ETV Bharat / bharat

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ: ಮನುಷ್ಯನ ಉಳಿವಿಗೆ ಇದು ಮಾರಕ

author img

By

Published : Dec 2, 2020, 6:00 AM IST

ವಿಷಾನಿಲಗಳಿಂದಾಗಿ ಶುದ್ಧಗಾಳಿ ಸಿಗುತ್ತಿಲ್ಲ. ಜಲಮೂಲಗಳ ನಾಶದಿಂದ ಕುಡಿಯುವ ನೀರು ಮಲಿನವಾಗಿದೆ. ರಾಸಯನಿಕಗಳ ಬಳಕೆಯಿಂದಾಗಿ ಮಣ್ಣು ಕೂಡ ಕಲುಷಿತವಾಗುತ್ತಿದೆ. ಕಣ್ಣಿಗೆ ಹಾನಿ ಮಾಡುವ ಬೆಳಕಿನಮಾಲಿನ್ಯ, ಶ್ರವಣಮಾಂದ್ಯರನ್ನಾಗಿ ಮಾಡುವ ಶಬ್ದಮಾಲಿನ್ಯ, ಆರೋಗ್ಯ ಕೆಡಿಸುವ ವಿಕಿರಣ ಮಾಲಿನ್ಯ. ಇವೆಲ್ಲವೂ ಭೂಮಿಯ ಮೇಲೆ ಮನುಷ್ಯನ ಉಳಿವಿಗೆ ಮಾರಕವಾಗುತ್ತಿವೆ. ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಡಿ.2ರಂದು ಆಚರಿಸಲಾಗುತ್ತದೆ.

ಮಾಲಿನ್ಯ ನಿಯಂತ್ರಣ ದಿನ
ಮಾಲಿನ್ಯ ನಿಯಂತ್ರಣ ದಿನ

ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಡಿ.2 ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ. ಭಾರತದ ರಾಷ್ಟ್ರೀಯ ಆರೋಗ್ಯ ಪೋರ್ಟಲ್ ಪ್ರಕಾರ, ಪ್ರತಿವರ್ಷ ಜಾಗತಿಕವಾಗಿ ಸುಮಾರು 7 ಮಿಲಿಯನ್ ಜನರು ವಾಯುಮಾಲಿನ್ಯದಿಂದ ಸಾಯುತ್ತಿದ್ದಾರೆ. ಜಾಗತಿಕವಾಗಿ ಹತ್ತು ಜನರಲ್ಲಿ ಒಂಬತ್ತು ಜನರಿಗೆ ಸುರಕ್ಷಿತ ಗಾಳಿ ಸಿಗುತ್ತಿಲ್ಲ ಎಂದು ಅದು ಹೇಳುತ್ತದೆ. ಗಾಳಿಯಲ್ಲಿರುವ ಮಾಲಿನ್ಯಕಾರಕಗಳು ದೇಹದಲ್ಲಿರುವ ರಕ್ಷಣಾತ್ಮಕ ರಕ್ಷಕಾಯಗಳನ್ನು ಹಾದುಹೋಗಬಹುದು. ಇದರಿಂದ ಶ್ವಾಸಕೋಶ, ಮೆದುಳು ಮತ್ತು ಹೃದಯಕ್ಕೆ ಹಾನಿಯಾಗುತ್ತದೆ. ಇದು ಓಝೋನ್ ಪದರದ ಹಾನಿಗೆ ಕಾರಣವಾಗಿವೆ.

ಈ ದಿನಾಚರಣೆಯ ಉದ್ದೇಶ:

ಕೈಗಾರಿಕಾ ವಿಪತ್ತುಗಳನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ ಬಗ್ಗೆ ಜಾಗೃತಿ ಮೂಡಿಸುವುದು.

ಕೈಗಾರಿಕಾ ಪ್ರಕ್ರಿಯೆಗಳು ಅಥವಾ ಮಾನವ ನಿರ್ಲಕ್ಷ್ಯದಿಂದ ಉತ್ಪತ್ತಿಯಾಗುವ ಮಾಲಿನ್ಯವನ್ನು ತಡೆಗಟ್ಟುವುದು.

ಮಾಲಿನ್ಯ ನಿಯಂತ್ರಣ ಕಾಯ್ದೆಗಳ ಮಹತ್ವದ ಬಗ್ಗೆ ಜನರಿಗೆ ಮತ್ತು ಕೈಗಾರಿಕೆಗಳಿಗೆ ಅರಿವು ಮೂಡಿಸುವುದು.

ಇತಿಹಾಸ:

ಭೋಪಾಲ್ ಅನಿಲ ದುರಂತ ನೆನಪಿಗಾಗಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಪ್ರತಿ ವರ್ಷ ಡಿಸೆಂಬರ್ 2 ರಂದು ಆಚರಿಸಲಾಗುತ್ತದೆ. ಭೋಪಾಲ್ ಅನಿಲ ವಿಪತ್ತನ್ನು ವಿಶ್ವದ ಅತ್ಯಂತ ಭೀಕರ ಕೈಗಾರಿಕಾ ದುರಂತವೆಂದು ಪರಿಗಣಿಸಲಾಗಿದೆ. ಇದು ಹೆಚ್ಚು ಹಾನಿಕಾರಕ ಮೀಥೈಲ್ ಐಸೊಸೈನೇಟ್ (ಎಂಐಸಿ) ಅನಿಲದ ಬಿಡುಗಡೆಯಿಂದ ಸಂಭವಿಸಿದೆ. ಈ ದುರಂತದಲ್ಲಿ ಸುಮಾರು 3787 ಜನರು ಸಾವನ್ನಪ್ಪಿದ್ದಾರೆ. ಪಟಾಕಿ, ಬಾಂಬ್ ಸ್ಫೋಟ, ಕೈಗಾರಿಕಾ ಪ್ರದೇಶಗಳಿಂದ ವಿಷಕಾರಿ ಅನಿಲಗಳು ಸೋರಿಕೆ, ವಾಹನಗಳು ಮುಂತಾದವು ಮಾಲಿನ್ಯಕ್ಕೆ ಹಲವು ಕಾರಣಗಳಾಗಿವೆ.

ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶ ಕೈಗಾರಿಕಾ ವಿಪತ್ತುಗಳ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವುದು. ಮಾಲಿನ್ಯ ನಿಯಂತ್ರಣಕ್ಕೆ ಪ್ರಯತ್ನಗಳನ್ನು ಮಾಡುವುದು. ಇವುಗಳ ಜೊತೆಗೆ ಈ ದಿನವನ್ನು ಆಚರಿಸುವ ಉದ್ದೇಶವು ನಮ್ಮ ಗಾಳಿ, ನೀರು ಮತ್ತು ಮಣ್ಣನ್ನು ಕಲುಷಿತವಾಗದಂತೆ ರಕ್ಷಿಸಲು ಜನರನ್ನು ಪ್ರೋತ್ಸಾಹಿಸುವುದು. ಮಾಲಿನ್ಯವನ್ನು ನಿಯಂತ್ರಿಸಲು ಸರ್ಕಾರ ಅನೇಕ ಕಾನೂನುಗಳನ್ನು ರಚಿಸಿದೆ. ಆದ್ದರಿಂದ ಪ್ರತಿ ವರ್ಷ ಡಿಸೆಂಬರ್ 2 ರಂದು ಸರ್ಕಾರ ರಚಿಸಿದ ಕಾನೂನುಗಳ ಬಗ್ಗೆ ಗಮನ ಹರಿಸಲು ಮತ್ತು ಜನರಲ್ಲಿ ಮುಖ್ಯವಾಗಿ ಕೈಗಾರಿಕೆಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ.

ದೇಶದಲ್ಲಿ ಸುಮಾರು 14 ಕೋಟಿ ಜನ ಕಲುಷಿತ ಗಾಳಿಯನ್ನೇ ಸೇವಿಸಿ ಸಾವಿಗೆ ಸನಿಹವಾಗುತ್ತಿದ್ದಾರೆ. 2017ರಲ್ಲಿ ಸುಮಾರು 2 ಲಕ್ಷ ಮಕ್ಕಳು ವಾಯು ಮಾಲಿನ್ಯದಿಂದಾಗಿಯೇ ಜೀವ ಕಳೆದುಕೊಂಡಿದ್ದಾರೆ. ಬಿಡಿಸಿ ಹೇಳುವುದಾದರೆ ಪ್ರತಿ ಮೂರು ನಿಮಿಷಕ್ಕೊಂದು ಮಗು ಸಾಯುತ್ತಿದೆ ಎನ್ನುತ್ತಿವೆ ಕೆಲವು ವರದಿಗಳು. ಅಕಾಲಿಕವಾಗಿ ಸಾವಿಗೀಡಾಗುತ್ತಿರುವವರ ಪೈಕಿ ಶೇ.26ರಷ್ಟು ಮಂದಿ ಮಾಲಿನ್ಯ ಕಾರಣಗಳಿಂದಾಗಿಯೇ ಜೀವ ಕಳೆದುಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಅತೀ ಹೆಚ್ಚು ಮಾಲಿನ್ಯ ಹೊಂದಿರುವ ನಗರಗಳು:

  1. 1.ಮೀರತ್, ಉತ್ತರ ಪ್ರದೇಶ - 342 ಎಕ್ಯೂಐ(Air quality Index)
  2. 2.ಮುಜಫರ್​ನಗರ, ಉತ್ತರ ಪ್ರದೇಶ-329 ಎಕ್ಯೂಐ
  3. 3.ಪಿತಾಂಪುರ, ದೆಹಲಿ-324 ಎಕ್ಯೂಐ
  4. 4.ದಾಸ್ನಾ, ಉತ್ತರ ಪ್ರದೇಶ-322 ಎಕ್ಯೂಐ
  5. 5.ಬವಾನ, ದೆಹಲಿ-316 ಎಕ್ಯೂಐ
  6. 6.ಲೋನಿ, ಉತ್ತರ ಪ್ರದೇಶ-312 ಎಕ್ಯೂಐ
  7. 7.ಗ್ರೇಟರ್ ನೋಯ್ಡಾ, ಉತ್ತರ ಪ್ರದೇಶ-304 ಎಕ್ಯೂಐ
  8. 8.ಧರುಹೆರಾ, ಹರಿಯಾಣ-292 ಎಕ್ಯೂಐ
  9. 9.ಬುಲಂದ್‌ಶಹರ್, ಉತ್ತರ ಪ್ರದೇಶ-289 ಎಕ್ಯೂಐ
  10. 10.ದೌರಾಲಾ, ಉತ್ತರ ಪ್ರದೇಶ-283 ಎಕ್ಯೂಐ

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ನನ್ನು 1974ರ ಸೆಪ್ಟೆಂಬರ್‌ನಲ್ಲಿ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ ಅಡಿಯಲ್ಲಿ ರಚಿಸಲಾಯಿತು. ಇದಲ್ಲದೆ, ವಾಯು(ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಯಡಿ ಸಿಪಿಸಿಬಿಗೆ ಅಧಿಕಾರ ಮತ್ತು ಕಾರ್ಯಗಳನ್ನು ವಹಿಸಲಾಯಿತು. ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ತಾಂತ್ರಿಕ ಮಾರ್ಗದರ್ಶನ ನೀಡುತ್ತದೆ.

ವಿಶ್ವಾದ್ಯಂತ ಹತ್ತು ಜನರಲ್ಲಿ ಒಂಬತ್ತು ಜನರು ಸುರಕ್ಷಿತ ಗಾಳಿ ಲಭ್ಯವಾಗುತ್ತಿಲ್ಲ.ವಾಯುಮಾಲಿನ್ಯವು ಜಾಗತಿಕವಾಗಿ ಪ್ರತಿವರ್ಷ 7 ಮಿಲಿಯನ್ ಜನರನ್ನು ಕೊಲ್ಲುತ್ತದೆ. ಅವರಲ್ಲಿ 4 ಮಿಲಿಯನ್ ಜನರು ಒಳಾಂಗಣ ವಾಯುಮಾಲಿನ್ಯದಿಂದ ಸಾಯುತ್ತಾರೆ.

ಮೈಕ್ರೋಸ್ಕೋಪಿಕ್ ಮಾಲಿನ್ಯಕಾರಕಗಳು (ಪಿಎಂ 2.5) ತುಂಬಾ ಚಿಕ್ಕದಾಗಿದ್ದು, ಅವು ಶ್ವಾಸಕೋಶ, ಹೃದಯ ಮತ್ತು ಮೆದುಳಿಗೆ ಹಾನಿ ಮಾಡುತ್ತವೆ.

ಪ್ರಮುಖ ಮಾಲಿನ್ಯಕಾರಕಗಳಲ್ಲಿ ಕಣಕಣಗಳು, ಇಂಧನ ದಹನದಿಂದ ಉಂಟಾಗುವ ಘನ ಮತ್ತು ದ್ರವ ಹನಿಗಳ ಮಿಶ್ರಣ, ರಸ್ತೆ ಸಂಚಾರದಿಂದ ಸಾರಜನಕ ಡೈಆಕ್ಸೈಡ್, ಕೈಗಾರಿಕಾ ಸೌಲಭ್ಯಗಳು ಮತ್ತು ವಾಹನ ಹೊರಸೂಸುವಿಕೆಯಿಂದ ಮಾಲಿನ್ಯಕಾರಕಗಳೊಂದಿಗೆ ಸೂರ್ಯನ ಬೆಳಕಿನ ಪ್ರತಿಕ್ರಿಯೆಯಿಂದ ಉಂಟಾಗುವ ಭೂ ಮಟ್ಟದಲ್ಲಿ ಓಝೋನ್​, ಸಲ್ಫರ್ ಡೈಆಕ್ಸೈಡ್ ಮತ್ತು ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ಉಂಟಾಗುವ ಮಾಲಿನ್ಯ.

ಮಕ್ಕಳು ಮತ್ತು ವೃದ್ಧರು ವಾಯುಮಾಲಿನ್ಯಕ್ಕೆ ಹೆಚ್ಚು ಒಳಗಾಗಿದ್ದಾರೆ. ಹವಾಮಾನ ಬದಲಾವಣೆ ವಾಯುಮಾಲಿನ್ಯಕ್ಕೆ ಒಂದು ಕಾರಣವಾಗಿದೆ.

ವಾಯುಮಾಲಿನ್ಯವನ್ನು ಹೇಗೆ ನಿಯಂತ್ರಿಸುವುದು:

ಆರೋಗ್ಯವನ್ನು ಹಾನಿಗೊಳಿಸುವ ಹೊಗೆಯಂತೆ ತ್ಯಾಜ್ಯವನ್ನು ಸುಡಬೇಡಿ.

ನವೀಕರಿಸಬಹುದಾದ ಶಕ್ತಿಯ ಪುನರ್​ಬಳಕೆಯನ್ನು ಉತ್ತೇಜಿಸಿ.

ನಗರ ಪ್ರದೇಶಗಳಲ್ಲಿನ ಮಾಲಿನ್ಯವನ್ನು ಕಡಿಮೆ ಮಾಡಲು ನಗರ ಅರಣ್ಯ ಮತ್ತು ಮನೆಯ ಛಾವಣೆ ಮೇಲೆ ಚಿಕ್ಕದಾಗ ತೋಟವನ್ನು ನಿರ್ಮಿಸಿ.

ವೈಜ್ಞಾನಿಕ ವಿಧಾನದಲ್ಲಿ ಕಸ ಸಂಗ್ರಹಣೆ ಮತ್ತು ನಿರ್ವಹಣೆ

ಜಲಮೂಲಗಳ ಸಂರಕ್ಷಣೆ ಮತ್ತು ನೀರಿನ ಮಿತಬಳಕೆ

ಅಪಾಯಕಾರಿ ವಸ್ತು, ಉಪಕರಣಗಳ‌ ವೈಜ್ಞಾನಿಕ ನಿರ್ವಹಣೆ

ಪ್ಲಾಸ್ಟಿಕ್ ಬಳಕೆಗೆ ನಿಷೇಧ

ಆಹಾರ ಪದಾರ್ಥಗಳನ್ನು ಪೋಲಾಗದಂತೆ ತಡೆಯುವುದು

ಭಾರತದಲ್ಲಿ ಮಾಲಿನ್ಯದಿಂದಾಗಿ ಸಾವುಗಳು:

ಭಾರತದಲ್ಲಿ ಹೊರಾಂಗಣ ಮತ್ತು ಮನೆಯ ವಾಯುಮಾಲಿನ್ಯಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಪಾರ್ಶ್ವವಾಯು, ಹೃದಯಾಘಾತ, ಮಧುಮೇಹ, ಶ್ವಾಸಕೋಶದ ಕ್ಯಾನ್ಸರ್, ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳು ಮತ್ತು ನವಜಾತ ಶಿಶುವಿನ ಕಾಯಿಲೆಗಳಿಂದ 2019ರಲ್ಲಿ ಭಾರತದಲ್ಲಿ 1.67 ದಶಲಕ್ಷಕ್ಕೂ ಹೆಚ್ಚಿನ ಸಾವು ಸಂಭವಿಸಿದೆ.

ಜಾಗತಿಕವಾಗಿ ವಾಯುಮಾಲಿನ್ಯವು 2019ರಲ್ಲಿ 6.67 ಮಿಲಿಯನ್ ಸಾವುಗಳಿಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಇದು ಒಟ್ಟು ಜಾಗತಿಕ ಸಾವುಗಳಲ್ಲಿ ಸುಮಾರು ಶೇ.12ರಷ್ಟು ಇದೆ. ಇದು 2019 ರಲ್ಲಿ ವಿಶ್ವಾದ್ಯಂತದ ಆರಂಭಿಕ ಸಾವಿಗೆ ನಾಲ್ಕನೇ ಪ್ರಮುಖ ಅಪಾಯಕಾರಿ ಅಂಶವಾಗಿದೆ.

ಹಲವಾರು ದೇಶಗಳು ವಿಶೇಷವಾಗಿ ಭಾರತ ಮತ್ತು ಚೀನಾ, 2010-19ರ ನಡುವೆ ಕಳೆದ ಒಂದು ದಶಕದಲ್ಲಿ ಸ್ವಚ್ಛವಾದ ಅಡುಗೆ ಇಂಧನಗಳನ್ನು ಲಭ್ಯವಾಗುವಂತೆ ಮಾಡುವ ಮೂಲಕ ಮನೆಯ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಮುಂದಾಗಿವೆ.

ಭಾರತವು ವಾರ್ಷಿಕವಾಗಿ 10.7 ಲಕ್ಷ ಕೋಟಿ (150 ಬಿಲಿಯನ್ ಡಾಲರ್) ಅಥವಾ ಭಾರತದ ಜಿಡಿಪಿಯ ಶೇಕಡಾ 5.4 ರಷ್ಟನ್ನು ಭರಿಸಲಿದೆ ಎಂದು ಅಂದಾಜಿಸಲಾಗಿದೆ. ಇದು ವಿಶ್ವದಾದ್ಯಂತ ಪಳೆಯುಳಿಕೆ ಇಂಧನ ವಾಯು ಮಾಲಿನ್ಯದಿಂದ ಮೂರು ಪಟ್ಟು ವೆಚ್ಚವಾಗಿದೆ. ಪರಿಸರ ಸಂಸ್ಥೆ ಗ್ರೀನ್‌ಪೀಸ್ ಆಗ್ನೇಯ ಏಷ್ಯಾದ ವರದಿಯ ಪ್ರಕಾರ, ಇಂಧನ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರದ ಒಳಹರಿವಿನೊಂದಿಗೆ ಅದು ಸೆಕೆಂಡಿಗೆ 3.39 ಲಕ್ಷ ರೂ. ಆಗಿದೆ.

ಭಾರತವು ಜಿಡಿಪಿಯ ಶೇಕಡಾ 1.28 ರಷ್ಟು ಆರೋಗ್ಯಕ್ಕಾಗಿ ಖರ್ಚುಮಾಡಿದರೆ, ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ಉಂಟಾಗುವ ವಾಯುಮಾಲಿನ್ಯವನ್ನು ತಡೆಯಲು ಭಾರತದ ಜಿಡಿಪಿಯ ಶೇಕಡಾ 5.4 ರಷ್ಟು ಖರ್ಚಾಗುತ್ತದೆ.

ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಬಜೆಟ್‌ನಲ್ಲಿ ಕೇವಲ 69,000 ಕೋಟಿ ರೂ.ಮೀಸಲಿಡುತ್ತದೆ.

ಮಾಲಿನ್ಯವನ್ನು ನಿಯಂತ್ರಿಸಲು ಮೋದಿ ಉಪಕ್ರಮಗಳು

ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ: 2019 ರ ಜನವರಿಯಲ್ಲಿ ಸರ್ಕಾರವು ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಭಾಯಿಸಲು ರಾಷ್ಟ್ರೀಯ ಮಟ್ಟದ ಕಾರ್ಯತಂತ್ರವಾದ ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮವನ್ನು ಪ್ರಾರಂಭಿಸಿತು. ಎನ್‌ಸಿಎಪಿ ಮಧ್ಯಕಾಲೀನ, ಐದು ವರ್ಷಗಳ ಕ್ರಿಯಾ ಯೋಜನೆಯಾಗಿದ್ದು, 2019 ರೊಂದಿಗೆ ಮೊದಲ ವರ್ಷವಾಗಿರುತ್ತದೆ.

ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ): ದೇಶದ ಪ್ರಮುಖ ನಗರ ಕೇಂದ್ರಗಳಲ್ಲಿನ ಗಾಳಿಯ ಗುಣಮಟ್ಟವನ್ನು ನೈಜ-ಸಮಯದ ಆಧಾರದ ಮೇಲೆ ಮೇಲ್ವಿಚಾರಣೆ ಮಾಡಲು ಮತ್ತು ತಗ್ಗಿಸುವ ಕ್ರಮ ತೆಗೆದುಕೊಳ್ಳಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕವನ್ನು (ಎಕ್ಯೂಐ) ಪ್ರಾರಂಭಿಸಿದರು.

ಹಸಿರು ಮನೆ ವಾತಾವರಣದ ಮೇಲೆ ದುಷ್ಪರಿಣಾಮ ಬೀರುವ ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕ ಮತ್ತು ಚೀನಾ ಇವೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮಾಲಿನ್ಯ ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಯಾವ ಪ್ರಯೋಜನವೂ ಆಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತಿದೆ. ಅತಿ ಹೆಚ್ಚು ಪ್ರಮಾಣದಲ್ಲಿ ವಾಯುಮಾಲಿನ್ಯವಿರುವ ವಿಶ್ವದ 15 ನಗರಗಳಲ್ಲಿ 13 ನಗರಗಳು ಭಾರತದಲ್ಲೇ ಇವೆ ಎಂದು ಎಚ್ಚರಿಸಿದೆ.

ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಡಿ.2 ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ. ಭಾರತದ ರಾಷ್ಟ್ರೀಯ ಆರೋಗ್ಯ ಪೋರ್ಟಲ್ ಪ್ರಕಾರ, ಪ್ರತಿವರ್ಷ ಜಾಗತಿಕವಾಗಿ ಸುಮಾರು 7 ಮಿಲಿಯನ್ ಜನರು ವಾಯುಮಾಲಿನ್ಯದಿಂದ ಸಾಯುತ್ತಿದ್ದಾರೆ. ಜಾಗತಿಕವಾಗಿ ಹತ್ತು ಜನರಲ್ಲಿ ಒಂಬತ್ತು ಜನರಿಗೆ ಸುರಕ್ಷಿತ ಗಾಳಿ ಸಿಗುತ್ತಿಲ್ಲ ಎಂದು ಅದು ಹೇಳುತ್ತದೆ. ಗಾಳಿಯಲ್ಲಿರುವ ಮಾಲಿನ್ಯಕಾರಕಗಳು ದೇಹದಲ್ಲಿರುವ ರಕ್ಷಣಾತ್ಮಕ ರಕ್ಷಕಾಯಗಳನ್ನು ಹಾದುಹೋಗಬಹುದು. ಇದರಿಂದ ಶ್ವಾಸಕೋಶ, ಮೆದುಳು ಮತ್ತು ಹೃದಯಕ್ಕೆ ಹಾನಿಯಾಗುತ್ತದೆ. ಇದು ಓಝೋನ್ ಪದರದ ಹಾನಿಗೆ ಕಾರಣವಾಗಿವೆ.

ಈ ದಿನಾಚರಣೆಯ ಉದ್ದೇಶ:

ಕೈಗಾರಿಕಾ ವಿಪತ್ತುಗಳನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ ಬಗ್ಗೆ ಜಾಗೃತಿ ಮೂಡಿಸುವುದು.

ಕೈಗಾರಿಕಾ ಪ್ರಕ್ರಿಯೆಗಳು ಅಥವಾ ಮಾನವ ನಿರ್ಲಕ್ಷ್ಯದಿಂದ ಉತ್ಪತ್ತಿಯಾಗುವ ಮಾಲಿನ್ಯವನ್ನು ತಡೆಗಟ್ಟುವುದು.

ಮಾಲಿನ್ಯ ನಿಯಂತ್ರಣ ಕಾಯ್ದೆಗಳ ಮಹತ್ವದ ಬಗ್ಗೆ ಜನರಿಗೆ ಮತ್ತು ಕೈಗಾರಿಕೆಗಳಿಗೆ ಅರಿವು ಮೂಡಿಸುವುದು.

ಇತಿಹಾಸ:

ಭೋಪಾಲ್ ಅನಿಲ ದುರಂತ ನೆನಪಿಗಾಗಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಪ್ರತಿ ವರ್ಷ ಡಿಸೆಂಬರ್ 2 ರಂದು ಆಚರಿಸಲಾಗುತ್ತದೆ. ಭೋಪಾಲ್ ಅನಿಲ ವಿಪತ್ತನ್ನು ವಿಶ್ವದ ಅತ್ಯಂತ ಭೀಕರ ಕೈಗಾರಿಕಾ ದುರಂತವೆಂದು ಪರಿಗಣಿಸಲಾಗಿದೆ. ಇದು ಹೆಚ್ಚು ಹಾನಿಕಾರಕ ಮೀಥೈಲ್ ಐಸೊಸೈನೇಟ್ (ಎಂಐಸಿ) ಅನಿಲದ ಬಿಡುಗಡೆಯಿಂದ ಸಂಭವಿಸಿದೆ. ಈ ದುರಂತದಲ್ಲಿ ಸುಮಾರು 3787 ಜನರು ಸಾವನ್ನಪ್ಪಿದ್ದಾರೆ. ಪಟಾಕಿ, ಬಾಂಬ್ ಸ್ಫೋಟ, ಕೈಗಾರಿಕಾ ಪ್ರದೇಶಗಳಿಂದ ವಿಷಕಾರಿ ಅನಿಲಗಳು ಸೋರಿಕೆ, ವಾಹನಗಳು ಮುಂತಾದವು ಮಾಲಿನ್ಯಕ್ಕೆ ಹಲವು ಕಾರಣಗಳಾಗಿವೆ.

ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶ ಕೈಗಾರಿಕಾ ವಿಪತ್ತುಗಳ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವುದು. ಮಾಲಿನ್ಯ ನಿಯಂತ್ರಣಕ್ಕೆ ಪ್ರಯತ್ನಗಳನ್ನು ಮಾಡುವುದು. ಇವುಗಳ ಜೊತೆಗೆ ಈ ದಿನವನ್ನು ಆಚರಿಸುವ ಉದ್ದೇಶವು ನಮ್ಮ ಗಾಳಿ, ನೀರು ಮತ್ತು ಮಣ್ಣನ್ನು ಕಲುಷಿತವಾಗದಂತೆ ರಕ್ಷಿಸಲು ಜನರನ್ನು ಪ್ರೋತ್ಸಾಹಿಸುವುದು. ಮಾಲಿನ್ಯವನ್ನು ನಿಯಂತ್ರಿಸಲು ಸರ್ಕಾರ ಅನೇಕ ಕಾನೂನುಗಳನ್ನು ರಚಿಸಿದೆ. ಆದ್ದರಿಂದ ಪ್ರತಿ ವರ್ಷ ಡಿಸೆಂಬರ್ 2 ರಂದು ಸರ್ಕಾರ ರಚಿಸಿದ ಕಾನೂನುಗಳ ಬಗ್ಗೆ ಗಮನ ಹರಿಸಲು ಮತ್ತು ಜನರಲ್ಲಿ ಮುಖ್ಯವಾಗಿ ಕೈಗಾರಿಕೆಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ.

ದೇಶದಲ್ಲಿ ಸುಮಾರು 14 ಕೋಟಿ ಜನ ಕಲುಷಿತ ಗಾಳಿಯನ್ನೇ ಸೇವಿಸಿ ಸಾವಿಗೆ ಸನಿಹವಾಗುತ್ತಿದ್ದಾರೆ. 2017ರಲ್ಲಿ ಸುಮಾರು 2 ಲಕ್ಷ ಮಕ್ಕಳು ವಾಯು ಮಾಲಿನ್ಯದಿಂದಾಗಿಯೇ ಜೀವ ಕಳೆದುಕೊಂಡಿದ್ದಾರೆ. ಬಿಡಿಸಿ ಹೇಳುವುದಾದರೆ ಪ್ರತಿ ಮೂರು ನಿಮಿಷಕ್ಕೊಂದು ಮಗು ಸಾಯುತ್ತಿದೆ ಎನ್ನುತ್ತಿವೆ ಕೆಲವು ವರದಿಗಳು. ಅಕಾಲಿಕವಾಗಿ ಸಾವಿಗೀಡಾಗುತ್ತಿರುವವರ ಪೈಕಿ ಶೇ.26ರಷ್ಟು ಮಂದಿ ಮಾಲಿನ್ಯ ಕಾರಣಗಳಿಂದಾಗಿಯೇ ಜೀವ ಕಳೆದುಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಅತೀ ಹೆಚ್ಚು ಮಾಲಿನ್ಯ ಹೊಂದಿರುವ ನಗರಗಳು:

  1. 1.ಮೀರತ್, ಉತ್ತರ ಪ್ರದೇಶ - 342 ಎಕ್ಯೂಐ(Air quality Index)
  2. 2.ಮುಜಫರ್​ನಗರ, ಉತ್ತರ ಪ್ರದೇಶ-329 ಎಕ್ಯೂಐ
  3. 3.ಪಿತಾಂಪುರ, ದೆಹಲಿ-324 ಎಕ್ಯೂಐ
  4. 4.ದಾಸ್ನಾ, ಉತ್ತರ ಪ್ರದೇಶ-322 ಎಕ್ಯೂಐ
  5. 5.ಬವಾನ, ದೆಹಲಿ-316 ಎಕ್ಯೂಐ
  6. 6.ಲೋನಿ, ಉತ್ತರ ಪ್ರದೇಶ-312 ಎಕ್ಯೂಐ
  7. 7.ಗ್ರೇಟರ್ ನೋಯ್ಡಾ, ಉತ್ತರ ಪ್ರದೇಶ-304 ಎಕ್ಯೂಐ
  8. 8.ಧರುಹೆರಾ, ಹರಿಯಾಣ-292 ಎಕ್ಯೂಐ
  9. 9.ಬುಲಂದ್‌ಶಹರ್, ಉತ್ತರ ಪ್ರದೇಶ-289 ಎಕ್ಯೂಐ
  10. 10.ದೌರಾಲಾ, ಉತ್ತರ ಪ್ರದೇಶ-283 ಎಕ್ಯೂಐ

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ನನ್ನು 1974ರ ಸೆಪ್ಟೆಂಬರ್‌ನಲ್ಲಿ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ ಅಡಿಯಲ್ಲಿ ರಚಿಸಲಾಯಿತು. ಇದಲ್ಲದೆ, ವಾಯು(ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಯಡಿ ಸಿಪಿಸಿಬಿಗೆ ಅಧಿಕಾರ ಮತ್ತು ಕಾರ್ಯಗಳನ್ನು ವಹಿಸಲಾಯಿತು. ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ತಾಂತ್ರಿಕ ಮಾರ್ಗದರ್ಶನ ನೀಡುತ್ತದೆ.

ವಿಶ್ವಾದ್ಯಂತ ಹತ್ತು ಜನರಲ್ಲಿ ಒಂಬತ್ತು ಜನರು ಸುರಕ್ಷಿತ ಗಾಳಿ ಲಭ್ಯವಾಗುತ್ತಿಲ್ಲ.ವಾಯುಮಾಲಿನ್ಯವು ಜಾಗತಿಕವಾಗಿ ಪ್ರತಿವರ್ಷ 7 ಮಿಲಿಯನ್ ಜನರನ್ನು ಕೊಲ್ಲುತ್ತದೆ. ಅವರಲ್ಲಿ 4 ಮಿಲಿಯನ್ ಜನರು ಒಳಾಂಗಣ ವಾಯುಮಾಲಿನ್ಯದಿಂದ ಸಾಯುತ್ತಾರೆ.

ಮೈಕ್ರೋಸ್ಕೋಪಿಕ್ ಮಾಲಿನ್ಯಕಾರಕಗಳು (ಪಿಎಂ 2.5) ತುಂಬಾ ಚಿಕ್ಕದಾಗಿದ್ದು, ಅವು ಶ್ವಾಸಕೋಶ, ಹೃದಯ ಮತ್ತು ಮೆದುಳಿಗೆ ಹಾನಿ ಮಾಡುತ್ತವೆ.

ಪ್ರಮುಖ ಮಾಲಿನ್ಯಕಾರಕಗಳಲ್ಲಿ ಕಣಕಣಗಳು, ಇಂಧನ ದಹನದಿಂದ ಉಂಟಾಗುವ ಘನ ಮತ್ತು ದ್ರವ ಹನಿಗಳ ಮಿಶ್ರಣ, ರಸ್ತೆ ಸಂಚಾರದಿಂದ ಸಾರಜನಕ ಡೈಆಕ್ಸೈಡ್, ಕೈಗಾರಿಕಾ ಸೌಲಭ್ಯಗಳು ಮತ್ತು ವಾಹನ ಹೊರಸೂಸುವಿಕೆಯಿಂದ ಮಾಲಿನ್ಯಕಾರಕಗಳೊಂದಿಗೆ ಸೂರ್ಯನ ಬೆಳಕಿನ ಪ್ರತಿಕ್ರಿಯೆಯಿಂದ ಉಂಟಾಗುವ ಭೂ ಮಟ್ಟದಲ್ಲಿ ಓಝೋನ್​, ಸಲ್ಫರ್ ಡೈಆಕ್ಸೈಡ್ ಮತ್ತು ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ಉಂಟಾಗುವ ಮಾಲಿನ್ಯ.

ಮಕ್ಕಳು ಮತ್ತು ವೃದ್ಧರು ವಾಯುಮಾಲಿನ್ಯಕ್ಕೆ ಹೆಚ್ಚು ಒಳಗಾಗಿದ್ದಾರೆ. ಹವಾಮಾನ ಬದಲಾವಣೆ ವಾಯುಮಾಲಿನ್ಯಕ್ಕೆ ಒಂದು ಕಾರಣವಾಗಿದೆ.

ವಾಯುಮಾಲಿನ್ಯವನ್ನು ಹೇಗೆ ನಿಯಂತ್ರಿಸುವುದು:

ಆರೋಗ್ಯವನ್ನು ಹಾನಿಗೊಳಿಸುವ ಹೊಗೆಯಂತೆ ತ್ಯಾಜ್ಯವನ್ನು ಸುಡಬೇಡಿ.

ನವೀಕರಿಸಬಹುದಾದ ಶಕ್ತಿಯ ಪುನರ್​ಬಳಕೆಯನ್ನು ಉತ್ತೇಜಿಸಿ.

ನಗರ ಪ್ರದೇಶಗಳಲ್ಲಿನ ಮಾಲಿನ್ಯವನ್ನು ಕಡಿಮೆ ಮಾಡಲು ನಗರ ಅರಣ್ಯ ಮತ್ತು ಮನೆಯ ಛಾವಣೆ ಮೇಲೆ ಚಿಕ್ಕದಾಗ ತೋಟವನ್ನು ನಿರ್ಮಿಸಿ.

ವೈಜ್ಞಾನಿಕ ವಿಧಾನದಲ್ಲಿ ಕಸ ಸಂಗ್ರಹಣೆ ಮತ್ತು ನಿರ್ವಹಣೆ

ಜಲಮೂಲಗಳ ಸಂರಕ್ಷಣೆ ಮತ್ತು ನೀರಿನ ಮಿತಬಳಕೆ

ಅಪಾಯಕಾರಿ ವಸ್ತು, ಉಪಕರಣಗಳ‌ ವೈಜ್ಞಾನಿಕ ನಿರ್ವಹಣೆ

ಪ್ಲಾಸ್ಟಿಕ್ ಬಳಕೆಗೆ ನಿಷೇಧ

ಆಹಾರ ಪದಾರ್ಥಗಳನ್ನು ಪೋಲಾಗದಂತೆ ತಡೆಯುವುದು

ಭಾರತದಲ್ಲಿ ಮಾಲಿನ್ಯದಿಂದಾಗಿ ಸಾವುಗಳು:

ಭಾರತದಲ್ಲಿ ಹೊರಾಂಗಣ ಮತ್ತು ಮನೆಯ ವಾಯುಮಾಲಿನ್ಯಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಪಾರ್ಶ್ವವಾಯು, ಹೃದಯಾಘಾತ, ಮಧುಮೇಹ, ಶ್ವಾಸಕೋಶದ ಕ್ಯಾನ್ಸರ್, ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳು ಮತ್ತು ನವಜಾತ ಶಿಶುವಿನ ಕಾಯಿಲೆಗಳಿಂದ 2019ರಲ್ಲಿ ಭಾರತದಲ್ಲಿ 1.67 ದಶಲಕ್ಷಕ್ಕೂ ಹೆಚ್ಚಿನ ಸಾವು ಸಂಭವಿಸಿದೆ.

ಜಾಗತಿಕವಾಗಿ ವಾಯುಮಾಲಿನ್ಯವು 2019ರಲ್ಲಿ 6.67 ಮಿಲಿಯನ್ ಸಾವುಗಳಿಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಇದು ಒಟ್ಟು ಜಾಗತಿಕ ಸಾವುಗಳಲ್ಲಿ ಸುಮಾರು ಶೇ.12ರಷ್ಟು ಇದೆ. ಇದು 2019 ರಲ್ಲಿ ವಿಶ್ವಾದ್ಯಂತದ ಆರಂಭಿಕ ಸಾವಿಗೆ ನಾಲ್ಕನೇ ಪ್ರಮುಖ ಅಪಾಯಕಾರಿ ಅಂಶವಾಗಿದೆ.

ಹಲವಾರು ದೇಶಗಳು ವಿಶೇಷವಾಗಿ ಭಾರತ ಮತ್ತು ಚೀನಾ, 2010-19ರ ನಡುವೆ ಕಳೆದ ಒಂದು ದಶಕದಲ್ಲಿ ಸ್ವಚ್ಛವಾದ ಅಡುಗೆ ಇಂಧನಗಳನ್ನು ಲಭ್ಯವಾಗುವಂತೆ ಮಾಡುವ ಮೂಲಕ ಮನೆಯ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಮುಂದಾಗಿವೆ.

ಭಾರತವು ವಾರ್ಷಿಕವಾಗಿ 10.7 ಲಕ್ಷ ಕೋಟಿ (150 ಬಿಲಿಯನ್ ಡಾಲರ್) ಅಥವಾ ಭಾರತದ ಜಿಡಿಪಿಯ ಶೇಕಡಾ 5.4 ರಷ್ಟನ್ನು ಭರಿಸಲಿದೆ ಎಂದು ಅಂದಾಜಿಸಲಾಗಿದೆ. ಇದು ವಿಶ್ವದಾದ್ಯಂತ ಪಳೆಯುಳಿಕೆ ಇಂಧನ ವಾಯು ಮಾಲಿನ್ಯದಿಂದ ಮೂರು ಪಟ್ಟು ವೆಚ್ಚವಾಗಿದೆ. ಪರಿಸರ ಸಂಸ್ಥೆ ಗ್ರೀನ್‌ಪೀಸ್ ಆಗ್ನೇಯ ಏಷ್ಯಾದ ವರದಿಯ ಪ್ರಕಾರ, ಇಂಧನ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರದ ಒಳಹರಿವಿನೊಂದಿಗೆ ಅದು ಸೆಕೆಂಡಿಗೆ 3.39 ಲಕ್ಷ ರೂ. ಆಗಿದೆ.

ಭಾರತವು ಜಿಡಿಪಿಯ ಶೇಕಡಾ 1.28 ರಷ್ಟು ಆರೋಗ್ಯಕ್ಕಾಗಿ ಖರ್ಚುಮಾಡಿದರೆ, ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ಉಂಟಾಗುವ ವಾಯುಮಾಲಿನ್ಯವನ್ನು ತಡೆಯಲು ಭಾರತದ ಜಿಡಿಪಿಯ ಶೇಕಡಾ 5.4 ರಷ್ಟು ಖರ್ಚಾಗುತ್ತದೆ.

ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಬಜೆಟ್‌ನಲ್ಲಿ ಕೇವಲ 69,000 ಕೋಟಿ ರೂ.ಮೀಸಲಿಡುತ್ತದೆ.

ಮಾಲಿನ್ಯವನ್ನು ನಿಯಂತ್ರಿಸಲು ಮೋದಿ ಉಪಕ್ರಮಗಳು

ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ: 2019 ರ ಜನವರಿಯಲ್ಲಿ ಸರ್ಕಾರವು ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಭಾಯಿಸಲು ರಾಷ್ಟ್ರೀಯ ಮಟ್ಟದ ಕಾರ್ಯತಂತ್ರವಾದ ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮವನ್ನು ಪ್ರಾರಂಭಿಸಿತು. ಎನ್‌ಸಿಎಪಿ ಮಧ್ಯಕಾಲೀನ, ಐದು ವರ್ಷಗಳ ಕ್ರಿಯಾ ಯೋಜನೆಯಾಗಿದ್ದು, 2019 ರೊಂದಿಗೆ ಮೊದಲ ವರ್ಷವಾಗಿರುತ್ತದೆ.

ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ): ದೇಶದ ಪ್ರಮುಖ ನಗರ ಕೇಂದ್ರಗಳಲ್ಲಿನ ಗಾಳಿಯ ಗುಣಮಟ್ಟವನ್ನು ನೈಜ-ಸಮಯದ ಆಧಾರದ ಮೇಲೆ ಮೇಲ್ವಿಚಾರಣೆ ಮಾಡಲು ಮತ್ತು ತಗ್ಗಿಸುವ ಕ್ರಮ ತೆಗೆದುಕೊಳ್ಳಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕವನ್ನು (ಎಕ್ಯೂಐ) ಪ್ರಾರಂಭಿಸಿದರು.

ಹಸಿರು ಮನೆ ವಾತಾವರಣದ ಮೇಲೆ ದುಷ್ಪರಿಣಾಮ ಬೀರುವ ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕ ಮತ್ತು ಚೀನಾ ಇವೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮಾಲಿನ್ಯ ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಯಾವ ಪ್ರಯೋಜನವೂ ಆಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತಿದೆ. ಅತಿ ಹೆಚ್ಚು ಪ್ರಮಾಣದಲ್ಲಿ ವಾಯುಮಾಲಿನ್ಯವಿರುವ ವಿಶ್ವದ 15 ನಗರಗಳಲ್ಲಿ 13 ನಗರಗಳು ಭಾರತದಲ್ಲೇ ಇವೆ ಎಂದು ಎಚ್ಚರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.