ETV Bharat / bharat

Watch... ಎತ್ತಿನಗಾಡಿನಲ್ಲಿ ಸಿಜೆಐ ಎನ್​ವಿ ರಮಣ: ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ

author img

By

Published : Dec 24, 2021, 7:40 PM IST

ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿರುವ ತಮ್ಮ ಹುಟ್ಟೂರಾದ ಪೊನ್ನವರಂಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್​.ವಿ.ರಮಣ ಭೇಟಿ ನೀಡಿದ್ದು, ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

N V Ramana travels in bullock cart in his hometown, receives rousing welcome
ಹುಟ್ಟೂರಿಗೆ ಭೇಟಿ ನೀಡಿದ ಸಿಜೆಐ ಎನ್​.ವಿ.ರಮಣ: ಅದ್ಧೂರಿ ಸ್ವಾಗತ, ಎತ್ತಿನಗಾಡಿಯಲ್ಲಿ ಮೆರವಣಿಗೆ

ವಿಜಯವಾಡ(ಆಂಧ್ರಪ್ರದೇಶ) : ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್​.ವಿ.ರಮಣ ತಾವು ಸಿಜೆಐ ಅಧಿಕಾರ ಸ್ವೀಕರಿಸಿಕೊಂಡ ನಂತರ ಮೊದಲ ಬಾರಿಗೆ ತಮ್ಮ ಹುಟ್ಟೂರಿಗೆ ಭೇಟಿ ನೀಡಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿರುವ ತಮ್ಮ ಹುಟ್ಟೂರಾದ ಪೊನ್ನವರಂ ಗ್ರಾಮಕ್ಕೆ ಭೇಟಿ ನೀಡಿದ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಸಿಜೆಐ ಎನ್​.ವಿ.ರಮಣ ಅವರಿಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ

ಗ್ರಾಮಕ್ಕೆ ಬಂದ ಎನ್​.ವಿ.ರಮಣ ಅವರನ್ನು ಗ್ರಾಮಸ್ಥರು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿದರು. ಅವರು ತೆರಳಿದ ದಾರಿಯಲ್ಲಿ ಪುಷ್ಪವೃಷ್ಟಿಯನ್ನು ಸುರಿಸಲಾಯಿತು. ಗ್ರಾಮದಲ್ಲಿನ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಮುಖ್ಯ ನ್ಯಾಯಮೂರ್ತಿಗಳು ವಿಶೇಷ ಪೂಜೆಯನ್ನೂ ಸಲ್ಲಿಸಿದರು.

ಗ್ರಾಮಸ್ಥರು ಪೂರ್ಣಕುಂಭದೊಂದಿಗೆ ಎನ್​.ವಿ.ರಮಣ ಅವರನ್ನು ಸ್ವಾಗತಿಸಿದರು, ರಸ್ತೆಗಳಲ್ಲಿ ಫ್ಲೆಕ್ಸ್​ಗಳು, ತಳಿರು-ತೋರಣ ಕಟ್ಟಲಾಗಿತ್ತು. ಅವರು ಸುಮಾರು 4 ಗಂಟೆಗಳ ಕಾಲ ಗ್ರಾಮದಲ್ಲಿಯೇ ಉಳಿದಿದ್ದರು. ಮೊದಲು ಜಿಲ್ಲಾಡಳಿತ ಎನ್​.ವಿ.ರಮಣ ಅವರನ್ನು ಗರಿಕಪಡ ಚೆಕ್​ಪೋಸ್ಟ್​​ ಬಳಿ ಸ್ವಾಗತಿಸಿತು. ಜಿಲ್ಲಾಧಿಕಾರಿ ಜೆ.ನಿವಾಸ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಈ ವೇಳೆ ಹಾಜರಿದ್ದರು.

ಇದನ್ನೂ ಓದಿ: ತಿರುಮಲವಾಸನ ವಿಶೇಷ ದರ್ಶನಕ್ಕೆ ಬಿಡುಗಡೆಯಾದ 4.6 ಲಕ್ಷ ಟಿಕೆಟ್.. 80 ನಿಮಿಷದಲ್ಲೇ ಟಿಕೆಟ್ ಸೋಲ್ಡ್​ ​ಔಟ್​

ವಿಜಯವಾಡ(ಆಂಧ್ರಪ್ರದೇಶ) : ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್​.ವಿ.ರಮಣ ತಾವು ಸಿಜೆಐ ಅಧಿಕಾರ ಸ್ವೀಕರಿಸಿಕೊಂಡ ನಂತರ ಮೊದಲ ಬಾರಿಗೆ ತಮ್ಮ ಹುಟ್ಟೂರಿಗೆ ಭೇಟಿ ನೀಡಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿರುವ ತಮ್ಮ ಹುಟ್ಟೂರಾದ ಪೊನ್ನವರಂ ಗ್ರಾಮಕ್ಕೆ ಭೇಟಿ ನೀಡಿದ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಸಿಜೆಐ ಎನ್​.ವಿ.ರಮಣ ಅವರಿಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ

ಗ್ರಾಮಕ್ಕೆ ಬಂದ ಎನ್​.ವಿ.ರಮಣ ಅವರನ್ನು ಗ್ರಾಮಸ್ಥರು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿದರು. ಅವರು ತೆರಳಿದ ದಾರಿಯಲ್ಲಿ ಪುಷ್ಪವೃಷ್ಟಿಯನ್ನು ಸುರಿಸಲಾಯಿತು. ಗ್ರಾಮದಲ್ಲಿನ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಮುಖ್ಯ ನ್ಯಾಯಮೂರ್ತಿಗಳು ವಿಶೇಷ ಪೂಜೆಯನ್ನೂ ಸಲ್ಲಿಸಿದರು.

ಗ್ರಾಮಸ್ಥರು ಪೂರ್ಣಕುಂಭದೊಂದಿಗೆ ಎನ್​.ವಿ.ರಮಣ ಅವರನ್ನು ಸ್ವಾಗತಿಸಿದರು, ರಸ್ತೆಗಳಲ್ಲಿ ಫ್ಲೆಕ್ಸ್​ಗಳು, ತಳಿರು-ತೋರಣ ಕಟ್ಟಲಾಗಿತ್ತು. ಅವರು ಸುಮಾರು 4 ಗಂಟೆಗಳ ಕಾಲ ಗ್ರಾಮದಲ್ಲಿಯೇ ಉಳಿದಿದ್ದರು. ಮೊದಲು ಜಿಲ್ಲಾಡಳಿತ ಎನ್​.ವಿ.ರಮಣ ಅವರನ್ನು ಗರಿಕಪಡ ಚೆಕ್​ಪೋಸ್ಟ್​​ ಬಳಿ ಸ್ವಾಗತಿಸಿತು. ಜಿಲ್ಲಾಧಿಕಾರಿ ಜೆ.ನಿವಾಸ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಈ ವೇಳೆ ಹಾಜರಿದ್ದರು.

ಇದನ್ನೂ ಓದಿ: ತಿರುಮಲವಾಸನ ವಿಶೇಷ ದರ್ಶನಕ್ಕೆ ಬಿಡುಗಡೆಯಾದ 4.6 ಲಕ್ಷ ಟಿಕೆಟ್.. 80 ನಿಮಿಷದಲ್ಲೇ ಟಿಕೆಟ್ ಸೋಲ್ಡ್​ ​ಔಟ್​

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.