ETV Bharat / bharat

ಮಧ್ಯಪ್ರದೇಶದಲ್ಲಿ ತರಬೇತಿ ವಿಮಾನ ಅಪಘಾತ.. ಪೈಲಟ್​ ಸೇಫ್​

ತರಬೇತಿ ಪೈಲಟ್​ ಚಾಲನೆ ಮಾಡುತ್ತಿದ್ದ ವಿಮಾನವೊಂದು ರನ್​ ವೇ ಬಿಟ್ಟು ಪಕ್ಕಕ್ಕೆ ಓಡಿದ್ದು, ಅದೃಷ್ಟವಶಾತ್​ ಪೈಲಟ್​​​ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

author img

By

Published : Jul 18, 2021, 6:41 AM IST

pilot safe
pilot safe

ಸಾಗರ್ (ಮಧ್ಯಪ್ರದೇಶ): ಜಿಲ್ಲೆಯ ಧನಾ ಏರ್‌ಸ್ಟ್ರಿಪ್‌ನಲ್ಲಿ ತರಬೇತಿ ಪೈಲಟ್​ ಚಾಲನೆ ಮಾಡುತ್ತಿದ್ದ ಲಘು ವಿಮಾನವೊಂದು ಶನಿವಾರ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್​​ ಪೈಲಟ್​ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಚೈಮ್ಸ್​ ಏವಿಯೇಷನ್​ಗೆ ಸೇರಿದ ಸೆಸ್ನಾ 172 ಹೆಸರಿನ ವಿಮಾನವು ಅಪಘಾತಕ್ಕೀಡಾದ ವಿಮಾನವಾಗಿದೆ.

ಕಳೆದ ವರ್ಷ ಇದೇ ಸಂಸ್ಥೆಯ ವಿಮಾನವು ಅಪಘಾತವಾಗಿ ಇಬ್ಬರು ಮೃತಪಟ್ಟಿದ್ದರು. ನಂತರ ಇಲ್ಲಿಂದ 20 ಕಿಲೋ ಮೀಟರ್​ ದೂರದಲ್ಲಿರುವ ಏರ್​ಸ್ಟ್ರಿಪ್​ ಬಳಸುವುದನ್ನು ನಿಷೇಧಿಸಲಾಗಿತ್ತು. ಆದರೆ, ಕೆಲ ದಿನಗಳ ಹಿಂದಷ್ಟೇ ಆ ನಿರ್ಬಂಧವನ್ನು ತೆಗೆದುಹಾಕಿ ಇಲ್ಲಿ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಶನಿವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, 22 ವರ್ಷದ ಟ್ರೈನಿಂಗ್​​ ಪೈಲಟ್​​​ ಸುರಕ್ಷಿತ ಎಂದು ಸ್ಥಳೀಯ ಆಡಳಿತಾಧಿಕಾರಿ ರಾಹುಲ್ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ:ಪತಿ, ಇಬ್ಬರು ಮಕ್ಕಳನ್ನು ಬಿಟ್ಟು ಐವರು ಮಕ್ಕಳ ತಂದೆ ಜೊತೆ ಓಡಿ ಹೋದ ಮಹಿಳೆ

ವಿಮಾನವು ರನ್​ವೇನಿಂದ ಹೊರಟು ಬಳಿಕ ಪಕ್ಕದಲ್ಲಿದ್ದ ಪೊದೆಗಳಿಗೆ ನುಗ್ಗಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತನಿಖಾ ತಂಡವನ್ನು ಸ್ಥಳಕ್ಕೆ ಕಳಿಸಲಾಗಿದ್ದು, ಘಟನೆಗೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

ಸಾಗರ್ (ಮಧ್ಯಪ್ರದೇಶ): ಜಿಲ್ಲೆಯ ಧನಾ ಏರ್‌ಸ್ಟ್ರಿಪ್‌ನಲ್ಲಿ ತರಬೇತಿ ಪೈಲಟ್​ ಚಾಲನೆ ಮಾಡುತ್ತಿದ್ದ ಲಘು ವಿಮಾನವೊಂದು ಶನಿವಾರ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್​​ ಪೈಲಟ್​ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಚೈಮ್ಸ್​ ಏವಿಯೇಷನ್​ಗೆ ಸೇರಿದ ಸೆಸ್ನಾ 172 ಹೆಸರಿನ ವಿಮಾನವು ಅಪಘಾತಕ್ಕೀಡಾದ ವಿಮಾನವಾಗಿದೆ.

ಕಳೆದ ವರ್ಷ ಇದೇ ಸಂಸ್ಥೆಯ ವಿಮಾನವು ಅಪಘಾತವಾಗಿ ಇಬ್ಬರು ಮೃತಪಟ್ಟಿದ್ದರು. ನಂತರ ಇಲ್ಲಿಂದ 20 ಕಿಲೋ ಮೀಟರ್​ ದೂರದಲ್ಲಿರುವ ಏರ್​ಸ್ಟ್ರಿಪ್​ ಬಳಸುವುದನ್ನು ನಿಷೇಧಿಸಲಾಗಿತ್ತು. ಆದರೆ, ಕೆಲ ದಿನಗಳ ಹಿಂದಷ್ಟೇ ಆ ನಿರ್ಬಂಧವನ್ನು ತೆಗೆದುಹಾಕಿ ಇಲ್ಲಿ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಶನಿವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, 22 ವರ್ಷದ ಟ್ರೈನಿಂಗ್​​ ಪೈಲಟ್​​​ ಸುರಕ್ಷಿತ ಎಂದು ಸ್ಥಳೀಯ ಆಡಳಿತಾಧಿಕಾರಿ ರಾಹುಲ್ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ:ಪತಿ, ಇಬ್ಬರು ಮಕ್ಕಳನ್ನು ಬಿಟ್ಟು ಐವರು ಮಕ್ಕಳ ತಂದೆ ಜೊತೆ ಓಡಿ ಹೋದ ಮಹಿಳೆ

ವಿಮಾನವು ರನ್​ವೇನಿಂದ ಹೊರಟು ಬಳಿಕ ಪಕ್ಕದಲ್ಲಿದ್ದ ಪೊದೆಗಳಿಗೆ ನುಗ್ಗಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತನಿಖಾ ತಂಡವನ್ನು ಸ್ಥಳಕ್ಕೆ ಕಳಿಸಲಾಗಿದ್ದು, ಘಟನೆಗೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.