ETV Bharat / bharat

ಶಬರಿಮಲೆಗೆ ಭಕ್ತರ ದಂಡು.. ಒಂದೇ ದಿನ ದಾಖಲೆಯ 42 ಸಾವಿರ ಮಂದಿ ಅಯ್ಯಪ್ಪಸ್ವಾಮಿಯ ದರ್ಶನ

author img

By

Published : Dec 5, 2021, 3:39 PM IST

Updated : Dec 5, 2021, 3:44 PM IST

ಕೇರಳದಲ್ಲಿ ಕೊರೊನಾ ಸೋಂಕಿನ ಅಬ್ಬರವಿದ್ದರೂ ಸಹ ಶಬರಿಮಲೆಗೆ ಬರುತ್ತಿರುವ ಭಕ್ತರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಶನಿವಾರ ಒಂದೇ ದಿನ ಬರೋಬ್ಬರಿ 42 ಸಾವಿರ ಜನರು ಭೇಟಿ ನೀಡಿದ್ದು, ಇದು ಹೊಸ ದಾಖಲೆ ಎಂದು ಅಲ್ಲಿನ ಸರ್ಕಾರ ಹೇಳಿದೆ.

sabarimala rush today
ಶಬರಿಮಲೆಗೆ ಬಂದ ಭಕ್ತರ ದಂಡು

ಕೇರಳ : ದೇಶದಲ್ಲಿ ಒಮಿಕ್ರಾನ್​ ವೈರಸ್​ ವ್ಯಾಪಿಸುವ ಭೀತಿ ಮಧ್ಯೆಯೇ ಶಬರಿಮಲೆಗೆ ಭಕ್ತರ ದಂಡೇ ಆಗಮಿಸುತ್ತಿದೆ. ಶನಿವಾರ ದಾಖಲೆಯ 42 ಸಾವಿರ ಜನರು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ ಎಂದು ಕೇರಳ ಸರ್ಕಾರ ಮಾಹಿತಿ ನೀಡಿದೆ.

ಶಬರಿಮಲೆಗೆ ಬಂದ ಭಕ್ತರ ದಂಡು
ಶಬರಿಮಲೆಗೆ ಬಂದ ಭಕ್ತರ ದಂಡು

ಮಂಡಲ ಮಹಾವಿರಕ್ಕು ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಭಕ್ತರಿಗಾಗಿ ತೆರೆಯಲಾಗಿದೆ. ಶುಕ್ರವಾರದಂದು 27 ಸಾವಿರಕ್ಕೂ ಅಧಿಕ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರೆ, ಶನಿವಾರ ದಾಖಲೆಯ 42 ಸಾವಿರ ಮಂದಿ ಸ್ವಾಮಿಯ ದರ್ಶನಕ್ಕೆ ಬಂದಿದ್ದಾರೆ. ದೇವಸ್ಥಾನ ಪ್ರವೇಶಿಸುವ ಎಲ್ಲಾ ಭಕ್ತಾದಿಗಳಿಗೆ ಮಾಸ್ಕ್​, ಸ್ಯಾನಿಟೈಸರ್​ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: Watch- ಇಂಡೋನೇಷ್ಯಾ ಜ್ವಾಲಾಮುಖಿ: ಈವರೆಗೆ 13 ಮಂದಿ ಸಾವು

ಡಿಸೆಂಬರ್​ 9ಕ್ಕೆ ವರ್ಚುವಲ್​ ಕ್ಯೂ ಪದ್ಧತಿ ಬುಕ್ಕಿಂಗ್​ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ಪ್ರತಿದಿನ ಸುಮಾರು 5 ಸಾವಿರ ಭಕ್ತರಿಗೆ ಸ್ಪಾಟ್​ ಬುಕ್ಕಿಂಗ್​ ಮಾಡಿಕೊಳ್ಳಲು ಕೂಡ ಅನುಮತಿ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.

ಡಿಸೆಂಬರ್​ 26ರವರೆಗೆ ಭಕ್ತಾದಿಗಳಿಗಾಗಿ ದೇವಸ್ಥಾನ ತೆರೆದಿರುತ್ತದೆ. ಬಳಿಕ ಸಂಕ್ರಾಂತಿ ಹಬ್ಬದ ಹಿನ್ನೆಲೆ ಮತ್ತೆ ಡಿ.30ರಂದು ದೇಗುಲದ ಬಾಗಿಲು ತೆರೆಯಲಾಗುವುದು. ಜನವರಿ 20ರವರೆಗೂ ಭಕ್ತರ ದರ್ಶನಕ್ಕೆ ಅನುಮತಿ ಸಿಗಲಿದೆ.

ಕೇರಳ : ದೇಶದಲ್ಲಿ ಒಮಿಕ್ರಾನ್​ ವೈರಸ್​ ವ್ಯಾಪಿಸುವ ಭೀತಿ ಮಧ್ಯೆಯೇ ಶಬರಿಮಲೆಗೆ ಭಕ್ತರ ದಂಡೇ ಆಗಮಿಸುತ್ತಿದೆ. ಶನಿವಾರ ದಾಖಲೆಯ 42 ಸಾವಿರ ಜನರು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ ಎಂದು ಕೇರಳ ಸರ್ಕಾರ ಮಾಹಿತಿ ನೀಡಿದೆ.

ಶಬರಿಮಲೆಗೆ ಬಂದ ಭಕ್ತರ ದಂಡು
ಶಬರಿಮಲೆಗೆ ಬಂದ ಭಕ್ತರ ದಂಡು

ಮಂಡಲ ಮಹಾವಿರಕ್ಕು ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಭಕ್ತರಿಗಾಗಿ ತೆರೆಯಲಾಗಿದೆ. ಶುಕ್ರವಾರದಂದು 27 ಸಾವಿರಕ್ಕೂ ಅಧಿಕ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರೆ, ಶನಿವಾರ ದಾಖಲೆಯ 42 ಸಾವಿರ ಮಂದಿ ಸ್ವಾಮಿಯ ದರ್ಶನಕ್ಕೆ ಬಂದಿದ್ದಾರೆ. ದೇವಸ್ಥಾನ ಪ್ರವೇಶಿಸುವ ಎಲ್ಲಾ ಭಕ್ತಾದಿಗಳಿಗೆ ಮಾಸ್ಕ್​, ಸ್ಯಾನಿಟೈಸರ್​ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: Watch- ಇಂಡೋನೇಷ್ಯಾ ಜ್ವಾಲಾಮುಖಿ: ಈವರೆಗೆ 13 ಮಂದಿ ಸಾವು

ಡಿಸೆಂಬರ್​ 9ಕ್ಕೆ ವರ್ಚುವಲ್​ ಕ್ಯೂ ಪದ್ಧತಿ ಬುಕ್ಕಿಂಗ್​ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ಪ್ರತಿದಿನ ಸುಮಾರು 5 ಸಾವಿರ ಭಕ್ತರಿಗೆ ಸ್ಪಾಟ್​ ಬುಕ್ಕಿಂಗ್​ ಮಾಡಿಕೊಳ್ಳಲು ಕೂಡ ಅನುಮತಿ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.

ಡಿಸೆಂಬರ್​ 26ರವರೆಗೆ ಭಕ್ತಾದಿಗಳಿಗಾಗಿ ದೇವಸ್ಥಾನ ತೆರೆದಿರುತ್ತದೆ. ಬಳಿಕ ಸಂಕ್ರಾಂತಿ ಹಬ್ಬದ ಹಿನ್ನೆಲೆ ಮತ್ತೆ ಡಿ.30ರಂದು ದೇಗುಲದ ಬಾಗಿಲು ತೆರೆಯಲಾಗುವುದು. ಜನವರಿ 20ರವರೆಗೂ ಭಕ್ತರ ದರ್ಶನಕ್ಕೆ ಅನುಮತಿ ಸಿಗಲಿದೆ.

Last Updated : Dec 5, 2021, 3:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.