ETV Bharat / bharat

ಮರೆಯಾದ ದೇವಸ್ಥಾನಗಳ ಬಗ್ಗೆ ಈಗ ಮಾತು ಅನರ್ಥ, ಇತಿಹಾಸ ಮರಳಿ ಬರೆಯಲಾಗಲ್ಲ: ಸದ್ಗುರು

author img

By

Published : May 22, 2022, 10:52 PM IST

ವಾರಣಾಸಿಯ ಜ್ಞಾನವಾಪಿ, ಮಥುರಾ, ಕುತುಬ್​ ಮಿನಾರ್​ ಕುರಿತು ದೇಶದಲ್ಲಿ ನಡೆಯುತ್ತಿರುವ ವಿವಾದದ ಬಗ್ಗೆ ಮಣ್ಣಿನ ಉಳಿವಿನ ಬಗ್ಗೆ ಅಭಿಯಾನ ನಡೆಸುತ್ತಿರುವ ಸದ್ಗುರು ಜಗ್ಗಿ ವಾಸುದೇವ್​ ಮಾತನಾಡಿ, ಇತಿಹಾಸವನ್ನು ಮರಳಿ ಬರೆಯಲಾಗದು ಎಂದು ಅಭಿಪ್ರಾಯಿಸಿದ್ದಾರೆ.

sadhguru
ಸದ್ಗುರು

ನವದೆಹಲಿ: ಇತಿಹಾಸವನ್ನು ಪುನಃ ಬರೆಯಲು ಸಾಧ್ಯವಿಲ್ಲದ ಕಾರಣ ದಾಳಿಯ ಸಮಯದಲ್ಲಿ ಧ್ವಂಸಗೊಂಡ ಸಾವಿರಾರು ದೇವಾಲಯಗಳ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಜಗ್ಗಿ ವಾಸುದೇವ್​ ಸದ್ಗುರು ಹೇಳಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇತಿಹಾಸವನ್ನು ಮತ್ತೆ ಬರೆಯಲು ಅಸಾಧ್ಯ. ಈ ಹಿಂದೆ ನಡೆದ ಆಕ್ರಮಣಗಳ ಸಂದರ್ಭದಲ್ಲಿ ನೆಲಸಮವಾದ ಸಾವಿರಾರು ದೇವಾಲಯಗಳನ್ನು ಈಗ ಮರುನಿರ್ಮಾಣ, ಪತ್ತೆ ಮಾಡುವ ಕೆಲಸ ಅರ್ಥವಿಲ್ಲದ್ದು, ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಕ್ರಮಣಗಳ ಸಮಯದಲ್ಲಿ ಸಾವಿರಾರು ದೇವಾಲಯಗಳನ್ನು ನೆಲಸಮಗೊಳಿಸಲಾಗಿದೆ. ಆಗ ನಾವು ಅವುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಆ ವಿಷಯಗಳನ್ನು ಕೆದಕುವುದು ತಕ್ಕುದಲ್ಲ. ಎರಡು ಸಮುದಾಯಗಳು ಒಟ್ಟಿಗೆ ಕುಳಿತು ಈ ವಿಷಯದ ಬಗ್ಗೆ ಇತ್ಯರ್ಥಪಡಿಸಿಕೊಳ್ಳಬೇಕು. ಸಮುದಾಯಗಳ ನಡುವಿನ ವಿವಾದ ಮತ್ತು ಅನಗತ್ಯ ದ್ವೇಷವನ್ನು ಜೀವಂತವಾಗಿಡಬಾರದು. ಕೊಡು ಮತ್ತು ತೆಗೆದುಕೊಳ್ಳುವಿಕೆಯಿಂದ ರಾಷ್ಟ್ರ ನಿರ್ಮಾಣದ ಮುಂದಿನ ದಾರಿ ಹುಡುಕಬೇಕಿದೆ ಎಂದು ಅವರು ಹೇಳಿದ್ದಾರೆ.

ಭಾರತವು ಈ ಸಮಯದಲ್ಲಿ ನಿರ್ಣಾಯಕ ಘಟ್ಟದಲ್ಲಿದೆ. ಈ ಹಂತದಲ್ಲಿ ನಾವು ಸರಿಯಾಗಿ ಕೆಲಸ ಮಾಡಿದರೆ, ಭಾರತವು ವಿಶ್ವದಲ್ಲಿ ಮಹತ್ವದ ಶಕ್ತಿಯಾಗಬಹುದು. ಅದನ್ನು ಬಿಟ್ಟು ಕೆಲ ವಿಚಾರಗಳಿಗೆ ದೊಡ್ಡ ವಿವಾದ ಸೃಷ್ಟಿಸಿ ಅದನ್ನು ಹಾಳು ಮಾಡಬಾರದು. ಮಸೀದಿ- ಮಂದಿರಗಳ ವಿಚಾರ ವಿವಾದಾತ್ಮಕಗೊಳಿಸಬೇಡಿ ಎಂದು ಮನವಿ ಮಾಡಿದರು.

ಓದಿ: ಗೋವಾದಲ್ಲಿ ಪೋರ್ಚುಗೀಸ್​ ದಾಳಿಯಿಂದ ಹಾಳಾದ ದೇವಾಲಯಗಳ ಪುನರ್​ನಿರ್ಮಾಣ: ಸಿಎಂ​ ಸಾವಂತ್​

ನವದೆಹಲಿ: ಇತಿಹಾಸವನ್ನು ಪುನಃ ಬರೆಯಲು ಸಾಧ್ಯವಿಲ್ಲದ ಕಾರಣ ದಾಳಿಯ ಸಮಯದಲ್ಲಿ ಧ್ವಂಸಗೊಂಡ ಸಾವಿರಾರು ದೇವಾಲಯಗಳ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಜಗ್ಗಿ ವಾಸುದೇವ್​ ಸದ್ಗುರು ಹೇಳಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇತಿಹಾಸವನ್ನು ಮತ್ತೆ ಬರೆಯಲು ಅಸಾಧ್ಯ. ಈ ಹಿಂದೆ ನಡೆದ ಆಕ್ರಮಣಗಳ ಸಂದರ್ಭದಲ್ಲಿ ನೆಲಸಮವಾದ ಸಾವಿರಾರು ದೇವಾಲಯಗಳನ್ನು ಈಗ ಮರುನಿರ್ಮಾಣ, ಪತ್ತೆ ಮಾಡುವ ಕೆಲಸ ಅರ್ಥವಿಲ್ಲದ್ದು, ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಕ್ರಮಣಗಳ ಸಮಯದಲ್ಲಿ ಸಾವಿರಾರು ದೇವಾಲಯಗಳನ್ನು ನೆಲಸಮಗೊಳಿಸಲಾಗಿದೆ. ಆಗ ನಾವು ಅವುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಆ ವಿಷಯಗಳನ್ನು ಕೆದಕುವುದು ತಕ್ಕುದಲ್ಲ. ಎರಡು ಸಮುದಾಯಗಳು ಒಟ್ಟಿಗೆ ಕುಳಿತು ಈ ವಿಷಯದ ಬಗ್ಗೆ ಇತ್ಯರ್ಥಪಡಿಸಿಕೊಳ್ಳಬೇಕು. ಸಮುದಾಯಗಳ ನಡುವಿನ ವಿವಾದ ಮತ್ತು ಅನಗತ್ಯ ದ್ವೇಷವನ್ನು ಜೀವಂತವಾಗಿಡಬಾರದು. ಕೊಡು ಮತ್ತು ತೆಗೆದುಕೊಳ್ಳುವಿಕೆಯಿಂದ ರಾಷ್ಟ್ರ ನಿರ್ಮಾಣದ ಮುಂದಿನ ದಾರಿ ಹುಡುಕಬೇಕಿದೆ ಎಂದು ಅವರು ಹೇಳಿದ್ದಾರೆ.

ಭಾರತವು ಈ ಸಮಯದಲ್ಲಿ ನಿರ್ಣಾಯಕ ಘಟ್ಟದಲ್ಲಿದೆ. ಈ ಹಂತದಲ್ಲಿ ನಾವು ಸರಿಯಾಗಿ ಕೆಲಸ ಮಾಡಿದರೆ, ಭಾರತವು ವಿಶ್ವದಲ್ಲಿ ಮಹತ್ವದ ಶಕ್ತಿಯಾಗಬಹುದು. ಅದನ್ನು ಬಿಟ್ಟು ಕೆಲ ವಿಚಾರಗಳಿಗೆ ದೊಡ್ಡ ವಿವಾದ ಸೃಷ್ಟಿಸಿ ಅದನ್ನು ಹಾಳು ಮಾಡಬಾರದು. ಮಸೀದಿ- ಮಂದಿರಗಳ ವಿಚಾರ ವಿವಾದಾತ್ಮಕಗೊಳಿಸಬೇಡಿ ಎಂದು ಮನವಿ ಮಾಡಿದರು.

ಓದಿ: ಗೋವಾದಲ್ಲಿ ಪೋರ್ಚುಗೀಸ್​ ದಾಳಿಯಿಂದ ಹಾಳಾದ ದೇವಾಲಯಗಳ ಪುನರ್​ನಿರ್ಮಾಣ: ಸಿಎಂ​ ಸಾವಂತ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.