ETV Bharat / bharat

ತಂದೆಯ ನಿರ್ಲಕ್ಷ್ಯಕ್ಕೆ ಕಾರಿನಡಿ ಸಿಲುಕಿ ದಾರುಣ ಅಂತ್ಯ ಕಂಡ ಪುಟಾಣಿ! ವಿಡಿಯೋ ನೋಡಿ

author img

By

Published : Nov 22, 2021, 4:02 PM IST

ಮಗುವಿನ ತಂದೆ ಲಕ್ಷ್ಮಣ್ ಅಪಾರ್ಟ್​ಮೆಂಟ್​​​ ಮುಂದೆ ನಿಲ್ಲಿಸಿದ್ದ ಕಾರನ್ನು ಒಳಗಡೆ ಪಾರ್ಕ್​ ಮಾಡಲು ತೆಗೆಯಲು ಮುಂದಾದರು. ಈ ವೇಳೆ ಮಗು ಕಾರಿನ ಬಳಿ ನಡೆದುಕೊಂಡು ಹೋಗಿದೆ. ಇದನ್ನು ಗಮನಿಸದ ಲಕ್ಷ್ಮಣ್​​ ದಿಢೀರ್​ ಕಾರನ್ನು ಮುಂದಕ್ಕೆ ತೆಗೆದರು. ಪರಿಣಾಮ, ಪುಟಾಣಿ ಕಾರಿನ ಚಕ್ರದಡಿ ಸಿಲುಕಿಕೊಂಡಿತು.

one half year old boy
one half year old boy

ಹೈದರಾಬಾದ್​​(ತೆಲಂಗಾಣ): ಕೆಲವೊಮ್ಮೆ ನಡೆಯುವ ಸಣ್ಣ ನಿರ್ಲಕ್ಷ್ಯವೂ ಕೂಡ ಇಡೀ ಕುಟುಂಬವನ್ನೇ ಶೋಕ ಸಾಗರದಲ್ಲಿ ಮುಳುಗಿಸಬಲ್ಲದು. ಇದಕ್ಕೊಂದು ಜ್ವಲಂತ ನಿದರ್ಶನ ಹೈದರಾಬಾದ್​​ನಲ್ಲಿ ನಡೆದಿರುವ ಈ ದುರ್ಘಟನೆ.

ಅಪಾರ್ಟ್​​ಮೆಂಟ್​​ ಸಮುಚ್ಛಯದ ಮುಂದೆ ನಿಲ್ಲಿಸಿದ್ದ ಕಾರನ್ನು ಪಾರ್ಕ್​​​ ಮಾಡಲು ತೆಗೆಯುತ್ತಿದ್ದ ವೇಳೆ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ಹೈದರಾಬಾದ್​​ನ ಎಲ್.​ಬಿ.ನಗರದ ಮನ್ಸೂರಾಬಾದ್​​ನಲ್ಲಿ ಈ ಘಟನೆ ನಡೆದಿದೆ. ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ವಿವರ:

ಸಂಗಾರೆಡ್ಡಿ ಜಿಲ್ಲೆಯ ಲಕ್ಷ್ಮಣ್ ಹಾಗು ರಾಣಿ ದಂಪತಿಯ ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟಿದೆ. ಕಳೆದೊಂದು ವರ್ಷದ ಹಿಂದೆ ಕುಟುಂಬಸಮೇತ ನಗರಕ್ಕೆ ವಲಸೆ ಬಂದು ಇವರು ವಾಸವಾಗಿದ್ದರು. ಲಕ್ಷ್ಮಣ್ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದಾರೆ. ಪತ್ನಿಗೆ ಎಲ್.​ಬಿ.ನಗರದ ಮನ್ಸೂರಾಬಾದ್​​ನ ಅಪಾರ್ಟ್​ಮೆಂಟ್​​​ನಲ್ಲಿ ಕೆಲಸ. ಇಂದು ಬೆಳಗ್ಗೆ ಲಕ್ಷ್ಮಣ್ ಅಪಾರ್ಟ್​ಮೆಂಟ್​​​ ಮುಂದೆ ನಿಲ್ಲಿಸಿದ್ದ ಕಾರನ್ನು ಒಳಗಡೆ ಪಾರ್ಕ್​ ಮಾಡಲು ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಮಗು ಕಾರಿನ ಬಳಿ ನಡೆದುಕೊಂಡು ಹೋಗಿದೆ. ಇದನ್ನು ಗಮನಿಸದ ಲಕ್ಷ್ಮಣ್​​ ದಿಢೀರ್​ ಕಾರನ್ನು ಮುಂದಕ್ಕೆ ತೆಗೆದರು. ಪರಿಣಾಮ, ಪುಟಾಣಿ ಕಾರಿನ ಚಕ್ರದಡಿ ಸಿಲುಕಿಕೊಂಡಿತು.

ಇದನ್ನೂ ಓದಿ: ಪ್ರಾಣ ತೆಗೆಯಲು ಅಲ್ಲ, ಪ್ರಾಣ ರಕ್ಷಣೆಗೆ ಕಾರು ಅಪಘಾತ ಮಾಡಿಸಿದ ಚಾಲಕ: ವಿಡಿಯೋ ನೋಡಿ

ಈ ವೇಳೆ, ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟರಲ್ಲೇ ಮಗು ಸಾವನ್ನಪ್ಪಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೈದರಾಬಾದ್​​(ತೆಲಂಗಾಣ): ಕೆಲವೊಮ್ಮೆ ನಡೆಯುವ ಸಣ್ಣ ನಿರ್ಲಕ್ಷ್ಯವೂ ಕೂಡ ಇಡೀ ಕುಟುಂಬವನ್ನೇ ಶೋಕ ಸಾಗರದಲ್ಲಿ ಮುಳುಗಿಸಬಲ್ಲದು. ಇದಕ್ಕೊಂದು ಜ್ವಲಂತ ನಿದರ್ಶನ ಹೈದರಾಬಾದ್​​ನಲ್ಲಿ ನಡೆದಿರುವ ಈ ದುರ್ಘಟನೆ.

ಅಪಾರ್ಟ್​​ಮೆಂಟ್​​ ಸಮುಚ್ಛಯದ ಮುಂದೆ ನಿಲ್ಲಿಸಿದ್ದ ಕಾರನ್ನು ಪಾರ್ಕ್​​​ ಮಾಡಲು ತೆಗೆಯುತ್ತಿದ್ದ ವೇಳೆ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ಹೈದರಾಬಾದ್​​ನ ಎಲ್.​ಬಿ.ನಗರದ ಮನ್ಸೂರಾಬಾದ್​​ನಲ್ಲಿ ಈ ಘಟನೆ ನಡೆದಿದೆ. ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ವಿವರ:

ಸಂಗಾರೆಡ್ಡಿ ಜಿಲ್ಲೆಯ ಲಕ್ಷ್ಮಣ್ ಹಾಗು ರಾಣಿ ದಂಪತಿಯ ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟಿದೆ. ಕಳೆದೊಂದು ವರ್ಷದ ಹಿಂದೆ ಕುಟುಂಬಸಮೇತ ನಗರಕ್ಕೆ ವಲಸೆ ಬಂದು ಇವರು ವಾಸವಾಗಿದ್ದರು. ಲಕ್ಷ್ಮಣ್ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದಾರೆ. ಪತ್ನಿಗೆ ಎಲ್.​ಬಿ.ನಗರದ ಮನ್ಸೂರಾಬಾದ್​​ನ ಅಪಾರ್ಟ್​ಮೆಂಟ್​​​ನಲ್ಲಿ ಕೆಲಸ. ಇಂದು ಬೆಳಗ್ಗೆ ಲಕ್ಷ್ಮಣ್ ಅಪಾರ್ಟ್​ಮೆಂಟ್​​​ ಮುಂದೆ ನಿಲ್ಲಿಸಿದ್ದ ಕಾರನ್ನು ಒಳಗಡೆ ಪಾರ್ಕ್​ ಮಾಡಲು ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಮಗು ಕಾರಿನ ಬಳಿ ನಡೆದುಕೊಂಡು ಹೋಗಿದೆ. ಇದನ್ನು ಗಮನಿಸದ ಲಕ್ಷ್ಮಣ್​​ ದಿಢೀರ್​ ಕಾರನ್ನು ಮುಂದಕ್ಕೆ ತೆಗೆದರು. ಪರಿಣಾಮ, ಪುಟಾಣಿ ಕಾರಿನ ಚಕ್ರದಡಿ ಸಿಲುಕಿಕೊಂಡಿತು.

ಇದನ್ನೂ ಓದಿ: ಪ್ರಾಣ ತೆಗೆಯಲು ಅಲ್ಲ, ಪ್ರಾಣ ರಕ್ಷಣೆಗೆ ಕಾರು ಅಪಘಾತ ಮಾಡಿಸಿದ ಚಾಲಕ: ವಿಡಿಯೋ ನೋಡಿ

ಈ ವೇಳೆ, ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟರಲ್ಲೇ ಮಗು ಸಾವನ್ನಪ್ಪಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.