ETV Bharat / bharat

LJP ಬಿರುಕಿಗೆ ಸಿಎಂ ನಿತೀಶ್ ಕುಮಾರ್ ಕಾರಣ: ಆರ್​​​ಜೆಡಿ ನಾಯಕ ಮನೋಜ್ ಝಾ ಆರೋಪ - ಸಿಎಂ ನಿತೀಶ್ ಕುಮಾರ್ ವಿರುದ್ಧ ಆರ್‌ಜೆಡಿ ಆರೋಪ

ಈಟಿವಿ ಭಾರತ್ ಜೊತೆ ಮಾತನಾಡಿರುವ ಆರ್‌ಜೆಡಿ ಹಿರಿಯ ನಾಯಕ ಮನೋಜ್ ಝಾ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಲೋಕ್​ ಜನಶಕ್ತಿ ಪಕ್ಷದಲ್ಲಿ ಬಿರುಕು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.

manoj
manoj
author img

By

Published : Jun 15, 2021, 3:55 PM IST

ನವದೆಹಲಿ:ರಾಷ್ಟ್ರೀಯ ಜನತಾದಳ ಪಕ್ಷದ ಹಿರಿಯ ನಾಯಕ ಮನೋಜ್ ಝಾ LJPಯಲ್ಲಿ ಸಿಎಂ ನಿತೀಶ್ ಕುಮಾರ್ ಬಿರುಕು ಸೃಷ್ಟಿಸಿದ್ದಾರೆ ಎಂದು ಹೇಳಿದ್ರು. ಪಶುಪತಿ ಕುಮಾರ್​ ಪರಸ್​ ಬಂಡಾಯ ಎದ್ದಿರುವುದರ ಹಿಂದೆ ನಿತೀಶ್​ ಕುಮಾರ್​ ಕೈವಾಡವಿದೆ. ಪಶುಪತಿಗೆ ನಿತೀಶ್​ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದ್ರು. ಎಲ್​​ಜಿಪಿ ಯಲ್ಲಿ ಬಿರುಕು ಸೃಷ್ಟಿಸಲು ನಿತೀಶ್​ ಕುಮಾರ್​ ಪರಸ್​ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ರು.

ಯಾವುದೇ ಸಮಗ್ರತೆ ಅರಿವಿಲ್ಲದ ಆತ್ಮಸಾಕ್ಷಿಯಿಲ್ಲದ ಜನರು ಇತರ ಪಕ್ಷಗಳನ್ನು ಹಾಳು ಮಾಡುವುದರಲ್ಲಿ ತೊಡಗುತ್ತಾರೆ. ಜೆಡಿಯು ಪಕ್ಷಗಳನ್ನು ಒಡೆಯುವ ಹಳೆಯ ಅಭ್ಯಾಸವನ್ನು ಮುಂದುವರಿಸಿದೆ, ಏಕೆಂದರೆ ಅದು 2013 ರಲ್ಲಿ ಆರ್​​ಜೆಡಿಯೊಂದಿಗೆ ಅದೇ ರೀತಿ ಮಾಡಿದೆ ಎಂದು ಆಕ್ರೋಶ ಹೊರಹಾಕಿದ್ರು. ಅವರು ಪಕ್ಷವನ್ನು ಒಡೆಯಲು ಎಷ್ಟೇ ಪ್ರಯತ್ನಿಸಿದರೂ, ಎಲ್​​ಜೆಪಿಯ ಎಲ್ಲಾ ಪ್ರಮುಖ ಮತಗಳು ಯಾವಾಗಲೂ ಚಿರಾಗ್ ಪಾಸ್ವಾನ್​​ ಜೊತೆಗೆ ಉಳಿಯುತ್ತವೆ ಎಂದು ಮನೋಜ್ ಹೇಳಿದರು.

ವಿಶೇಷವೆಂದರೆ, LJPಯ ಆರು ಸಂಸದರಲ್ಲಿ ಐವರು ಭಾನುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಚಿರಾಗ್ ಅವರನ್ನು ತೆಗೆದುಹಾಕಿ ಮತ್ತು ಪಕ್ಷದ ನಾಯಕರಾಗಿ ಪಶುಪತಿ ಪರಸ್ ಅವರನ್ನು ನೇಮಕ ಮಾಡುವಂತೆ ಲಿಖಿತ ಮನವಿಯನ್ನು ಸಲ್ಲಿಸಿದ್ದಾರೆ.

ನವದೆಹಲಿ:ರಾಷ್ಟ್ರೀಯ ಜನತಾದಳ ಪಕ್ಷದ ಹಿರಿಯ ನಾಯಕ ಮನೋಜ್ ಝಾ LJPಯಲ್ಲಿ ಸಿಎಂ ನಿತೀಶ್ ಕುಮಾರ್ ಬಿರುಕು ಸೃಷ್ಟಿಸಿದ್ದಾರೆ ಎಂದು ಹೇಳಿದ್ರು. ಪಶುಪತಿ ಕುಮಾರ್​ ಪರಸ್​ ಬಂಡಾಯ ಎದ್ದಿರುವುದರ ಹಿಂದೆ ನಿತೀಶ್​ ಕುಮಾರ್​ ಕೈವಾಡವಿದೆ. ಪಶುಪತಿಗೆ ನಿತೀಶ್​ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದ್ರು. ಎಲ್​​ಜಿಪಿ ಯಲ್ಲಿ ಬಿರುಕು ಸೃಷ್ಟಿಸಲು ನಿತೀಶ್​ ಕುಮಾರ್​ ಪರಸ್​ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ರು.

ಯಾವುದೇ ಸಮಗ್ರತೆ ಅರಿವಿಲ್ಲದ ಆತ್ಮಸಾಕ್ಷಿಯಿಲ್ಲದ ಜನರು ಇತರ ಪಕ್ಷಗಳನ್ನು ಹಾಳು ಮಾಡುವುದರಲ್ಲಿ ತೊಡಗುತ್ತಾರೆ. ಜೆಡಿಯು ಪಕ್ಷಗಳನ್ನು ಒಡೆಯುವ ಹಳೆಯ ಅಭ್ಯಾಸವನ್ನು ಮುಂದುವರಿಸಿದೆ, ಏಕೆಂದರೆ ಅದು 2013 ರಲ್ಲಿ ಆರ್​​ಜೆಡಿಯೊಂದಿಗೆ ಅದೇ ರೀತಿ ಮಾಡಿದೆ ಎಂದು ಆಕ್ರೋಶ ಹೊರಹಾಕಿದ್ರು. ಅವರು ಪಕ್ಷವನ್ನು ಒಡೆಯಲು ಎಷ್ಟೇ ಪ್ರಯತ್ನಿಸಿದರೂ, ಎಲ್​​ಜೆಪಿಯ ಎಲ್ಲಾ ಪ್ರಮುಖ ಮತಗಳು ಯಾವಾಗಲೂ ಚಿರಾಗ್ ಪಾಸ್ವಾನ್​​ ಜೊತೆಗೆ ಉಳಿಯುತ್ತವೆ ಎಂದು ಮನೋಜ್ ಹೇಳಿದರು.

ವಿಶೇಷವೆಂದರೆ, LJPಯ ಆರು ಸಂಸದರಲ್ಲಿ ಐವರು ಭಾನುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಚಿರಾಗ್ ಅವರನ್ನು ತೆಗೆದುಹಾಕಿ ಮತ್ತು ಪಕ್ಷದ ನಾಯಕರಾಗಿ ಪಶುಪತಿ ಪರಸ್ ಅವರನ್ನು ನೇಮಕ ಮಾಡುವಂತೆ ಲಿಖಿತ ಮನವಿಯನ್ನು ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.