ETV Bharat / bharat

ನೀರಜ್ ಚೋಪ್ರಾ ಉಡುಗೊರೆಯಾಗಿ ಪಡೆದ ಕಾರಿಗೆ ಸಾರಿಗೆ ಬಸ್ ಡಿಕ್ಕಿ

author img

By

Published : May 6, 2022, 8:13 PM IST

ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಾಗ ನೀರಜ್ ಚೋಪ್ರಾ ಅವರಿಗೆ ಉಡುಗೊರೆಯಾಗಿ ಬಂದ ಕಾರನ್ನು ಶುಕ್ರವಾರ ಚಿಕ್ಕಪ್ಪ ಭೀಮ್ ಚೋಪ್ರಾ ಚಾಲನೆ ಮಾಡುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.

Neeraj Chopra car accident in panipat
ನೀರಜ್ ಚೋಪ್ರಾ ಉಡುಗೊರೆಯಾಗಿ ಪಡೆದ ಕಾರಿಗೆ ಸಾರಿಗೆ ಬಸ್ ಡಿಕ್ಕಿ

ಪಾಣಿಪತ್ (ಹರಿಯಾಣ): ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ಸೇರಿದ ಕಾರಿಗೆ ಹರಿಯಾಣದ ಸಾರಿಗೆ ಬಸ್​​ ಡಿಕ್ಕಿ ಹೊಡೆದ ಘಟನೆ ಪಾಣಿಪತ್​ನಲ್ಲಿ ನಡೆದಿದೆ. ಆದರೆ, ನೀರಜ್ ಚೋಪ್ರಾ ಇರಲಿಲ್ಲ. ಅವರ ಚಿಕ್ಕಪ್ಪ ಭೀಮ್ ಚೋಪ್ರಾ ಪ್ರಯಾಣಿಸುತ್ತಿದ್ದರು. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ನೀರಜ್ ಚೋಪ್ರಾ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಾಗ ಈ ಕಾರನ್ನು ಉಡುಗೊರೆಯಾಗಿ ಪಡೆದರು. ಶುಕ್ರವಾರ ಚಿಕ್ಕಪ್ಪ ಭೀಮ್​ ಚೋಪ್ರಾ ಕಾರು ತೆಗೆದುಕೊಂಡು ಹೊರ ಬಂದಾಗ ಮಾರ್ಗ ಮಧ್ಯೆ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ಚಿಕ್ಕಪ್ಪನಿಗೆ ಯಾವುದೇ ಗಾಯಗಳು ಆಗಿಲ್ಲ.

ನೀರಜ್ ಚೋಪ್ರಾ ಉಡುಗೊರೆಯಾಗಿ ಪಡೆದ ಕಾರಿಗೆ ಸಾರಿಗೆ ಬಸ್ ಡಿಕ್ಕಿ

ಆದರೆ, ಈ ಅಪಘಾತದ ನಂತರ ಬಸ್​ ಚಾಲಕ ಮತ್ತು ಭೀಮ್​ ಚೋಪ್ರಾ ನಡುವೆ ವಾಗ್ವಾದ ನಡೆದಿದೆ. ಇದರ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇನ್ನು, ಭೀಮ್​ ಚೋಪ್ರಾ ಅವರು ನೀರಜ್ ಚೋಪ್ರಾ ಚಿಕ್ಕಪ್ಪ ಎಂದು ತಿಳಿದ ಬಳಿಕ ಚಾಲಕ ತಪ್ಪಾಗಿದೆ ಎಂದು ಕೈ ಮುಗಿದ್ದು, ಇದರಿಂದ ಈ ಪ್ರಕರಣ ಅಲ್ಲಿಯೇ ಸುಖಾಂತ್ಯವಾಗಿದೆ. ಜೊತೆಗೆ ಪೊಲೀಸರು ಸಹ ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಬದಲಾವಣೆ ತರಬೇಕು: ಬೇಕಾದರೆ ಯುಪಿಯಿಂದ ಬುಲ್ಡೋಜರ್‌ ಕಳುಹಿಸುತ್ತೇನೆ ಎಂದ ಕಂಗನಾ

ಪಾಣಿಪತ್ (ಹರಿಯಾಣ): ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ಸೇರಿದ ಕಾರಿಗೆ ಹರಿಯಾಣದ ಸಾರಿಗೆ ಬಸ್​​ ಡಿಕ್ಕಿ ಹೊಡೆದ ಘಟನೆ ಪಾಣಿಪತ್​ನಲ್ಲಿ ನಡೆದಿದೆ. ಆದರೆ, ನೀರಜ್ ಚೋಪ್ರಾ ಇರಲಿಲ್ಲ. ಅವರ ಚಿಕ್ಕಪ್ಪ ಭೀಮ್ ಚೋಪ್ರಾ ಪ್ರಯಾಣಿಸುತ್ತಿದ್ದರು. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ನೀರಜ್ ಚೋಪ್ರಾ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಾಗ ಈ ಕಾರನ್ನು ಉಡುಗೊರೆಯಾಗಿ ಪಡೆದರು. ಶುಕ್ರವಾರ ಚಿಕ್ಕಪ್ಪ ಭೀಮ್​ ಚೋಪ್ರಾ ಕಾರು ತೆಗೆದುಕೊಂಡು ಹೊರ ಬಂದಾಗ ಮಾರ್ಗ ಮಧ್ಯೆ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ಚಿಕ್ಕಪ್ಪನಿಗೆ ಯಾವುದೇ ಗಾಯಗಳು ಆಗಿಲ್ಲ.

ನೀರಜ್ ಚೋಪ್ರಾ ಉಡುಗೊರೆಯಾಗಿ ಪಡೆದ ಕಾರಿಗೆ ಸಾರಿಗೆ ಬಸ್ ಡಿಕ್ಕಿ

ಆದರೆ, ಈ ಅಪಘಾತದ ನಂತರ ಬಸ್​ ಚಾಲಕ ಮತ್ತು ಭೀಮ್​ ಚೋಪ್ರಾ ನಡುವೆ ವಾಗ್ವಾದ ನಡೆದಿದೆ. ಇದರ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇನ್ನು, ಭೀಮ್​ ಚೋಪ್ರಾ ಅವರು ನೀರಜ್ ಚೋಪ್ರಾ ಚಿಕ್ಕಪ್ಪ ಎಂದು ತಿಳಿದ ಬಳಿಕ ಚಾಲಕ ತಪ್ಪಾಗಿದೆ ಎಂದು ಕೈ ಮುಗಿದ್ದು, ಇದರಿಂದ ಈ ಪ್ರಕರಣ ಅಲ್ಲಿಯೇ ಸುಖಾಂತ್ಯವಾಗಿದೆ. ಜೊತೆಗೆ ಪೊಲೀಸರು ಸಹ ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಬದಲಾವಣೆ ತರಬೇಕು: ಬೇಕಾದರೆ ಯುಪಿಯಿಂದ ಬುಲ್ಡೋಜರ್‌ ಕಳುಹಿಸುತ್ತೇನೆ ಎಂದ ಕಂಗನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.