ETV Bharat / bharat

ಗುರುವಾಯೂರು ದೇವಸ್ವಂನಲ್ಲಿ ಅಡುಗೆ ಹುದ್ದೆಗೆ ಅರ್ಜಿ ಆಹ್ವಾನ: ಬ್ರಾಹ್ಮಣರಿಗೆ ಮಾತ್ರವೇ ಅವಕಾಶ - ಭುಗಿಲೆದ್ದ ವಿವಾದ

author img

By ETV Bharat Karnataka Team

Published : Oct 14, 2023, 10:02 AM IST

ಗುರುವಾಯೂರಿನಲ್ಲಿರುವ ಪ್ರಸಿದ್ಧ ಶ್ರೀಕೃಷ್ಣ ದೇವಸ್ಥಾನವನ್ನು ನಡೆಸುತ್ತಿರುವ ದೇವಸ್ವಂ ನೇಮಕಾತಿ ಮಂಡಳಿಯು ಅಡುಗೆ ಮಾಡುವವರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಅದರಲ್ಲಿ ಬ್ರಾಹ್ಮಣರು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

guruvayoor devasom
ಗುರುವಾಯೂರು ದೇವಸ್ವಂ

ತಿರುವನಂತಪುರಂ (ಕೇರಳ) : ಪರಿಶಿಷ್ಟ ಜಾತಿ ಮತ್ತು ಸಮುದಾಯಕ್ಕೆ ಸೇರಿದ ಕೇರಳದ ಎಸ್‌ಸಿ/ಎಸ್‌ಟಿ ಕಲ್ಯಾಣ ಸಚಿವ ಕೆ.ರಾಧಾಕೃಷ್ಣನ್ ಅವರು ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ತಾರತಮ್ಯ ಎದುರಿಸಿದ ಘಟನೆ ಮಾಸುವ ಒಂದು ತಿಂಗಳ ಮುನ್ನವೇ ಗುರುವಾಯೂರ್ ದೇವಸ್ವಂ ಮಂಡಳಿಯಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದ್ದು, ಗುರುವಾಯೂರಿನಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಅಡುಗೆ ಮಾಡುವವರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಬ್ರಾಹ್ಮಣರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಎಂದು ತಿಳಿಸಲಾಗಿದೆ.

ಈ ಕುರಿತು, ಕೇರಳ ದೇವಸ್ವಂ ನೇಮಕಾತಿ ಮಂಡಳಿ ಅಧಿಸೂಚನೆ ಹೊರಡಿಸಿದ್ದು, ದೇವಸ್ಥಾನದ ಅಡುಗೆಯ ಹುದ್ದೆಗೆ ಬ್ರಾಹ್ಮಣ ಪುರುಷರು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಅಷ್ಟೇ ಅಲ್ಲ, ಅದರಲ್ಲೂ ಮಲಯಾಳಂ ಓದಲು ಮತ್ತು ಬರೆಯಲು ಬಲ್ಲ ಸಮರ್ಥ ಪುರುಷ ಹಾಗೂ ಹಿಂದೂ ಬ್ರಾಹ್ಮಣರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ, ವಿಕಲಚೇತನರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

1983 ರಲ್ಲಿ ಸ್ಥಾಪಿಸಲಾದ ಗುರುವಾಯೂರ್ ದೇವಸ್ವಂ ಬೋರ್ಡ್ ನೌಕರರ ನಿಯಂತ್ರಣ ನಿಯಮಗಳ ಪ್ರಕಾರ ನೇಮಕಾತಿಗಳನ್ನು ಮಾಡಲಾಗುತ್ತಿದೆ ಎಂದು ದೇವಸ್ವಂ ಮಂಡಳಿ ಅಧಿಕಾರಿಗಳು ಅಧಿಸೂಚನೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿ 2015 ಮತ್ತು 2016 ರಲ್ಲಿ ಮಾಡಿದ ಸಣ್ಣಪುಟ್ಟ ತಿದ್ದುಪಡಿಗಳನ್ನು ಹೊರತುಪಡಿಸಿ, ಇದುವರೆಗೆ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ.

ಇದನ್ನೂ ಓದಿ : ತಿರುವಾಂಕೂರು ದೇವಸ್ವಂನ 1,240 ದೇಗುಲಗಳಲ್ಲಿ RSS​ ಚಟುವಟಿಕೆ ನಿಷೇಧ

ಕೇರಳ ದೇವಸ್ವಂ ನೇಮಕಾತಿ ಮಂಡಳಿಯು ವಿವಿಧ ದೇವಸ್ವಂಗಳಿಗೆ ಉದ್ಯೋಗಿಗಳನ್ನು ಆಯ್ಕೆ ಮಾಡುವ ಉನ್ನತ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಖಾಸಗಿಯಾಗಿ ನಡೆಸಲ್ಪಡುವ ದೇವಾಲಯಗಳನ್ನು ಹೊರತುಪಡಿಸಿ ಎಲ್ಲ ದೇವಾಲಯಗಳು, ವಿವಿಧ ದೇವಸ್ವಂ ಇದರ ಅಡಿ ಬರುತ್ತವೆ. ಇದೀಗ, ಗುರುವಾಯೂರಿನಲ್ಲಿರುವ ಶ್ರೀಕೃಷ್ಣ ದೇವಸ್ಥಾನದ ಹುದ್ದೆಗೆ ಅರ್ಜಿ ಕರೆದಿದ್ದು, ನೋಟಿಸ್‌ನಲ್ಲಿ ಬ್ರಾಹ್ಮಣರು ಮಾತ್ರ ಅರ್ಜಿ ಸಲ್ಲಿಸಬಹುದು, ವಿಕಲಾಂಗ ಬ್ರಾಹ್ಮಣರು ಸಹ ಅರ್ಜಿ ಸಲ್ಲಿಸಬಾರದು ಎಂಬ ಷರತ್ತು ವಿಧಿಸಲಾಗಿದೆ. ವೇತನ ಶ್ರೇಣಿ 23,000 ರೂ. ಯಿಂದ 53,000 ರೂ. ಎಂದು ತಿಳಿಸಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ಈ ಮೂಲಕ ಮತ್ತೆ ವಿವಾದ ಭುಗಿಲೆದ್ದಿದೆ.

ಇನ್ನು ಈ ಕುರಿತು ದೇವಾಲಯದ ರಾಧಾಕೃಷ್ಣನ್ ಅವರನ್ನು ಕೇಳಿದ್ರೆ, ಜಾಹೀರಾತಿನ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಪ್ರಗತಿಪರ ರಾಜ್ಯ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿರುವ ರಾಜ್ಯದಲ್ಲಿ ಹೀಗೆ ಉದ್ಯೋಗ ವಿಚಾರದಲ್ಲಿ ಒಂದೇ ಸಮುದಾಯಕ್ಕೆ ಆದ್ಯತೆ ನೀಡಿರುವುದು ದೇಶಾದ್ಯಂತ ಚರ್ಚೆಗೂ ವೇದಿಕೆ ಒದಗಿಸಿಕೊಟ್ಟಂತಾಗಿದೆ.

ಇದನ್ನೂ ಓದಿ : ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಶಬರಿಮಲೆ ಅಯ್ಯಪ್ಪನಿಗೆ ನೈವೇದ್ಯ ಸಲ್ಲಿಸುವ ಅವಕಾಶ : ಇ - ಕಾಣಿಕಾ ಸೌಲಭ್ಯ

ತಿರುವನಂತಪುರಂ (ಕೇರಳ) : ಪರಿಶಿಷ್ಟ ಜಾತಿ ಮತ್ತು ಸಮುದಾಯಕ್ಕೆ ಸೇರಿದ ಕೇರಳದ ಎಸ್‌ಸಿ/ಎಸ್‌ಟಿ ಕಲ್ಯಾಣ ಸಚಿವ ಕೆ.ರಾಧಾಕೃಷ್ಣನ್ ಅವರು ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ತಾರತಮ್ಯ ಎದುರಿಸಿದ ಘಟನೆ ಮಾಸುವ ಒಂದು ತಿಂಗಳ ಮುನ್ನವೇ ಗುರುವಾಯೂರ್ ದೇವಸ್ವಂ ಮಂಡಳಿಯಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದ್ದು, ಗುರುವಾಯೂರಿನಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಅಡುಗೆ ಮಾಡುವವರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಬ್ರಾಹ್ಮಣರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಎಂದು ತಿಳಿಸಲಾಗಿದೆ.

ಈ ಕುರಿತು, ಕೇರಳ ದೇವಸ್ವಂ ನೇಮಕಾತಿ ಮಂಡಳಿ ಅಧಿಸೂಚನೆ ಹೊರಡಿಸಿದ್ದು, ದೇವಸ್ಥಾನದ ಅಡುಗೆಯ ಹುದ್ದೆಗೆ ಬ್ರಾಹ್ಮಣ ಪುರುಷರು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಅಷ್ಟೇ ಅಲ್ಲ, ಅದರಲ್ಲೂ ಮಲಯಾಳಂ ಓದಲು ಮತ್ತು ಬರೆಯಲು ಬಲ್ಲ ಸಮರ್ಥ ಪುರುಷ ಹಾಗೂ ಹಿಂದೂ ಬ್ರಾಹ್ಮಣರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ, ವಿಕಲಚೇತನರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

1983 ರಲ್ಲಿ ಸ್ಥಾಪಿಸಲಾದ ಗುರುವಾಯೂರ್ ದೇವಸ್ವಂ ಬೋರ್ಡ್ ನೌಕರರ ನಿಯಂತ್ರಣ ನಿಯಮಗಳ ಪ್ರಕಾರ ನೇಮಕಾತಿಗಳನ್ನು ಮಾಡಲಾಗುತ್ತಿದೆ ಎಂದು ದೇವಸ್ವಂ ಮಂಡಳಿ ಅಧಿಕಾರಿಗಳು ಅಧಿಸೂಚನೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿ 2015 ಮತ್ತು 2016 ರಲ್ಲಿ ಮಾಡಿದ ಸಣ್ಣಪುಟ್ಟ ತಿದ್ದುಪಡಿಗಳನ್ನು ಹೊರತುಪಡಿಸಿ, ಇದುವರೆಗೆ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ.

ಇದನ್ನೂ ಓದಿ : ತಿರುವಾಂಕೂರು ದೇವಸ್ವಂನ 1,240 ದೇಗುಲಗಳಲ್ಲಿ RSS​ ಚಟುವಟಿಕೆ ನಿಷೇಧ

ಕೇರಳ ದೇವಸ್ವಂ ನೇಮಕಾತಿ ಮಂಡಳಿಯು ವಿವಿಧ ದೇವಸ್ವಂಗಳಿಗೆ ಉದ್ಯೋಗಿಗಳನ್ನು ಆಯ್ಕೆ ಮಾಡುವ ಉನ್ನತ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಖಾಸಗಿಯಾಗಿ ನಡೆಸಲ್ಪಡುವ ದೇವಾಲಯಗಳನ್ನು ಹೊರತುಪಡಿಸಿ ಎಲ್ಲ ದೇವಾಲಯಗಳು, ವಿವಿಧ ದೇವಸ್ವಂ ಇದರ ಅಡಿ ಬರುತ್ತವೆ. ಇದೀಗ, ಗುರುವಾಯೂರಿನಲ್ಲಿರುವ ಶ್ರೀಕೃಷ್ಣ ದೇವಸ್ಥಾನದ ಹುದ್ದೆಗೆ ಅರ್ಜಿ ಕರೆದಿದ್ದು, ನೋಟಿಸ್‌ನಲ್ಲಿ ಬ್ರಾಹ್ಮಣರು ಮಾತ್ರ ಅರ್ಜಿ ಸಲ್ಲಿಸಬಹುದು, ವಿಕಲಾಂಗ ಬ್ರಾಹ್ಮಣರು ಸಹ ಅರ್ಜಿ ಸಲ್ಲಿಸಬಾರದು ಎಂಬ ಷರತ್ತು ವಿಧಿಸಲಾಗಿದೆ. ವೇತನ ಶ್ರೇಣಿ 23,000 ರೂ. ಯಿಂದ 53,000 ರೂ. ಎಂದು ತಿಳಿಸಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ಈ ಮೂಲಕ ಮತ್ತೆ ವಿವಾದ ಭುಗಿಲೆದ್ದಿದೆ.

ಇನ್ನು ಈ ಕುರಿತು ದೇವಾಲಯದ ರಾಧಾಕೃಷ್ಣನ್ ಅವರನ್ನು ಕೇಳಿದ್ರೆ, ಜಾಹೀರಾತಿನ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಪ್ರಗತಿಪರ ರಾಜ್ಯ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿರುವ ರಾಜ್ಯದಲ್ಲಿ ಹೀಗೆ ಉದ್ಯೋಗ ವಿಚಾರದಲ್ಲಿ ಒಂದೇ ಸಮುದಾಯಕ್ಕೆ ಆದ್ಯತೆ ನೀಡಿರುವುದು ದೇಶಾದ್ಯಂತ ಚರ್ಚೆಗೂ ವೇದಿಕೆ ಒದಗಿಸಿಕೊಟ್ಟಂತಾಗಿದೆ.

ಇದನ್ನೂ ಓದಿ : ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಶಬರಿಮಲೆ ಅಯ್ಯಪ್ಪನಿಗೆ ನೈವೇದ್ಯ ಸಲ್ಲಿಸುವ ಅವಕಾಶ : ಇ - ಕಾಣಿಕಾ ಸೌಲಭ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.