ETV Bharat / bharat

ಮಹಾರಾಷ್ಟ್ರ ಸಿಎಂ ಪುತ್ರನಿಂದ ನನ್ನ ಕೊಲೆಗೆ ಸುಪಾರಿ: ಸಂಜಯ್​ ರಾವತ್​ ಗಂಭೀರ ಆರೋಪ

author img

By

Published : Feb 22, 2023, 12:20 PM IST

ಶಿವಸೇನಾ ಮುಖಂಡ ಸಂಜಯ್​ ರಾವತ್​- ಸಂಜಯ್​ ರಾವತ್​ ಕೊಲೆಗೆ ಸುಪಾರಿ- ಸಿಎಂ ಏಕನಾಥ್ ಶಿಂಧೆ ಪುತ್ರನ ಮೇಲೆ ಆರೋಪ- ಸಿಎಂ ಪುತ್ರ ಶ್ರೀಕಾಂತ್​ ಶಿಂಧೆಯಿಂದ ಕೊಲೆ ಸುಪಾರಿ- ಡೆಪ್ಯೂಟಿ ಸಿಎಂಗೆ ಸಂಜಯ್ ರಾವತ್ ಪತ್ರ

ಸಂಜಯ್​ ರಾವತ್​ ಗಂಭೀರ ಆರೋಪ
ಸಂಜಯ್​ ರಾವತ್​ ಗಂಭೀರ ಆರೋಪ

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ನನ್ನನ್ನು ಕೊಲೆ ಮಾಡಿಸಲು ಹಂತಕರಿಗೆ ಸುಪಾರಿ ನೀಡಿದ್ದಾರೆ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​, ಮುಂಬೈ ಮತ್ತು ಥಾಣೆ ಪೊಲೀಸ್​ ಅಧಿಕಾರಿಗಳಿಗೆ ಸಂಜಯ್​ ರಾವತ್​ ಪತ್ರ ಬರೆದಿದ್ದಾರೆ. ತಮಗೆ ಜೀವ ಬೆದರಿಕೆ ಇದೆ. ನನ್ನನ್ನು ಕೊಲೆ ಮಾಡಲು ಸಿಎಂ ಪುತ್ರ ಶ್ರೀಕಾಂತ್ ಶಿಂಧೆ ಕುಖ್ಯಾತ ಗೂಂಡಾ ಒಬ್ಬರಿಗೆ ಸುಪಾರಿ ನೀಡಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಹಾಅಘಾಡಿ ಸರ್ಕಾರ ನೀಡಿದ್ದ ಭದ್ರತೆಯನ್ನು ಈಗಿನ ಸರ್ಕಾರ ವಾಪಸ್​ ಪಡೆದಿದೆ. ಈ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ರಾಜಕೀಯವಾಗಿ ಇಂತಹ ನಿರ್ಧಾರಗಳು ಆಗುತ್ತವೆ. ಆದರೆ, ನನ್ನ ಮೇಲೆ ನಡೆಯುತ್ತಿರುವ ಮಸಲತ್ತು ಮತ್ತು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಿಮ್ಮ ಗಮನಕ್ಕೆ ತರಬೇಕಾಗಿದೆ" ಎಂದು ಸಂಜಯ್ ರಾವತ್ ಪತ್ರದಲ್ಲಿ ಹೇಳಿದ್ದಾರೆ.

ತಮಗಿರುವ ಜೀವ ಬೆದರಿಕೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ರಾವತ್, ತಮಗೆ ಸರ್ಕಾರದಿಂದ ಯಾವುದೇ ಭದ್ರತೆಯ ಅಗತ್ಯವಿಲ್ಲ. ನಾನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿದ್ದೇನೆ. ಮುಂಬೈ ಸಿಪಿ ವಿವೇಕ್ ಫನ್ಸಾಲ್ಕರ್ ಮತ್ತು ಥಾಣೆ ಸಿಪಿ ಅವರಿಗೂ ಈ ಬಗ್ಗೆ ಪತ್ರ ಮುಖೇನ ತಿಳಿಸಿದ್ದೇನೆ. ಇದಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಕರೆ ಮಾಡಿ ಮಾಡಿ ಮಾಹಿತಿ ನೀಡಿದ್ದೇನೆ" ಎಂದು ಅವರು ಹೇಳಿದರು.

ನನಗೆ ಯಾವುದೇ ಭದ್ರತೆ ನೀಡದಿದ್ದರೂ ಪರವಾಗಿಲ್ಲ. ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ ಮಾಡುತ್ತೇನೆ. ರಾಜ್ಯದಲ್ಲಿನ ಸಂಸದರು, ಶಾಸಕರು ಜನರನ್ನು ಕೊಲೆ ಮಾಡಲು ಸುಪಾರಿ ನೀಡುವ ಹಂತಕ್ಕೆ ಬಂದಿದ್ದಾರೆ. ಜಾಮೀನು ಪಡೆದು ಹೊರಬಂದಿರುವ ಹಂತಕರಿಗೆ ಸುಪಾರಿ ನೀಡಲಾಗಿದೆ. ಅಷ್ಟಾದರೂ ನನಗೆ ಭದ್ರತೆ ಬೇಕಿಲ್ಲ. ಕಾರಣ ನಾನು ಸಿಂಹ ಇದ್ದ ಹಾಗೆ ಎಂದು ರಾವತ್​ ಗುಡುಗಿದ್ದಾರೆ.

ಶಿವಸೇನೆ ಚಿಹ್ನೆಗಾಗಿ ಕೋಟಿ ಡೀಲ್​: ಇನ್ನು, ನಿನ್ನೆಯಷ್ಟೇ ಮಾತನಾಡಿದ್ದ ಶಿವಸೇನೆ ಸಂಸದ, ಪಕ್ಷದ ಬಿಲ್ಲು-ಬಾಣದ ಗುರುತಿನ ಚಿಹ್ನೆ ಮತ್ತು ಪಕ್ಷದ ಹೆಸರನ್ನು ಪಡದುಕೊಳ್ಳಲು 2000 ಕೋಟಿ ರೂಪಾಯಿಗಳ ಡೀಲ್ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇಷ್ಟು ಪ್ರಮಾಣದಲ್ಲಿ ಡೀಲ್​ ನಡೆದಿರುವ ಬಗ್ಗೆ ಇದು ಪ್ರಾಥಮಿಕ ತನಿಖೆಯಿಂದ ಬಂದ ಮಾಹಿತಿಯಾಗಿದೆ. ಇದು 100 ಪ್ರತಿಶತ ಸತ್ಯ ಎಂದು ಟ್ವೀಟ್‌ ಮಾಡಿದ್ದರು.

ಆಡಳಿತದಲ್ಲಿರುವ ಸರ್ಕಾರಕ್ಕೆ ಬೇಕಾಗಿರುವ ಬಿಲ್ಡರ್ ಒಬ್ಬರು ಈ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ಅವರು ಮಾಧ್ಯಮದವರಿಗೆ ತಿಳಿಸಿದ್ದರು. ತಮ್ಮ ಆರೋಪಕ್ಕೆ ಪುರಾವೆ ಇದ್ದು, ಅದನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ಬಾಂಬ್​ ಸಿಡಿಸಿದ್ದರು.

ರಾವತ್ ಆರೋಪವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಶಾಸಕ ಸದಾ ಸರ್ವಂಕರ್ ತಳ್ಳಿ ಹಾಕಿದ್ದರು. ಸಂಜಯ್ ರಾವತ್ ಕ್ಯಾಷಿಯರ್ ಆಗಿದ್ದಾರಾ ಎಂದೂ ಅವರು ಪ್ರಶ್ನಿಸಿದ್ದರು.

ಓದಿ: ಇನ್ಮುಂದೆ ಸಾರ್ವಜನಿಕರ ಕರೆ ಸ್ವೀಕರಿಸದಿದ್ದರೆ ಸಿಬ್ಬಂದಿಗೆ ಸಂಕಷ್ಟ: ಆಗ್ನೇಯ ವಿಭಾಗದಲ್ಲಿ ನೂತನ ವ್ಯವಸ್ಥೆ

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ನನ್ನನ್ನು ಕೊಲೆ ಮಾಡಿಸಲು ಹಂತಕರಿಗೆ ಸುಪಾರಿ ನೀಡಿದ್ದಾರೆ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​, ಮುಂಬೈ ಮತ್ತು ಥಾಣೆ ಪೊಲೀಸ್​ ಅಧಿಕಾರಿಗಳಿಗೆ ಸಂಜಯ್​ ರಾವತ್​ ಪತ್ರ ಬರೆದಿದ್ದಾರೆ. ತಮಗೆ ಜೀವ ಬೆದರಿಕೆ ಇದೆ. ನನ್ನನ್ನು ಕೊಲೆ ಮಾಡಲು ಸಿಎಂ ಪುತ್ರ ಶ್ರೀಕಾಂತ್ ಶಿಂಧೆ ಕುಖ್ಯಾತ ಗೂಂಡಾ ಒಬ್ಬರಿಗೆ ಸುಪಾರಿ ನೀಡಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಹಾಅಘಾಡಿ ಸರ್ಕಾರ ನೀಡಿದ್ದ ಭದ್ರತೆಯನ್ನು ಈಗಿನ ಸರ್ಕಾರ ವಾಪಸ್​ ಪಡೆದಿದೆ. ಈ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ರಾಜಕೀಯವಾಗಿ ಇಂತಹ ನಿರ್ಧಾರಗಳು ಆಗುತ್ತವೆ. ಆದರೆ, ನನ್ನ ಮೇಲೆ ನಡೆಯುತ್ತಿರುವ ಮಸಲತ್ತು ಮತ್ತು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಿಮ್ಮ ಗಮನಕ್ಕೆ ತರಬೇಕಾಗಿದೆ" ಎಂದು ಸಂಜಯ್ ರಾವತ್ ಪತ್ರದಲ್ಲಿ ಹೇಳಿದ್ದಾರೆ.

ತಮಗಿರುವ ಜೀವ ಬೆದರಿಕೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ರಾವತ್, ತಮಗೆ ಸರ್ಕಾರದಿಂದ ಯಾವುದೇ ಭದ್ರತೆಯ ಅಗತ್ಯವಿಲ್ಲ. ನಾನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿದ್ದೇನೆ. ಮುಂಬೈ ಸಿಪಿ ವಿವೇಕ್ ಫನ್ಸಾಲ್ಕರ್ ಮತ್ತು ಥಾಣೆ ಸಿಪಿ ಅವರಿಗೂ ಈ ಬಗ್ಗೆ ಪತ್ರ ಮುಖೇನ ತಿಳಿಸಿದ್ದೇನೆ. ಇದಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಕರೆ ಮಾಡಿ ಮಾಡಿ ಮಾಹಿತಿ ನೀಡಿದ್ದೇನೆ" ಎಂದು ಅವರು ಹೇಳಿದರು.

ನನಗೆ ಯಾವುದೇ ಭದ್ರತೆ ನೀಡದಿದ್ದರೂ ಪರವಾಗಿಲ್ಲ. ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ ಮಾಡುತ್ತೇನೆ. ರಾಜ್ಯದಲ್ಲಿನ ಸಂಸದರು, ಶಾಸಕರು ಜನರನ್ನು ಕೊಲೆ ಮಾಡಲು ಸುಪಾರಿ ನೀಡುವ ಹಂತಕ್ಕೆ ಬಂದಿದ್ದಾರೆ. ಜಾಮೀನು ಪಡೆದು ಹೊರಬಂದಿರುವ ಹಂತಕರಿಗೆ ಸುಪಾರಿ ನೀಡಲಾಗಿದೆ. ಅಷ್ಟಾದರೂ ನನಗೆ ಭದ್ರತೆ ಬೇಕಿಲ್ಲ. ಕಾರಣ ನಾನು ಸಿಂಹ ಇದ್ದ ಹಾಗೆ ಎಂದು ರಾವತ್​ ಗುಡುಗಿದ್ದಾರೆ.

ಶಿವಸೇನೆ ಚಿಹ್ನೆಗಾಗಿ ಕೋಟಿ ಡೀಲ್​: ಇನ್ನು, ನಿನ್ನೆಯಷ್ಟೇ ಮಾತನಾಡಿದ್ದ ಶಿವಸೇನೆ ಸಂಸದ, ಪಕ್ಷದ ಬಿಲ್ಲು-ಬಾಣದ ಗುರುತಿನ ಚಿಹ್ನೆ ಮತ್ತು ಪಕ್ಷದ ಹೆಸರನ್ನು ಪಡದುಕೊಳ್ಳಲು 2000 ಕೋಟಿ ರೂಪಾಯಿಗಳ ಡೀಲ್ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇಷ್ಟು ಪ್ರಮಾಣದಲ್ಲಿ ಡೀಲ್​ ನಡೆದಿರುವ ಬಗ್ಗೆ ಇದು ಪ್ರಾಥಮಿಕ ತನಿಖೆಯಿಂದ ಬಂದ ಮಾಹಿತಿಯಾಗಿದೆ. ಇದು 100 ಪ್ರತಿಶತ ಸತ್ಯ ಎಂದು ಟ್ವೀಟ್‌ ಮಾಡಿದ್ದರು.

ಆಡಳಿತದಲ್ಲಿರುವ ಸರ್ಕಾರಕ್ಕೆ ಬೇಕಾಗಿರುವ ಬಿಲ್ಡರ್ ಒಬ್ಬರು ಈ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ಅವರು ಮಾಧ್ಯಮದವರಿಗೆ ತಿಳಿಸಿದ್ದರು. ತಮ್ಮ ಆರೋಪಕ್ಕೆ ಪುರಾವೆ ಇದ್ದು, ಅದನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ಬಾಂಬ್​ ಸಿಡಿಸಿದ್ದರು.

ರಾವತ್ ಆರೋಪವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಶಾಸಕ ಸದಾ ಸರ್ವಂಕರ್ ತಳ್ಳಿ ಹಾಕಿದ್ದರು. ಸಂಜಯ್ ರಾವತ್ ಕ್ಯಾಷಿಯರ್ ಆಗಿದ್ದಾರಾ ಎಂದೂ ಅವರು ಪ್ರಶ್ನಿಸಿದ್ದರು.

ಓದಿ: ಇನ್ಮುಂದೆ ಸಾರ್ವಜನಿಕರ ಕರೆ ಸ್ವೀಕರಿಸದಿದ್ದರೆ ಸಿಬ್ಬಂದಿಗೆ ಸಂಕಷ್ಟ: ಆಗ್ನೇಯ ವಿಭಾಗದಲ್ಲಿ ನೂತನ ವ್ಯವಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.