗೌರವ: ಇಂದು ಸಂಜೆ ವಿಜಯಕಾಂತ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಚೆನ್ನೈನ ಕೊಯಂಬೆಡುವಿನಲ್ಲಿರುವ ಡಿಎಂಡಿಕೆ ಪಕ್ಷದ ಪ್ರಧಾನ ಕಚೇರಿ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. 72 ಗನ್ ಸೆಲ್ಯೂಟ್‌ನೊಂದಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಡಿಎಂಡಿಕೆ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡು ಅಶ್ರುತರ್ಪಣ ಸಲ್ಲಿಸಿದರು.

ಇದಕ್ಕೂ ಮುನ್ನ ಡಿಎಂಡಿಕೆ ಸಂಸ್ಥಾಪಕರಾದ ವಿಜಯಕಾಂತ್ ಪಾರ್ಥಿವ ಶರೀರವನ್ನು ಸಾಲಿಗ್ರಾಮಮ್ ಮನೆಯಲ್ಲಿ ಕೆಲವು ಗಂಟೆಗಳ ಕಾಲ ಇರಿಸಲಾಗಿತ್ತು. ಬಳಿಕ ಡಿಎಂಡಿಕೆ ಪ್ರಧಾನ ಕಚೇರಿಗೆ ಮೆರವಣಿಗೆಯಲ್ಲಿ ತರಲಾಯಿತು. ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಸಂಸದ ಟಿ.ಆರ್.ಬಾಲು ಸೇರಿ ಹಲವು ರಾಜಕಾರಣಿಗಳು ಅಂತಿಮ ದರ್ಶನ ಪಡೆದರು.

ವಿಜಯಕಾಂತ್​ ಅವರಿಗೆ ಅಂತಿಮ ಗೌರವ ಸಲ್ಲಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್.
ವಿಜಯಕಾಂತ್​ ಅವರಿಗೆ ಅಂತಿಮ ಗೌರವ ಸಲ್ಲಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್.

ಇದನ್ನೂ ಓದಿ: ವಿಜಯಕಾಂತ್ ಸಿನಿಪಯಣ​: 150 ಸಿನಿಮಾ, ಒಂದೇ ವರ್ಷ 18 ಚಿತ್ರ ತೆರೆಗೆ

ಖ್ಯಾತ ನಟರಾದ ರಜನಿಕಾಂತ್, ಕಮಲ್ ಹಾಸನ್, ಸಂಗೀತ ಸಂಯೋಜಕ ಇಳಯರಾಜ, ವಿಜಯ್ ಆಂಟೋನಿ, ವಿಜಯ್ ಸೇತುಪತಿ, ಅರ್ಜುನ್, ಪಾರ್ತಿಪನ್, ರಾಧಾ ರವಿ, ಭಾಗ್ಯರಾಜ್ ಸೇರಿದಂತೆ ಹಲವು ನಟರು ಶ್ರದ್ಧಾಂಜಲಿ ಸಲ್ಲಿಸಿದರು. ಅಂತಿಮ ದರ್ಶನ ಪಡೆಯಲು ಪಕ್ಷದ ಕಚೇರಿಯ ಹೊರಭಾಗದ ರಸ್ತೆಯಲ್ಲಿ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಮತ್ತು ಅಭಿಮಾನಿಗಳು ಸರತಿ ಸಾಲಿನಲ್ಲಿ ಜಮಾಯಿಸಿದ್ದರು. ಭದ್ರತೆಗೆ 500ಕ್ಕೂ ಹೆಚ್ಚು ಪೊಲೀಸರು ಭದ್ರತೆಗೆ ನಿಯೋಜಿಸಲಾಗಿತ್ತು.

ಸರ್ಕಾರಿ ಗೌರವ ಸಲ್ಲಿಸಿದ ಪೊಲೀಸರು
ಸರ್ಕಾರಿ ಗೌರವ ಸಲ್ಲಿಸಿದ ಪೊಲೀಸರು

ಹೆಚ್ಚಿನ ಸಂಖ್ಯೆಯಲ್ಲಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕುಟುಂಬದವರು ಸೇರಿದಂತೆ 200 ಮಂದಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದರು. ಆಗ ಸಾರ್ವಜನಿಕರು ರಸ್ತೆ ತಡೆ ನಡೆಸಿದ ಘಟನೆಯೂ ಜರುಗಿತು.

ಇದನ್ನೂ ಓದಿ: 'ವಿಜಯಕಾಂತ್ ನಿಧನ ತುಂಬಲಾರದ ನಷ್ಟ': ಅಂತಿಮ ದರ್ಶನ ಪಡೆದ ರಜನಿಕಾಂತ್

ಚೆನ್ನೈ(ತಮಿಳುನಾಡು): ಗುರುವಾರ ನಿಧನರಾದ ಖ್ಯಾತ ತಮಿಳು ನಟ, ರಾಜಕಾರಣಿ ವಿಜಯಕಾಂತ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಅಹಿತಕರ ಘಟನೆ ವರದಿಯಾಗಿದೆ. ನಟ ದಳಪತಿ ವಿಜಯ್ ಅವರತ್ತ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದಾನೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ತುಣಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

71 ವರ್ಷದ ವಯಸ್ಸಿನ ವಿಜಯಕಾಂತ್ ಅನಾರೋಗ್ಯದಿಂದ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದರು. ರಾತ್ರಿ 10.30ರ ಸುಮಾರಿಗೆ ದಳಪತಿ ವಿಜಯ್ ಸಹ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ಗೌರವ ಸಲ್ಲಿಸಿದ್ದರು. ದಿವಂಗತ ರಾಜಕಾರಣಿಯ ಪತ್ನಿ ಪ್ರೇಮಲತಾ ವಿಜಯಕಾಂತ್ ಅವರಿಗೆ ಸಾಂತ್ವನ ಹೇಳಿ ಅಲ್ಲಿಂದ ತೆರಳಿದ್ದರು.

ವಿಜಯಕಾಂತ್ ಅವರ ದರ್ಶನ ಪಡೆದ ಸಿಎಂ  ಎಂ.ಕೆ.ಸ್ಟಾಲಿನ್
ವಿಜಯಕಾಂತ್ ಅವರ ದರ್ಶನ ಪಡೆದ ಸಿಎಂ ಎಂ.ಕೆ.ಸ್ಟಾಲಿನ್

ಇದನ್ನೂ ಓದಿ: ಕೋವಿಡ್​ನಿಂದ ಬಳಲುತ್ತಿದ್ದ ಹಿರಿಯ ನಟ, ಡಿಎಂಡಿಕೆ ನಾಯಕ ವಿಜಯಕಾಂತ್ ವಿಧಿವಶ ​

ಇದಾದ ಬಳಿಕ ಜನಸಂದಣಿಯ ನಡುವೆ ತಮ್ಮ ಕಾರು ಹತ್ತಲು ಯತ್ನಿಸಿದ ವಿಜಯ್ ಅವರತ್ತ ಅಪರಿಚಿತ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದಾನೆ ಎಂದು ಹೇಳಲಾಗಿದೆ. ಇದರ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಈ ಘಟನೆಗೆ ಸಂಬಂಧ ವಿಡಿಯೋ ತುಣುಕು ಕೂಡ ವೈರಲ್ ಆಗಿದೆ. ಇದರಲ್ಲಿ ವಿಜಯ್ ಕಡೆಗೆ ಚಪ್ಪಲಿ ತೂರಿ ಬರುತ್ತಿರುವುದು ಹಾಗೂ ಅದನ್ನು ವ್ಯಕ್ತಿಯೊಬ್ಬರು ತಡೆದಿರುವುದನ್ನು ಕಾಣಬಹುದು. ಮತ್ತೊಂದೆಡೆ, ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ವಿಜಯ್ ಬೆಂಬಲಿಗರು ಮಾತ್ರವಲ್ಲದೆ ವಿವಿಧ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ವಿಜಯಕಾಂತ್ ಅವರ ಪಾರ್ಥಿವ ಶರೀರ
ವಿಜಯಕಾಂತ್ ಅವರ ಪಾರ್ಥಿವ ಶರೀರ

ಕಚೇರಿ ಆವರಣದಲ್ಲಿ ಅಂತ್ಯ ಸಂಸ್ಕಾರ-72 ಗನ್ ಸೆಲ್ಯೂಟ್‌ ಗೌರವ: ಇಂದು ಸಂಜೆ ವಿಜಯಕಾಂತ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಚೆನ್ನೈನ ಕೊಯಂಬೆಡುವಿನಲ್ಲಿರುವ ಡಿಎಂಡಿಕೆ ಪಕ್ಷದ ಪ್ರಧಾನ ಕಚೇರಿ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. 72 ಗನ್ ಸೆಲ್ಯೂಟ್‌ನೊಂದಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಡಿಎಂಡಿಕೆ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡು ಅಶ್ರುತರ್ಪಣ ಸಲ್ಲಿಸಿದರು.

ಇದಕ್ಕೂ ಮುನ್ನ ಡಿಎಂಡಿಕೆ ಸಂಸ್ಥಾಪಕರಾದ ವಿಜಯಕಾಂತ್ ಪಾರ್ಥಿವ ಶರೀರವನ್ನು ಸಾಲಿಗ್ರಾಮಮ್ ಮನೆಯಲ್ಲಿ ಕೆಲವು ಗಂಟೆಗಳ ಕಾಲ ಇರಿಸಲಾಗಿತ್ತು. ಬಳಿಕ ಡಿಎಂಡಿಕೆ ಪ್ರಧಾನ ಕಚೇರಿಗೆ ಮೆರವಣಿಗೆಯಲ್ಲಿ ತರಲಾಯಿತು. ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಸಂಸದ ಟಿ.ಆರ್.ಬಾಲು ಸೇರಿ ಹಲವು ರಾಜಕಾರಣಿಗಳು ಅಂತಿಮ ದರ್ಶನ ಪಡೆದರು.

ವಿಜಯಕಾಂತ್​ ಅವರಿಗೆ ಅಂತಿಮ ಗೌರವ ಸಲ್ಲಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್.
ವಿಜಯಕಾಂತ್​ ಅವರಿಗೆ ಅಂತಿಮ ಗೌರವ ಸಲ್ಲಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್.

ಇದನ್ನೂ ಓದಿ: ವಿಜಯಕಾಂತ್ ಸಿನಿಪಯಣ​: 150 ಸಿನಿಮಾ, ಒಂದೇ ವರ್ಷ 18 ಚಿತ್ರ ತೆರೆಗೆ

ಖ್ಯಾತ ನಟರಾದ ರಜನಿಕಾಂತ್, ಕಮಲ್ ಹಾಸನ್, ಸಂಗೀತ ಸಂಯೋಜಕ ಇಳಯರಾಜ, ವಿಜಯ್ ಆಂಟೋನಿ, ವಿಜಯ್ ಸೇತುಪತಿ, ಅರ್ಜುನ್, ಪಾರ್ತಿಪನ್, ರಾಧಾ ರವಿ, ಭಾಗ್ಯರಾಜ್ ಸೇರಿದಂತೆ ಹಲವು ನಟರು ಶ್ರದ್ಧಾಂಜಲಿ ಸಲ್ಲಿಸಿದರು. ಅಂತಿಮ ದರ್ಶನ ಪಡೆಯಲು ಪಕ್ಷದ ಕಚೇರಿಯ ಹೊರಭಾಗದ ರಸ್ತೆಯಲ್ಲಿ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಮತ್ತು ಅಭಿಮಾನಿಗಳು ಸರತಿ ಸಾಲಿನಲ್ಲಿ ಜಮಾಯಿಸಿದ್ದರು. ಭದ್ರತೆಗೆ 500ಕ್ಕೂ ಹೆಚ್ಚು ಪೊಲೀಸರು ಭದ್ರತೆಗೆ ನಿಯೋಜಿಸಲಾಗಿತ್ತು.

ಸರ್ಕಾರಿ ಗೌರವ ಸಲ್ಲಿಸಿದ ಪೊಲೀಸರು
ಸರ್ಕಾರಿ ಗೌರವ ಸಲ್ಲಿಸಿದ ಪೊಲೀಸರು

ಹೆಚ್ಚಿನ ಸಂಖ್ಯೆಯಲ್ಲಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕುಟುಂಬದವರು ಸೇರಿದಂತೆ 200 ಮಂದಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದರು. ಆಗ ಸಾರ್ವಜನಿಕರು ರಸ್ತೆ ತಡೆ ನಡೆಸಿದ ಘಟನೆಯೂ ಜರುಗಿತು.

ಇದನ್ನೂ ಓದಿ: 'ವಿಜಯಕಾಂತ್ ನಿಧನ ತುಂಬಲಾರದ ನಷ್ಟ': ಅಂತಿಮ ದರ್ಶನ ಪಡೆದ ರಜನಿಕಾಂತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.