ETV Bharat / bharat

ರಾಮ್​ವಿಲಾಸ್​ ಪಾಸ್ವಾನ್​ ಉತ್ತರಾಧಿಕಾರಿ ನಾನೇ : ಪಶುಪತಿ ಪರಾಸ್

ರಾಮ್​ ವಿಲಾಸ್ ಪಾಸ್ವಾಲ್​ ಸ್ಥಾಪಿಸಿದ ಎಲ್​ಜೆಪಿಯಲ್ಲಿ ಕೆಲವು ದಿನಗಳ ಹಿಂದೆ ಬಿರುಕು ಮೂಡಿದ್ದು, ಎರಡು ಬಣಗಳಾಗಿ ವಿಭಜನೆಗೊಂಡಿವೆ. ಪಶುಪತಿ ಕುಮಾರ್ ಪರಾಸ್ ಜತೆಗೆ ಐವರು ಸಂಸದರಿದ್ದು, ಪರಾಸ್ ಅವರನ್ನೇ ಸಂಸದೀಯ ಪಕ್ಷದ ನಾಯಕರನ್ನಾಗಿ ಘೋಷಿಸಿಕೊಂಡಿದ್ದಾರೆ. ಇತ್ತ ಚಿರಾಗ್ ಪಾಸ್ವಾನ್​ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದು ತಾನು ಎಲ್​ಜೆಪಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ..

author img

By

Published : Jul 9, 2021, 7:27 AM IST

ಪಶುಪತಿ ಪರಾಸ್
ಪಶುಪತಿ ಪರಾಸ್

ನವದೆಹಲಿ : ಕಳೆದ ಎರಡು ದಿನಗಳ ಹಿಂದೆ ನಡೆದ ಕೇಂದ್ರ ಸಚಿವ ಸಂಪುಟ ಪುನಾ​ರಚನೆಯಲ್ಲಿ ಮೋದಿ ಸರ್ಕಾರ, ಎಲ್​ಜೆಪಿ ನಾಯಕ ಪಶುಪತಿ ಕುಮಾರ್ ಪಾರಸ್​ಗೂ ಕೇಂದ್ರ ಮಂತ್ರಿಯ ಸ್ಥಾನಮಾನ ನೀಡಿದೆ. ಆಹಾರ ಸಂಸ್ಕರಣಾ ಸಚಿವಾಲಯದ ಉಸ್ತುವಾರಿಯಾಗಿ ನೇಮಕಗೊಂಡಿರುವ ಪಾರಸ್ ಮಾತನಾಡಿ​​, ಆಹಾರ ಧಾನ್ಯಗಳನ್ನು ಹೆಚ್ಚು ಉತ್ಪಾದಿಸುವ ರಾಜ್ಯಗಳಲ್ಲಿ ಕಾರ್ಖಾನೆ ಸ್ಥಾಪಿಸಲಾಗುವುದು. ಇದರಿಂದಾಗಿ ಸ್ಥಳೀಯರು ಮತ್ತು ರೈತರು ಹೆಚ್ಚಿನ ಲಾಭ ಮತ್ತು ಉದ್ಯೋಗ ಪಡೆಯಬಹುದು ಎಂದಿದ್ದಾರೆ.

‘ಹಣ್ಣು-ತರಕಾರಿ ಸಂಸ್ಕರಣೆಗೆ ಒತ್ತು’

ಉತ್ತರ ಬಿಹಾರವು ಲಿಚಿ, ಮಾವಿನಹಣ್ಣು, ಜೋಳ ಉತ್ಪಾದನೆಗೆ ಹೆಸರುವಾಸಿಯಾಗಿರುವುದರಿಂದ ಎಲ್ಲರನ್ನು ಆಕರ್ಷಿಸಲಿದೆ. ದೇಶದಲ್ಲಿ ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ ಹೆಚ್ಚಿಸಲು ಒತ್ತು ನೀಡಲಾಗುವುದು. ಜತೆಗೆ ಸಂಸ್ಕರಿಸಿದ ಹಣ್ಣು-ತರಕಾರಿ ಮಾರಾಟ ಮಾಡಲು ಮಾರುಕಟ್ಟೆಗಳನ್ನು ನಿರ್ಮಿಸಲಾಗುವುದು ಎಂದರು.

‘ನಾನೇ ಉತ್ತರಾಧಿಕಾರಿ’

ರಾಮ್​ ವಿಲಾಸ್ ಪಾಸ್ವಾನ್ ನಿಧನದ ಬಳಿಕ ಎಲ್​ಜೆಪಿಯಲ್ಲಿ ಉತ್ತರಾಧಿಕಾರಿ ಯಾರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನೇ ಎಂದರು. ರಾಮ್​ ವಿಲಾಸ್​​ 1969ರಲ್ಲಿ ಮೊದಲ ಬಾರಿಗೆ ಬಿಹಾರದಲ್ಲಿ ಶಾಸಕರಾದಾಗ ಮತ್ತು 1997ರಲ್ಲಿ ಸಂಸದರಾದಾಗ ತಮ್ಮ ವಿಧಾನಸಭಾ ಕ್ಷೇತ್ರವನ್ನು ನನಗೆ ಬಿಟ್ಟುಕೊಟ್ಟರು. ಅವರು ಬಿಹಾರದಲ್ಲಿ ಏಳು ಬಾರಿ ಶಾಸಕರಾಗಿ, ನಾಲ್ಕು ಬಾರಿ ಸಚಿವರಾಗಿ ಸೇವೆ ಸಲ್ಲಿಸದ್ದಾರೆ ಎಂದರು.

‘ಎಲ್​ಜೆಪಿಯಿಂದ ಮಂತ್ರಿ’

ರಾಮ್​ವಿಲಾಸ್​ ಪಾಸ್ವಾನ್​​, 2019ರಲ್ಲಿ ಲೋಕಸಭಾ ಚುನಾವಣಾ ಸಮಯದಲ್ಲಿ ರಾಜ್ಯಸಭಾ ಸಂಸದರಾದರು. ಆಗ ಅವರು ಸ್ಪರ್ಧಿಸುತ್ತಿದ್ದ ಹಾಜಿಪುರ ಕ್ಷೇತ್ರದಿಂದ ನಾನು ಸ್ಪರ್ಧಿಸಿ ಗೆದ್ದು ಸಂಸತ್​ಗೆ ಆಯ್ಕೆಯಾದೆ. ಇದೀಗ ಎಲ್​ಜೆಪಿಯಲ್ಲಿ ನಾನು ಕ್ಯಾಬಿನೆಟ್ ಮಂತ್ರಿಯಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ತಂದೆ ಮಾಡಿರುವ ಆಸ್ತಿಗಷ್ಟೇ ಮಾಲೀಕ

ಪಾಸ್ವಾನ್ ಪುತ್ರ ಚಿರಾಗ್​, ಎಲ್​ಜೆಪಿ ಉತ್ತರಾಧಿಕಾರಿಯಲ್ಲ. ಅವರು ಅವರ ತಂದೆ ಮಾಡಿರುವ ಆಸ್ತಿಗಷ್ಟೇ ಮಾಲೀಕರು ಎಂದು ವ್ಯಂಗ್ಯವಾಡಿದರು.

ನಿಜವಾದ ಎಲ್​ಜೆಪಿ ಯಾವುದು?

ರಾಮ್​ ವಿಲಾಸ್ ಪಾಸ್ವಾಲ್​ ಸ್ಥಾಪಿಸಿದ ಎಲ್​ಜೆಪಿಯಲ್ಲಿ ಕೆಲವು ದಿನಗಳ ಹಿಂದೆ ಬಿರುಕು ಮೂಡಿದ್ದು, ಎರಡು ಬಣಗಳಾಗಿ ವಿಭಜನೆಗೊಂಡಿವೆ. ಪಶುಪತಿ ಕುಮಾರ್ ಪರಾಸ್ ಜತೆಗೆ ಐವರು ಸಂಸದರಿದ್ದು, ಪರಾಸ್ ಅವರನ್ನೇ ಸಂಸದೀಯ ಪಕ್ಷದ ನಾಯಕರನ್ನಾಗಿ ಘೋಷಿಸಿಕೊಂಡಿದ್ದಾರೆ. ಇತ್ತ ಚಿರಾಗ್ ಪಾಸ್ವಾನ್​ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದು ತಾನು ಎಲ್​ಜೆಪಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ. ಈ ವಿವಾದ ಪ್ರಸ್ತುತ ಚುನಾವಣಾ ಆಯೋಗದ ಮುಂದಿದೆ.

ಇದನ್ನೂ ಓದಿ:ಮಿನಿಷ್ಟ್ರೇನು_____.. ಶೂ ಒದ್ದೆಯಾಗುತ್ತೆ ಅಂತಾ ಹೀಗೆ ಮಾಡೋದಾ.. ಸಚಿವರೇ ಇದೇನಾ ನಿಮ್ಮ ಸಂಸ್ಕೃತಿ!?

ನವದೆಹಲಿ : ಕಳೆದ ಎರಡು ದಿನಗಳ ಹಿಂದೆ ನಡೆದ ಕೇಂದ್ರ ಸಚಿವ ಸಂಪುಟ ಪುನಾ​ರಚನೆಯಲ್ಲಿ ಮೋದಿ ಸರ್ಕಾರ, ಎಲ್​ಜೆಪಿ ನಾಯಕ ಪಶುಪತಿ ಕುಮಾರ್ ಪಾರಸ್​ಗೂ ಕೇಂದ್ರ ಮಂತ್ರಿಯ ಸ್ಥಾನಮಾನ ನೀಡಿದೆ. ಆಹಾರ ಸಂಸ್ಕರಣಾ ಸಚಿವಾಲಯದ ಉಸ್ತುವಾರಿಯಾಗಿ ನೇಮಕಗೊಂಡಿರುವ ಪಾರಸ್ ಮಾತನಾಡಿ​​, ಆಹಾರ ಧಾನ್ಯಗಳನ್ನು ಹೆಚ್ಚು ಉತ್ಪಾದಿಸುವ ರಾಜ್ಯಗಳಲ್ಲಿ ಕಾರ್ಖಾನೆ ಸ್ಥಾಪಿಸಲಾಗುವುದು. ಇದರಿಂದಾಗಿ ಸ್ಥಳೀಯರು ಮತ್ತು ರೈತರು ಹೆಚ್ಚಿನ ಲಾಭ ಮತ್ತು ಉದ್ಯೋಗ ಪಡೆಯಬಹುದು ಎಂದಿದ್ದಾರೆ.

‘ಹಣ್ಣು-ತರಕಾರಿ ಸಂಸ್ಕರಣೆಗೆ ಒತ್ತು’

ಉತ್ತರ ಬಿಹಾರವು ಲಿಚಿ, ಮಾವಿನಹಣ್ಣು, ಜೋಳ ಉತ್ಪಾದನೆಗೆ ಹೆಸರುವಾಸಿಯಾಗಿರುವುದರಿಂದ ಎಲ್ಲರನ್ನು ಆಕರ್ಷಿಸಲಿದೆ. ದೇಶದಲ್ಲಿ ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ ಹೆಚ್ಚಿಸಲು ಒತ್ತು ನೀಡಲಾಗುವುದು. ಜತೆಗೆ ಸಂಸ್ಕರಿಸಿದ ಹಣ್ಣು-ತರಕಾರಿ ಮಾರಾಟ ಮಾಡಲು ಮಾರುಕಟ್ಟೆಗಳನ್ನು ನಿರ್ಮಿಸಲಾಗುವುದು ಎಂದರು.

‘ನಾನೇ ಉತ್ತರಾಧಿಕಾರಿ’

ರಾಮ್​ ವಿಲಾಸ್ ಪಾಸ್ವಾನ್ ನಿಧನದ ಬಳಿಕ ಎಲ್​ಜೆಪಿಯಲ್ಲಿ ಉತ್ತರಾಧಿಕಾರಿ ಯಾರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನೇ ಎಂದರು. ರಾಮ್​ ವಿಲಾಸ್​​ 1969ರಲ್ಲಿ ಮೊದಲ ಬಾರಿಗೆ ಬಿಹಾರದಲ್ಲಿ ಶಾಸಕರಾದಾಗ ಮತ್ತು 1997ರಲ್ಲಿ ಸಂಸದರಾದಾಗ ತಮ್ಮ ವಿಧಾನಸಭಾ ಕ್ಷೇತ್ರವನ್ನು ನನಗೆ ಬಿಟ್ಟುಕೊಟ್ಟರು. ಅವರು ಬಿಹಾರದಲ್ಲಿ ಏಳು ಬಾರಿ ಶಾಸಕರಾಗಿ, ನಾಲ್ಕು ಬಾರಿ ಸಚಿವರಾಗಿ ಸೇವೆ ಸಲ್ಲಿಸದ್ದಾರೆ ಎಂದರು.

‘ಎಲ್​ಜೆಪಿಯಿಂದ ಮಂತ್ರಿ’

ರಾಮ್​ವಿಲಾಸ್​ ಪಾಸ್ವಾನ್​​, 2019ರಲ್ಲಿ ಲೋಕಸಭಾ ಚುನಾವಣಾ ಸಮಯದಲ್ಲಿ ರಾಜ್ಯಸಭಾ ಸಂಸದರಾದರು. ಆಗ ಅವರು ಸ್ಪರ್ಧಿಸುತ್ತಿದ್ದ ಹಾಜಿಪುರ ಕ್ಷೇತ್ರದಿಂದ ನಾನು ಸ್ಪರ್ಧಿಸಿ ಗೆದ್ದು ಸಂಸತ್​ಗೆ ಆಯ್ಕೆಯಾದೆ. ಇದೀಗ ಎಲ್​ಜೆಪಿಯಲ್ಲಿ ನಾನು ಕ್ಯಾಬಿನೆಟ್ ಮಂತ್ರಿಯಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ತಂದೆ ಮಾಡಿರುವ ಆಸ್ತಿಗಷ್ಟೇ ಮಾಲೀಕ

ಪಾಸ್ವಾನ್ ಪುತ್ರ ಚಿರಾಗ್​, ಎಲ್​ಜೆಪಿ ಉತ್ತರಾಧಿಕಾರಿಯಲ್ಲ. ಅವರು ಅವರ ತಂದೆ ಮಾಡಿರುವ ಆಸ್ತಿಗಷ್ಟೇ ಮಾಲೀಕರು ಎಂದು ವ್ಯಂಗ್ಯವಾಡಿದರು.

ನಿಜವಾದ ಎಲ್​ಜೆಪಿ ಯಾವುದು?

ರಾಮ್​ ವಿಲಾಸ್ ಪಾಸ್ವಾಲ್​ ಸ್ಥಾಪಿಸಿದ ಎಲ್​ಜೆಪಿಯಲ್ಲಿ ಕೆಲವು ದಿನಗಳ ಹಿಂದೆ ಬಿರುಕು ಮೂಡಿದ್ದು, ಎರಡು ಬಣಗಳಾಗಿ ವಿಭಜನೆಗೊಂಡಿವೆ. ಪಶುಪತಿ ಕುಮಾರ್ ಪರಾಸ್ ಜತೆಗೆ ಐವರು ಸಂಸದರಿದ್ದು, ಪರಾಸ್ ಅವರನ್ನೇ ಸಂಸದೀಯ ಪಕ್ಷದ ನಾಯಕರನ್ನಾಗಿ ಘೋಷಿಸಿಕೊಂಡಿದ್ದಾರೆ. ಇತ್ತ ಚಿರಾಗ್ ಪಾಸ್ವಾನ್​ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದು ತಾನು ಎಲ್​ಜೆಪಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ. ಈ ವಿವಾದ ಪ್ರಸ್ತುತ ಚುನಾವಣಾ ಆಯೋಗದ ಮುಂದಿದೆ.

ಇದನ್ನೂ ಓದಿ:ಮಿನಿಷ್ಟ್ರೇನು_____.. ಶೂ ಒದ್ದೆಯಾಗುತ್ತೆ ಅಂತಾ ಹೀಗೆ ಮಾಡೋದಾ.. ಸಚಿವರೇ ಇದೇನಾ ನಿಮ್ಮ ಸಂಸ್ಕೃತಿ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.