ETV Bharat / bharat

ಮನ್​ ಕಿ ಬಾತ್​​ನಲ್ಲಿ ಹೈದರಾಬಾದ್​ ರೈತನನ್ನು ಕೊಂಡಾಡಿದ ಪ್ರಧಾನಿ ಮೋದಿ

ಹೈದರಾಬಾದ್​ನ ರೈತ ಚಿಂತಾಲಾ ವೆಂಕಟ ರೆಡ್ಡಿ ಅವರ ವಿಶಿಷ್ಟ ಮತ್ತು ನವೀನ ಕೃಷಿ ತಂತ್ರಜ್ಞಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್​ನಲ್ಲಿ ಉಲ್ಲೇಖಸಿದರು. ರೆಡ್ಡಿ ಅವರು, ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯಿಂದ ತನ್ನ ಆವಿಷ್ಕಾರಕ್ಕಾಗಿ ಇತ್ತೀಚೆಗೆ ಪೇಟೆಂಟ್ ಪಡೆದಿದ್ದರು.

author img

By

Published : Feb 28, 2021, 4:42 PM IST

PM praises Hyderabad farmer in Mann Ki Baat
ಹೈದರಾಬಾದ್​ ರೈತನನ್ನು ಕೊಂಡಾಡಿದ ಪ್ರಧಾನಿ ಮೋದಿ

ಹೈದರಾಬಾದ್ : ಪ್ರಧಾನಿ ನರೇಂದ್ರ ಮೋದಿ ತಮ್ಮ 74ನೇ ಮನ್ ಕಿ ಬಾತ್​​ನಲ್ಲಿ ತೆಲಂಗಾಣದ ರೈತ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಂತಾಲಾ ವೆಂಕಟ ರೆಡ್ಡಿ ಅವರ ಕೃಷಿಯ ಪ್ರಯೋಗಗಳ ಕುರಿತು ಉಲ್ಲೇಖಿಸಿದ್ದಾರೆ.

ವಿಟಮಿನ್ ಡಿ ಹೇರಳವಾಗಿರುವ ವಿವಿಧ ರೀತಿಯ ಗೋಧಿ ಮತ್ತು ಭತ್ತದ ತಳಿಗಳನ್ನು ನವೀನ ಕೃಷಿ ತಂತ್ರಜ್ಞಾನ ಬಳಸಿ ರೆಡ್ಡಿಯವರು ಬೆಳೆಯುತ್ತಿದ್ದು, ಈ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾವು ವಿಜ್ಞಾನದ ಬಗ್ಗೆ ಮಾತನಾಡುವಾಗ, ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಪ್ರಯೋಗಾಲಯಗಳಿಗೆ ಸೀಮಿತಗೊಳಿಸುತ್ತೇವೆ. ಆದರೆ, ವಿಜ್ಞಾನ ಅವುಗಳನ್ನೂ ಮೀರಿದ್ದು ಎಂದು ಪ್ರಧಾನಿ ಹೇಳಿದ್ದಾರೆ.

ಮನ್​ ಕಿ ಬಾತ್​ ಕಾರ್ಯಕ್ರಮ

ಮಾಸಿಕ ರೇಡಿಯೊ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಜನರು ಹೈದರಾಬಾದ್​ನ ರೈತನಿಂದ ಸ್ಫೂರ್ತಿ ಪಡೆಯಬೇಕು ಎಂದು ಹೇಳಿದರು. ಕಳೆದ ವರ್ಷ ರೆಡ್ಡಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದು ಸರ್ಕಾರಕ್ಕೆ ಹೆಮ್ಮೆಯ ವಿಷಯ ಎಂದಿದ್ದಾರೆ.

ಈ ತಿಂಗಳ ಆರಂಭದಲ್ಲಿ, ವೆಂಕಟ​ ​ರೆಡ್ಡಿ ಅವರು, ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯಿಂದ ತನ್ನ ಆವಿಷ್ಕಾರಕ್ಕಾಗಿ ಪೇಟೆಂಟ್ ಪಡೆದಿದ್ದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಸಂದರ್ಭದಲ್ಲಿ ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ, ಲ್ಯಾಬ್​ ಟು ಲ್ಯಾಂಡ್​ಗೆ ಪ್ರಧಾನಿ ಕರೆ ನೀಡಿದ್ದರು.

ಹೈದರಾಬಾದ್ : ಪ್ರಧಾನಿ ನರೇಂದ್ರ ಮೋದಿ ತಮ್ಮ 74ನೇ ಮನ್ ಕಿ ಬಾತ್​​ನಲ್ಲಿ ತೆಲಂಗಾಣದ ರೈತ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಂತಾಲಾ ವೆಂಕಟ ರೆಡ್ಡಿ ಅವರ ಕೃಷಿಯ ಪ್ರಯೋಗಗಳ ಕುರಿತು ಉಲ್ಲೇಖಿಸಿದ್ದಾರೆ.

ವಿಟಮಿನ್ ಡಿ ಹೇರಳವಾಗಿರುವ ವಿವಿಧ ರೀತಿಯ ಗೋಧಿ ಮತ್ತು ಭತ್ತದ ತಳಿಗಳನ್ನು ನವೀನ ಕೃಷಿ ತಂತ್ರಜ್ಞಾನ ಬಳಸಿ ರೆಡ್ಡಿಯವರು ಬೆಳೆಯುತ್ತಿದ್ದು, ಈ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾವು ವಿಜ್ಞಾನದ ಬಗ್ಗೆ ಮಾತನಾಡುವಾಗ, ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಪ್ರಯೋಗಾಲಯಗಳಿಗೆ ಸೀಮಿತಗೊಳಿಸುತ್ತೇವೆ. ಆದರೆ, ವಿಜ್ಞಾನ ಅವುಗಳನ್ನೂ ಮೀರಿದ್ದು ಎಂದು ಪ್ರಧಾನಿ ಹೇಳಿದ್ದಾರೆ.

ಮನ್​ ಕಿ ಬಾತ್​ ಕಾರ್ಯಕ್ರಮ

ಮಾಸಿಕ ರೇಡಿಯೊ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಜನರು ಹೈದರಾಬಾದ್​ನ ರೈತನಿಂದ ಸ್ಫೂರ್ತಿ ಪಡೆಯಬೇಕು ಎಂದು ಹೇಳಿದರು. ಕಳೆದ ವರ್ಷ ರೆಡ್ಡಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದು ಸರ್ಕಾರಕ್ಕೆ ಹೆಮ್ಮೆಯ ವಿಷಯ ಎಂದಿದ್ದಾರೆ.

ಈ ತಿಂಗಳ ಆರಂಭದಲ್ಲಿ, ವೆಂಕಟ​ ​ರೆಡ್ಡಿ ಅವರು, ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯಿಂದ ತನ್ನ ಆವಿಷ್ಕಾರಕ್ಕಾಗಿ ಪೇಟೆಂಟ್ ಪಡೆದಿದ್ದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಸಂದರ್ಭದಲ್ಲಿ ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ, ಲ್ಯಾಬ್​ ಟು ಲ್ಯಾಂಡ್​ಗೆ ಪ್ರಧಾನಿ ಕರೆ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.