ನವದೆಹಲಿ/ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಇಂದು ತಮಿಳುನಾಡಿಗೆ ಭೇಟಿ ನೀಡಿದ್ದು, ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ.
ಈಗಾಗಲೇ ಚೆನ್ನೈಗೆ ಬಂದಿಳಿದಿರುವ ಪ್ರಧಾನಿ ಬೆಳಗ್ಗೆ 11: 15 ರ ಸುಮಾರಿಗೆ ತಮಿಳುನಾಡಿನಲ್ಲಿ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ. ಬಳಿಕ ಚೆನ್ನೈನಲ್ಲಿರುವ ಅರ್ಜುನ್ ಮುಖ್ಯ ಯುದ್ಧ ಟ್ಯಾಂಕ್ (ಎಂಕೆ -1 ಎ) ಅನ್ನು ಸೈನ್ಯಕ್ಕೆ ಹಸ್ತಾಂತರಿಸಲಿದ್ದಾರೆ. ಮಧ್ಯಾಹ್ನ 3:30 ರ ಸುಮಾರಿಗೆ ಅವರು ಕೊಚ್ಚಿಯಲ್ಲಿ ವಿವಿಧ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ.
-
Tomorrow, 14th February, will be in Chennai (Tamil Nadu) and Kochi (Kerala). Numerous development works would be launched that would add speed to fulfilling the vision of Aatmanirbhar Bharat. The projects will boost ‘Ease of Living’ for our citizens. https://t.co/NZUT66cjrt
— Narendra Modi (@narendramodi) February 13, 2021 " class="align-text-top noRightClick twitterSection" data="
">Tomorrow, 14th February, will be in Chennai (Tamil Nadu) and Kochi (Kerala). Numerous development works would be launched that would add speed to fulfilling the vision of Aatmanirbhar Bharat. The projects will boost ‘Ease of Living’ for our citizens. https://t.co/NZUT66cjrt
— Narendra Modi (@narendramodi) February 13, 2021Tomorrow, 14th February, will be in Chennai (Tamil Nadu) and Kochi (Kerala). Numerous development works would be launched that would add speed to fulfilling the vision of Aatmanirbhar Bharat. The projects will boost ‘Ease of Living’ for our citizens. https://t.co/NZUT66cjrt
— Narendra Modi (@narendramodi) February 13, 2021
ಇಂದು ಮೊದಲ ಹಂತದ ಮೆಟ್ರೋ ರೈಲಿನ ವಿಸ್ತರಣೆಯನ್ನು ಮೋದಿ ಉದ್ಘಾಟಿಸಲಿದ್ದಾರೆ. ಇದು ಚೆನ್ನೈ ಬೀಚ್ ಮತ್ತು ಅಟ್ಟಿಪಟ್ಟು ನಡುವಿನ ನಾಲ್ಕನೇ ರೈಲ್ವೆ ಮಾರ್ಗವಾಗಿದೆ. ವಿಲ್ಲುಪುರಂ - ಕಡಲೂರು - ಮೈಲಾಡುತುರೈ - ತಂಜಾವೂರು ಮತ್ತು ಮಯಿಲಾಡುತುರೈ-ತಿರುವರೂರುಗಳಲ್ಲಿ ಏಕ ಸಾಲಿನ ವಿಭಾಗದ ರೈಲ್ವೆ ವಿದ್ಯುದ್ದೀಕರಣವನ್ನು ಉದ್ಘಾಟಿಸಲಿದ್ದಾರೆ.
ಗ್ರ್ಯಾಂಡ್ ಅನಿಕಟ್ ಕಾಲುವೆ ವ್ಯವಸ್ಥೆಯ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣಕ್ಕೆ ಅವರು ಅಡಿಪಾಯ ಹಾಕಲಿದ್ದಾರೆ. ಡೆಲ್ಟಾ ಜಿಲ್ಲೆಗಳಲ್ಲಿ ನೀರಾವರಿಗಾಗಿ ಈ ಕಾಲುವೆ ಬಹು ಮುಖ್ಯವಾಗಿದೆ. ಈ ಕಾಲುವೆಯ ಆಧುನೀಕರಣವನ್ನು 2,640 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಇದು ಕಾಲುವೆಗಳ ನೀರು ಸಾಗಿಸುವ ಸಾಮರ್ಥ್ಯದಲ್ಲಿ ಸುಧಾರಣೆಗೆ ಕಾರಣವಾಗುತ್ತದೆ.
ಅಲ್ಲದೆ ಐಐಟಿ ಮದ್ರಾಸ್ನ ಡಿಸ್ಕವರಿ ಕ್ಯಾಂಪಸ್ಗೆ ಪಿಎಂ ಮೋದಿ ಅಡಿಪಾಯ ಹಾಕಲಿದ್ದಾರೆ. 2 ಲಕ್ಷ ಚದರ್ ಮೀಟರ್ ವಿಸ್ತೀರ್ಣದಲ್ಲಿ ಮೊದಲ ಹಂತದಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ಚೆನ್ನೈ ಬಳಿಯ ಥೈಯೂರ್ನಲ್ಲಿ ಕ್ಯಾಂಪಸ್ ನಿರ್ಮಿಸಲಾಗುತ್ತದೆ.
ಬಳಿಕ ಕೇರಳ ಪ್ರವಾಸ ಕೈಗೊಳ್ಳುವ ಪ್ರಧಾನಿ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನ ಪ್ರೊಪೈಲೀನ್ ಡೆರಿವೇಟಿವ್ ಪೆಟ್ರೋಕೆಮಿಕಲ್ ಪ್ರಾಜೆಕ್ಟ್ (ಪಿಡಿಪಿಪಿ) ಯನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಕೊಚ್ಚಿನ್ನ ವಿಲ್ಲಿಂಗ್ಡನ್ ದ್ವೀಪಗಳಲ್ಲಿ ರೋ-ರೋ ಹಡಗುಗಳು, ಕೊಚ್ಚಿನ್ ಬಂದರಿನಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ "ಸಾಗರಿಕಾ" ಸಾಗರ ಎಂಜಿನಿಯರಿಂಗ್ ತರಬೇತಿ ಸಂಸ್ಥೆ, ವಿಜಯಾನ ಸಾಗರ್, ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ಮತ್ತು ಕೊಚ್ಚಿನ್ ಬಂದರಿನಲ್ಲಿ ದಕ್ಷಿಣ ಕಲ್ಲಿದ್ದಲು ಬೆರ್ತ್ನ ಪುನರ್ನಿರ್ಮಾಣದ ಅಡಿಪಾಯವನ್ನು ಹಾಕಲಿದ್ದಾರೆ.
ಈ ಯೋಜನೆಗಳು ಆ ರಾಜ್ಯಗಳ ಬೆಳವಣಿಗೆಯ ಪಥಕ್ಕೆ ನಿರ್ಣಾಯಕ ವೇಗವನ್ನು ನೀಡುತ್ತವೆ. ಅಭಿವೃದ್ಧಿಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವ ವೇಗವನ್ನು ತ್ವರಿತಗೊಳಿಸಲು ಈ ಯೋಜನೆಗಳು ಸಹಾಯ ಮಾಡುತ್ತವೆ ಎಂದು ಪ್ರಧಾನ ಮಂತ್ರಿ ಕಚೇರಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.