ETV Bharat / bharat

ಬಿಹಾರದಲ್ಲಿ ರಾತ್ರೋರಾತ್ರಿ ಕೆರೆ ನಾಪತ್ತೆ: ಭೂ ಮಾಫಿಯಾದವರಿಂದ ಮಣ್ಣು ಹಾಕಿ ಮುಚ್ಚಿರುವ ಶಂಕೆ!

author img

By ETV Bharat Karnataka Team

Published : Jan 3, 2024, 11:15 AM IST

ಬಿಹಾರದಲ್ಲಿ ಭೂ ಮಾಫಿಯಾದ ಹಾವಳಿ ಹೆಚ್ಚಾಗಿದೆ. ಇಲ್ಲಿನ ದರ್ಭಂಗಾ ಜಿಲ್ಲೆಯಲ್ಲಿ ರಾತ್ರೋರಾತ್ರಿ ಕೆರೆಯೊಂದನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ಈ ಸಂಬಂಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

pond-missing-in-darbhanga-bihar-land-mafia-captured-pond-by-filling-it-with-soil
ರಾತ್ರೋರಾತ್ರಿ ಕೆರೆ ನಾಪತ್ತೆ : ಬಿಹಾರದಲ್ಲಿ ಭೂ ಮಾಫಿಯಾದಿಂದ 200ಕ್ಕೂ ಅಧಿಕ ಕೆರೆ ಒತ್ತುವರಿ

ದರ್ಭಂಗಾ (ಬಿಹಾರ): ಸಾಮಾನ್ಯವಾಗಿ ವಸ್ತುಗಳು ಕಳವಾಗುವುದನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಬಿಹಾರದ ದರ್ಭಂಗಾ ಜಿಲ್ಲೆಯಲ್ಲಿ ರಾತ್ರೋರಾತ್ರಿ ಕೆರೆಯೊಂದು ಕಣ್ಮರೆಯಾಗಿದೆ. ಈ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್​​ ತನಿಖೆಗೆ ಆದೇಶಿಸಿದ್ದಾರೆ.

ಬಿಹಾರದಲ್ಲಿ ಭೂ ಮಾಫಿಯಾ ಹಾವಳಿ ಮಿತಿ ಮೀರಿದೆ. ಭೂ ಮಾಫಿಯಾಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ. ರಾತ್ರೋರಾತ್ರಿ ಇಲ್ಲಿನ ದರ್ಭಂಗಾ ಜಿಲ್ಲೆಯ ನೀಮ್​ ಪೋಖರ್​ನ ನಾಲ್ಕನೇ ವಾರ್ಡ್​ನಲ್ಲಿದ್ದ ಕೆರೆಯೊಂದನ್ನು ಮಣ್ಣಿನಿಂದ ಮುಚ್ಚಿದ್ದು, ಜಾಗದ ಸುತ್ತ ಬಿದಿರಿನ ಬೇಲಿಯನ್ನು ಹಾಕಲಾಗಿದೆ. ಅಧಿಕಾರಿಗಳ ಕುಮ್ಮಕ್ಕಿನಿಂದ ಭೂ ಮಾಫಿಯಾದವರು ಕೆರೆಯನ್ನು ಮಣ್ಣಿನಿಂದ ಮುಚ್ಚಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿ ಸತ್ತೋ ಕುಮಾರ್ ಸಹನಿ, ಕಳೆದ 10-15 ವರ್ಷಗಳ ಹಿಂದೆ ಮೀನುಗಾರರ ಸಂಘವೊಂದು ಈ ಕೆರೆಯಲ್ಲಿ ಮೀನು ಸಾಕಾಣಿಕೆಯನ್ನು ಮಾಡುತ್ತಿದ್ದರು. ಬಳಿಕ ಕೆಲ ಕಾರಣಗಳಿಂದ ಈ ಮೀನು ಸಾಕಾಣಿಕೆ ನಿಂತಿತು. ಬಳಿಕ ಸುತ್ತಮುತ್ತಲಿನ ಜನರು ಕಸವನ್ನು ತಂದು ಈ ಕೆರೆಗೆ ಹಾಕಿದರು. ಬಳಿಕ ಈ ಕೆರೆ ಕಸದ ಕೊಂಪೆಯಾಗಿ ಮಾರ್ಪಾಡಾಯಿತು. ಕಳೆದ 6 ತಿಂಗಳ ಹಿಂದೆ ವ್ಯಕ್ತಿಯೊಬ್ಬರು ಈ ಜಾಗವನ್ನು ತಮ್ಮದೆಂದು ಹೇಳಿ ಮಣ್ಣು ತುಂಬಲು ಶುರು ಮಾಡಿದರು. ಕಳೆದ ಒಂದು ವಾರದ ಹಿಂದೆಯೇ ಕೆರೆ ಮಣ್ಣು ತುಂಬುವ ಕಾರ್ಯ ನಡೆದಿದೆ ಎಂದು ಹೇಳಿದರು.

ಈ ಕೆರೆ ಸರ್ಕಾರಿ ಜಾಗದಲ್ಲಿ ಇತ್ತು. ಇಲ್ಲಿ ಮೀನು ಸಾಕಾಣಿಕೆ ಮಾಡಲು ಇಲಾಖೆಯಿಂದ ಟೆಂಡರ್​ ಕರೆಯಲಾಗಿತ್ತು. ಇಲ್ಲಿ ಕೆರೆಗೆ ಮಣ್ಣು ತುಂಬುವ ಕೆಲಸ ನಡೆಯುತ್ತಿದ್ದರೂ ಆಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ 35 ವರ್ಷಗಳಿಂದ ಇಲ್ಲಿ ವಾಸವಿದ್ದೇನೆ. ಇಲ್ಲಿ ಸರ್ಕಾರಿ ಕೆರೆ ಇತ್ತು. ಆದರೆ ಇದೀಗ ಭೂ ಮಾಫಿಯಾದವರು ಒಂದು ವಾರದಲ್ಲಿ ಈ ಕೆರೆಯನ್ನು ಮುಚ್ಚಿದ್ದಾರೆ. ಆದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿ ಸುನೀಲ್​ ಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್​ ರಾಜೀವ್​ ರೋಷನ್​, ಕೆರೆ ಒತ್ತುವರಿ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ತನಿಖೆಗೆ ಆದೇಶಿಸಿದ್ದೇವೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿರುವುದಾಗಿ ಹೇಳಿದರು.

ದರ್ಭಂಗಾದಲ್ಲಿ 200 ಕೆರೆಗಳು ನಾಪತ್ತೆ: ದರ್ಭಂಗಾ ಜಿಲ್ಲೆಯೊಂದರಲ್ಲೇ ಇದುವರೆಗೆ ಸುಮಾರು 200 ಕೆರೆಗಳು ನಾಪತ್ತೆಯಾಗಿವೆ. ಹಳೆಯ ದಾಖಲೆಗಳ ಪ್ರಕಾರ, ಇಡೀ ಜಿಲ್ಲೆಯಲ್ಲಿ 9113 ಕೆರೆಗಳಿದ್ದವು. ದರ್ಭಂಗಾ ನಗರದಲ್ಲೇ ಸುಮಾರು 350ರಿಂದ 400 ಕೆರೆಗಳಿದ್ದವು. ಆದರೆ ಭೂ ಮಾಫಿಯಾದಿಂದ ಈ ಕೆರೆಗಳು ಒತ್ತುವರಿಯಾಗಿದೆ. ಪ್ರಸ್ತುತ ನಗರಸಭೆಯ ದಾಖಲೆ ಪ್ರಕಾರ ಕೆರೆಗಳ ಸಂಖ್ಯೆ 100ರಿಂದ 125ಕ್ಕೆ ಇಳಿದಿದೆ. ಇಲ್ಲಿಯವರೆಗೆ ಸುಮಾರು 200 ಕೆರೆಗಳು ಒತ್ತುವರಿಯಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಅಫ್ಘಾನಿಸ್ತಾನದಲ್ಲಿ ಅರ್ಧಗಂಟೆಯಲ್ಲಿ 2 ಬಾರಿ ಭೂಕಂಪನ; ಮಣಿಪುರ, ಬಂಗಾಳದಲ್ಲೂ ನಡುಗಿದ ಭೂಮಿ

ದರ್ಭಂಗಾ (ಬಿಹಾರ): ಸಾಮಾನ್ಯವಾಗಿ ವಸ್ತುಗಳು ಕಳವಾಗುವುದನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಬಿಹಾರದ ದರ್ಭಂಗಾ ಜಿಲ್ಲೆಯಲ್ಲಿ ರಾತ್ರೋರಾತ್ರಿ ಕೆರೆಯೊಂದು ಕಣ್ಮರೆಯಾಗಿದೆ. ಈ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್​​ ತನಿಖೆಗೆ ಆದೇಶಿಸಿದ್ದಾರೆ.

ಬಿಹಾರದಲ್ಲಿ ಭೂ ಮಾಫಿಯಾ ಹಾವಳಿ ಮಿತಿ ಮೀರಿದೆ. ಭೂ ಮಾಫಿಯಾಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ. ರಾತ್ರೋರಾತ್ರಿ ಇಲ್ಲಿನ ದರ್ಭಂಗಾ ಜಿಲ್ಲೆಯ ನೀಮ್​ ಪೋಖರ್​ನ ನಾಲ್ಕನೇ ವಾರ್ಡ್​ನಲ್ಲಿದ್ದ ಕೆರೆಯೊಂದನ್ನು ಮಣ್ಣಿನಿಂದ ಮುಚ್ಚಿದ್ದು, ಜಾಗದ ಸುತ್ತ ಬಿದಿರಿನ ಬೇಲಿಯನ್ನು ಹಾಕಲಾಗಿದೆ. ಅಧಿಕಾರಿಗಳ ಕುಮ್ಮಕ್ಕಿನಿಂದ ಭೂ ಮಾಫಿಯಾದವರು ಕೆರೆಯನ್ನು ಮಣ್ಣಿನಿಂದ ಮುಚ್ಚಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿ ಸತ್ತೋ ಕುಮಾರ್ ಸಹನಿ, ಕಳೆದ 10-15 ವರ್ಷಗಳ ಹಿಂದೆ ಮೀನುಗಾರರ ಸಂಘವೊಂದು ಈ ಕೆರೆಯಲ್ಲಿ ಮೀನು ಸಾಕಾಣಿಕೆಯನ್ನು ಮಾಡುತ್ತಿದ್ದರು. ಬಳಿಕ ಕೆಲ ಕಾರಣಗಳಿಂದ ಈ ಮೀನು ಸಾಕಾಣಿಕೆ ನಿಂತಿತು. ಬಳಿಕ ಸುತ್ತಮುತ್ತಲಿನ ಜನರು ಕಸವನ್ನು ತಂದು ಈ ಕೆರೆಗೆ ಹಾಕಿದರು. ಬಳಿಕ ಈ ಕೆರೆ ಕಸದ ಕೊಂಪೆಯಾಗಿ ಮಾರ್ಪಾಡಾಯಿತು. ಕಳೆದ 6 ತಿಂಗಳ ಹಿಂದೆ ವ್ಯಕ್ತಿಯೊಬ್ಬರು ಈ ಜಾಗವನ್ನು ತಮ್ಮದೆಂದು ಹೇಳಿ ಮಣ್ಣು ತುಂಬಲು ಶುರು ಮಾಡಿದರು. ಕಳೆದ ಒಂದು ವಾರದ ಹಿಂದೆಯೇ ಕೆರೆ ಮಣ್ಣು ತುಂಬುವ ಕಾರ್ಯ ನಡೆದಿದೆ ಎಂದು ಹೇಳಿದರು.

ಈ ಕೆರೆ ಸರ್ಕಾರಿ ಜಾಗದಲ್ಲಿ ಇತ್ತು. ಇಲ್ಲಿ ಮೀನು ಸಾಕಾಣಿಕೆ ಮಾಡಲು ಇಲಾಖೆಯಿಂದ ಟೆಂಡರ್​ ಕರೆಯಲಾಗಿತ್ತು. ಇಲ್ಲಿ ಕೆರೆಗೆ ಮಣ್ಣು ತುಂಬುವ ಕೆಲಸ ನಡೆಯುತ್ತಿದ್ದರೂ ಆಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ 35 ವರ್ಷಗಳಿಂದ ಇಲ್ಲಿ ವಾಸವಿದ್ದೇನೆ. ಇಲ್ಲಿ ಸರ್ಕಾರಿ ಕೆರೆ ಇತ್ತು. ಆದರೆ ಇದೀಗ ಭೂ ಮಾಫಿಯಾದವರು ಒಂದು ವಾರದಲ್ಲಿ ಈ ಕೆರೆಯನ್ನು ಮುಚ್ಚಿದ್ದಾರೆ. ಆದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿ ಸುನೀಲ್​ ಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್​ ರಾಜೀವ್​ ರೋಷನ್​, ಕೆರೆ ಒತ್ತುವರಿ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ತನಿಖೆಗೆ ಆದೇಶಿಸಿದ್ದೇವೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿರುವುದಾಗಿ ಹೇಳಿದರು.

ದರ್ಭಂಗಾದಲ್ಲಿ 200 ಕೆರೆಗಳು ನಾಪತ್ತೆ: ದರ್ಭಂಗಾ ಜಿಲ್ಲೆಯೊಂದರಲ್ಲೇ ಇದುವರೆಗೆ ಸುಮಾರು 200 ಕೆರೆಗಳು ನಾಪತ್ತೆಯಾಗಿವೆ. ಹಳೆಯ ದಾಖಲೆಗಳ ಪ್ರಕಾರ, ಇಡೀ ಜಿಲ್ಲೆಯಲ್ಲಿ 9113 ಕೆರೆಗಳಿದ್ದವು. ದರ್ಭಂಗಾ ನಗರದಲ್ಲೇ ಸುಮಾರು 350ರಿಂದ 400 ಕೆರೆಗಳಿದ್ದವು. ಆದರೆ ಭೂ ಮಾಫಿಯಾದಿಂದ ಈ ಕೆರೆಗಳು ಒತ್ತುವರಿಯಾಗಿದೆ. ಪ್ರಸ್ತುತ ನಗರಸಭೆಯ ದಾಖಲೆ ಪ್ರಕಾರ ಕೆರೆಗಳ ಸಂಖ್ಯೆ 100ರಿಂದ 125ಕ್ಕೆ ಇಳಿದಿದೆ. ಇಲ್ಲಿಯವರೆಗೆ ಸುಮಾರು 200 ಕೆರೆಗಳು ಒತ್ತುವರಿಯಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಅಫ್ಘಾನಿಸ್ತಾನದಲ್ಲಿ ಅರ್ಧಗಂಟೆಯಲ್ಲಿ 2 ಬಾರಿ ಭೂಕಂಪನ; ಮಣಿಪುರ, ಬಂಗಾಳದಲ್ಲೂ ನಡುಗಿದ ಭೂಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.