ETV Bharat / bharat

ಆಪರೇಷನ್​ ಅಜಯ್​: ಭಾರತೀಯರನ್ನು ಹೊತ್ತು ಸ್ವದೇಶಕ್ಕೆ ಆಗಮಿಸಿದ ಆರನೇ ವಿಮಾನ

ಆಪರೇಷನ್​ ಅಜಯ್​ ಕಾರ್ಯಾಚರಣೆ ಭಾಗವಾಗಿ 143 ಭಾರತೀಯರನ್ನು ಒಳಗೊಂಡ ವಿಮಾನವು ಇಸ್ರೇಲ್​ನಿಂದ ದೆಹಲಿಗೆ ಬಂದು ತಲುಪಿದೆ.

author img

By ETV Bharat Karnataka Team

Published : Oct 23, 2023, 8:17 AM IST

operation-ajay-mos-faggan-singh-kulaste-expresses-happiness
ಆಪರೇಷನ್​ ಅಜಯ್​ : ಭಾರತೀಯರನ್ನು ಹೊತ್ತು ಸ್ವದೇಶಕ್ಕೆ ಆಗಮಿಸಿದ ಆರನೇ ವಿಮಾನ

ನವದೆಹಲಿ: ಇಸ್ರೇಲ್ ಮತ್ತು ಪಾಲೇಸ್ಟೆನ್​ ಹಮಾಸ್​ ಉಗ್ರರ ನಡುವೆ ಸಂಘರ್ಷ ಮುಂದುವರೆದಿದ್ದು, ಇಸ್ರೇಲ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಭಾರತ ಸರ್ಕಾರವು ಯುದ್ಧಪೀಡಿತ ಇಸ್ರೇಲ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್​ ಅಜಯ್​ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಮೂಲಕ ಈಗಾಗಲೇ ಸಾವಿರಾರು ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆ ತರಲಾಗಿದೆ.

ಭಾನುವಾರ ರಾತ್ರಿ ಭಾರತೀಯರನ್ನು ಹೊತ್ತ ಆರನೇ ವಿಮಾನವು ಇಸ್ರೇಲಿನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ದೆಹಲಿಗೆ ಆಗಮಿಸಿದ 143 ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಫಗ್ಗಾನ್​ ಸಿಂಗ್​ ಕುಲಾಸ್ತೆ ಬರಮಾಡಿಕೊಂಡರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯುದ್ಧ ಪೀಡಿತ ಇಸ್ರೇಲ್​ನಿಂದ ಆಗಮಿಸಿದ ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಿದೆ. ಇಸ್ರೇಲ್​ನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಭಾರತೀಯರನ್ನು ಸ್ವಾಗತಿಸಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಯಿತು. ಒಟ್ಟು 143 ಭಾರತೀಯರನ್ನು ಇಸ್ರೇಲ್​ನಿಂದ ಯಶಸ್ವಿಯಾಗಿ ಕರೆತರಲಾಗಿದೆ. ಜೊತೆಗೆ ಇಸ್ರೇಲ್​​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಹೇಳಿದರು. ಇಸ್ರೇಲಿನಿಂದ ಆಗಮಿಸಿದ ವಿಮಾನದಲ್ಲಿ 143 ಭಾರತೀಯರ ಜೊತೆಗೆ ಇಬ್ಬರು ನೇಪಾಳಿ ಪ್ರಜೆಗಳು ಇದ್ದರು.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ, ಆಪರೇಷನ್​ ಅಜಯ್​ ಕಾರ್ಯಾಚರಣೆಯಲ್ಲಿ ಭಾರತೀಯ ನಾಗರೀಕರನ್ನು ಒಳಗೊಂಡ ಆರನೇ ವಿಮಾನವು ಇಸ್ರೇಲ್​​ನಿಂದ ದೆಹಲಿಗೆ ಬಂದು ತಲುಪಿದೆ. ಇದರಲ್ಲಿ ಒಟ್ಟು 143 ಭಾರತೀಯರು ಮತ್ತು 2 ನೇಪಾಳಿ ಪ್ರಜೆಗಳಿದ್ದರು. ದೆಹಲಿಗೆ ತಲುಪಿದ ಭಾರತೀಯರನ್ನು ಕೇಂದ್ರ ಸಚಿವ ಫಗ್ಗಾನ್​ ಸಿಂಗ್​ ಬರಮಾಡಿಕೊಂಡರು ಎಂದು ಹೇಳಿದ್ದಾರೆ.

ಆಪರೇಷನ್​ ಅಜಯ್​ ಕಾರ್ಯಾಚರಣೆ : ಇಸ್ರೇಲ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ಆಪರೇಷನ್​ ಅಜಯ್​ ಕಾರ್ಯಾಚರಣೆ ನಡೆಸುತ್ತಿದೆ. ಇದರ ಭಾಗವಾಗಿ ಭಾನುವಾರ ತಡರಾತ್ರಿ 143 ಭಾರತೀಯರನ್ನು ಒಳಗೊಂಡ ವಿಮಾನವು ದೆಹಲಿಗೆ ತಲುಪಿದೆ. ಇದಕ್ಕೂ ಮೊದಲು ಮಂಗಳವಾರ ರಾತ್ರಿ 286 ಭಾರತೀಯ ನಾಗರಿಕರನ್ನು ಒಳಗೊಂಡ ಐದನೇ ವಿಮಾನವು ದೆಹಲಿಗೆ ತಲುಪಿತ್ತು. ಇದರಲ್ಲಿ 286 ಭಾರತೀಯರು ಮತ್ತು 18 ನೇಪಾಳದ ಪ್ರಜೆಗಳಿದ್ದರು.

ಆಪರೇಷನ್​ ಅಜಯ್​ ಅಡಿ ಇದುವರೆಗೆ 1200 ಭಾರತೀಯರನ್ನು ಮತ್ತು 20 ನೇಪಾಳದ ನಾಗರಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಇಸ್ರೇಲಿನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಭಾರತವು ಸರ್ಕಾರವು ಪೂರ್ಣಪ್ರಮಾಣದಲ್ಲಿ ಪ್ರಯತ್ನಿಸುತ್ತಿದೆ. ಭಾರತೀಯ ಪ್ರಜೆಗಳಿಗೆ ಏನಾದರೂ ತೊಂದರೆ ಉಂಟಾದಲ್ಲಿ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸುವಂತೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : Operation Ajay: ಇಸ್ರೇಲ್​ನಿಂದ 274 ಭಾರತೀಯರನ್ನು ಹೊತ್ತು ಸ್ವದೇಶದತ್ತ ಬರುತ್ತಿರುವ ನಾಲ್ಕನೇ ವಿಮಾನ​

ನವದೆಹಲಿ: ಇಸ್ರೇಲ್ ಮತ್ತು ಪಾಲೇಸ್ಟೆನ್​ ಹಮಾಸ್​ ಉಗ್ರರ ನಡುವೆ ಸಂಘರ್ಷ ಮುಂದುವರೆದಿದ್ದು, ಇಸ್ರೇಲ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಭಾರತ ಸರ್ಕಾರವು ಯುದ್ಧಪೀಡಿತ ಇಸ್ರೇಲ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್​ ಅಜಯ್​ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಮೂಲಕ ಈಗಾಗಲೇ ಸಾವಿರಾರು ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆ ತರಲಾಗಿದೆ.

ಭಾನುವಾರ ರಾತ್ರಿ ಭಾರತೀಯರನ್ನು ಹೊತ್ತ ಆರನೇ ವಿಮಾನವು ಇಸ್ರೇಲಿನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ದೆಹಲಿಗೆ ಆಗಮಿಸಿದ 143 ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಫಗ್ಗಾನ್​ ಸಿಂಗ್​ ಕುಲಾಸ್ತೆ ಬರಮಾಡಿಕೊಂಡರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯುದ್ಧ ಪೀಡಿತ ಇಸ್ರೇಲ್​ನಿಂದ ಆಗಮಿಸಿದ ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಿದೆ. ಇಸ್ರೇಲ್​ನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಭಾರತೀಯರನ್ನು ಸ್ವಾಗತಿಸಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಯಿತು. ಒಟ್ಟು 143 ಭಾರತೀಯರನ್ನು ಇಸ್ರೇಲ್​ನಿಂದ ಯಶಸ್ವಿಯಾಗಿ ಕರೆತರಲಾಗಿದೆ. ಜೊತೆಗೆ ಇಸ್ರೇಲ್​​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಹೇಳಿದರು. ಇಸ್ರೇಲಿನಿಂದ ಆಗಮಿಸಿದ ವಿಮಾನದಲ್ಲಿ 143 ಭಾರತೀಯರ ಜೊತೆಗೆ ಇಬ್ಬರು ನೇಪಾಳಿ ಪ್ರಜೆಗಳು ಇದ್ದರು.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ, ಆಪರೇಷನ್​ ಅಜಯ್​ ಕಾರ್ಯಾಚರಣೆಯಲ್ಲಿ ಭಾರತೀಯ ನಾಗರೀಕರನ್ನು ಒಳಗೊಂಡ ಆರನೇ ವಿಮಾನವು ಇಸ್ರೇಲ್​​ನಿಂದ ದೆಹಲಿಗೆ ಬಂದು ತಲುಪಿದೆ. ಇದರಲ್ಲಿ ಒಟ್ಟು 143 ಭಾರತೀಯರು ಮತ್ತು 2 ನೇಪಾಳಿ ಪ್ರಜೆಗಳಿದ್ದರು. ದೆಹಲಿಗೆ ತಲುಪಿದ ಭಾರತೀಯರನ್ನು ಕೇಂದ್ರ ಸಚಿವ ಫಗ್ಗಾನ್​ ಸಿಂಗ್​ ಬರಮಾಡಿಕೊಂಡರು ಎಂದು ಹೇಳಿದ್ದಾರೆ.

ಆಪರೇಷನ್​ ಅಜಯ್​ ಕಾರ್ಯಾಚರಣೆ : ಇಸ್ರೇಲ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ಆಪರೇಷನ್​ ಅಜಯ್​ ಕಾರ್ಯಾಚರಣೆ ನಡೆಸುತ್ತಿದೆ. ಇದರ ಭಾಗವಾಗಿ ಭಾನುವಾರ ತಡರಾತ್ರಿ 143 ಭಾರತೀಯರನ್ನು ಒಳಗೊಂಡ ವಿಮಾನವು ದೆಹಲಿಗೆ ತಲುಪಿದೆ. ಇದಕ್ಕೂ ಮೊದಲು ಮಂಗಳವಾರ ರಾತ್ರಿ 286 ಭಾರತೀಯ ನಾಗರಿಕರನ್ನು ಒಳಗೊಂಡ ಐದನೇ ವಿಮಾನವು ದೆಹಲಿಗೆ ತಲುಪಿತ್ತು. ಇದರಲ್ಲಿ 286 ಭಾರತೀಯರು ಮತ್ತು 18 ನೇಪಾಳದ ಪ್ರಜೆಗಳಿದ್ದರು.

ಆಪರೇಷನ್​ ಅಜಯ್​ ಅಡಿ ಇದುವರೆಗೆ 1200 ಭಾರತೀಯರನ್ನು ಮತ್ತು 20 ನೇಪಾಳದ ನಾಗರಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಇಸ್ರೇಲಿನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಭಾರತವು ಸರ್ಕಾರವು ಪೂರ್ಣಪ್ರಮಾಣದಲ್ಲಿ ಪ್ರಯತ್ನಿಸುತ್ತಿದೆ. ಭಾರತೀಯ ಪ್ರಜೆಗಳಿಗೆ ಏನಾದರೂ ತೊಂದರೆ ಉಂಟಾದಲ್ಲಿ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸುವಂತೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : Operation Ajay: ಇಸ್ರೇಲ್​ನಿಂದ 274 ಭಾರತೀಯರನ್ನು ಹೊತ್ತು ಸ್ವದೇಶದತ್ತ ಬರುತ್ತಿರುವ ನಾಲ್ಕನೇ ವಿಮಾನ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.