ETV Bharat / bharat

ಭಾರತ್​ ಜೋಡೋ ಯಾತ್ರೆಯಲ್ಲಿ ವೀರ ಸಾವರ್ಕರ್​ ಚಿತ್ರವುಳ್ಳ ಬ್ಯಾನರ್​ ಹಾಕಿದ ಕಾಂಗ್ರೆಸ್​!

author img

By

Published : Sep 21, 2022, 5:53 PM IST

ಕೇರಳದಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ಯಾತ್ರೆಯಲ್ಲಿ ವೀರ ಸಾವರ್ಕರ್​ ಫೋಟೋ ಕಾಣಿಸಿಕೊಂಡಿದೆ. ಎಚ್ಚೆತ್ತ ಕಾಂಗ್ರೆಸ್ಸಿಗರು ತಕ್ಷಣವೇ ಸಾವರ್ಕರ್​ ಜಾಗದಲ್ಲಿ ಗಾಂಧೀಜಿ ಫೋಟೋ ಹಾಕಿ ಮರೆ ಮಾಡಿದ್ದಾರೆ.

savarkar-among-freedom-fighters-on-bharat-jodo-poster
ಭಾರತ್​ ಜೋಡೋ ಯಾತ್ರೆಯಲ್ಲಿ ವೀರ ಸಾವರ್ಕರ್​ ಚಿತ್ರ

ಕೇರಳ: ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಭಾರತ್​ ಜೋಡೋ ಯಾತ್ರೆಯಲ್ಲಿ ಪ್ರಮಾದವೊಂದು ಜರುಗಿದೆ. ಯಾತ್ರೆ ಹೊರಡುವ ಮಾರ್ಗದಲ್ಲಿ ಕಾಂಗ್ರೆಸ್​ ಹಾಕಲಾದ ಸ್ವಾತಂತ್ರ್ಯ ಹೋರಾಟಗಾರರ ಬ್ಯಾನರ್​ನಲ್ಲಿ ವೀರ ಸಾವರ್ಕರ್​ ಅವರ ಪೋಟೋವನ್ನು ಅಳವಡಿಸಲಾಗಿದೆ. ಇದು ಗಮನಿಸದೇ ಕಾರ್ಯಕರ್ತರು ಬ್ಯಾನರ್​ ಅಂಟಿಸಿದ್ದಾರೆ.

ವಿಷಯ ಹೊರಬಿದ್ದ ಬಳಿಕ ಕಾರ್ಯಕರ್ತರು ದಿಢೀರನೇ ಸಾವರ್ಕರ್​ ಫೋಟೋಗೆ ಮರೆಯಾಗಿ ಗಾಂಧಿ ಚಿತ್ರವುಳ್ಳ ಬ್ಯಾನರ್​ ಅನ್ನು ಮುಚ್ಚಿದ್ದಾರೆ. ಕಾಂಗ್ರೆಸ್​ನ ಸ್ವಯಂಕೃತ ಅಚಾತುರ್ಯವನ್ನು ಬಿಜೆಪಿ ಗೇಲಿ ಮಾಡಿದೆ. ಕೊನೆಗೂ ಅವರನ್ನು ಒಪ್ಪಿಕೊಂಡಿರಲ್ಲ ಎಂದಿದೆ.

ಏನಾಯ್ತು: ಕೇರಳದಲ್ಲಿ 14 ದಿನದಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಎರ್ನಾಕುಲಂ ಜಿಲ್ಲೆ ತಲುಪಿದೆ. ಯಾತ್ರೆಯನ್ನು ಸ್ವಾಗತಿಸಲು ಕಾರ್ಯಕರ್ತರು ಭರದ ಸಿದ್ಧತೆ ನಡೆಸಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳುಳ್ಳ ಬ್ಯಾನರ್​ಗಳನ್ನು ಸಾಲಾಗಿ ಅಂಟಿಸಿದ್ದಾರೆ. ಅನಿರೀಕ್ಷಿತವಾಗಿ ವಿ.ಡಿ. ಸಾವರ್ಕರ್ ಇರುವ ಫೋಟೋ ಕೂಡ ಬ್ಯಾನರ್​ನಲ್ಲಿದೆ.

ಇದನ್ನು ಎಲ್​ಡಿಎಫ್​ ಬೆಂಬಲಿತ ಕೇರಳದ ಸ್ವತಂತ್ರ ಶಾಸಕ ಪಿ.ವಿ. ಅನ್ವರ್ ಗಮನಿಸಿ, ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಸಾವರ್ಕರ್ ಇದ್ದಾರೆ ಎಂದು ಬರೆದಿದ್ದಾರೆ.

ತಪ್ಪಾಗಿ ಮುದ್ರಣ- ಕಾಂಗ್ರೆಸ್​ ಸ್ಪಷ್ಟನೆ: ಮುದ್ರಕರಿಗೆ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳುಳ್ಳ ಬ್ಯಾನರ್​ ಸಿದ್ಧ ಮಾಡಲು ಸೂಚಿಸಲಾಗಿತ್ತು. ಇಂಟರ್​ನೆಟ್​ನಲ್ಲಿ ಸಿಕ್ಕ ಹೋರಾಟಗಾರರ ಚಿತ್ರಗಳನ್ನು ಅವರು ಅಳವಡಿಸಿದ್ದಾರೆ. ಸಾವರ್ಕರ್​ ಫೋಟೋವನ್ನು ತಪ್ಪಾಗಿ ಮುದ್ರಿಸಿದ್ದಾರೆ ಎಂದು ಕಾಂಗ್ರೆಸ್​ ಸ್ಪಷ್ಟನೆ ನೀಡಿದೆ.

ಸಾವರ್ಕರ್​ ಮರೆಮಾಡಿದ ಗಾಂಧಿ: ಇನ್ನು ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್​ ಕಾರ್ಯಕರ್ತರು ಮಹಾತ್ಮಾ ಗಾಂಧಿ ಅವರ ಫೋಟೋವನ್ನು ಸಾವರ್ಕರ್​ ಫೋಟೋಗೆ ಮರೆ ಮಾಡಿ ಅಳವಡಿಸಿದರು.

ತಡವಾದರೂ ಒಳ್ಳೆಯದೇ- ಬಿಜೆಪಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ತಡವಾಗಿಯಾದರೂ ಸರಿ, ಸಾವರ್ಕರ್​ ಅವರನ್ನು ಒಪ್ಪಿಕೊಂಡಿರಲ್ಲ. ಇದು ಉತ್ತಮ ಬೆಳವಣಿಗೆ ಎಂದು ಬಿಜೆಪಿ ಹೇಳಿದೆ.

ತಡವಾಗಿಯಾದರೂ ರಾಹುಲ್ ಗಾಂಧಿಯವರಿಗೆ ಒಳ್ಳೆಯ ಬುದ್ಧಿ ಬಂದಿದೆ. ಅವರ ಮುತ್ತಜ್ಜ ನೆಹರು ಅವರು ಕೂಡ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಕೇವಲ 2 ವಾರದಲ್ಲಿ ಪಂಜಾಬ್‌ನ ನಭಾ ಜೈಲಿನಿಂದ ಆಚೆ ಬರಲು ಹವಣಿಸಿ ಕ್ಷಮೆ ಕೋರಿ ಅರ್ಜಿ ಹಾಕಿದ್ದರು" ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.

"ಇತಿಹಾಸವನ್ನು ಮರೆಮಾಚಲು ಎಷ್ಟೇ ಪ್ರಯತ್ನಿಸಿದರೂ, ಸತ್ಯ ಹೊರಬರಲೇಬೇಕು. ವೀರ ಸಾವರ್ಕರ್​ ಸ್ವಾತಂತ್ರ್ಯ ಹೋರಾಟಗಾರರು ಎಂಬುದನ್ನು ಅಲ್ಲಗಳೆಯಲಾಗದು" ಎಂದು ಇನ್ನೊಬ್ಬರು ಟ್ವೀಟ್​ ಮಾಡಿದ್ದಾರೆ.

ಓದಿ: ಪಿಎಂ ಕೇರ್ಸ್​ ಫಂಡ್​ಗೆ ರತನ್​ ಟಾಟಾ ಟ್ರಸ್ಟಿ, ಸಲಹೆಗಾರರಾಗಿ ಸುಧಾಮೂರ್ತಿ ನೇಮಕ

ಕೇರಳ: ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಭಾರತ್​ ಜೋಡೋ ಯಾತ್ರೆಯಲ್ಲಿ ಪ್ರಮಾದವೊಂದು ಜರುಗಿದೆ. ಯಾತ್ರೆ ಹೊರಡುವ ಮಾರ್ಗದಲ್ಲಿ ಕಾಂಗ್ರೆಸ್​ ಹಾಕಲಾದ ಸ್ವಾತಂತ್ರ್ಯ ಹೋರಾಟಗಾರರ ಬ್ಯಾನರ್​ನಲ್ಲಿ ವೀರ ಸಾವರ್ಕರ್​ ಅವರ ಪೋಟೋವನ್ನು ಅಳವಡಿಸಲಾಗಿದೆ. ಇದು ಗಮನಿಸದೇ ಕಾರ್ಯಕರ್ತರು ಬ್ಯಾನರ್​ ಅಂಟಿಸಿದ್ದಾರೆ.

ವಿಷಯ ಹೊರಬಿದ್ದ ಬಳಿಕ ಕಾರ್ಯಕರ್ತರು ದಿಢೀರನೇ ಸಾವರ್ಕರ್​ ಫೋಟೋಗೆ ಮರೆಯಾಗಿ ಗಾಂಧಿ ಚಿತ್ರವುಳ್ಳ ಬ್ಯಾನರ್​ ಅನ್ನು ಮುಚ್ಚಿದ್ದಾರೆ. ಕಾಂಗ್ರೆಸ್​ನ ಸ್ವಯಂಕೃತ ಅಚಾತುರ್ಯವನ್ನು ಬಿಜೆಪಿ ಗೇಲಿ ಮಾಡಿದೆ. ಕೊನೆಗೂ ಅವರನ್ನು ಒಪ್ಪಿಕೊಂಡಿರಲ್ಲ ಎಂದಿದೆ.

ಏನಾಯ್ತು: ಕೇರಳದಲ್ಲಿ 14 ದಿನದಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಎರ್ನಾಕುಲಂ ಜಿಲ್ಲೆ ತಲುಪಿದೆ. ಯಾತ್ರೆಯನ್ನು ಸ್ವಾಗತಿಸಲು ಕಾರ್ಯಕರ್ತರು ಭರದ ಸಿದ್ಧತೆ ನಡೆಸಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳುಳ್ಳ ಬ್ಯಾನರ್​ಗಳನ್ನು ಸಾಲಾಗಿ ಅಂಟಿಸಿದ್ದಾರೆ. ಅನಿರೀಕ್ಷಿತವಾಗಿ ವಿ.ಡಿ. ಸಾವರ್ಕರ್ ಇರುವ ಫೋಟೋ ಕೂಡ ಬ್ಯಾನರ್​ನಲ್ಲಿದೆ.

ಇದನ್ನು ಎಲ್​ಡಿಎಫ್​ ಬೆಂಬಲಿತ ಕೇರಳದ ಸ್ವತಂತ್ರ ಶಾಸಕ ಪಿ.ವಿ. ಅನ್ವರ್ ಗಮನಿಸಿ, ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಸಾವರ್ಕರ್ ಇದ್ದಾರೆ ಎಂದು ಬರೆದಿದ್ದಾರೆ.

ತಪ್ಪಾಗಿ ಮುದ್ರಣ- ಕಾಂಗ್ರೆಸ್​ ಸ್ಪಷ್ಟನೆ: ಮುದ್ರಕರಿಗೆ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳುಳ್ಳ ಬ್ಯಾನರ್​ ಸಿದ್ಧ ಮಾಡಲು ಸೂಚಿಸಲಾಗಿತ್ತು. ಇಂಟರ್​ನೆಟ್​ನಲ್ಲಿ ಸಿಕ್ಕ ಹೋರಾಟಗಾರರ ಚಿತ್ರಗಳನ್ನು ಅವರು ಅಳವಡಿಸಿದ್ದಾರೆ. ಸಾವರ್ಕರ್​ ಫೋಟೋವನ್ನು ತಪ್ಪಾಗಿ ಮುದ್ರಿಸಿದ್ದಾರೆ ಎಂದು ಕಾಂಗ್ರೆಸ್​ ಸ್ಪಷ್ಟನೆ ನೀಡಿದೆ.

ಸಾವರ್ಕರ್​ ಮರೆಮಾಡಿದ ಗಾಂಧಿ: ಇನ್ನು ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್​ ಕಾರ್ಯಕರ್ತರು ಮಹಾತ್ಮಾ ಗಾಂಧಿ ಅವರ ಫೋಟೋವನ್ನು ಸಾವರ್ಕರ್​ ಫೋಟೋಗೆ ಮರೆ ಮಾಡಿ ಅಳವಡಿಸಿದರು.

ತಡವಾದರೂ ಒಳ್ಳೆಯದೇ- ಬಿಜೆಪಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ತಡವಾಗಿಯಾದರೂ ಸರಿ, ಸಾವರ್ಕರ್​ ಅವರನ್ನು ಒಪ್ಪಿಕೊಂಡಿರಲ್ಲ. ಇದು ಉತ್ತಮ ಬೆಳವಣಿಗೆ ಎಂದು ಬಿಜೆಪಿ ಹೇಳಿದೆ.

ತಡವಾಗಿಯಾದರೂ ರಾಹುಲ್ ಗಾಂಧಿಯವರಿಗೆ ಒಳ್ಳೆಯ ಬುದ್ಧಿ ಬಂದಿದೆ. ಅವರ ಮುತ್ತಜ್ಜ ನೆಹರು ಅವರು ಕೂಡ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಕೇವಲ 2 ವಾರದಲ್ಲಿ ಪಂಜಾಬ್‌ನ ನಭಾ ಜೈಲಿನಿಂದ ಆಚೆ ಬರಲು ಹವಣಿಸಿ ಕ್ಷಮೆ ಕೋರಿ ಅರ್ಜಿ ಹಾಕಿದ್ದರು" ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.

"ಇತಿಹಾಸವನ್ನು ಮರೆಮಾಚಲು ಎಷ್ಟೇ ಪ್ರಯತ್ನಿಸಿದರೂ, ಸತ್ಯ ಹೊರಬರಲೇಬೇಕು. ವೀರ ಸಾವರ್ಕರ್​ ಸ್ವಾತಂತ್ರ್ಯ ಹೋರಾಟಗಾರರು ಎಂಬುದನ್ನು ಅಲ್ಲಗಳೆಯಲಾಗದು" ಎಂದು ಇನ್ನೊಬ್ಬರು ಟ್ವೀಟ್​ ಮಾಡಿದ್ದಾರೆ.

ಓದಿ: ಪಿಎಂ ಕೇರ್ಸ್​ ಫಂಡ್​ಗೆ ರತನ್​ ಟಾಟಾ ಟ್ರಸ್ಟಿ, ಸಲಹೆಗಾರರಾಗಿ ಸುಧಾಮೂರ್ತಿ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.