ETV Bharat / bharat

SBI ಬ್ಯಾಂಕ್​ ಕಳ್ಳತನದ ವೇಳೆ ಸಿಬ್ಬಂದಿ ಸಾವು, ಮತ್ತೋರ್ವನಿಗೆ ಗಾಯ, 8 ಗಂಟೆಯಲ್ಲಿ ಪ್ರಕರಣ ಭೇದಿಸಿದ ಖಾಕಿ!

author img

By

Published : Dec 30, 2021, 3:45 PM IST

ಎಸ್​ಬಿಐ ಬ್ಯಾಂಕ್​​ನೊಳಗೆ ನುಗ್ಗಿ ಹಣ ದೋಚಿ ಪರಾರಿಯಾಗಿದ್ದ ಇಬ್ಬರು ಮುಸುಕುದಾರಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೇವಲ 8 ಗಂಟೆಯಲ್ಲೇ ಪ್ರಕರಣ ಭೇದಿಸಿದ್ದಾರೆ.

SBI Dahisar branch robbery
SBI Dahisar branch robbery

ಮುಂಬೈ(ಮಹಾರಾಷ್ಟ್ರ): ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಮುಂಬೈ ಶಾಖೆಯಲ್ಲಿ ದರೋಡೆ ಮಾಡುವ ಉದ್ದೇಶದಿಂದ ನುಗ್ಗಿದ್ದ ಇಬ್ಬರು ಮುಸುಕುದಾರಿಗಳು ಗುಂಡು ಹಾರಿಸಿ, ಓರ್ವ ಉದ್ಯೋಗಿಯನ್ನ ಕೊಲೆ ಮಾಡಿ, ಎರಡೂವರೆ ಲಕ್ಷ ರೂ. ದೋಚಿ ಪರಾರಿಯಾಗಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರು ಕೇವಲ 8 ಗಂಟೆಯಲ್ಲಿ ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಎಸ್​ಬಿಐ ಬ್ಯಾಂಕ್​ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು

ಮುಂಬೈನ ದಹಿಸರ್​ನ ಎಸ್​​ಬಿಐ ಬ್ಯಾಂಕ್​​​ನಲ್ಲಿ ದರೋಡೆ ಮಾಡಿದ್ದ ಆರೋಪಿಗಳು ಗುಂಡು ಹಾರಿಸಿದ್ದರಿಂದ ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್​​ನೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಶೋಧ ನಡೆಸಿದ್ದರು.

SBI Dahisar branch robbery
SBI ಬ್ಯಾಂಕ್​ನಲ್ಲಿ ಹಣ ದೋಚಿ ಪರಾರಿಯಾಗಿದ್ದ ಮುಸುಕುದಾರಿಗಳು

ಪ್ರಕರಣ ಭೇದಿಸುವ ಉದ್ದೇಶದಿಂದ ಹೆಚ್ಚುವರಿ ಪೊಲೀಸ್​ ಆಯುಕ್ತರ ನೇತೃತ್ವದಲ್ಲಿ 8 ತಂಡ ರಚನೆ ಮಾಡಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಸಹಾಯದಿಂದ ಇದೀಗ ಅವರನ್ನ ಬಂಧನ ಮಾಡಲಾಗಿದ್ದು, ವಿಚಾರಣೆಗೊಳಪಡಿಸಲಾಗಿದೆ.

ಇದನ್ನೂ ಓದಿರಿ: ನಿತ್ಯ 633 ಕೆಜಿ ಅಕ್ರಮ ಗಾಂಜಾ ವಶ.. 2021ರಲ್ಲಿ ₹231.17 ಕೋಟಿ ಮೌಲ್ಯದ ಮಾದಕ ಜಪ್ತಿ

ಬ್ಯಾಂಕ್​ನೊಳಗೆ ನುಗ್ಗಿದ್ದ ವೇಳೆ ಬ್ಯಾಂಕ್​ ಸಿಬ್ಬಂದಿ ಸಂದೇಶ್​ ಗೋಮನೆ ಹಣ ತುಂಬಿದ್ದ ಬ್ಯಾಗ್​ ನೀಡಲು ನಿರಾಕರಿಸಿದ್ದರಿಂದ ಆತನ ಮೇಲೆ ಗುಂಡು ಹಾರಿಸಲಾಗಿತ್ತು. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ತದನಂತರ ಹಣ ದೋಚಿ ಪರಾರಿಯಾಗಿದ್ದರು.

ಆರೋಪಿಗಳ ಬಂಧನಕ್ಕೆ ಕಾರಣವಾಯ್ತು ಬಿಟ್ಟು ಹೋದ ಚಪ್ಪಲಿ

ಕಳ್ಳತನ ಮಾಡಲು ಬ್ಯಾಂಕ್​​ನೊಳಗೆ ನುಗ್ಗಿರುವ ದುಷ್ಕರ್ಮಿಗಳ ಪೈಕಿ ಓರ್ವ ಬ್ಯಾಂಕ್​​ನೊಳಗೆ ಒಂದು ಚಪ್ಪಲಿ ಬಿಟ್ಟು ಹೋಗಿದ್ದನು. ಅದರ ಸಹಾಯದಿಂದಲೇ ಪೊಲೀಸರು ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ಶೋಧಕಾರ್ಯಕ್ಕಾಗಿ ಶ್ವಾನದಳದ ಸಹಾಯ ಪಡೆದುಕೊಳ್ಳಲಾಗಿತ್ತು ಎಂದಿದ್ದಾರೆ.

ಮುಂಬೈ(ಮಹಾರಾಷ್ಟ್ರ): ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಮುಂಬೈ ಶಾಖೆಯಲ್ಲಿ ದರೋಡೆ ಮಾಡುವ ಉದ್ದೇಶದಿಂದ ನುಗ್ಗಿದ್ದ ಇಬ್ಬರು ಮುಸುಕುದಾರಿಗಳು ಗುಂಡು ಹಾರಿಸಿ, ಓರ್ವ ಉದ್ಯೋಗಿಯನ್ನ ಕೊಲೆ ಮಾಡಿ, ಎರಡೂವರೆ ಲಕ್ಷ ರೂ. ದೋಚಿ ಪರಾರಿಯಾಗಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರು ಕೇವಲ 8 ಗಂಟೆಯಲ್ಲಿ ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಎಸ್​ಬಿಐ ಬ್ಯಾಂಕ್​ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು

ಮುಂಬೈನ ದಹಿಸರ್​ನ ಎಸ್​​ಬಿಐ ಬ್ಯಾಂಕ್​​​ನಲ್ಲಿ ದರೋಡೆ ಮಾಡಿದ್ದ ಆರೋಪಿಗಳು ಗುಂಡು ಹಾರಿಸಿದ್ದರಿಂದ ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್​​ನೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಶೋಧ ನಡೆಸಿದ್ದರು.

SBI Dahisar branch robbery
SBI ಬ್ಯಾಂಕ್​ನಲ್ಲಿ ಹಣ ದೋಚಿ ಪರಾರಿಯಾಗಿದ್ದ ಮುಸುಕುದಾರಿಗಳು

ಪ್ರಕರಣ ಭೇದಿಸುವ ಉದ್ದೇಶದಿಂದ ಹೆಚ್ಚುವರಿ ಪೊಲೀಸ್​ ಆಯುಕ್ತರ ನೇತೃತ್ವದಲ್ಲಿ 8 ತಂಡ ರಚನೆ ಮಾಡಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಸಹಾಯದಿಂದ ಇದೀಗ ಅವರನ್ನ ಬಂಧನ ಮಾಡಲಾಗಿದ್ದು, ವಿಚಾರಣೆಗೊಳಪಡಿಸಲಾಗಿದೆ.

ಇದನ್ನೂ ಓದಿರಿ: ನಿತ್ಯ 633 ಕೆಜಿ ಅಕ್ರಮ ಗಾಂಜಾ ವಶ.. 2021ರಲ್ಲಿ ₹231.17 ಕೋಟಿ ಮೌಲ್ಯದ ಮಾದಕ ಜಪ್ತಿ

ಬ್ಯಾಂಕ್​ನೊಳಗೆ ನುಗ್ಗಿದ್ದ ವೇಳೆ ಬ್ಯಾಂಕ್​ ಸಿಬ್ಬಂದಿ ಸಂದೇಶ್​ ಗೋಮನೆ ಹಣ ತುಂಬಿದ್ದ ಬ್ಯಾಗ್​ ನೀಡಲು ನಿರಾಕರಿಸಿದ್ದರಿಂದ ಆತನ ಮೇಲೆ ಗುಂಡು ಹಾರಿಸಲಾಗಿತ್ತು. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ತದನಂತರ ಹಣ ದೋಚಿ ಪರಾರಿಯಾಗಿದ್ದರು.

ಆರೋಪಿಗಳ ಬಂಧನಕ್ಕೆ ಕಾರಣವಾಯ್ತು ಬಿಟ್ಟು ಹೋದ ಚಪ್ಪಲಿ

ಕಳ್ಳತನ ಮಾಡಲು ಬ್ಯಾಂಕ್​​ನೊಳಗೆ ನುಗ್ಗಿರುವ ದುಷ್ಕರ್ಮಿಗಳ ಪೈಕಿ ಓರ್ವ ಬ್ಯಾಂಕ್​​ನೊಳಗೆ ಒಂದು ಚಪ್ಪಲಿ ಬಿಟ್ಟು ಹೋಗಿದ್ದನು. ಅದರ ಸಹಾಯದಿಂದಲೇ ಪೊಲೀಸರು ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ಶೋಧಕಾರ್ಯಕ್ಕಾಗಿ ಶ್ವಾನದಳದ ಸಹಾಯ ಪಡೆದುಕೊಳ್ಳಲಾಗಿತ್ತು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.