ETV Bharat / bharat

ಕುಸ್ತಿಪಟು ಸಾಗರ್​ ಹತ್ಯೆ ಪ್ರಕರಣ: ಸುಶೀಲ್​ ಕುಮಾರ್​​ಗೆ ಸಿಗದ ಜಾಮೀನು, ವಾರಂಟ್​ ಜಾರಿ

author img

By

Published : May 18, 2021, 6:57 PM IST

ಕುಸ್ತಿಪಟು ಸಾಗರ್​ ಕುಮಾರ್​ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವ ದೆಹಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್​ ಜಾರಿಗೊಳಿಸಿದೆ.

susheel
susheel

ನವದೆಹಲಿ: ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ್ದು, ಜಾಮೀನು ರಹಿತ ವಾರೆಂಟ್​ ಜಾರಿಗೊಳಿಸಿದೆ.

ಇದಕ್ಕೂ ಮುಂಚೆ ದೆಹಲಿ ಪೊಲೀಸರು ಸುಶೀಲ್ ಕುಮಾರ್ ವಿರುದ್ಧ ಲುಕ್​ಔಟ್​ ನೋಟಿಸ್​ ಜಾರಿಗೊಳಿಸಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಗದೀಶ್ ಕುಮಾರ್ ಅವರು ಇಂದು ಆದೇಶವನ್ನು ಓದಲಿದ್ದಾರೆ ಎನ್ನಲಾಗಿತ್ತು. ಎರಡೂ ಕಡೆಯವರ ವಾದವನ್ನು ಆಲಿಸಿದ ನಂತರ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾ ಗೊಳಿಸಿದೆ. ಈ ಮೊದಲು ಕೋರ್ಟ್​​ ಆದೇಶವನ್ನು ಕಾಯ್ದಿರಿಸಿತ್ತು. ಸುಶೀಲ್ ಕುಮಾರ್ ಅವರ ಪರ ಹಿರಿಯ ವಕೀಲ ಸಿದ್ದಾರ್ಥ್ ಲುಥ್ರಾ ಮತ್ತು ವಕೀಲ ಆರ್.ಎಸ್. ಜಖರ್ ವಾದಿಸಿದರೆ ದೆಹಲಿ ಪೊಲೀಸರನ್ನು ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ ಅತುಲ್ ಶ್ರೀವಾಸ್ತವ ಪ್ರತಿನಿಧಿಸಿದ್ದರು.

ಹೆಚ್ಚುವರಿ ಪಬ್ಲಿಕ್​ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ್​ ಅವರು ಸುಶೀಲ್​ ವಿರುದ್ಧ ಎಲೆಕ್ಟ್ರಾನಿಕ್ ಸಾಕ್ಷಿಗಳಿವೆ ಹೀಗಾಗಿ ಸುಶೀಲ್​ ಕುಮಾರ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ಸಿಕ್ಕಿರುವ ವಿಡಿಯೋದಲ್ಲಿ ಸುಶೀಲ್​ ಹೊಡೆಯುವುದನ್ನು ಕಾಣಬಹುದು ಎಂದು ಕೋರ್ಟ್ ಎದುರು ವಾದ ಮಂಡನೆ ಮಾಡಿದ್ದರು.

1 ಲಕ್ಷ ಬಹುಮಾನ:

ಈ ಮಧ್ಯೆ ಕೈಗೆ ಸಿಗದೇ ತಲೆಮರೆಸಿಕೊಂಡಿರುವ ಸುಶೀಲ್​ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ನೀಡಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಗಲಭೆಯಲ್ಲಿ ಯುವ ಕುಸ್ತಿಪಟು ಸಾಗರ್​ ಸಾವನ್ನಪ್ಪಿದ ಪ್ರಕರಣದ ಹಿಂದೆ ಸುಶೀಲ್ ಕುಮಾರ್ ಕೈವಾಡ ಇದ್ದು ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ.

ಏನಿದು ಪ್ರಕರಣ?:

ಛತ್ರಸಾಲ್ ಕ್ರೀಡಾಂಗಣದಲ್ಲಿ 2 ಗುಂಪುಗಳ ನಡುವೆ ಜಗಳ ನಡೆದಿದೆ, ಒಂದು ಹಂತದಲ್ಲಿ ಜಗಳ ವಿಕೋಪಕ್ಕೆ ಹೋಗಿ ಯುವ ರೆಸ್ಲರ್ ಸಾವನ್ನಪ್ಪಿದ್ದು ಇದರ ಹಿಂದೆ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಹಾಗೂ ಅಜಯ್ ಕುಮಾರ್ ಎಂಬುವವರ ಕೈವಾಡ ಇದ್ದು ಅಂದಿನಿಂದಲೂ ಇಬ್ಬರು ತಲೆಮರೆಸಿಕೊಂಡಿದ್ದಾರೆ.

ಈಗಾಗಲೇ ಸುಶೀಲ್ ಗೆ ಜಾಮೀನು ರಹಿತ ವಾರಂಟ್ ಅನ್ನು ದೆಹಲಿ ಹೈಕೋರ್ಟ್ ಹೊರಡಿಸಿದ್ದರೆ, ಇದಕ್ಕೂ ಮುಂಚೆ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ. ಕೊಲೆ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಸುಶೀಲ್ ಕುಮಾರ್ ಅವರನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ಹಾಗೂ ಅಜಯ್ ಕುಮಾರ್ ಬಗ್ಗೆ ಸೂಕ್ತ ಮಾಹಿತಿ ನೀಡಿದವರಿಗೆ 50 ಸಾವಿರ ಬಹುಮಾನ ನೀಡಲಾಗುವುದು ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಕುಸ್ತಿಪಟು ಸಾಗರ್ ಕುಮಾರ್ ಹತ್ಯೆ ಪ್ರಕರಣ: ಆರೋಪಿ ಸುಶೀಲ್​ ಕುಮಾರ್​​ಗಾಗಿ ಶೋಧ

ನವದೆಹಲಿ: ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ್ದು, ಜಾಮೀನು ರಹಿತ ವಾರೆಂಟ್​ ಜಾರಿಗೊಳಿಸಿದೆ.

ಇದಕ್ಕೂ ಮುಂಚೆ ದೆಹಲಿ ಪೊಲೀಸರು ಸುಶೀಲ್ ಕುಮಾರ್ ವಿರುದ್ಧ ಲುಕ್​ಔಟ್​ ನೋಟಿಸ್​ ಜಾರಿಗೊಳಿಸಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಗದೀಶ್ ಕುಮಾರ್ ಅವರು ಇಂದು ಆದೇಶವನ್ನು ಓದಲಿದ್ದಾರೆ ಎನ್ನಲಾಗಿತ್ತು. ಎರಡೂ ಕಡೆಯವರ ವಾದವನ್ನು ಆಲಿಸಿದ ನಂತರ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾ ಗೊಳಿಸಿದೆ. ಈ ಮೊದಲು ಕೋರ್ಟ್​​ ಆದೇಶವನ್ನು ಕಾಯ್ದಿರಿಸಿತ್ತು. ಸುಶೀಲ್ ಕುಮಾರ್ ಅವರ ಪರ ಹಿರಿಯ ವಕೀಲ ಸಿದ್ದಾರ್ಥ್ ಲುಥ್ರಾ ಮತ್ತು ವಕೀಲ ಆರ್.ಎಸ್. ಜಖರ್ ವಾದಿಸಿದರೆ ದೆಹಲಿ ಪೊಲೀಸರನ್ನು ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ ಅತುಲ್ ಶ್ರೀವಾಸ್ತವ ಪ್ರತಿನಿಧಿಸಿದ್ದರು.

ಹೆಚ್ಚುವರಿ ಪಬ್ಲಿಕ್​ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ್​ ಅವರು ಸುಶೀಲ್​ ವಿರುದ್ಧ ಎಲೆಕ್ಟ್ರಾನಿಕ್ ಸಾಕ್ಷಿಗಳಿವೆ ಹೀಗಾಗಿ ಸುಶೀಲ್​ ಕುಮಾರ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ಸಿಕ್ಕಿರುವ ವಿಡಿಯೋದಲ್ಲಿ ಸುಶೀಲ್​ ಹೊಡೆಯುವುದನ್ನು ಕಾಣಬಹುದು ಎಂದು ಕೋರ್ಟ್ ಎದುರು ವಾದ ಮಂಡನೆ ಮಾಡಿದ್ದರು.

1 ಲಕ್ಷ ಬಹುಮಾನ:

ಈ ಮಧ್ಯೆ ಕೈಗೆ ಸಿಗದೇ ತಲೆಮರೆಸಿಕೊಂಡಿರುವ ಸುಶೀಲ್​ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ನೀಡಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಗಲಭೆಯಲ್ಲಿ ಯುವ ಕುಸ್ತಿಪಟು ಸಾಗರ್​ ಸಾವನ್ನಪ್ಪಿದ ಪ್ರಕರಣದ ಹಿಂದೆ ಸುಶೀಲ್ ಕುಮಾರ್ ಕೈವಾಡ ಇದ್ದು ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ.

ಏನಿದು ಪ್ರಕರಣ?:

ಛತ್ರಸಾಲ್ ಕ್ರೀಡಾಂಗಣದಲ್ಲಿ 2 ಗುಂಪುಗಳ ನಡುವೆ ಜಗಳ ನಡೆದಿದೆ, ಒಂದು ಹಂತದಲ್ಲಿ ಜಗಳ ವಿಕೋಪಕ್ಕೆ ಹೋಗಿ ಯುವ ರೆಸ್ಲರ್ ಸಾವನ್ನಪ್ಪಿದ್ದು ಇದರ ಹಿಂದೆ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಹಾಗೂ ಅಜಯ್ ಕುಮಾರ್ ಎಂಬುವವರ ಕೈವಾಡ ಇದ್ದು ಅಂದಿನಿಂದಲೂ ಇಬ್ಬರು ತಲೆಮರೆಸಿಕೊಂಡಿದ್ದಾರೆ.

ಈಗಾಗಲೇ ಸುಶೀಲ್ ಗೆ ಜಾಮೀನು ರಹಿತ ವಾರಂಟ್ ಅನ್ನು ದೆಹಲಿ ಹೈಕೋರ್ಟ್ ಹೊರಡಿಸಿದ್ದರೆ, ಇದಕ್ಕೂ ಮುಂಚೆ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ. ಕೊಲೆ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಸುಶೀಲ್ ಕುಮಾರ್ ಅವರನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ಹಾಗೂ ಅಜಯ್ ಕುಮಾರ್ ಬಗ್ಗೆ ಸೂಕ್ತ ಮಾಹಿತಿ ನೀಡಿದವರಿಗೆ 50 ಸಾವಿರ ಬಹುಮಾನ ನೀಡಲಾಗುವುದು ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಕುಸ್ತಿಪಟು ಸಾಗರ್ ಕುಮಾರ್ ಹತ್ಯೆ ಪ್ರಕರಣ: ಆರೋಪಿ ಸುಶೀಲ್​ ಕುಮಾರ್​​ಗಾಗಿ ಶೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.