ETV Bharat / bharat

ಇಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ತಿರಸ್ಕಾರ.. ಸ್ವತಂತ್ರ ಅಭ್ಯರ್ಥಿ ಬೆಂಬಲಿಸಲು ನಿರ್ಧಾರ

author img

By

Published : Mar 30, 2021, 7:16 AM IST

ತಲಶೇರಿಯಲ್ಲಿ, ಬಿಜೆಪಿಯ ಕಣ್ಣೂರು ಜಿಲ್ಲಾಧ್ಯಕ್ಷರು ಎನ್‌ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಪರಿಶೀಲನೆಯಲ್ಲಿ ನಾಮಪತ್ರಗಳು ಅಪೂರ್ಣ ಎಂದು ಪರಿಗಣಿಸಲ್ಪಟ್ಟವು ಮತ್ತು ತಿರಸ್ಕರಿಸಲ್ಪಟ್ಟಿದೆ. ತನ್ನ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆ ಸ್ವತಂತ್ರ ಅಭ್ಯರ್ಥಿ ಬೆಂಬಲಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ.

ತಲಶೇರಿಯಲ್ಲಿಯೂ ಬಿಜೆಪಿ ಅಭ್ಯರ್ಥಿ ನಾಮಪತ್ರ ತಿರಸ್ಕಾರ
ತಲಶೇರಿಯಲ್ಲಿಯೂ ಬಿಜೆಪಿ ಅಭ್ಯರ್ಥಿ ನಾಮಪತ್ರ ತಿರಸ್ಕಾರ

ತಿರುವನಂತಪುರಂ (ಕೇರಳ): ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಪಕ್ಷಕ್ಕೆ ಇದು ಗಮನಾರ್ಹ ಪ್ರಭಾವ ಬೀರಬಹುದಾಗಿದೆ. ಇದರಿಂದಾಗಿ ತಲಶೇರಿಯಲ್ಲಿ ಎನ್​ಡಿಎ ಮೈತ್ರಿಕೂಟದಿಂದ ಯಾವುದೇ ಅಭ್ಯರ್ಥಿ ಕಣಕ್ಕಿಳಿಯದಂತಾಗಿದೆ.

ತಲಶೇರಿಯಲ್ಲಿ, ಬಿಜೆಪಿಯ ಕಣ್ಣೂರು ಜಿಲ್ಲಾಧ್ಯಕ್ಷರು ಎನ್‌ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಪರಿಶೀಲನೆಯಲ್ಲಿ ನಾಮಪತ್ರಗಳು ಅಪೂರ್ಣ ಎಂದು ಪರಿಗಣಿಸಲ್ಪಟ್ಟವು ಮತ್ತು ತಿರಸ್ಕರಿಸಲ್ಪಟ್ಟಿದೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ, ಪಕ್ಷದ ಅಧ್ಯಕ್ಷರ ಸಹಿ ನಾಮನಿರ್ದೇಶನದಲ್ಲಿ ಅಗತ್ಯವಾಗಿತ್ತು. ಬಿಜೆಪಿ ಅಭ್ಯರ್ಥಿ ಸಲ್ಲಿಸಿದ ನಾಮಪತ್ರಗಳಲ್ಲಿ ಈ ಸಹಿ ಇಲ್ಲದಿರುವುದು ನಾಮಪತ್ರ ತಿರಸ್ಕೃತಕ್ಕೆ ಕಾರಣವಾಗಿದೆ.

ತನ್ನ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆ ಸ್ವತಂತ್ರ ಅಭ್ಯರ್ಥಿ ಬೆಂಬಲಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಅಂತಯೇ ಇನ್ನೂ ಮೂರು ಕಡೆ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರಗೊಂಡಿದ್ದು, ದೇವಿಕುಲಂ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಎನ್ ಗಣೇಶನ್ ಮತ್ತು ಗುರುವಾಯೂರ್ ಕ್ಷೇತ್ರದಲ್ಲಿ ಡೆಮಾಕ್ರಟಿಕ್ ಸಾಮಾಜಿಕ ನ್ಯಾಯ ಪಕ್ಷವನ್ನು ಪ್ರತಿನಿಧಿಸುವ ದಿಲೀಪ್ ನಾಯರ್ ಅವರನ್ನು ಎನ್​ಡಿಎ ಬೆಂಬಲಿಸಲಿದೆ.

ತಿರುವನಂತಪುರಂ (ಕೇರಳ): ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಪಕ್ಷಕ್ಕೆ ಇದು ಗಮನಾರ್ಹ ಪ್ರಭಾವ ಬೀರಬಹುದಾಗಿದೆ. ಇದರಿಂದಾಗಿ ತಲಶೇರಿಯಲ್ಲಿ ಎನ್​ಡಿಎ ಮೈತ್ರಿಕೂಟದಿಂದ ಯಾವುದೇ ಅಭ್ಯರ್ಥಿ ಕಣಕ್ಕಿಳಿಯದಂತಾಗಿದೆ.

ತಲಶೇರಿಯಲ್ಲಿ, ಬಿಜೆಪಿಯ ಕಣ್ಣೂರು ಜಿಲ್ಲಾಧ್ಯಕ್ಷರು ಎನ್‌ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಪರಿಶೀಲನೆಯಲ್ಲಿ ನಾಮಪತ್ರಗಳು ಅಪೂರ್ಣ ಎಂದು ಪರಿಗಣಿಸಲ್ಪಟ್ಟವು ಮತ್ತು ತಿರಸ್ಕರಿಸಲ್ಪಟ್ಟಿದೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ, ಪಕ್ಷದ ಅಧ್ಯಕ್ಷರ ಸಹಿ ನಾಮನಿರ್ದೇಶನದಲ್ಲಿ ಅಗತ್ಯವಾಗಿತ್ತು. ಬಿಜೆಪಿ ಅಭ್ಯರ್ಥಿ ಸಲ್ಲಿಸಿದ ನಾಮಪತ್ರಗಳಲ್ಲಿ ಈ ಸಹಿ ಇಲ್ಲದಿರುವುದು ನಾಮಪತ್ರ ತಿರಸ್ಕೃತಕ್ಕೆ ಕಾರಣವಾಗಿದೆ.

ತನ್ನ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆ ಸ್ವತಂತ್ರ ಅಭ್ಯರ್ಥಿ ಬೆಂಬಲಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಅಂತಯೇ ಇನ್ನೂ ಮೂರು ಕಡೆ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರಗೊಂಡಿದ್ದು, ದೇವಿಕುಲಂ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಎನ್ ಗಣೇಶನ್ ಮತ್ತು ಗುರುವಾಯೂರ್ ಕ್ಷೇತ್ರದಲ್ಲಿ ಡೆಮಾಕ್ರಟಿಕ್ ಸಾಮಾಜಿಕ ನ್ಯಾಯ ಪಕ್ಷವನ್ನು ಪ್ರತಿನಿಧಿಸುವ ದಿಲೀಪ್ ನಾಯರ್ ಅವರನ್ನು ಎನ್​ಡಿಎ ಬೆಂಬಲಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.