ETV Bharat / bharat

ಇದೆಂಥಾ ತನಿಖೆ.. ಪಂಜಾಬ್​ನಲ್ಲಿ ಎರಡೂವರೆ ವರ್ಷದ ಹಿಂದೆ ಸತ್ತ ವ್ಯಕ್ತಿಯ ವಿರುದ್ಧ ಈಗ ಡ್ರಗ್ಸ್​ ಕೇಸ್​!

author img

By

Published : May 25, 2022, 5:41 PM IST

ಡ್ರಗ್ಸ್​ ಸಾಗಣೆ ವಿರುದ್ಧ ಸಮರ ಸಾರಿರುವ ಪಂಜಾಬ್​ ಪೊಲೀಸರು ಈಗ ವಿವಾದಕ್ಕೆ ಸಿಲುಕಿದ್ದಾರೆ. 2019 ರಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ದೂರು ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆತನ ಕುಟುಂಬಸ್ಥರು ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ.

police-registered-a-case
ಸತ್ತ ವ್ಯಕ್ತಿಯ ವಿರುದ್ಧ ಈಗ ಡ್ರಗ್ಸ್​ ಕೇಸ್​!

ಹೋಶಿಯಾರ್‌ಪುರ(ಪಂಜಾಬ್​): ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಯಾದ ನಂತರ ಪಂಜಾಬ್ ಪೊಲೀಸರು ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ಮಧ್ಯೆಯೇ ಪೊಲೀಸರ ಒಂದು ಕ್ರಮ ಈಗ ಟೀಕೆ, ವಿವಾದಕ್ಕೆ ಕಾರಣವಾಗಿದೆ. ಡ್ರಗ್ಸ್​ ಸಾಗಣೆ ಆರೋಪದ ಮೇಲೆ 13 ಮಂದಿ ಮೇಲೆ ಎನ್​ಡಿಪಿಎಸ್​ ಕಾಯ್ದೆಯಡಿ ಕೇಸ್ ದಾಖಲಿಸಿದ್ದು, ಇದರಲ್ಲಿ ಎರಡೂವರೆ ವರ್ಷದ ಹಿಂದೆ ಮೃತಪಟ್ಟ ಯುವಕನ ಹೆಸರಿದೆ. ಇದು ಪೊಲೀಸರ ಕಾರ್ಯದ ಮೇಲೆಯೇ ಅನುಮಾನ ಮೂಡಿಸಿದೆ.

ಗರ್​ಶಂಕರ್ ಪೊಲೀಸರು ಮೇ 20 ರಂದು ಡೊನೊವಾಲ್ ಖುರ್ದ್ ಗ್ರಾಮದಲ್ಲಿ ಮಾದಕವಸ್ತು ಸಾಗಣೆ ಆರೋಪದ ಮೇಲೆ 4 ಜನರನ್ನು ಬಂಧಿಸಿದ್ದಾರೆ. 6 ಮಹಿಳೆಯರು ಸೇರಿದಂತೆ 13 ಜನರ ವಿರುದ್ಧ ಪ್ರಕರಣವೂ ದಾಖಲಿಸಿದ್ದಾರೆ. ಆದರೆ, ಎರಡೂವರೆ ವರ್ಷದ ಹಿಂದೆ ಮೃತಪಟ್ಟ ಗ್ರಾಮದ ಗುರುದೀಪ್​ ಸಿಂಗ್ ಎಂಬುವರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಗುರುದೀಪ್​ ಅವರ ಕುಟುಂಬಕ್ಕೆ ಮಾಹಿತಿ ಸಿಕ್ಕಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುದೀಪ್​ಸಿಂಗ್​ 2019ರ ಡಿಸೆಂಬರ್ 6 ರಂದು ಸಾವನ್ನಪ್ಪಿದ್ದಾನೆ. ಎರಡೂವರೆ ವರ್ಷ ಕಳೆದಿದ್ದು, ಮರಣ ಪ್ರಮಾಣಪತ್ರವೂ ಇದೆ. ಗರ್‌ಶಂಕರ್ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ತನ್ನ ಮೃತ ಮಗನನ್ನು ತಪ್ಪಿತಸ್ಥನನ್ನಾಗಿ ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಇದು ನಮ್ಮ ಕುಟುಂಬದ ಮೇಲೆ ಸಮಾಜದಲ್ಲಿ ಕಳಂಕ ತರುವ ವಿಷಯವಾಗಿದೆ. ಈ ಬಗ್ಗೆ ಗೆಜೆಟೆಡ್​ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಕುಟುಂಬಸ್ಥರು ಚಂಡೀಗಢ ಹೋಶಿಯಾರ್‌ಪುರ ಪೊಲೀಸ್ ಮುಖ್ಯಸ್ಥ ಮತ್ತು ಎಸ್‌ಸಿ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ: ಗೋಲ್ಡನ್​ ಟೆಂಪಲ್​ನಲ್ಲಿ ಹಾರ್ಮೋನಿಯಂ ಬಳಕೆಗೆ ನಿಷೇಧ: 122 ವರ್ಷಗಳ ಇತಿಹಾಸಕ್ಕೆ ತಿಲಾಂಜಲಿ?

ಹೋಶಿಯಾರ್‌ಪುರ(ಪಂಜಾಬ್​): ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಯಾದ ನಂತರ ಪಂಜಾಬ್ ಪೊಲೀಸರು ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ಮಧ್ಯೆಯೇ ಪೊಲೀಸರ ಒಂದು ಕ್ರಮ ಈಗ ಟೀಕೆ, ವಿವಾದಕ್ಕೆ ಕಾರಣವಾಗಿದೆ. ಡ್ರಗ್ಸ್​ ಸಾಗಣೆ ಆರೋಪದ ಮೇಲೆ 13 ಮಂದಿ ಮೇಲೆ ಎನ್​ಡಿಪಿಎಸ್​ ಕಾಯ್ದೆಯಡಿ ಕೇಸ್ ದಾಖಲಿಸಿದ್ದು, ಇದರಲ್ಲಿ ಎರಡೂವರೆ ವರ್ಷದ ಹಿಂದೆ ಮೃತಪಟ್ಟ ಯುವಕನ ಹೆಸರಿದೆ. ಇದು ಪೊಲೀಸರ ಕಾರ್ಯದ ಮೇಲೆಯೇ ಅನುಮಾನ ಮೂಡಿಸಿದೆ.

ಗರ್​ಶಂಕರ್ ಪೊಲೀಸರು ಮೇ 20 ರಂದು ಡೊನೊವಾಲ್ ಖುರ್ದ್ ಗ್ರಾಮದಲ್ಲಿ ಮಾದಕವಸ್ತು ಸಾಗಣೆ ಆರೋಪದ ಮೇಲೆ 4 ಜನರನ್ನು ಬಂಧಿಸಿದ್ದಾರೆ. 6 ಮಹಿಳೆಯರು ಸೇರಿದಂತೆ 13 ಜನರ ವಿರುದ್ಧ ಪ್ರಕರಣವೂ ದಾಖಲಿಸಿದ್ದಾರೆ. ಆದರೆ, ಎರಡೂವರೆ ವರ್ಷದ ಹಿಂದೆ ಮೃತಪಟ್ಟ ಗ್ರಾಮದ ಗುರುದೀಪ್​ ಸಿಂಗ್ ಎಂಬುವರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಗುರುದೀಪ್​ ಅವರ ಕುಟುಂಬಕ್ಕೆ ಮಾಹಿತಿ ಸಿಕ್ಕಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುದೀಪ್​ಸಿಂಗ್​ 2019ರ ಡಿಸೆಂಬರ್ 6 ರಂದು ಸಾವನ್ನಪ್ಪಿದ್ದಾನೆ. ಎರಡೂವರೆ ವರ್ಷ ಕಳೆದಿದ್ದು, ಮರಣ ಪ್ರಮಾಣಪತ್ರವೂ ಇದೆ. ಗರ್‌ಶಂಕರ್ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ತನ್ನ ಮೃತ ಮಗನನ್ನು ತಪ್ಪಿತಸ್ಥನನ್ನಾಗಿ ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಇದು ನಮ್ಮ ಕುಟುಂಬದ ಮೇಲೆ ಸಮಾಜದಲ್ಲಿ ಕಳಂಕ ತರುವ ವಿಷಯವಾಗಿದೆ. ಈ ಬಗ್ಗೆ ಗೆಜೆಟೆಡ್​ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಕುಟುಂಬಸ್ಥರು ಚಂಡೀಗಢ ಹೋಶಿಯಾರ್‌ಪುರ ಪೊಲೀಸ್ ಮುಖ್ಯಸ್ಥ ಮತ್ತು ಎಸ್‌ಸಿ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ: ಗೋಲ್ಡನ್​ ಟೆಂಪಲ್​ನಲ್ಲಿ ಹಾರ್ಮೋನಿಯಂ ಬಳಕೆಗೆ ನಿಷೇಧ: 122 ವರ್ಷಗಳ ಇತಿಹಾಸಕ್ಕೆ ತಿಲಾಂಜಲಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.