ETV Bharat / bharat

ಏಕನಾಥ್ ಶಿಂಧೆ ವಿರುದ್ಧ ಶಿವಸೇನೆ ಪೋಸ್ಟರ್ ಅಭಿಯಾನ

author img

By

Published : Jun 22, 2022, 12:42 PM IST

ಮುಂಬೈನಲ್ಲಿ ಏಕನಾಥ್ ಶಿಂಧೆ ವಿರುದ್ಧ ಶಿವಸೇನೆ ಪೋಸ್ಟರ್ ಅಭಿಯಾನ ಆರಂಭವಾಗಿದೆ. ಸಚಿವ ಏಕನಾಥ್ ಶಿಂಧೆ ಹಾಗೂ ಶಿವಸೇನೆಯ ಶಾಸಕರು ಬಂಡಾಯ ಎದ್ದಿರುವ ಹಿನ್ನೆಲೆಯಲ್ಲಿ ಠಾಕ್ರೆ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ.

Shiv Senas poster campaign
ಏಕನಾಥ್ ಶಿಂಧೆ ವಿರುದ್ಧ ಶಿವಸೇನೆ ಪೋಸ್ಟರ್ ಅಭಿಯಾನ

ಮುಂಬೈ: ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಂಡಾಯದ ಬೆನ್ನಲ್ಲೇ ಶಿವಸೇನೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಶಿವಸೇನೆಯ ಕಾರ್ಪೊರೇಟರ್ ದೀಪಮಲಾ ಅವರು ಪ್ರತಿಪಕ್ಷಗಳನ್ನು ಟೀಕಿಸುವ ಪೋಸ್ಟರ್‌ಗಳನ್ನು ಹಾಕಿದ್ದಾರೆ. ಮುಂಬೈ ಸಂಸದ ಸಂಜಯ್ ರಾವುತ್​​ ಅವರ ಮನೆ ಬಳಿ ಈ ಪೋಸ್ಟರ್ ಅಂಟಿಸಲಾಗಿದೆ.

ಶಿಂಧೆಯವರ ನಡೆಯಿಂದ ಕೆರಳಿದ ಶಿವಸೇನೆಯ ಹಲವು ಕಾರ್ಯಕರ್ತರು ಇದನ್ನು ಬಿಜೆಪಿ ಪ್ರಚೋದಿತ ಬಂಡಾಯ ಎಂದು ಬಣ್ಣಿಸಿ ತಮ್ಮ ಕೋಪ ಮತ್ತು ಭಾವನೆಗಳನ್ನು ಪೋಸ್ಟರ್ ಮೂಲಕ ವ್ಯಕ್ತಪಡಿಸಿದ್ದಾರೆ. ಶಿವಸೇನೆ ಕಾರ್ಪೊರೇಟರ್ ದೀಪಮಲಾ ಈ ಬ್ಯಾನರ್ ಹಾಕಿದ್ದಾರೆ. ಈ ಪೋಸ್ಟರ್‌ನಲ್ಲಿ ಸಂಜಯ್ ರಾವುತ್ ಅವರ ದೊಡ್ಡ ಫೋಟೋವಿದ್ದು, ಅದರ ಕೆಳಗೆ ದೀಪ ಕಾಣಿಸಿಕೊಂಡಿದ್ದಾರೆ.

ಏಕನಾಥ್ ಶಿಂಧೆ ಜತೆಗಿರುವ ಶಾಸಕರ ಜತೆ ಮಾತುಕತೆ ನಡೆಯುತ್ತಿದ್ದು, ಅವರೆಲ್ಲರೂ ಶಿವಸೇನೆಯಲ್ಲಿಯೇ ಉಳಿಯಲಿದ್ದಾರೆ. ನಮ್ಮ ಪಕ್ಷ ಹೋರಾಟ ನಡೆಸುತ್ತಿದೆ. ನಮ್ಮ ಅಧಿಕಾರ ಹೋದರೂ ನಿರಂತರ ಹೋರಾಟ ಮಾಡುತ್ತೇವೆ. ಏಕನಾಥ್ ಶಿಂಧೆ ನಮ್ಮ ಹಳೆಯ ಪಕ್ಷದ ಸದಸ್ಯ, ಅವರು ನಮ್ಮ ಸ್ನೇಹಿತ. ನಾವು ಹಲವು ದಶಕಗಳಿಂದ ಒಟ್ಟಿಗೆ ಕೆಲಸ ಮಾಡಿದ್ದೇವೆ. ಒಬ್ಬರನ್ನೊಬ್ಬರು ಬಿಡುವುದು ಅವನಿಗೆ ಅಥವಾ ನಮಗೆ ಅಷ್ಟು ಸುಲಭವಲ್ಲ. ಇಂದು ಬೆಳಗ್ಗೆ ನಾನು ಅವರೊಂದಿಗೆ ಒಂದು ಗಂಟೆ ಕಾಲ ಚರ್ಚಿಸಿದ್ದೇನೆ ಮತ್ತು ಅದರ ಬಗ್ಗೆ ಪಕ್ಷದ ಮುಖ್ಯಸ್ಥರಿಗೆ ತಿಳಿಸಿದ್ದೇನೆ ಎಂದು ಸಂಜಯ್ ರಾವತ್ ಹೇಳಿದರು.

ಇದನ್ನೂ ಓದಿ: ಮಹಾ ಬಿಕ್ಕಟ್ಟು: ಸೂರತ್‌ ಹೋಟೆಲ್‌ನಿಂದ ಗುವಾಹಟಿಗೆ ಸ್ಥಳಾಂತರಗೊಂಡ ಶಿವಸೇನಾ ಶಾಸಕರು

ಮುಂಬೈ: ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಂಡಾಯದ ಬೆನ್ನಲ್ಲೇ ಶಿವಸೇನೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಶಿವಸೇನೆಯ ಕಾರ್ಪೊರೇಟರ್ ದೀಪಮಲಾ ಅವರು ಪ್ರತಿಪಕ್ಷಗಳನ್ನು ಟೀಕಿಸುವ ಪೋಸ್ಟರ್‌ಗಳನ್ನು ಹಾಕಿದ್ದಾರೆ. ಮುಂಬೈ ಸಂಸದ ಸಂಜಯ್ ರಾವುತ್​​ ಅವರ ಮನೆ ಬಳಿ ಈ ಪೋಸ್ಟರ್ ಅಂಟಿಸಲಾಗಿದೆ.

ಶಿಂಧೆಯವರ ನಡೆಯಿಂದ ಕೆರಳಿದ ಶಿವಸೇನೆಯ ಹಲವು ಕಾರ್ಯಕರ್ತರು ಇದನ್ನು ಬಿಜೆಪಿ ಪ್ರಚೋದಿತ ಬಂಡಾಯ ಎಂದು ಬಣ್ಣಿಸಿ ತಮ್ಮ ಕೋಪ ಮತ್ತು ಭಾವನೆಗಳನ್ನು ಪೋಸ್ಟರ್ ಮೂಲಕ ವ್ಯಕ್ತಪಡಿಸಿದ್ದಾರೆ. ಶಿವಸೇನೆ ಕಾರ್ಪೊರೇಟರ್ ದೀಪಮಲಾ ಈ ಬ್ಯಾನರ್ ಹಾಕಿದ್ದಾರೆ. ಈ ಪೋಸ್ಟರ್‌ನಲ್ಲಿ ಸಂಜಯ್ ರಾವುತ್ ಅವರ ದೊಡ್ಡ ಫೋಟೋವಿದ್ದು, ಅದರ ಕೆಳಗೆ ದೀಪ ಕಾಣಿಸಿಕೊಂಡಿದ್ದಾರೆ.

ಏಕನಾಥ್ ಶಿಂಧೆ ಜತೆಗಿರುವ ಶಾಸಕರ ಜತೆ ಮಾತುಕತೆ ನಡೆಯುತ್ತಿದ್ದು, ಅವರೆಲ್ಲರೂ ಶಿವಸೇನೆಯಲ್ಲಿಯೇ ಉಳಿಯಲಿದ್ದಾರೆ. ನಮ್ಮ ಪಕ್ಷ ಹೋರಾಟ ನಡೆಸುತ್ತಿದೆ. ನಮ್ಮ ಅಧಿಕಾರ ಹೋದರೂ ನಿರಂತರ ಹೋರಾಟ ಮಾಡುತ್ತೇವೆ. ಏಕನಾಥ್ ಶಿಂಧೆ ನಮ್ಮ ಹಳೆಯ ಪಕ್ಷದ ಸದಸ್ಯ, ಅವರು ನಮ್ಮ ಸ್ನೇಹಿತ. ನಾವು ಹಲವು ದಶಕಗಳಿಂದ ಒಟ್ಟಿಗೆ ಕೆಲಸ ಮಾಡಿದ್ದೇವೆ. ಒಬ್ಬರನ್ನೊಬ್ಬರು ಬಿಡುವುದು ಅವನಿಗೆ ಅಥವಾ ನಮಗೆ ಅಷ್ಟು ಸುಲಭವಲ್ಲ. ಇಂದು ಬೆಳಗ್ಗೆ ನಾನು ಅವರೊಂದಿಗೆ ಒಂದು ಗಂಟೆ ಕಾಲ ಚರ್ಚಿಸಿದ್ದೇನೆ ಮತ್ತು ಅದರ ಬಗ್ಗೆ ಪಕ್ಷದ ಮುಖ್ಯಸ್ಥರಿಗೆ ತಿಳಿಸಿದ್ದೇನೆ ಎಂದು ಸಂಜಯ್ ರಾವತ್ ಹೇಳಿದರು.

ಇದನ್ನೂ ಓದಿ: ಮಹಾ ಬಿಕ್ಕಟ್ಟು: ಸೂರತ್‌ ಹೋಟೆಲ್‌ನಿಂದ ಗುವಾಹಟಿಗೆ ಸ್ಥಳಾಂತರಗೊಂಡ ಶಿವಸೇನಾ ಶಾಸಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.