ETV Bharat / bharat

ಶಬರಿಮಲೆ ಪ್ರಸಾದಕ್ಕೆ ಆನ್​ಲೈನ್​ ಬುಕ್ಕಿಂಗ್​​ ಶುರು

ಶಬರಿಮಲೆ ಪ್ರಸಾದಕ್ಕೆ ನವೆಂಬರ್​ 7 ರಿಂದ ಆನ್​ಲೈನ್​ ಬುಕ್ಕಿಂಗ್ ಆರಂಭವಾಗಿದ್ದು, ನ. 16 ರಿಂದ ಪ್ರಸಾದದ ಕಿಟ್‌ಗಳನ್ನು ಭಕ್ತರ ಮನೆಗಳಿಗೆ ಕಳುಹಿಸಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ.

author img

By

Published : Nov 9, 2020, 5:27 PM IST

Updated : Nov 9, 2020, 5:37 PM IST

Online booking for Sabarimala Prasad started
ಶಬರಿಮಲೆ

ತಿರುವನಂತಪುರಂ (ಕೇರಳ): ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆ ಪ್ರಸಾದವನ್ನು ಆನ್​ಲೈನ್​ನಲ್ಲಿ ​ಕಾಯ್ದಿರಿಸಬಹುದಾಗಿದೆ. ನವೆಂಬರ್​ 7 ರಿಂದ ಆನ್​ಲೈನ್​ ಬುಕ್ಕಿಂಗ್ ಆರಂಭವಾಗಿದ್ದು, ಅಂಚೆ ಮೂಲಕ ಪ್ರಸಾದದ ಕಿಟ್​ ಮನೆಗಳಿಗೆ ತಲುಪುತ್ತದೆ.

ಭಕ್ತರು ದೇಶದ ಯಾವುದೇ ಅಂಚೆ ಕಚೇರಿಯಿಂದ ಇ-ಪಾವತಿ ಮೂಲಕ ಪ್ರಸಾದವನ್ನು ಕಾಯ್ದಿರಿಸಬಹುದು. 450 ರೂ. ಬೆಲೆಯ ಪ್ರಸಾದದ ಕಿಟ್​ನಲ್ಲಿ ಅರವಾಣ, ತುಪ್ಪ, ಅರಿಶಿಣ, ಕುಂಕುಮ, ವಿಭೂತಿ ಇರಲಿದೆ.

ಬುಕ್ ಮಾಡಿದವರಿಗೆ ನವೆಂಬರ್ 16 ರಿಂದ ಕಿಟ್‌ಗಳನ್ನು ಕಳುಹಿಸಲು ಪ್ರಾರಂಭಿಸಲಾಗುವುದು. ಮೂರು ದಿನಗಳಲ್ಲಿ ಪ್ರಸಾದ ಭಕ್ತರ ಮನೆ ತಲುಪಲಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ.

ಇನ್ನು ನವೆಂಬರ್​​ 15 ರಿಂದ ಜನವರಿ 20ರ ವರೆಗೆ ಶಬರಿಮಲೆ ತೀರ್ಥಯಾತ್ರೆ ನಡೆಯಲಿದೆ. ಆದರೆ ಕೋವಿಡ್​ ಹಿನ್ನೆಲೆ ಈ ಬಾರಿ ಸೀಮಿತ ಸಂಖ್ಯೆಯ ಭಕ್ತರು, ಯಾತ್ರಾರ್ಥಿಗಳಿಗೆ ಅವಕಾಶ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.

ತಿರುವನಂತಪುರಂ (ಕೇರಳ): ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆ ಪ್ರಸಾದವನ್ನು ಆನ್​ಲೈನ್​ನಲ್ಲಿ ​ಕಾಯ್ದಿರಿಸಬಹುದಾಗಿದೆ. ನವೆಂಬರ್​ 7 ರಿಂದ ಆನ್​ಲೈನ್​ ಬುಕ್ಕಿಂಗ್ ಆರಂಭವಾಗಿದ್ದು, ಅಂಚೆ ಮೂಲಕ ಪ್ರಸಾದದ ಕಿಟ್​ ಮನೆಗಳಿಗೆ ತಲುಪುತ್ತದೆ.

ಭಕ್ತರು ದೇಶದ ಯಾವುದೇ ಅಂಚೆ ಕಚೇರಿಯಿಂದ ಇ-ಪಾವತಿ ಮೂಲಕ ಪ್ರಸಾದವನ್ನು ಕಾಯ್ದಿರಿಸಬಹುದು. 450 ರೂ. ಬೆಲೆಯ ಪ್ರಸಾದದ ಕಿಟ್​ನಲ್ಲಿ ಅರವಾಣ, ತುಪ್ಪ, ಅರಿಶಿಣ, ಕುಂಕುಮ, ವಿಭೂತಿ ಇರಲಿದೆ.

ಬುಕ್ ಮಾಡಿದವರಿಗೆ ನವೆಂಬರ್ 16 ರಿಂದ ಕಿಟ್‌ಗಳನ್ನು ಕಳುಹಿಸಲು ಪ್ರಾರಂಭಿಸಲಾಗುವುದು. ಮೂರು ದಿನಗಳಲ್ಲಿ ಪ್ರಸಾದ ಭಕ್ತರ ಮನೆ ತಲುಪಲಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ.

ಇನ್ನು ನವೆಂಬರ್​​ 15 ರಿಂದ ಜನವರಿ 20ರ ವರೆಗೆ ಶಬರಿಮಲೆ ತೀರ್ಥಯಾತ್ರೆ ನಡೆಯಲಿದೆ. ಆದರೆ ಕೋವಿಡ್​ ಹಿನ್ನೆಲೆ ಈ ಬಾರಿ ಸೀಮಿತ ಸಂಖ್ಯೆಯ ಭಕ್ತರು, ಯಾತ್ರಾರ್ಥಿಗಳಿಗೆ ಅವಕಾಶ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.

Last Updated : Nov 9, 2020, 5:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.