ETV Bharat / bharat

'ಬಂಗಾಳದ ಹುಲಿಗಳು': ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಅಥರಗಡದ ಬುಡಕಟ್ಟು ಜನಾಂಗ..

author img

By

Published : Sep 5, 2021, 5:41 AM IST

ಅಥರಗಡ ಪ್ರದೇಶದ ಬುಡಕಟ್ಟು ಜನಾಂಗದವರು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಈ ಹೋರಾಟದ ಪ್ರಮುಖ ನಾಯಕರು ಪೃಥ್ವಿರಾಜ್ ಚೌಹಾಣ್ ಅವರ ವಂಶಸ್ಥರಾದ ಸಂಬಲ್​ಪುರದ ರಾಜಾ ಸುರೇಂದ್ರ ಸಾಯಿ ಮತ್ತು ಸೋನಾಖಾನ್​ನ ಜಮೀನ್ದಾರ್ ವೀರ್ ನಾರಾಯಣ್ ಸಿಂಗ್. ಇತಿಹಾಸದ ಪುಟಗಳಲ್ಲಿ ಎಲ್ಲೋ ಕಳೆದುಹೋದ ಈ ವೀರರ ಬಗ್ಗೆ ಈಗಿನ ಪೀಳಿಗೆಗೆ ಬಹಳ ಕಡಿಮೆ ತಿಳಿದಿದ್ದರೂ, ಈ ಪ್ರದೇಶದ ರಾಜರು ಮತ್ತು ಜಮೀನ್ದಾರರ ಕೆಚ್ಚೆದೆಯ ಹೋರಾಟ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪುಟಗಳಲ್ಲಿ ಅಜಾರಾಮರವಾಗಿದೆ.

Rajas and Zamindars gave tough fight to Britishers
ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಅಥರಗಡದ ಬುಡಕಟ್ಟು ಜನಾಂಗ

ಭಾರತವು 200 ವರ್ಷಗಳ ಕಾಲ ಬ್ರಿಟಿಷರಿಂದ ಆಳಲ್ಪಟ್ಟಿತು. ಪರಕೀಯರ ಆಡಳಿತದ ಈ ಅವಧಿ ದೌರ್ಜನ್ಯ ಮತ್ತು ದಬ್ಬಾಳಿಕೆಯಿಂದಲೇ ತುಂಬಿತ್ತು. 1857 ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಸೇರಿ ಪ್ರತಿ ಬಂಡಾಯವನ್ನೂ ಬ್ರಿಟಿಷರು ಹತ್ತಿಕ್ಕುತ್ತಲೇ ಬಂದರು.

ಆದಾಗ್ಯೂ, ಅಥರಗಡ ಪ್ರದೇಶದ ಬುಡಕಟ್ಟು ಜನಾಂಗದವರು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಈ ಹೋರಾಟದ ಪ್ರಮುಖ ನಾಯಕರು ಪೃಥ್ವಿರಾಜ್ ಚೌಹಾಣ್ ಅವರ ವಂಶಸ್ಥರಾದ ಸಂಬಲ್​ಪುರದ ರಾಜಾ ಸುರೇಂದ್ರ ಸಾಯಿ ಮತ್ತು ಸೋನಾಖಾನ್​ನ ಜಮೀನ್ದಾರ್ ವೀರ್ ನಾರಾಯಣ್ ಸಿಂಗ್. ಅರಣ್ಯ ಉತ್ಪನ್ನಗಳು ಅಥರಗಡದಲ್ಲಿ ವಿಶೇಷ ಮಹತ್ವವನ್ನು ಹೊಂದಿದ್ದವು. ಇಲ್ಲಿನ ಭೂಮಿಯೂ ಬಹಳ ಫಲವತ್ತಾಗಿತ್ತು. 18ನೇ ಶತಮಾನದ ಅಥರಗಢವು ಇಂದಿನ ಪೂರ್ವ ಛತ್ತೀಸ್‌ಗಢ ಮತ್ತು ಪಶ್ಚಿಮ ಒಡಿಶಾವನ್ನು ಒಳಗೊಂಡಿದೆ.

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಅಥರಗಡದ ಬುಡಕಟ್ಟು ಜನಾಂಗ

ಭಾರತೀಯರು ತಮ್ಮ ಹಕ್ಕಿಗಾಗಿ ಹೋರಾಡುತ್ತಲೇ, 1757ರಲ್ಲಿ ನಡೆದ ಪ್ಲಾಸಿ ಕದನವು ಬ್ರಿಟಿಷರನ್ನು ಬಂಗಾಳದ ಅವಿಭಾಜ್ಯ ಒಡೆಯರನ್ನಾಗಿ ಮಾಡಿತು. 1818 ರ ಹೊತ್ತಿಗೆ, ಬ್ರಿಟಿಷರು ಭಾರತದ ಬಹುತೇಕ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದರು.

ಸಂಬಲ್​ಪುರದ ಸಿಂಹಾಸನದಲ್ಲಿ ಸುರೇಂದ್ರ ಸಾಯಿ ಬದಲಿಗೆ, ದಿವಂಗತ ರಾಜ ಮಹಾರಾಜ ಸಾಯಿ ಅವರ ಪತ್ನಿ ರಾಣಿ ಮೋಹನ್ ಕುಮಾರಿಯನ್ನು ಇರಿಸಲಾಯಿತು. ಈ ಕ್ರಮವನ್ನು ಅತ್ತರ್‌ಗಡದ ರಾಜರು ಮತ್ತು ಭೂ ಮಾಲೀಕರು ವಿರೋಧಿಸಿದರು. ನಂತರ ಸುರೇಂದ್ರ ಸಾಯಿ, ಅವರ ಸಹೋದರ ಉದಂತ್ ಸಿಂಗ್ ಮತ್ತು ಚಿಕ್ಕಪ್ಪ ಬಲರಾಮ್ ಸಿಂಗ್ ಅವರನ್ನು ಬಂಧಿಸಿ ಹಜಾರಿಬಾಗ್ ಜೈಲಿನಲ್ಲಿ ಇರಿಸಲಾಯಿತು.

ಸುರೇಂದ್ರ ಸಾಯಿ ಮತ್ತು ಅವರ ಕುಟುಂಬ ಸದಸ್ಯರನ್ನು ಬಂಧಿಸಿದ ನಂತರವೂ ದಂಗೆ ಮುಂದುವರಿಯಿತು. ಸೋನಖಾನ್​ನ ಬಿಂಜ್ವಾರ್ ಜಮೀನ್ದಾರ್ ನಾರಾಯಣ್ ಸಿಂಗ್ 1856 ರಲ್ಲಿ ತೀವ್ರ ಬರಗಾಲ ಉಂಟಾದಾಗ ಗೋದಾಮಿನ ಬೀಗಗಳನ್ನು ಮುರಿದು ಗ್ರಾಮಸ್ಥರಿಗೆ ಆಹಾರ ಧಾನ್ಯಗಳನ್ನು ವಿತರಿಸಿದರು. ಇದಕ್ಕಾಗಿ ಆತನನ್ನು ಬಂಧಿಸಿ ರಾಯಪುರ ಜೈಲಿನಲ್ಲಿ ಇರಿಸಲಾಯಿತು.

ಹಜಾರಿಬಾಗ್ ಜೈಲಿನ ಬಾಗಿಲು ಮುರಿದ ಸೈನಿಕರು

ಆದರೆ, ಕೆಲವೇ ದಿನಗಳಲ್ಲಿ ನಾರಾಯಣ್ ಸಿಂಗ್ ತಪ್ಪಿಸಿಕೊಂಡರು. ಜುಲೈ 30, 1857ರಂದು ಭಾರತೀಯ ಸೈನಿಕರು ಹಜಾರಿಬಾಗ್ ಜೈಲಿನ ಬಾಗಿಲು ಮುರಿದು ಸುರೇಂದ್ರ ಸಾಯಿ ಮತ್ತು ಆತನ ಸಹಚರರಿಗೆ ಪರಾರಿಯಾಗಲು ಸಹಾಯ ಮಾಡಿದರು. ಬಳಿಕ ಅವರು ಸಾರಂಘರದ ರಾಜ ಸಂಗ್ರಾಮ್ ಸಿಂಗ್ ಅವರ ಅರಮನೆಯಲ್ಲಿ ಆಶ್ರಯ ಪಡೆದರು.

ಸುರೇಂದ್ರ ಸಾಯಿ ಅವರನ್ನು ಹಿಡಿಯಲು ವಿಫಲರಾದ ಬ್ರಿಟಿಷರು ರಾಜತಾಂತ್ರಿಕ ತಿರುವು ನೀಡಿದರು. ಸೆಪ್ಟೆಂಬರ್ 1861ರಲ್ಲಿ, ಸಂಬಲ್​ಪುರ ಮತ್ತು ಕಟಕ್ ಜೈಲುಗಳಲ್ಲಿ ಬಂಧಿಯಾಗಿದ್ದ ಬಂಡುಕೋರರನ್ನು ಬಿಡುಗಡೆ ಮಾಡಲಾಯಿತು. 22 ನವೆಂಬರ್ 1862 ರಂದು, ಗವರ್ನರ್ - ಜನರಲ್ ಎಲ್ಜಿನ್ ಅವರು ಸುರೇಂದ್ರ ಸಾಯಿ ಶರಣಾಗಿದ್ದಾರೆ ಎಂದು ಲಂಡನ್‌ನ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿಗಳಿಗೆ ತಿಳಿಸಿದರು.

ಸುರೇಂದ್ರ ಸಾಯಿ ಮತ್ತೊಮ್ಮೆ ಸಶಸ್ತ್ರ ದಂಗೆ

ಇದರ ನಂತರ, ಅಥರಗಡದ ರಾಜರು ಮತ್ತು ಜಮೀನ್ದಾರರು ಬ್ರಿಟಿಷರ ಭರವಸೆಗಳ ಈಡೇರಿಕೆಗಾಗಿ ಕಾಯತೊಡಗಿದರು. ಆದಾಗ್ಯೂ, ಬ್ರಿಟಿಷರು ಆಡಳಿತದ ರಚನೆಯನ್ನು ಬದಲಿಸಿದರು ಮತ್ತು ಸುರೇಂದ್ರ ಸಾಯಿ ಮತ್ತೊಮ್ಮೆ ಸಶಸ್ತ್ರ ದಂಗೆಯನ್ನು ಯೋಜಿಸಿದರು. ಈ ಬಗ್ಗೆ ಅರಿತ ಬ್ರಿಟಿಷರು ಸುರೇಂದ್ರ ಸಾಯಿ ಅವರನ್ನು ಮಧ್ಯಪ್ರದೇಶದ ಖಾಂಡ್ವಾ ಬಳಿಯ ಅಸಿರ್ಗರ್ ಕೋಟೆಯಲ್ಲಿ ಬಂಧಿಸಿದರು. ಅಲ್ಲಿ ಅವರು 17 ವರ್ಷಗಳ ಕಾಲ ಸೆರೆಯಲ್ಲಿದ್ದ ನಂತರ ಮರಣ ಹೊಂದಿದರು.

ವೀರನಾರಾಯಣ್​ ಸಿಂಗ್​ ಶರಣು

ಸುರೇಂದ್ರ ಸಾಯಿ ಅವರಂತೆ ಬ್ರಿಟಿಷರು ಸೋನಖಾನ್​ನ ಜಮೀನ್ದಾರ್ ನಾರಾಯಣ್ ಸಿಂಗ್ ಅವರನ್ನು ಬಂಧಿಸಲು ಗ್ರಾಮಸ್ಥರಿಗೆ ಕಿರುಕುಳ ನೀಡಲಾರಂಭಿಸಿದರು. ಗ್ರಾಮಕ್ಕೆ ಬೆಂಕಿ ಹಚ್ಚಿದರು. ತನ್ನ ಪ್ರೀತಿಪಾತ್ರರ ಮೇಲಿನ ದೌರ್ಜನ್ಯವನ್ನು ನೋಡಿ, ವೀರ ನಾರಾಯಣ್ ಸಿಂಗ್ ಶರಣಾದರು. 5 ಡಿಸೆಂಬರ್ 1857 ರಂದು, ಅವರನ್ನು ರಾಯಪುರದಲ್ಲಿ ಡೆಪ್ಯುಟಿ ಕಮಿಷನರ್ ಎಲಿಯಟ್‌ಗೆ ಹಸ್ತಾಂತರಿಸಲಾಯಿತು ಮತ್ತು ಅವರಿಗೆ ರಾಯಪುರದಲ್ಲಿ ಮರಣದಂಡನೆ ವಿಧಿಸಲಾಯಿತು.

ಇತಿಹಾಸದ ಪುಟಗಳಲ್ಲಿ ಎಲ್ಲೋ ಕಳೆದುಹೋದ ಈ ವೀರರ ಬಗ್ಗೆ ಈಗಿನ ಪೀಳಿಗೆಗೆ ಬಹಳ ಕಡಿಮೆ ತಿಳಿದಿದ್ದರೂ, ಈ ಪ್ರದೇಶದ ರಾಜರು ಮತ್ತು ಜಮೀನ್ದಾರರ ಕೆಚ್ಚೆದೆಯ ಹೋರಾಟ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪುಟಗಳಲ್ಲಿ ಅಜಾರಾಮರ.

ಭಾರತವು 200 ವರ್ಷಗಳ ಕಾಲ ಬ್ರಿಟಿಷರಿಂದ ಆಳಲ್ಪಟ್ಟಿತು. ಪರಕೀಯರ ಆಡಳಿತದ ಈ ಅವಧಿ ದೌರ್ಜನ್ಯ ಮತ್ತು ದಬ್ಬಾಳಿಕೆಯಿಂದಲೇ ತುಂಬಿತ್ತು. 1857 ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಸೇರಿ ಪ್ರತಿ ಬಂಡಾಯವನ್ನೂ ಬ್ರಿಟಿಷರು ಹತ್ತಿಕ್ಕುತ್ತಲೇ ಬಂದರು.

ಆದಾಗ್ಯೂ, ಅಥರಗಡ ಪ್ರದೇಶದ ಬುಡಕಟ್ಟು ಜನಾಂಗದವರು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಈ ಹೋರಾಟದ ಪ್ರಮುಖ ನಾಯಕರು ಪೃಥ್ವಿರಾಜ್ ಚೌಹಾಣ್ ಅವರ ವಂಶಸ್ಥರಾದ ಸಂಬಲ್​ಪುರದ ರಾಜಾ ಸುರೇಂದ್ರ ಸಾಯಿ ಮತ್ತು ಸೋನಾಖಾನ್​ನ ಜಮೀನ್ದಾರ್ ವೀರ್ ನಾರಾಯಣ್ ಸಿಂಗ್. ಅರಣ್ಯ ಉತ್ಪನ್ನಗಳು ಅಥರಗಡದಲ್ಲಿ ವಿಶೇಷ ಮಹತ್ವವನ್ನು ಹೊಂದಿದ್ದವು. ಇಲ್ಲಿನ ಭೂಮಿಯೂ ಬಹಳ ಫಲವತ್ತಾಗಿತ್ತು. 18ನೇ ಶತಮಾನದ ಅಥರಗಢವು ಇಂದಿನ ಪೂರ್ವ ಛತ್ತೀಸ್‌ಗಢ ಮತ್ತು ಪಶ್ಚಿಮ ಒಡಿಶಾವನ್ನು ಒಳಗೊಂಡಿದೆ.

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಅಥರಗಡದ ಬುಡಕಟ್ಟು ಜನಾಂಗ

ಭಾರತೀಯರು ತಮ್ಮ ಹಕ್ಕಿಗಾಗಿ ಹೋರಾಡುತ್ತಲೇ, 1757ರಲ್ಲಿ ನಡೆದ ಪ್ಲಾಸಿ ಕದನವು ಬ್ರಿಟಿಷರನ್ನು ಬಂಗಾಳದ ಅವಿಭಾಜ್ಯ ಒಡೆಯರನ್ನಾಗಿ ಮಾಡಿತು. 1818 ರ ಹೊತ್ತಿಗೆ, ಬ್ರಿಟಿಷರು ಭಾರತದ ಬಹುತೇಕ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದರು.

ಸಂಬಲ್​ಪುರದ ಸಿಂಹಾಸನದಲ್ಲಿ ಸುರೇಂದ್ರ ಸಾಯಿ ಬದಲಿಗೆ, ದಿವಂಗತ ರಾಜ ಮಹಾರಾಜ ಸಾಯಿ ಅವರ ಪತ್ನಿ ರಾಣಿ ಮೋಹನ್ ಕುಮಾರಿಯನ್ನು ಇರಿಸಲಾಯಿತು. ಈ ಕ್ರಮವನ್ನು ಅತ್ತರ್‌ಗಡದ ರಾಜರು ಮತ್ತು ಭೂ ಮಾಲೀಕರು ವಿರೋಧಿಸಿದರು. ನಂತರ ಸುರೇಂದ್ರ ಸಾಯಿ, ಅವರ ಸಹೋದರ ಉದಂತ್ ಸಿಂಗ್ ಮತ್ತು ಚಿಕ್ಕಪ್ಪ ಬಲರಾಮ್ ಸಿಂಗ್ ಅವರನ್ನು ಬಂಧಿಸಿ ಹಜಾರಿಬಾಗ್ ಜೈಲಿನಲ್ಲಿ ಇರಿಸಲಾಯಿತು.

ಸುರೇಂದ್ರ ಸಾಯಿ ಮತ್ತು ಅವರ ಕುಟುಂಬ ಸದಸ್ಯರನ್ನು ಬಂಧಿಸಿದ ನಂತರವೂ ದಂಗೆ ಮುಂದುವರಿಯಿತು. ಸೋನಖಾನ್​ನ ಬಿಂಜ್ವಾರ್ ಜಮೀನ್ದಾರ್ ನಾರಾಯಣ್ ಸಿಂಗ್ 1856 ರಲ್ಲಿ ತೀವ್ರ ಬರಗಾಲ ಉಂಟಾದಾಗ ಗೋದಾಮಿನ ಬೀಗಗಳನ್ನು ಮುರಿದು ಗ್ರಾಮಸ್ಥರಿಗೆ ಆಹಾರ ಧಾನ್ಯಗಳನ್ನು ವಿತರಿಸಿದರು. ಇದಕ್ಕಾಗಿ ಆತನನ್ನು ಬಂಧಿಸಿ ರಾಯಪುರ ಜೈಲಿನಲ್ಲಿ ಇರಿಸಲಾಯಿತು.

ಹಜಾರಿಬಾಗ್ ಜೈಲಿನ ಬಾಗಿಲು ಮುರಿದ ಸೈನಿಕರು

ಆದರೆ, ಕೆಲವೇ ದಿನಗಳಲ್ಲಿ ನಾರಾಯಣ್ ಸಿಂಗ್ ತಪ್ಪಿಸಿಕೊಂಡರು. ಜುಲೈ 30, 1857ರಂದು ಭಾರತೀಯ ಸೈನಿಕರು ಹಜಾರಿಬಾಗ್ ಜೈಲಿನ ಬಾಗಿಲು ಮುರಿದು ಸುರೇಂದ್ರ ಸಾಯಿ ಮತ್ತು ಆತನ ಸಹಚರರಿಗೆ ಪರಾರಿಯಾಗಲು ಸಹಾಯ ಮಾಡಿದರು. ಬಳಿಕ ಅವರು ಸಾರಂಘರದ ರಾಜ ಸಂಗ್ರಾಮ್ ಸಿಂಗ್ ಅವರ ಅರಮನೆಯಲ್ಲಿ ಆಶ್ರಯ ಪಡೆದರು.

ಸುರೇಂದ್ರ ಸಾಯಿ ಅವರನ್ನು ಹಿಡಿಯಲು ವಿಫಲರಾದ ಬ್ರಿಟಿಷರು ರಾಜತಾಂತ್ರಿಕ ತಿರುವು ನೀಡಿದರು. ಸೆಪ್ಟೆಂಬರ್ 1861ರಲ್ಲಿ, ಸಂಬಲ್​ಪುರ ಮತ್ತು ಕಟಕ್ ಜೈಲುಗಳಲ್ಲಿ ಬಂಧಿಯಾಗಿದ್ದ ಬಂಡುಕೋರರನ್ನು ಬಿಡುಗಡೆ ಮಾಡಲಾಯಿತು. 22 ನವೆಂಬರ್ 1862 ರಂದು, ಗವರ್ನರ್ - ಜನರಲ್ ಎಲ್ಜಿನ್ ಅವರು ಸುರೇಂದ್ರ ಸಾಯಿ ಶರಣಾಗಿದ್ದಾರೆ ಎಂದು ಲಂಡನ್‌ನ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿಗಳಿಗೆ ತಿಳಿಸಿದರು.

ಸುರೇಂದ್ರ ಸಾಯಿ ಮತ್ತೊಮ್ಮೆ ಸಶಸ್ತ್ರ ದಂಗೆ

ಇದರ ನಂತರ, ಅಥರಗಡದ ರಾಜರು ಮತ್ತು ಜಮೀನ್ದಾರರು ಬ್ರಿಟಿಷರ ಭರವಸೆಗಳ ಈಡೇರಿಕೆಗಾಗಿ ಕಾಯತೊಡಗಿದರು. ಆದಾಗ್ಯೂ, ಬ್ರಿಟಿಷರು ಆಡಳಿತದ ರಚನೆಯನ್ನು ಬದಲಿಸಿದರು ಮತ್ತು ಸುರೇಂದ್ರ ಸಾಯಿ ಮತ್ತೊಮ್ಮೆ ಸಶಸ್ತ್ರ ದಂಗೆಯನ್ನು ಯೋಜಿಸಿದರು. ಈ ಬಗ್ಗೆ ಅರಿತ ಬ್ರಿಟಿಷರು ಸುರೇಂದ್ರ ಸಾಯಿ ಅವರನ್ನು ಮಧ್ಯಪ್ರದೇಶದ ಖಾಂಡ್ವಾ ಬಳಿಯ ಅಸಿರ್ಗರ್ ಕೋಟೆಯಲ್ಲಿ ಬಂಧಿಸಿದರು. ಅಲ್ಲಿ ಅವರು 17 ವರ್ಷಗಳ ಕಾಲ ಸೆರೆಯಲ್ಲಿದ್ದ ನಂತರ ಮರಣ ಹೊಂದಿದರು.

ವೀರನಾರಾಯಣ್​ ಸಿಂಗ್​ ಶರಣು

ಸುರೇಂದ್ರ ಸಾಯಿ ಅವರಂತೆ ಬ್ರಿಟಿಷರು ಸೋನಖಾನ್​ನ ಜಮೀನ್ದಾರ್ ನಾರಾಯಣ್ ಸಿಂಗ್ ಅವರನ್ನು ಬಂಧಿಸಲು ಗ್ರಾಮಸ್ಥರಿಗೆ ಕಿರುಕುಳ ನೀಡಲಾರಂಭಿಸಿದರು. ಗ್ರಾಮಕ್ಕೆ ಬೆಂಕಿ ಹಚ್ಚಿದರು. ತನ್ನ ಪ್ರೀತಿಪಾತ್ರರ ಮೇಲಿನ ದೌರ್ಜನ್ಯವನ್ನು ನೋಡಿ, ವೀರ ನಾರಾಯಣ್ ಸಿಂಗ್ ಶರಣಾದರು. 5 ಡಿಸೆಂಬರ್ 1857 ರಂದು, ಅವರನ್ನು ರಾಯಪುರದಲ್ಲಿ ಡೆಪ್ಯುಟಿ ಕಮಿಷನರ್ ಎಲಿಯಟ್‌ಗೆ ಹಸ್ತಾಂತರಿಸಲಾಯಿತು ಮತ್ತು ಅವರಿಗೆ ರಾಯಪುರದಲ್ಲಿ ಮರಣದಂಡನೆ ವಿಧಿಸಲಾಯಿತು.

ಇತಿಹಾಸದ ಪುಟಗಳಲ್ಲಿ ಎಲ್ಲೋ ಕಳೆದುಹೋದ ಈ ವೀರರ ಬಗ್ಗೆ ಈಗಿನ ಪೀಳಿಗೆಗೆ ಬಹಳ ಕಡಿಮೆ ತಿಳಿದಿದ್ದರೂ, ಈ ಪ್ರದೇಶದ ರಾಜರು ಮತ್ತು ಜಮೀನ್ದಾರರ ಕೆಚ್ಚೆದೆಯ ಹೋರಾಟ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪುಟಗಳಲ್ಲಿ ಅಜಾರಾಮರ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.