ETV Bharat / bharat

ದೆವ್ವ ಭಯದಲ್ಲಿ ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್‌ಟೇಬಲ್‌: ಕನಸಲ್ಲಿ ಬರ್ತಿತ್ತಂತೆ ಹೆಣ್ಣಿನ ಆತ್ಮ

author img

By

Published : Nov 17, 2021, 10:11 PM IST

Updated : Nov 17, 2021, 10:19 PM IST

ದೆವ್ವದ ಕಾಟಕ್ಕೆ ಹೆದರಿ ಪೊಲೀಸ್​​ ಕಾನ್​​ಸ್ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

Policeman dies by suicide
Policeman dies by suicide

ಕಡಲೂರು(ತಮಿಳುನಾಡು): ದೆವ್ವಕ್ಕೆ ಹೆದರಿ ಪೊಲೀಸ್ ಕಾನ್​​ಸ್ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ. 33 ವರ್ಷದ ಪ್ರಭಾಕರನ್​ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.

ಕಡಲೂರು ಸಶಸ್ತ್ರ ಪೊಲೀಸ್​ ಪಡೆಯಲ್ಲಿ ಕಾನ್​ಸ್ಟೇಬಲ್ (Police Constable in the Cuddalore Armed Forces)​​ ಆಗಿ ಸೇವೆ ಸಲ್ಲಿಸುತ್ತಿದ್ದ ಪ್ರಭಾಕರನ್​​ ಕಳೆದ ಕೆಲವು ವರ್ಷಗಳ ಹಿಂದೆ ವಿಷ್ಣುಪ್ರಿಯಾ ಎಂಬುವವರನ್ನು ವಿವಾಹವಾಗಿದ್ದರು. ಇವರಿಗೆ ಓರ್ವ ಮಗ, ಮಗಳಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಇವರು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

Policeman dies by suicide
ಆತ್ಮಹತ್ಯೆಗೆ ಶರಣಾಗಿರುವ ಪೊಲೀಸ್ ಕಾನ್​​ಸ್ಟೇಬಲ್​​

ಪೊಲೀಸ್​​ ವಸತಿಗೃಹದಲ್ಲಿ ವಾಸ ಮಾಡ್ತಿದ್ದ ಇವರಿಗೆ ಕನಸಿನಲ್ಲಿ ಮಹಿಳೆಯೋರ್ವಳು ಬಂದು ಕತ್ತು ಹಿಸುಕುವ ಅನುಭವವಾಗುತ್ತಿತ್ತಂತೆ. ಇದರ ಬಗ್ಗೆ ಕುಟುಂಬಸ್ಥರು ಹಾಗೂ ಸ್ನೇಹಿತರ ಮುಂದೆ ಹೇಳಿಕೊಂಡಿದ್ದರಂತೆ. ಕಳೆದ 15 ದಿನಗಳಿಂದ ರಜೆ ಪಡೆದುಕೊಂಡು ಮನೆಯಲ್ಲಿದ್ದರು. ಇದರ ಮಧ್ಯೆ ನವೆಂಬರ್​ 16ರಂದು ಪತ್ನಿ ವಿಷ್ಣುಪ್ರಿಯಾ ಹಾಗೂ ಮಕ್ಕಳು ಸಂಬಂಧಿಕರ ಮದುವೆಗೆ ಮೇಲ್ಪಟ್ಟಾಂಬಕ್ಕಂಗೆ ತೆರಳಿದ್ದಾರೆ. ಅಲ್ಲಿಂದ ವಾಪಸ್​ ಬರುವಷ್ಟರಲ್ಲಿ ಪತಿ ನೇಣಿಗೆ ಶರಣಾಗಿದ್ದಾರೆ.

ಇದನ್ನೂ ಓದಿರಿ: ಪಾಕ್‌ನಲ್ಲಿ 2025ರ ಐಸಿಸಿ ಚಾಂಪಿಯನ್​​ ಟ್ರೋಫಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದೇನು?

ದೆವ್ವದ ಕಾಟ ಶುರುವಾಗಿದ್ದರಿಂದ ಪ್ರಭಾಕರನ್​​ ಮಾಟಗಾತಿಯನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಹೀಗಾಗಿ 15 ದಿನಗಳ ಕಾಲ ಪ್ರಾರ್ಥನಾ ಕೊಠಡಿಯಲ್ಲಿ ಉಳಿದುಕೊಂಡಿದ್ದರಂತೆ. ಇದರ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈತ ವಾಸವಾಗಿದ್ದ ಕ್ವಾರ್ಟರ್ಸ್​​ನಲ್ಲಿ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪೊಲೀಸರು ಕೂಡ ಈತನ ಆತ್ಮಹತ್ಯೆಗೆ ಕೆಲಸದ ಹೊರೆ ಕಾರಣವಲ್ಲ, ಬದಲಿಗೆ ದೆವ್ವದ ಭಯವೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಕಡಲೂರು(ತಮಿಳುನಾಡು): ದೆವ್ವಕ್ಕೆ ಹೆದರಿ ಪೊಲೀಸ್ ಕಾನ್​​ಸ್ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ. 33 ವರ್ಷದ ಪ್ರಭಾಕರನ್​ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.

ಕಡಲೂರು ಸಶಸ್ತ್ರ ಪೊಲೀಸ್​ ಪಡೆಯಲ್ಲಿ ಕಾನ್​ಸ್ಟೇಬಲ್ (Police Constable in the Cuddalore Armed Forces)​​ ಆಗಿ ಸೇವೆ ಸಲ್ಲಿಸುತ್ತಿದ್ದ ಪ್ರಭಾಕರನ್​​ ಕಳೆದ ಕೆಲವು ವರ್ಷಗಳ ಹಿಂದೆ ವಿಷ್ಣುಪ್ರಿಯಾ ಎಂಬುವವರನ್ನು ವಿವಾಹವಾಗಿದ್ದರು. ಇವರಿಗೆ ಓರ್ವ ಮಗ, ಮಗಳಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಇವರು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

Policeman dies by suicide
ಆತ್ಮಹತ್ಯೆಗೆ ಶರಣಾಗಿರುವ ಪೊಲೀಸ್ ಕಾನ್​​ಸ್ಟೇಬಲ್​​

ಪೊಲೀಸ್​​ ವಸತಿಗೃಹದಲ್ಲಿ ವಾಸ ಮಾಡ್ತಿದ್ದ ಇವರಿಗೆ ಕನಸಿನಲ್ಲಿ ಮಹಿಳೆಯೋರ್ವಳು ಬಂದು ಕತ್ತು ಹಿಸುಕುವ ಅನುಭವವಾಗುತ್ತಿತ್ತಂತೆ. ಇದರ ಬಗ್ಗೆ ಕುಟುಂಬಸ್ಥರು ಹಾಗೂ ಸ್ನೇಹಿತರ ಮುಂದೆ ಹೇಳಿಕೊಂಡಿದ್ದರಂತೆ. ಕಳೆದ 15 ದಿನಗಳಿಂದ ರಜೆ ಪಡೆದುಕೊಂಡು ಮನೆಯಲ್ಲಿದ್ದರು. ಇದರ ಮಧ್ಯೆ ನವೆಂಬರ್​ 16ರಂದು ಪತ್ನಿ ವಿಷ್ಣುಪ್ರಿಯಾ ಹಾಗೂ ಮಕ್ಕಳು ಸಂಬಂಧಿಕರ ಮದುವೆಗೆ ಮೇಲ್ಪಟ್ಟಾಂಬಕ್ಕಂಗೆ ತೆರಳಿದ್ದಾರೆ. ಅಲ್ಲಿಂದ ವಾಪಸ್​ ಬರುವಷ್ಟರಲ್ಲಿ ಪತಿ ನೇಣಿಗೆ ಶರಣಾಗಿದ್ದಾರೆ.

ಇದನ್ನೂ ಓದಿರಿ: ಪಾಕ್‌ನಲ್ಲಿ 2025ರ ಐಸಿಸಿ ಚಾಂಪಿಯನ್​​ ಟ್ರೋಫಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದೇನು?

ದೆವ್ವದ ಕಾಟ ಶುರುವಾಗಿದ್ದರಿಂದ ಪ್ರಭಾಕರನ್​​ ಮಾಟಗಾತಿಯನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಹೀಗಾಗಿ 15 ದಿನಗಳ ಕಾಲ ಪ್ರಾರ್ಥನಾ ಕೊಠಡಿಯಲ್ಲಿ ಉಳಿದುಕೊಂಡಿದ್ದರಂತೆ. ಇದರ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈತ ವಾಸವಾಗಿದ್ದ ಕ್ವಾರ್ಟರ್ಸ್​​ನಲ್ಲಿ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪೊಲೀಸರು ಕೂಡ ಈತನ ಆತ್ಮಹತ್ಯೆಗೆ ಕೆಲಸದ ಹೊರೆ ಕಾರಣವಲ್ಲ, ಬದಲಿಗೆ ದೆವ್ವದ ಭಯವೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

Last Updated : Nov 17, 2021, 10:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.