ETV Bharat / bharat

ವಿಧಾನಸಭೆಯಲ್ಲಿ ಲಖಿಸರಾಯ್ ಗದ್ದಲ : ಕಲಾಪದಲ್ಲಿ ರೊಚ್ಚಿಗೆದ್ದ ಸಿಎಂ ನಿತೀಶ್‌ಕುಮಾರ್

author img

By

Published : Mar 14, 2022, 2:43 PM IST

ಲಖಿಸರಾಯ್​ ವಿಚಾರವಾಗಿ ವಿಧಾನಸಭೆಯಲ್ಲಿ ದಿನದಿಂದ ದಿನಕ್ಕೆ ಗದ್ದಲ ನಡೆಯುತ್ತಿರುವುದಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ..

Nitish Kumar Became Angry In Bihar Vidhansabha  Misbehavior with Speaker Vijay Sinha in Lakhisarai  Bihar Legislature Budget Session  ವಿಧಾನಸಭೆಯಲ್ಲಿ ಲಖಿಸರಾಯ್ ಗದ್ದಲ  ಕಲಾಪದಲ್ಲಿ ರೊಚ್ಚಿಗೆದ್ದ ಸಿಎಂ ನೀತಿಶ್​ ಕುಮಾರ್​ ಬಿಹಾರ್​ ಬಜೆಟ್​ ಅಧಿವೇಶನ 2022
ಕಲಾಪದಲ್ಲಿ ರೊಚ್ಚಿಗೆದ್ದ ಸಿಎಂ

ಪಾಟ್ನಾ : ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವೇಳೆ ಸಿಎಂ ನಿತೀಶ್ ಕುಮಾರ್ ಕೋಪ ಗಗನಕ್ಕೇರಿದೆ. ಲಖಿಸರಾಯ್‌ನಲ್ಲಿ ವಿಧಾನಸಭೆಯ ಸ್ಪೀಕರ್ ವಿಜಯ್ ಸಿನ್ಹಾ ಅವರ ಅನುಚಿತ ವರ್ತನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಮತ್ತು ಬಿಜೆಪಿಯ ಶಾಸಕರು ಸದನದಲ್ಲಿ ನಿರಂತರವಾಗಿ ಗದ್ದಲ ನಡೀತು. ಇಂತಹ ಸಂದರ್ಭದಲ್ಲಿ ಸಿಎಂ ಈ ವಿಚಾರದಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಸಿಟ್ಟಿಗೆದ್ದ ಸಿಎಂ ನಿತೀಶ್ : ಈ ವೇಳೆ ಸದನದಲ್ಲಿ ಮಾತನಾಡಿದ ಸಿಎಂ, ಸಂವಿಧಾನದತ್ತ ಆಡಳಿತ ನಡೆಸುತ್ತಿದೆ. ಯಾವುದೇ ಅಪರಾಧದ ವರದಿ ನ್ಯಾಯಾಲಯಕ್ಕೆ ಹೋಗುತ್ತದೆ. ಮನೆಗೆ ಹೋಗುವುದಿಲ್ಲ. ದಯವಿಟ್ಟು ಹೆಚ್ಚು ಮಾಡಬೇಡಿ, ಅವನಿಗೆ ಏನು ಹಕ್ಕಿದೆಯೋ ಅದನ್ನು ಮಾಡಲಿ. ಗೊಂದಲವಿದ್ದರೆ ಚರ್ಚಿಸಲಾಗುವುದು. ಈ ವಿಷಯವನ್ನು ಅನಗತ್ಯ ಮುಂದುವರಿಸುವ ಬೇಕಿಲ್ಲ ಎಂದು ಪ್ರತಿ ಪಕ್ಷದ ನಾಯಕರ ವಿರುದ್ಧ ಗರಂ ಆದರು.

ಕಲಾಪದಲ್ಲಿ ರೊಚ್ಚಿಗೆದ್ದ ಸಿಎಂ ನೀತಿಶ್​ ಕುಮಾರ್​

ನಮ್ಮ ಸರ್ಕಾರ ಯಾರನ್ನೂ ಉಳಿಸುವ ಪ್ರಯತ್ನ ಮಾಡುವುದಿಲ್ಲ ಅಥವಾ ಸಿಲುಕಿಸುವುದಿಲ್ಲ. ಉತ್ತರ ನೀಡಿದಾಗ ಗಲಾಟೆ ಏಕೆ?. ಸಂವಿಧಾನ ಏನು ಹೇಳುತ್ತದೆ ಎಂಬುದನ್ನು ಓದಿ ಅರ್ಥಮಾಡಿಕೊಳ್ಳಿ. ನನಗೆ ನೋವಾಗಿದೆ. ನೀವು ಪ್ರಶ್ನಿಸುತ್ತಿದ್ದೀರಿ, ನಾವು ಅದಕ್ಕೆ ಉತ್ತರ ನೀಡುತ್ತಿದ್ದೇವೆ. ಆದರೆ, ಏಕೆ ಸಮಸ್ಯೆಗಳನ್ನು ಎತ್ತುತ್ತಿದ್ದೀರಿ? ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಓದಿ: ರಷ್ಯಾ ಮತ್ತು ಉಕ್ರೇನ್​ ನಡುವೆ ಮತ್ತೊಂದು ಸುತ್ತಿನ ಮಾತುಕತೆ

ವಿಧಾನಸಭೆ ಸ್ಪೀಕರ್ : ಸದನ ಹೇಗೆ ನಡೆಸಬೇಕೆಂದು ನೀವೇ ತಿಳಿಸಿ ಅಂತಾ ಸಿಎಂ ಸಿಟ್ಟಿಗೆದ್ದ ಬಳಿಕ ಸ್ಪೀಕರ್ ವಿಜಯ್ ಸಿನ್ಹಾ ಕೇಳಿದರು. ಜಪ್ತಿ ಯಾವಾಗ ಎಂಬ ಪ್ರಶ್ನೆ ಸದನದಲ್ಲಿ ಬಂದಾಗ ಎಲ್ಲಾ ಶಾಸಕರು ಮೂರು ಬಾರಿ ಗದ್ದಲವನ್ನು ಸೃಷ್ಟಿಸಿದರು. ವಿಶೇಷಾಧಿಕಾರ ಸಮಿತಿಯಲ್ಲಿ ವಿಷಯ ನಡೆಯುತ್ತಿದೆ.

ಆ ಬಗ್ಗೆ ಚರ್ಚೆ ನಡೆಸುವುದಿಲ್ಲ ಎಂದು ಒತ್ತಾಯಿಸಿದರು. ಇದುವರೆಗೂ ಆಯೋಜಕರು ಹಾಗೂ ಉದ್ಘಾಟಕರ ಬಂಧನ ನಡೆದಿಲ್ಲ ಎಂಬ ವಿಷಯ ಉದ್ಭವಿಸಿದೆ. ಸರ್ಕಾರ ಈ ವಿಷಯವನ್ನು ಏಕೆ ಗಂಭೀರವಾಗಿ ಪರಿಗಣಿಸಲಿಲ್ಲ?. ಲಖಿಸರಾಯ್ ಘಟನೆಯನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದರು.

ಲಖಿಸರಾಯ್ ವಿಷಯದ ಕುರಿತು ಸದನದಲ್ಲಿ ಮೂರು ಬಾರಿ ಗದ್ದಲ ಎದ್ದಿದೆ. ನಾನು ಶಾಸಕರ ಉಸ್ತುವಾರಿ, ನಾನು ಆ ಪ್ರದೇಶಕ್ಕೆ ಹೋದಾಗಲೆಲ್ಲಾ ಠಾಣಾ ಉಸ್ತುವಾರಿ ಮತ್ತು ಡಿಎಸ್‌ಪಿ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಜನರು ಪ್ರಶ್ನೆಗಳನ್ನು ಕೇಳುತ್ತಾರೆ.

ನಿಲುವು ನಿರುತ್ಸಾಹಗೊಳಿಸುವ ಮಾತು ಬೇಡ. ಸರ್ಕಾರ ಏಕೆ ಗಂಭೀರವಾಗಿ ಕ್ರಮಕೈಗೊಳ್ಳುತ್ತಿಲ್ಲ. ನೀವು ನನ್ನನ್ನು ವಿಧಾನಸಭೆಯ ಸ್ಪೀಕರ್ ಮಾಡಿದ್ದೀರಿ. ಎಲ್ಲರೂ ಸ್ಪೀಕರನ್ನು ಗೌರವಿಸಬೇಕು ಎಂದು ವಿಜಯ್ ಸಿನ್ಹಾ ಹೇಳಿದರು.

ನಿತೀಶ್‌ಗೆ ಕೋಪವೇಕೆ?: ವಾಸ್ತವವಾಗಿ, ಸಂಜಯ್ ಸರೋಗಿ ಲಖಿಸರಾಯ್‌ನಲ್ಲಿ ವಿಷಯ ಪ್ರಸ್ತಾಪಿಸಿ, 2022ರ ಮೊದಲ 50 ದಿನಗಳಲ್ಲಿ ಲಖಿಸರಾಯ್ ಜಿಲ್ಲೆಯಲ್ಲಿ 9 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಈವರೆಗೆ 9 ಪ್ರಕರಣಗಳಲ್ಲಿ ಅಪರಾಧಿಗಳ ಬಂಧನವಾಗದ ಕಾರಣ ಅಪರಾಧಿಗಳ ನೈತಿಕ ಸ್ಥೈರ್ಯ ಹೆಚ್ಚುತ್ತಿದೆ.

ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ. ಇದಕ್ಕೆ ಉತ್ತರಿಸಿದ ಉಸ್ತುವಾರಿ ಸಚಿವ ವಿಜೇಂದ್ರ ಯಾದವ್. ಆದರೆ, ಬಿಜೆಪಿ ಸದಸ್ಯರು ತೃಪ್ತರಾಗಲಿಲ್ಲ, ಬಂಧಿಸದವರನ್ನು ವಶಪಡಿಸಿಕೊಳ್ಳಲಾಗಿದೆಯೇ ಎಂದು ಬಿಜೆಪಿ ಸದಸ್ಯ ಅರುಣ್ ಶಂಕರ್ ಪ್ರಶ್ನಿಸಿದರು. ಆದರೆ, ಈ ಬಗ್ಗೆ ಯಾವುದೇ ಉತ್ತರ ನೀಡಲು ಸಚಿವರು ಸಾಧ್ಯವಾಗಲಿಲ್ಲ.

ಓದಿ: ಬೆಂಗಳೂರಲ್ಲಿ ರಸ್ತೆ ಗುಂಡಿಗೆ ಬೈಕ್ ಸವಾರ ಬಲಿ : ಏಕೈಕ ಪುತ್ರನ ಕಳೆದುಕೊಂಡ ಪೋಷಕರಿಂದ ದೂರು

ಈ ಪ್ರಶ್ನೆಯನ್ನು ನಾವು ಮುಂದೂಡುತ್ತೇವೆ ಮತ್ತು 2 ದಿನಗಳ ನಂತರ ಉತ್ತರಿಸುತ್ತೇವೆ ಎಂದು ವಿಧಾನಸಭೆಯ ಸ್ಪೀಕರ್ ಹೇಳಿದರು. ಲಖಿಸರಾಯ್‌ನಲ್ಲಿ ಸ್ಪೀಕರ್ ಜೊತೆ ನಡೆದ ಘಟನೆಯನ್ನೂ ಬಿಜೆಪಿ ಸದಸ್ಯರು ಪ್ರಸ್ತಾಪಿಸಿದರು. ಮುಖ್ಯಮಂತ್ರಿಗಳು ತಮ್ಮ ಚೇಂಬರ್​ನಲ್ಲಿ ಕುಳಿತು ಎಲ್ಲವನ್ನೂ ಆಲಿಸುತ್ತಿದ್ದರು.

ಸಭಾಧ್ಯಕ್ಷರ ಕಲಾಪ ಮುಂದೂಡಿಕೆ ವಿಚಾರಕ್ಕೆ ಬೇಸರಗೊಂಡ ಅವರು ಸದನದೊಳಗೆ ಬಂದು ಸಿಟ್ಟಿಗೆದ್ದು, ಇಂತಹ ಸದನ ಕೆಲಸ ಮಾಡುವುದಿಲ್ಲ ಎಂದು ಸಭಾಧ್ಯಕ್ಷರಿಗೆ ಸ್ಪಷ್ಟವಾಗಿ ಹೇಳಿದರು. ಇದೇ ವಿಷಯವನ್ನು ಸದನದಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸುವುದು ಸರಿಯಲ್ಲ.

ನಡೆದಿದ್ದೇನು?: ಸ್ಪೀಕರ್ ವಿಜಯ್ ಸಿನ್ಹಾ ಅವರೊಂದಿಗಿನ ಅನುಚಿತ ವರ್ತನೆಯ ವಿಷಯವನ್ನು ಬಿಹಾರ ವಿಧಾನಸಭೆಯಲ್ಲಿ ತೀವ್ರವಾಗಿ ಪ್ರಸ್ತಾಪಿಸಲಾಗಿದೆ. ಲಖಿಸರಾಯ್‌ನಲ್ಲಿ ಸರಸ್ವತಿ ಪೂಜೆ ವೇಳೆ ಬಿಹಾರ ವಿಧಾನಸಭಾ ಸ್ಪೀಕರ್ ವಿಜಯ್ ಸಿನ್ಹಾ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಡಿಎಸ್‌ಪಿ ಮತ್ತು ಠಾಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದ ವಿಚಾರದಲ್ಲಿ ಶುಕ್ರವಾರ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು. ಪ್ರತಿಪಕ್ಷದ ಸದಸ್ಯರು ಮತ್ತು ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗಿದರು ಮತ್ತು ಇದು ಗಂಭೀರ ವಿಷಯವಾಯಿತು.

ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಡಿಎಸ್‌ಪಿ ಹಾಗೂ ಠಾಣಾ ಪ್ರಭಾರ ಅಧಿಕಾರಿಯನ್ನು ತಮ್ಮ ಅಧೀನದಲ್ಲಿರುವ ಪ್ರದೇಶದಿಂದ ವಜಾಗೊಳಿಸುವಂತೆ ಸ್ಪೀಕರ್ ಸೂಚನೆ ನೀಡಿದ್ದರೂ ಸಹ ಜಾರಿಯಾಗಿಲ್ಲ. ಈ ಬಗ್ಗೆ ಸದಸ್ಯರಲ್ಲಿಯೇ ಅಸಮಾಧಾನವಿದೆ. ಇಂತಹ ಅಧಿಕಾರಿಗಳ ವಿರುದ್ಧ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದ್ದಾರೆ.

ಪಾಟ್ನಾ : ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವೇಳೆ ಸಿಎಂ ನಿತೀಶ್ ಕುಮಾರ್ ಕೋಪ ಗಗನಕ್ಕೇರಿದೆ. ಲಖಿಸರಾಯ್‌ನಲ್ಲಿ ವಿಧಾನಸಭೆಯ ಸ್ಪೀಕರ್ ವಿಜಯ್ ಸಿನ್ಹಾ ಅವರ ಅನುಚಿತ ವರ್ತನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಮತ್ತು ಬಿಜೆಪಿಯ ಶಾಸಕರು ಸದನದಲ್ಲಿ ನಿರಂತರವಾಗಿ ಗದ್ದಲ ನಡೀತು. ಇಂತಹ ಸಂದರ್ಭದಲ್ಲಿ ಸಿಎಂ ಈ ವಿಚಾರದಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಸಿಟ್ಟಿಗೆದ್ದ ಸಿಎಂ ನಿತೀಶ್ : ಈ ವೇಳೆ ಸದನದಲ್ಲಿ ಮಾತನಾಡಿದ ಸಿಎಂ, ಸಂವಿಧಾನದತ್ತ ಆಡಳಿತ ನಡೆಸುತ್ತಿದೆ. ಯಾವುದೇ ಅಪರಾಧದ ವರದಿ ನ್ಯಾಯಾಲಯಕ್ಕೆ ಹೋಗುತ್ತದೆ. ಮನೆಗೆ ಹೋಗುವುದಿಲ್ಲ. ದಯವಿಟ್ಟು ಹೆಚ್ಚು ಮಾಡಬೇಡಿ, ಅವನಿಗೆ ಏನು ಹಕ್ಕಿದೆಯೋ ಅದನ್ನು ಮಾಡಲಿ. ಗೊಂದಲವಿದ್ದರೆ ಚರ್ಚಿಸಲಾಗುವುದು. ಈ ವಿಷಯವನ್ನು ಅನಗತ್ಯ ಮುಂದುವರಿಸುವ ಬೇಕಿಲ್ಲ ಎಂದು ಪ್ರತಿ ಪಕ್ಷದ ನಾಯಕರ ವಿರುದ್ಧ ಗರಂ ಆದರು.

ಕಲಾಪದಲ್ಲಿ ರೊಚ್ಚಿಗೆದ್ದ ಸಿಎಂ ನೀತಿಶ್​ ಕುಮಾರ್​

ನಮ್ಮ ಸರ್ಕಾರ ಯಾರನ್ನೂ ಉಳಿಸುವ ಪ್ರಯತ್ನ ಮಾಡುವುದಿಲ್ಲ ಅಥವಾ ಸಿಲುಕಿಸುವುದಿಲ್ಲ. ಉತ್ತರ ನೀಡಿದಾಗ ಗಲಾಟೆ ಏಕೆ?. ಸಂವಿಧಾನ ಏನು ಹೇಳುತ್ತದೆ ಎಂಬುದನ್ನು ಓದಿ ಅರ್ಥಮಾಡಿಕೊಳ್ಳಿ. ನನಗೆ ನೋವಾಗಿದೆ. ನೀವು ಪ್ರಶ್ನಿಸುತ್ತಿದ್ದೀರಿ, ನಾವು ಅದಕ್ಕೆ ಉತ್ತರ ನೀಡುತ್ತಿದ್ದೇವೆ. ಆದರೆ, ಏಕೆ ಸಮಸ್ಯೆಗಳನ್ನು ಎತ್ತುತ್ತಿದ್ದೀರಿ? ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಓದಿ: ರಷ್ಯಾ ಮತ್ತು ಉಕ್ರೇನ್​ ನಡುವೆ ಮತ್ತೊಂದು ಸುತ್ತಿನ ಮಾತುಕತೆ

ವಿಧಾನಸಭೆ ಸ್ಪೀಕರ್ : ಸದನ ಹೇಗೆ ನಡೆಸಬೇಕೆಂದು ನೀವೇ ತಿಳಿಸಿ ಅಂತಾ ಸಿಎಂ ಸಿಟ್ಟಿಗೆದ್ದ ಬಳಿಕ ಸ್ಪೀಕರ್ ವಿಜಯ್ ಸಿನ್ಹಾ ಕೇಳಿದರು. ಜಪ್ತಿ ಯಾವಾಗ ಎಂಬ ಪ್ರಶ್ನೆ ಸದನದಲ್ಲಿ ಬಂದಾಗ ಎಲ್ಲಾ ಶಾಸಕರು ಮೂರು ಬಾರಿ ಗದ್ದಲವನ್ನು ಸೃಷ್ಟಿಸಿದರು. ವಿಶೇಷಾಧಿಕಾರ ಸಮಿತಿಯಲ್ಲಿ ವಿಷಯ ನಡೆಯುತ್ತಿದೆ.

ಆ ಬಗ್ಗೆ ಚರ್ಚೆ ನಡೆಸುವುದಿಲ್ಲ ಎಂದು ಒತ್ತಾಯಿಸಿದರು. ಇದುವರೆಗೂ ಆಯೋಜಕರು ಹಾಗೂ ಉದ್ಘಾಟಕರ ಬಂಧನ ನಡೆದಿಲ್ಲ ಎಂಬ ವಿಷಯ ಉದ್ಭವಿಸಿದೆ. ಸರ್ಕಾರ ಈ ವಿಷಯವನ್ನು ಏಕೆ ಗಂಭೀರವಾಗಿ ಪರಿಗಣಿಸಲಿಲ್ಲ?. ಲಖಿಸರಾಯ್ ಘಟನೆಯನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದರು.

ಲಖಿಸರಾಯ್ ವಿಷಯದ ಕುರಿತು ಸದನದಲ್ಲಿ ಮೂರು ಬಾರಿ ಗದ್ದಲ ಎದ್ದಿದೆ. ನಾನು ಶಾಸಕರ ಉಸ್ತುವಾರಿ, ನಾನು ಆ ಪ್ರದೇಶಕ್ಕೆ ಹೋದಾಗಲೆಲ್ಲಾ ಠಾಣಾ ಉಸ್ತುವಾರಿ ಮತ್ತು ಡಿಎಸ್‌ಪಿ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಜನರು ಪ್ರಶ್ನೆಗಳನ್ನು ಕೇಳುತ್ತಾರೆ.

ನಿಲುವು ನಿರುತ್ಸಾಹಗೊಳಿಸುವ ಮಾತು ಬೇಡ. ಸರ್ಕಾರ ಏಕೆ ಗಂಭೀರವಾಗಿ ಕ್ರಮಕೈಗೊಳ್ಳುತ್ತಿಲ್ಲ. ನೀವು ನನ್ನನ್ನು ವಿಧಾನಸಭೆಯ ಸ್ಪೀಕರ್ ಮಾಡಿದ್ದೀರಿ. ಎಲ್ಲರೂ ಸ್ಪೀಕರನ್ನು ಗೌರವಿಸಬೇಕು ಎಂದು ವಿಜಯ್ ಸಿನ್ಹಾ ಹೇಳಿದರು.

ನಿತೀಶ್‌ಗೆ ಕೋಪವೇಕೆ?: ವಾಸ್ತವವಾಗಿ, ಸಂಜಯ್ ಸರೋಗಿ ಲಖಿಸರಾಯ್‌ನಲ್ಲಿ ವಿಷಯ ಪ್ರಸ್ತಾಪಿಸಿ, 2022ರ ಮೊದಲ 50 ದಿನಗಳಲ್ಲಿ ಲಖಿಸರಾಯ್ ಜಿಲ್ಲೆಯಲ್ಲಿ 9 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಈವರೆಗೆ 9 ಪ್ರಕರಣಗಳಲ್ಲಿ ಅಪರಾಧಿಗಳ ಬಂಧನವಾಗದ ಕಾರಣ ಅಪರಾಧಿಗಳ ನೈತಿಕ ಸ್ಥೈರ್ಯ ಹೆಚ್ಚುತ್ತಿದೆ.

ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ. ಇದಕ್ಕೆ ಉತ್ತರಿಸಿದ ಉಸ್ತುವಾರಿ ಸಚಿವ ವಿಜೇಂದ್ರ ಯಾದವ್. ಆದರೆ, ಬಿಜೆಪಿ ಸದಸ್ಯರು ತೃಪ್ತರಾಗಲಿಲ್ಲ, ಬಂಧಿಸದವರನ್ನು ವಶಪಡಿಸಿಕೊಳ್ಳಲಾಗಿದೆಯೇ ಎಂದು ಬಿಜೆಪಿ ಸದಸ್ಯ ಅರುಣ್ ಶಂಕರ್ ಪ್ರಶ್ನಿಸಿದರು. ಆದರೆ, ಈ ಬಗ್ಗೆ ಯಾವುದೇ ಉತ್ತರ ನೀಡಲು ಸಚಿವರು ಸಾಧ್ಯವಾಗಲಿಲ್ಲ.

ಓದಿ: ಬೆಂಗಳೂರಲ್ಲಿ ರಸ್ತೆ ಗುಂಡಿಗೆ ಬೈಕ್ ಸವಾರ ಬಲಿ : ಏಕೈಕ ಪುತ್ರನ ಕಳೆದುಕೊಂಡ ಪೋಷಕರಿಂದ ದೂರು

ಈ ಪ್ರಶ್ನೆಯನ್ನು ನಾವು ಮುಂದೂಡುತ್ತೇವೆ ಮತ್ತು 2 ದಿನಗಳ ನಂತರ ಉತ್ತರಿಸುತ್ತೇವೆ ಎಂದು ವಿಧಾನಸಭೆಯ ಸ್ಪೀಕರ್ ಹೇಳಿದರು. ಲಖಿಸರಾಯ್‌ನಲ್ಲಿ ಸ್ಪೀಕರ್ ಜೊತೆ ನಡೆದ ಘಟನೆಯನ್ನೂ ಬಿಜೆಪಿ ಸದಸ್ಯರು ಪ್ರಸ್ತಾಪಿಸಿದರು. ಮುಖ್ಯಮಂತ್ರಿಗಳು ತಮ್ಮ ಚೇಂಬರ್​ನಲ್ಲಿ ಕುಳಿತು ಎಲ್ಲವನ್ನೂ ಆಲಿಸುತ್ತಿದ್ದರು.

ಸಭಾಧ್ಯಕ್ಷರ ಕಲಾಪ ಮುಂದೂಡಿಕೆ ವಿಚಾರಕ್ಕೆ ಬೇಸರಗೊಂಡ ಅವರು ಸದನದೊಳಗೆ ಬಂದು ಸಿಟ್ಟಿಗೆದ್ದು, ಇಂತಹ ಸದನ ಕೆಲಸ ಮಾಡುವುದಿಲ್ಲ ಎಂದು ಸಭಾಧ್ಯಕ್ಷರಿಗೆ ಸ್ಪಷ್ಟವಾಗಿ ಹೇಳಿದರು. ಇದೇ ವಿಷಯವನ್ನು ಸದನದಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸುವುದು ಸರಿಯಲ್ಲ.

ನಡೆದಿದ್ದೇನು?: ಸ್ಪೀಕರ್ ವಿಜಯ್ ಸಿನ್ಹಾ ಅವರೊಂದಿಗಿನ ಅನುಚಿತ ವರ್ತನೆಯ ವಿಷಯವನ್ನು ಬಿಹಾರ ವಿಧಾನಸಭೆಯಲ್ಲಿ ತೀವ್ರವಾಗಿ ಪ್ರಸ್ತಾಪಿಸಲಾಗಿದೆ. ಲಖಿಸರಾಯ್‌ನಲ್ಲಿ ಸರಸ್ವತಿ ಪೂಜೆ ವೇಳೆ ಬಿಹಾರ ವಿಧಾನಸಭಾ ಸ್ಪೀಕರ್ ವಿಜಯ್ ಸಿನ್ಹಾ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಡಿಎಸ್‌ಪಿ ಮತ್ತು ಠಾಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದ ವಿಚಾರದಲ್ಲಿ ಶುಕ್ರವಾರ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು. ಪ್ರತಿಪಕ್ಷದ ಸದಸ್ಯರು ಮತ್ತು ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗಿದರು ಮತ್ತು ಇದು ಗಂಭೀರ ವಿಷಯವಾಯಿತು.

ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಡಿಎಸ್‌ಪಿ ಹಾಗೂ ಠಾಣಾ ಪ್ರಭಾರ ಅಧಿಕಾರಿಯನ್ನು ತಮ್ಮ ಅಧೀನದಲ್ಲಿರುವ ಪ್ರದೇಶದಿಂದ ವಜಾಗೊಳಿಸುವಂತೆ ಸ್ಪೀಕರ್ ಸೂಚನೆ ನೀಡಿದ್ದರೂ ಸಹ ಜಾರಿಯಾಗಿಲ್ಲ. ಈ ಬಗ್ಗೆ ಸದಸ್ಯರಲ್ಲಿಯೇ ಅಸಮಾಧಾನವಿದೆ. ಇಂತಹ ಅಧಿಕಾರಿಗಳ ವಿರುದ್ಧ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.