ETV Bharat / bharat

ವಿಮಾನ ಟೇಕ್​ಆಫ್​ ಮಾಡಲು ನಿರಾಕರಿಸಿದ ಪೈಲಟ್​.. ತೊಂದರೆ ಅನುಭವಿಸಿದ ಬಿಜೆಪಿ ಸಂಸದರು ಸೇರಿ ನೂರಾರು ಪ್ರಯಾಣಿಕರು

author img

By

Published : Jul 25, 2023, 9:16 PM IST

ಪೈಲಟ್ ವಿಮಾನವನ್ನು ಟೇಕ್ ಆಫ್ ಮಾಡಲು ನಿರಾಕರಿಸಿದ್ದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ ಘಟನೆ ಗುಜರಾತ್​ನ ರಾಜ್​ಕೋಟ್​ ಏರ್​ಪೋರ್ಟ್​ನಲ್ಲಿ ಕಂಡು ಬಂದಿದೆ.

pilot refuses to fly 100 passengers  refuses to fly 100 passengers including three bjp  ವಿಮಾನ ಟೇಕ್​ಆಫ್​ ಮಾಡಲು ನಿರಾಕರಿಸಿದ ಪೈಲಟ್​ ತೊಂದರೆ ಅನುಭವಿಸಿದ ಬಿಜೆಪಿ ಸಂಸದರು ಸೇರಿ ನೂರಾರು ಪ್ರಯಾಣ  ಟೇಕ್ ಆಫ್ ಮಾಡಲು ನಿರಾಕರಿಸಿದ್ದ  ಗುಜರಾತ್​ನ ರಾಜ್​ಕೋಟ್​ ಏರ್​ಪೋರ್ಟ್​ ಪ್ರಯಾಣಿಕರು ತೀವ್ರ ತೊಂದರೆ ಅನುಭವ  ಪ್ರಸಿದ್ಧ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ  ವಿಮಾನವನ್ನು ಟೇಕ್ ಆಫ್ ಮಾಡಲು ನಿರಾಕರಿಸಿದ  ನೂರಾರು ಪ್ರಯಾಣಿಕರು ತೀವ್ರ ತೊಂದರೆ  ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣ
ವಿಮಾನ ಟೇಕ್​ಆಫ್​ ಮಾಡಲು ನಿರಾಕರಿಸಿದ ಪೈಲಟ್​

ರಾಜ್‌ಕೋಟ್, ಗುಜರಾತ್​: ಪ್ರಸಿದ್ಧ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮತ್ತೊಮ್ಮೆ ಸುದ್ದಿಯಲ್ಲಿದೆ. ಪೈಲಟ್ (ಏರ್ ಇಂಡಿಯಾ ಪೈಲಟ್) ವಿಮಾನವನ್ನು ಟೇಕ್ ಆಫ್ ಮಾಡಲು ನಿರಾಕರಿಸಿದಾಗ ನೂರಾರು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಬೇಕಿದ್ದ ವಿಮಾನದಲ್ಲಿ ಈ ಪರಿಸ್ಥಿತಿ ಉಂಟಾಗಿದೆ. ಆ ವೇಳೆ ಪ್ರಯಾಣಿಕರಲ್ಲಿ ಮೂವರು ಬಿಜೆಪಿ ಸಂಸದರೂ ಇದ್ದರು ಎಂಬುದು ಗಮನಾರ್ಹ. ಭಾನುವಾರ ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಏರ್ ಇಂಡಿಯಾ ವಿಮಾನವು ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣದಿಂದ ರಾತ್ರಿ 8.30 ಕ್ಕೆ ದೆಹಲಿಗೆ ಟೇಕ್ ಆಫ್ ಆಗಬೇಕಿತ್ತು. ಆದರೆ ಪೈಲಟ್ ವಿಮಾನವನ್ನು ಟೇಕ್ ಆಫ್ ಮಾಡಲು ನಿರಾಕರಿಸಿದರು. ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ನಿಯಮಗಳ ಪ್ರಕಾರ, ವಿಮಾನ ಟೇಕ್ ಆಫ್ ಮಾಡಲು ತನ್ನ ಕೆಲಸದ ಸಮಯವನ್ನು ಮೀರಿ ಕೆಲಸ ಮಾಡುತ್ತಿದ್ದೇನೆ ಎಂದು ಪೈಲಟ್ ಸಸೇಮಿರಾ ಹೇಳಿದ್ದಾರೆ.

ಇದರಿಂದ ರಾಜ್‌ಕೋಟ್ ಸಂಸದ ಮೋಹನ್ ಕುಂದರಿಯಾ, ಜಾಮ್‌ನಗರ ಸಂಸದೆ ಪೂನಂ ಮತ್ತು ರಾಜ್ಯಸಭಾ ಸಂಸದ ಕೇಸರಿದೇವ್ ಸಿನ್ಹ್ ಝಾಲಾ ಸೇರಿದಂತೆ ನೂರಾರು ಪ್ರಯಾಣಿಕರು ತೀವ್ರ ಆತಂಕಗೊಂಡಿದ್ದರು. ಪೈಲಟ್​ ವಿಮಾನ ಟೇಕ್​ ಆಫ್​ ಮಾಡಲು ನಿರಾಕರಿಸಿದ್ದರಿಂದ ವಿಮಾನ ನಿಲ್ದಾಣದಲ್ಲಿ ಅತ್ಯಂತ ಗೊಂದಲಮಯ ವಾತಾವರಣ ನಿರ್ಮಾಣಗೊಂಡಿತ್ತು.

ಏರ್ ಇಂಡಿಯಾ ಉತ್ತರವೇನು?: ಈ ಘಟನೆಯ ಬಗ್ಗೆ ಏರ್ ಇಂಡಿಯಾ ವಿವರಣೆ ನೀಡಿದೆ. ಕಾರ್ಯಾಚರಣೆಯ ಕಾರಣಗಳಿಂದ ವಿಮಾನ ವಿಳಂಬವಾಗಿದೆ ಎಂದು ಅದು ಹೇಳಿದೆ. “ನಿಯಂತ್ರಕ ಸಂಸ್ಥೆಯ ನಿಯಮಗಳ ಪ್ರಕಾರ.. ಅವರು ಕರ್ತವ್ಯದ ಸಮಯದ ಮಿತಿಯನ್ನು ಮೀರಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅನುಮತಿಸುವುದಿಲ್ಲ. ಅದರಲ್ಲಿ ಯಾವುದೇ ರಾಜಿ ಇಲ್ಲ. ತುರ್ತಾಗಿ ತಮ್ಮ ಗಮ್ಯಸ್ಥಾನಗಳನ್ನು ತಲುಪಬೇಕಾದವರಿಗೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಉಳಿದವರಿಗೆ ಹೋಟೆಲ್​ನಲ್ಲಿ ಸೌಲಭ್ಯ ಕಲ್ಪಿಸಿದ್ದೇವೆ. ಯಾರಾದರೂ ಟಿಕೆಟ್ ಕ್ಯಾನ್ಸಲ್ ಮಾಡಿದರೆ... ಪೂರ್ತಿ ಹಣ ವಾಪಸ್ ನೀಡಲು ಅವಕಾಶ ಕಲ್ಪಿಸಿದ್ದೇವೆ' ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ತಿಂಗಳು ಏರ್ ಇಂಡಿಯಾ ವಿಮಾನದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಲಂಡನ್‌ನಿಂದ ದೆಹಲಿಗೆ ಹೊರಟಿದ್ದ ವಿಮಾನ ರಾಜಸ್ಥಾನದ ಜೈಪುರದಲ್ಲಿ ಲ್ಯಾಂಡ್ ಆಗಿದೆ. ಆ ತುರ್ತು ಲ್ಯಾಂಡಿಂಗ್ ನಂತರ, ದೆಹಲಿ ಏರ್ ಟ್ರಾಫಿಕ್ ಕಂಟ್ರೋಲ್ (ATC) ಎರಡು ಗಂಟೆಗಳ ನಂತರ ದೆಹಲಿಗೆ ಹಾರಲು ಅನುಮತಿ ನೀಡಿತು.

ಆದರೆ, ಪೈಲಟ್ ವಿಮಾನವನ್ನು ಟೇಕ್ ಆಫ್ ಮಾಡಲು ನಿರಾಕರಿಸಿದರು. ಕರ್ತವ್ಯದ ಸಮಯದ ಮಿತಿ ಮತ್ತು ಕೆಲಸದ ಅವಧಿಯನ್ನು ಉಲ್ಲೇಖಿಸಿ ಅವರು ಹಾರುವುದಿಲ್ಲ ಎಂದು ಹೇಳಿದರು. ಇದರಿಂದಾಗಿ ಸುಮಾರು 350 ಪ್ರಯಾಣಿಕರು ಜೈಪುರ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. ಕೆಲವು ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿ ತಮ್ಮ ಗಮ್ಯಸ್ಥಾನಗಳನ್ನು ತಲುಪಿದರೆ, ಇನ್ನು ಕೆಲವರು ವಿಮಾನ ನಿಲ್ದಾಣದಲ್ಲಿ ಉಳಿಯಬೇಕಾಯಿತು. ಕೆಲವು ಗಂಟೆಗಳ ನಂತರ, ಬದಲಿ ವಿಮಾನ ವ್ಯವಸ್ಥೆಗೊಳಿಸಿದ ನಂತರ ಪ್ರಯಾಣಿಕರು ದೆಹಲಿಗೆ ಹಾರಿದರು.

ಓದಿ: ಬೆಲ್ಟ್ ಒಳಗೆ ಚಿನ್ನ ಅಡಗಿಸಿಟ್ಟು ಅಕ್ರಮ ಸಾಗಣೆ: ಬೆಂಗಳೂರು ಏರ್​ಪೋರ್ಟ್​​ನಲ್ಲಿ ಒಂದೂವರೆ ಕೋಟಿ ಮೌಲ್ಯದ ಚಿನ್ನ ವಶ

ರಾಜ್‌ಕೋಟ್, ಗುಜರಾತ್​: ಪ್ರಸಿದ್ಧ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮತ್ತೊಮ್ಮೆ ಸುದ್ದಿಯಲ್ಲಿದೆ. ಪೈಲಟ್ (ಏರ್ ಇಂಡಿಯಾ ಪೈಲಟ್) ವಿಮಾನವನ್ನು ಟೇಕ್ ಆಫ್ ಮಾಡಲು ನಿರಾಕರಿಸಿದಾಗ ನೂರಾರು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಬೇಕಿದ್ದ ವಿಮಾನದಲ್ಲಿ ಈ ಪರಿಸ್ಥಿತಿ ಉಂಟಾಗಿದೆ. ಆ ವೇಳೆ ಪ್ರಯಾಣಿಕರಲ್ಲಿ ಮೂವರು ಬಿಜೆಪಿ ಸಂಸದರೂ ಇದ್ದರು ಎಂಬುದು ಗಮನಾರ್ಹ. ಭಾನುವಾರ ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಏರ್ ಇಂಡಿಯಾ ವಿಮಾನವು ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣದಿಂದ ರಾತ್ರಿ 8.30 ಕ್ಕೆ ದೆಹಲಿಗೆ ಟೇಕ್ ಆಫ್ ಆಗಬೇಕಿತ್ತು. ಆದರೆ ಪೈಲಟ್ ವಿಮಾನವನ್ನು ಟೇಕ್ ಆಫ್ ಮಾಡಲು ನಿರಾಕರಿಸಿದರು. ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ನಿಯಮಗಳ ಪ್ರಕಾರ, ವಿಮಾನ ಟೇಕ್ ಆಫ್ ಮಾಡಲು ತನ್ನ ಕೆಲಸದ ಸಮಯವನ್ನು ಮೀರಿ ಕೆಲಸ ಮಾಡುತ್ತಿದ್ದೇನೆ ಎಂದು ಪೈಲಟ್ ಸಸೇಮಿರಾ ಹೇಳಿದ್ದಾರೆ.

ಇದರಿಂದ ರಾಜ್‌ಕೋಟ್ ಸಂಸದ ಮೋಹನ್ ಕುಂದರಿಯಾ, ಜಾಮ್‌ನಗರ ಸಂಸದೆ ಪೂನಂ ಮತ್ತು ರಾಜ್ಯಸಭಾ ಸಂಸದ ಕೇಸರಿದೇವ್ ಸಿನ್ಹ್ ಝಾಲಾ ಸೇರಿದಂತೆ ನೂರಾರು ಪ್ರಯಾಣಿಕರು ತೀವ್ರ ಆತಂಕಗೊಂಡಿದ್ದರು. ಪೈಲಟ್​ ವಿಮಾನ ಟೇಕ್​ ಆಫ್​ ಮಾಡಲು ನಿರಾಕರಿಸಿದ್ದರಿಂದ ವಿಮಾನ ನಿಲ್ದಾಣದಲ್ಲಿ ಅತ್ಯಂತ ಗೊಂದಲಮಯ ವಾತಾವರಣ ನಿರ್ಮಾಣಗೊಂಡಿತ್ತು.

ಏರ್ ಇಂಡಿಯಾ ಉತ್ತರವೇನು?: ಈ ಘಟನೆಯ ಬಗ್ಗೆ ಏರ್ ಇಂಡಿಯಾ ವಿವರಣೆ ನೀಡಿದೆ. ಕಾರ್ಯಾಚರಣೆಯ ಕಾರಣಗಳಿಂದ ವಿಮಾನ ವಿಳಂಬವಾಗಿದೆ ಎಂದು ಅದು ಹೇಳಿದೆ. “ನಿಯಂತ್ರಕ ಸಂಸ್ಥೆಯ ನಿಯಮಗಳ ಪ್ರಕಾರ.. ಅವರು ಕರ್ತವ್ಯದ ಸಮಯದ ಮಿತಿಯನ್ನು ಮೀರಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅನುಮತಿಸುವುದಿಲ್ಲ. ಅದರಲ್ಲಿ ಯಾವುದೇ ರಾಜಿ ಇಲ್ಲ. ತುರ್ತಾಗಿ ತಮ್ಮ ಗಮ್ಯಸ್ಥಾನಗಳನ್ನು ತಲುಪಬೇಕಾದವರಿಗೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಉಳಿದವರಿಗೆ ಹೋಟೆಲ್​ನಲ್ಲಿ ಸೌಲಭ್ಯ ಕಲ್ಪಿಸಿದ್ದೇವೆ. ಯಾರಾದರೂ ಟಿಕೆಟ್ ಕ್ಯಾನ್ಸಲ್ ಮಾಡಿದರೆ... ಪೂರ್ತಿ ಹಣ ವಾಪಸ್ ನೀಡಲು ಅವಕಾಶ ಕಲ್ಪಿಸಿದ್ದೇವೆ' ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ತಿಂಗಳು ಏರ್ ಇಂಡಿಯಾ ವಿಮಾನದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಲಂಡನ್‌ನಿಂದ ದೆಹಲಿಗೆ ಹೊರಟಿದ್ದ ವಿಮಾನ ರಾಜಸ್ಥಾನದ ಜೈಪುರದಲ್ಲಿ ಲ್ಯಾಂಡ್ ಆಗಿದೆ. ಆ ತುರ್ತು ಲ್ಯಾಂಡಿಂಗ್ ನಂತರ, ದೆಹಲಿ ಏರ್ ಟ್ರಾಫಿಕ್ ಕಂಟ್ರೋಲ್ (ATC) ಎರಡು ಗಂಟೆಗಳ ನಂತರ ದೆಹಲಿಗೆ ಹಾರಲು ಅನುಮತಿ ನೀಡಿತು.

ಆದರೆ, ಪೈಲಟ್ ವಿಮಾನವನ್ನು ಟೇಕ್ ಆಫ್ ಮಾಡಲು ನಿರಾಕರಿಸಿದರು. ಕರ್ತವ್ಯದ ಸಮಯದ ಮಿತಿ ಮತ್ತು ಕೆಲಸದ ಅವಧಿಯನ್ನು ಉಲ್ಲೇಖಿಸಿ ಅವರು ಹಾರುವುದಿಲ್ಲ ಎಂದು ಹೇಳಿದರು. ಇದರಿಂದಾಗಿ ಸುಮಾರು 350 ಪ್ರಯಾಣಿಕರು ಜೈಪುರ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. ಕೆಲವು ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿ ತಮ್ಮ ಗಮ್ಯಸ್ಥಾನಗಳನ್ನು ತಲುಪಿದರೆ, ಇನ್ನು ಕೆಲವರು ವಿಮಾನ ನಿಲ್ದಾಣದಲ್ಲಿ ಉಳಿಯಬೇಕಾಯಿತು. ಕೆಲವು ಗಂಟೆಗಳ ನಂತರ, ಬದಲಿ ವಿಮಾನ ವ್ಯವಸ್ಥೆಗೊಳಿಸಿದ ನಂತರ ಪ್ರಯಾಣಿಕರು ದೆಹಲಿಗೆ ಹಾರಿದರು.

ಓದಿ: ಬೆಲ್ಟ್ ಒಳಗೆ ಚಿನ್ನ ಅಡಗಿಸಿಟ್ಟು ಅಕ್ರಮ ಸಾಗಣೆ: ಬೆಂಗಳೂರು ಏರ್​ಪೋರ್ಟ್​​ನಲ್ಲಿ ಒಂದೂವರೆ ಕೋಟಿ ಮೌಲ್ಯದ ಚಿನ್ನ ವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.