ETV Bharat / bharat

ರಾಮ್ ರಹೀಮ್‌ ವಿಐಪಿಯೋ ಅಥವಾ ಪ್ರಧಾನಿಯೋ?: ಹೈಕೋರ್ಟ್ ಗರಂ - ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ನಿಂದ ರಾಮ್ ರಹೀಮ್‌ ಬಗ್ಗೆ ಮಾತು

ರಾಮ್ ರಹೀಮ್ ವಿಐಪಿಐಯೋ ಅಥವಾ ಪ್ರಧಾನಿಯೋ ಎಂದು ಪ್ರಶ್ನಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ ವಿಚಾರಣೆ ಎದುರಿಸುತ್ತಿರುು ಆರೋಪಿಗೆ ಒದಗಿಸಿರುವ ಭದ್ರತೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ರಾಮ್ ರಹೀಮ್
ರಾಮ್ ರಹೀಮ್
author img

By

Published : Jan 6, 2022, 5:22 PM IST

Updated : Jan 6, 2022, 5:29 PM IST

ಚಂಡೀಗಡ: ಗುರು ಗ್ರಂಥ ಸಾಹಿಬ್ ಹತ್ಯಾಕಾಂಡ ಪ್ರಕರಣದ ಆರೋಪಿ ರಾಮ್ ರಹೀಮ್‌ನ ಪ್ರೊಡಕ್ಷನ್ ವಾರೆಂಟ್‌ಗಳ ಕುರಿತು ಫರೀದ್‌ ಕೋರ್ಟ್‌ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇಂದು ಆಲಿಸಿತು.

ಪ್ರಕರಣದ ವಿಚಾರಣೆಯ ವೇಳೆ ಪಂಜಾಬ್‌ನ ಅಡ್ವೊಕೇಟ್ ಜನರಲ್ ಡಿ.ಎಸ್.ಪಟ್ವಾಲಿಯಾ ಅವರು, 3,500 ಪೊಲೀಸರನ್ನು ನಿಯೋಜಿಸುವುದಾಗಿಯೂ ಮತ್ತು ಹೆಲಿಕಾಪ್ಟರ್ ಮೂಲಕ ಗುರ್ಮೀತ್ ರಾಮ್ ರಹೀಮ್‌ನನ್ನು ಪಂಜಾಬ್‌ಗೆ ಕರೆತರುವುದಾಗಿ ಹೈಕೋರ್ಟ್‌ಗೆ ತಿಳಿಸಿದರು. ಇದನ್ನು ಆಲಿಸಿ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಾಲಯ, ಆತ ವಿಐಪಿಐಯೋ ಅಥವಾ ಪ್ರಧಾನಿಯೋ ಎಂದು ಖಾರವಾಗಿ ಪ್ರಶ್ನಿಸಿತು.

ಇದನ್ನೂ ಓದಿ: ಕಾಂಗ್ರೆಸ್​ ಪಾದಯಾತ್ರೆಗೆ ಯಾವುದೇ ಅಡ್ಡಿಯಿಲ್ಲ: ಸಚಿವ ಮಾಧುಸ್ವಾಮಿ

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯಲ್ಲಿ ನಿನ್ನೆ ನಡೆದ ಗುರುತರ ಲೋಪವನ್ನು ಉಲ್ಲೇಖಿಸಿದ ಹೈಕೋರ್ಟ್, ನಿನ್ನೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿತು.

ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಏಪ್ರಿಲ್ 2022 ಕ್ಕೆ ನಿಗದಿಪಡಿಸಿದೆ. ಈ ನ್ಯಾಯಾಲಯದ ಹೊರತಾಗಿ ಪೊಲೀಸರು ರಾಮ್ ರಹೀಮ್‌ನನ್ನು ವಿಚಾರಣೆ ಮಾಡಲು ಬಯಸಿದರೆ ಅವರು ರೋಹ್ಟಕ್‌ನ ಸುನಾರಿಯಾ ಜೈಲಿಗೆ ಭೇಟಿ ನೀಡಿ ಅಲ್ಲಿಯೇ ಅವರ ಕರ್ತವ್ಯ ನಿರ್ವಹಿಸಬಹುದು ಎಂದು ಸೂಚಿಸಿದೆ.

ಚಂಡೀಗಡ: ಗುರು ಗ್ರಂಥ ಸಾಹಿಬ್ ಹತ್ಯಾಕಾಂಡ ಪ್ರಕರಣದ ಆರೋಪಿ ರಾಮ್ ರಹೀಮ್‌ನ ಪ್ರೊಡಕ್ಷನ್ ವಾರೆಂಟ್‌ಗಳ ಕುರಿತು ಫರೀದ್‌ ಕೋರ್ಟ್‌ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇಂದು ಆಲಿಸಿತು.

ಪ್ರಕರಣದ ವಿಚಾರಣೆಯ ವೇಳೆ ಪಂಜಾಬ್‌ನ ಅಡ್ವೊಕೇಟ್ ಜನರಲ್ ಡಿ.ಎಸ್.ಪಟ್ವಾಲಿಯಾ ಅವರು, 3,500 ಪೊಲೀಸರನ್ನು ನಿಯೋಜಿಸುವುದಾಗಿಯೂ ಮತ್ತು ಹೆಲಿಕಾಪ್ಟರ್ ಮೂಲಕ ಗುರ್ಮೀತ್ ರಾಮ್ ರಹೀಮ್‌ನನ್ನು ಪಂಜಾಬ್‌ಗೆ ಕರೆತರುವುದಾಗಿ ಹೈಕೋರ್ಟ್‌ಗೆ ತಿಳಿಸಿದರು. ಇದನ್ನು ಆಲಿಸಿ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಾಲಯ, ಆತ ವಿಐಪಿಐಯೋ ಅಥವಾ ಪ್ರಧಾನಿಯೋ ಎಂದು ಖಾರವಾಗಿ ಪ್ರಶ್ನಿಸಿತು.

ಇದನ್ನೂ ಓದಿ: ಕಾಂಗ್ರೆಸ್​ ಪಾದಯಾತ್ರೆಗೆ ಯಾವುದೇ ಅಡ್ಡಿಯಿಲ್ಲ: ಸಚಿವ ಮಾಧುಸ್ವಾಮಿ

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯಲ್ಲಿ ನಿನ್ನೆ ನಡೆದ ಗುರುತರ ಲೋಪವನ್ನು ಉಲ್ಲೇಖಿಸಿದ ಹೈಕೋರ್ಟ್, ನಿನ್ನೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿತು.

ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಏಪ್ರಿಲ್ 2022 ಕ್ಕೆ ನಿಗದಿಪಡಿಸಿದೆ. ಈ ನ್ಯಾಯಾಲಯದ ಹೊರತಾಗಿ ಪೊಲೀಸರು ರಾಮ್ ರಹೀಮ್‌ನನ್ನು ವಿಚಾರಣೆ ಮಾಡಲು ಬಯಸಿದರೆ ಅವರು ರೋಹ್ಟಕ್‌ನ ಸುನಾರಿಯಾ ಜೈಲಿಗೆ ಭೇಟಿ ನೀಡಿ ಅಲ್ಲಿಯೇ ಅವರ ಕರ್ತವ್ಯ ನಿರ್ವಹಿಸಬಹುದು ಎಂದು ಸೂಚಿಸಿದೆ.

Last Updated : Jan 6, 2022, 5:29 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.