ETV Bharat / bharat

58ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದು ಪಾಸ್​ ಆದ MLA.. ಯಾರಿವರು ಜನಪ್ರತಿನಿಧಿ!

author img

By

Published : Jul 6, 2022, 8:59 PM IST

ಫುಲ್ಬಾನಿ ಕ್ಷೇತ್ರದ ಬಿಜೆಡಿ ಶಾಸಕ ಕನ್ಹರ್, ರಾಜ್ಯ ಓಪನ್ ಸ್ಕೂಲ್ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಬಿ 1 ಗ್ರೇಡ್‌ನೊಂದಿಗೆ ಉತ್ತೀರ್ಣರಾಗಿ ಎಲ್ಲರಿಗೆ ಮಾದರಿಯಾಗಿದ್ದಾರೆ. 500 ಅಂಕಗಳ ಪರೀಕ್ಷೆಯಲ್ಲಿ 364 ಅಂಕಗಳನ್ನು ಪಡೆಯುವ ಮೂಲಕ ತೇರ್ಗಡೆಯಾಗಿದ್ದಾರೆ.

Odisha MLA Angada Kanhar cleared the Class 10 board exam at the age of 58 years
58ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದು ಪಾಸ್​ ಆದ MLA

ಭುವನೇಶ್ವರ(ಒಡಿಶಾ): ಇಚ್ಛೆಯೊಂದಿದ್ದರೆ ದಾರಿ ತಾನಾಗೇ ಸೃಷ್ಟಿಯಾಗುವುದು ಎಂಬ ನಾಣ್ಣುಡಿಯಂತೆ ಇಲ್ಲೊಬರು ಜನಪ್ರತಿನಿಧಿ ತಮ್ಮ 58ನೇ ವಯಸ್ಸಿನಲ್ಲಿ ಮಕ್ಕಳಂತಾಗಿ, ಪರೀಕ್ಷೆಗೆ ಕುಳಿತು ಪಾಸ್ ಆಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಫುಲ್ಬಾನಿಯ 58 ವರ್ಷದ ಬಿಜೆಡಿ ಶಾಸಕ ಅಂಗದಾ ಕನ್ಹರ್ ಅವರು, 10 ನೇ ತರಗತಿಯ ಪರೀಕ್ಷೆ ಎದುರಿಸಿ ಪಾಸ್​ ಆಗಿ ಇತರರಿಗೆ ಮಾದರಿಯಾಗಿದ್ದಾರೆ. 500 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ ಬಿಜೆಡಿ ಶಾಸಕರು 364 ಅಂಕಗಳನ್ನು ಪಡೆಯುವ ಮೂಲಕ ಬಿ ಗ್ರೇಡ್​ ಪಡೆದು ತೇರ್ಗಡೆಯಾಗಿದ್ದಾರೆ. ಕೌಟುಂಬಿಕ ಸಮಸ್ಯೆಗಳಿಂದಾಗಿ 1978ರಲ್ಲಿ ಎಚ್‌ಎಸ್‌ಸಿ ಪರೀಕ್ಷೆಗೆ ಹಾಜರಾಗಲು ಶಾಸಕರಿಗೆ ಸಾಧ್ಯವಾಗಲಿಲ್ಲ. ಆ ಕೊರತೆ ಅವರನ್ನು ಕಾಡುತ್ತಲೇ ಇತ್ತು.

ಜೀವನ ನಡೆಸಲು ಆಗ ಕಷ್ಟಪಟ್ಟ ಕನ್ಹರ್​ ಅವರು ನಂತರ ರಾಜ್ಯದ ಜನಪ್ರತಿನಿಧಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಈಗ ತಾವು ಹಿಂದೆ ಅರ್ಧಕ್ಕೆ ನಿಲ್ಲಿಸಿದ ಶಿಕ್ಷಣವನ್ನು 58ರ ಹರೆಯದಲ್ಲಿ ಪೂರೈಸಿ ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಮನದ ಆಸೆಯನ್ನೂ ಈಡೇರಿಸಿಕೊಂಡಿದ್ದಾರೆ.

ಇದನ್ನು ಓದಿ: ವೀರೇಂದ್ರ ಹೆಗ್ಗಡೆ,ಇಳಯರಾಜ, ಪಿಟಿ ಉಷಾ ಸೇರಿ ನಾಲ್ವರು ದಿಗ್ಗಜರು ರಾಜ್ಯಸಭೆಗೆ ನಾಮನಿರ್ದೇಶನ.. ಮೋದಿ ಅಭಿನಂದನೆ

ಭುವನೇಶ್ವರ(ಒಡಿಶಾ): ಇಚ್ಛೆಯೊಂದಿದ್ದರೆ ದಾರಿ ತಾನಾಗೇ ಸೃಷ್ಟಿಯಾಗುವುದು ಎಂಬ ನಾಣ್ಣುಡಿಯಂತೆ ಇಲ್ಲೊಬರು ಜನಪ್ರತಿನಿಧಿ ತಮ್ಮ 58ನೇ ವಯಸ್ಸಿನಲ್ಲಿ ಮಕ್ಕಳಂತಾಗಿ, ಪರೀಕ್ಷೆಗೆ ಕುಳಿತು ಪಾಸ್ ಆಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಫುಲ್ಬಾನಿಯ 58 ವರ್ಷದ ಬಿಜೆಡಿ ಶಾಸಕ ಅಂಗದಾ ಕನ್ಹರ್ ಅವರು, 10 ನೇ ತರಗತಿಯ ಪರೀಕ್ಷೆ ಎದುರಿಸಿ ಪಾಸ್​ ಆಗಿ ಇತರರಿಗೆ ಮಾದರಿಯಾಗಿದ್ದಾರೆ. 500 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ ಬಿಜೆಡಿ ಶಾಸಕರು 364 ಅಂಕಗಳನ್ನು ಪಡೆಯುವ ಮೂಲಕ ಬಿ ಗ್ರೇಡ್​ ಪಡೆದು ತೇರ್ಗಡೆಯಾಗಿದ್ದಾರೆ. ಕೌಟುಂಬಿಕ ಸಮಸ್ಯೆಗಳಿಂದಾಗಿ 1978ರಲ್ಲಿ ಎಚ್‌ಎಸ್‌ಸಿ ಪರೀಕ್ಷೆಗೆ ಹಾಜರಾಗಲು ಶಾಸಕರಿಗೆ ಸಾಧ್ಯವಾಗಲಿಲ್ಲ. ಆ ಕೊರತೆ ಅವರನ್ನು ಕಾಡುತ್ತಲೇ ಇತ್ತು.

ಜೀವನ ನಡೆಸಲು ಆಗ ಕಷ್ಟಪಟ್ಟ ಕನ್ಹರ್​ ಅವರು ನಂತರ ರಾಜ್ಯದ ಜನಪ್ರತಿನಿಧಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಈಗ ತಾವು ಹಿಂದೆ ಅರ್ಧಕ್ಕೆ ನಿಲ್ಲಿಸಿದ ಶಿಕ್ಷಣವನ್ನು 58ರ ಹರೆಯದಲ್ಲಿ ಪೂರೈಸಿ ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಮನದ ಆಸೆಯನ್ನೂ ಈಡೇರಿಸಿಕೊಂಡಿದ್ದಾರೆ.

ಇದನ್ನು ಓದಿ: ವೀರೇಂದ್ರ ಹೆಗ್ಗಡೆ,ಇಳಯರಾಜ, ಪಿಟಿ ಉಷಾ ಸೇರಿ ನಾಲ್ವರು ದಿಗ್ಗಜರು ರಾಜ್ಯಸಭೆಗೆ ನಾಮನಿರ್ದೇಶನ.. ಮೋದಿ ಅಭಿನಂದನೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.