ETV Bharat / bharat

ಸ್ಥಗಿತಗೊಂಡ ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಹಾಸನ ಸಂಸದ ಪ್ರಜ್ವಲ್​ ರೇವಣ್ಣ

ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗ ಯೋಜನೆ ಕೂಡ ನೆನಗುದಿಗೆ ಬಿದ್ದಿದೆ. 1996-97ರಲ್ಲಿ ಹೆಚ್‌ ಡಿ ದೇವೇಗೌಡ ಅವರು ಪ್ರಧಾನಮಂತ್ರಿಗಳಾಗಿದ್ದಾಗ ಈ ರೈಲು ಮಾರ್ಗ ಯೋಜನೆಗೆ ಅನುಮನೋದನೆ ನೀಡಿದ್ದರು. ಇದು ನಿಜವಾಗಿಯೂ ಬೆಂಗಳೂರಿನಿಂದ ಸತ್ಯಮಂಗಲದವರೆಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿತ್ತು..

author img

By

Published : Feb 9, 2022, 6:59 PM IST

Updated : Feb 9, 2022, 8:05 PM IST

MP Prajwal
ಪ್ರಜ್ವಲ್​ ರೇವಣ್ಣ

ನವದೆಹಲಿ : ಲೋಕಸಭೆಯಲ್ಲಿ ಬಜೆಟ್​ ಮೇಲಿನ ಚರ್ಚೆಯ ವೇಳೆ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರು, ಕರ್ನಾಟಕದ ಎರಡು ರೈಲ್ವೆ ಯೋಜನೆಗಳು ಸ್ಥಗಿತಗೊಂಡಿದ್ದನ್ನು ಪ್ರಸ್ತಾಪಿಸಿದ್ದಾರೆ.

ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಕೊಡುಗು ಜಿಲ್ಲೆಗೆ ಈವರೆಗೂ ಒಂದೇ ಒಂದು ರೈಲ್ವೆ ಸಂಪರ್ಕ ಕಲ್ಪಿಸಲಾಗಿಲ್ಲ. ಇದಕ್ಕಾಗಿ 1819 ರಲ್ಲಿ ಮೈಸೂರು-ಕುಶಾಲನಗರ ಮಾರ್ಗದ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ರೂಪಿಸಲಾಗಿತ್ತು.

ಸ್ಥಗಿತಗೊಂಡ ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಹಾಸನ ಸಂಸದ ಪ್ರಜ್ವಲ್​ ರೇವಣ್ಣ

ಆದರೆ, ಅದು ಈವರೆಗೂ ಕಾರ್ಯಾರಂಭಗೊಂಡಿಲ್ಲ. ಇದಕ್ಕೆ ಪರಿಸರ ಇಲಾಖೆ ಅನುಮತಿ ಇಲ್ಲದ ಕಾರಣ ರೈಲ್ವೆ ಯೋಜನೆ ನೆನಗುದಿಗೆ ಬಿದ್ದಿದೆ. ಇದನ್ನು ಕೇಂದ್ರ ಸರ್ಕಾರ ಪರಿಶೀಲಿಸಿ ರೈಲ್ವೆ ಯೋಜನೆಯನ್ನು ಪುನಾರಂಭ ಮಾಡಬೇಕು ಎಂದು ಕೋರಿದರು.

ಇದಲ್ಲದೇ,ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗ ಯೋಜನೆ ಕೂಡ ನೆನಗುದಿಗೆ ಬಿದ್ದಿದೆ. 1996-97ರಲ್ಲಿ ಹೆಚ್‌ ಡಿ ದೇವೇಗೌಡ ಅವರು ಪ್ರಧಾನಮಂತ್ರಿಗಳಾಗಿದ್ದಾಗ ಈ ರೈಲು ಮಾರ್ಗ ಯೋಜನೆಗೆ ಅನುಮನೋದನೆ ನೀಡಿದ್ದರು. ಇದು ನಿಜವಾಗಿಯೂ ಬೆಂಗಳೂರಿನಿಂದ ಸತ್ಯಮಂಗಲದವರೆಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿತ್ತು.

ಆದರೆ, ಈ ಯೋಜನೆಗೂ ಪರಿಸರ ಇಲಾಖೆಯ ಅನುಮತಿ ಸಿಗದ ಕಾರಣ ಯೋಜನೆ ನೆನಗುದಿಗೆ ಬಿದ್ದಿದೆ. ಹೀಗಾಗಿ, ಕೇಂದ್ರ ಸರ್ಕಾರ ಈ ಬಗ್ಗೆ ಪರಾಮರ್ಶೆ ನಡೆಸಿ ಈ ಎರಡು ರೈಲ್ವೆ ಯೋಜನೆಗಳನ್ನು ಆರಂಭಿಸಬೇಕು ಎಂದು ಸಂಸದ ಪ್ರಜ್ವಲ್​ ರೇವಣ್ಣ ಲೋಕಸಭೆಗೆ ಕೋರಿದ್ದಾರೆ. ಇದಕ್ಕೆ ಉತ್ತರಿಸಿದ ರೈಲ್ವೆ ಇಲಾಖೆ ಸಚಿವರು, ಈ ಬಗ್ಗೆ ಮಾಹಿತಿ ಪಡೆದು ಯೋಜನೆಗಳ ಆರಂಭಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಓದಿ: ಮಹಿಳಾ ಡಿಎಸ್‌ಪಿ ಮೇಲೆ ದೌರ್ಜನ್ಯ; ಇಬ್ಬರು ಕಾನ್ಸ್​​ಟೇಬಲ್​​​​​​ ಸೇರಿ 15 ಜನರ ವಿರುದ್ಧ ಎಫ್‌ಐಆರ್ ದಾಖಲು

ನವದೆಹಲಿ : ಲೋಕಸಭೆಯಲ್ಲಿ ಬಜೆಟ್​ ಮೇಲಿನ ಚರ್ಚೆಯ ವೇಳೆ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರು, ಕರ್ನಾಟಕದ ಎರಡು ರೈಲ್ವೆ ಯೋಜನೆಗಳು ಸ್ಥಗಿತಗೊಂಡಿದ್ದನ್ನು ಪ್ರಸ್ತಾಪಿಸಿದ್ದಾರೆ.

ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಕೊಡುಗು ಜಿಲ್ಲೆಗೆ ಈವರೆಗೂ ಒಂದೇ ಒಂದು ರೈಲ್ವೆ ಸಂಪರ್ಕ ಕಲ್ಪಿಸಲಾಗಿಲ್ಲ. ಇದಕ್ಕಾಗಿ 1819 ರಲ್ಲಿ ಮೈಸೂರು-ಕುಶಾಲನಗರ ಮಾರ್ಗದ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ರೂಪಿಸಲಾಗಿತ್ತು.

ಸ್ಥಗಿತಗೊಂಡ ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಹಾಸನ ಸಂಸದ ಪ್ರಜ್ವಲ್​ ರೇವಣ್ಣ

ಆದರೆ, ಅದು ಈವರೆಗೂ ಕಾರ್ಯಾರಂಭಗೊಂಡಿಲ್ಲ. ಇದಕ್ಕೆ ಪರಿಸರ ಇಲಾಖೆ ಅನುಮತಿ ಇಲ್ಲದ ಕಾರಣ ರೈಲ್ವೆ ಯೋಜನೆ ನೆನಗುದಿಗೆ ಬಿದ್ದಿದೆ. ಇದನ್ನು ಕೇಂದ್ರ ಸರ್ಕಾರ ಪರಿಶೀಲಿಸಿ ರೈಲ್ವೆ ಯೋಜನೆಯನ್ನು ಪುನಾರಂಭ ಮಾಡಬೇಕು ಎಂದು ಕೋರಿದರು.

ಇದಲ್ಲದೇ,ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗ ಯೋಜನೆ ಕೂಡ ನೆನಗುದಿಗೆ ಬಿದ್ದಿದೆ. 1996-97ರಲ್ಲಿ ಹೆಚ್‌ ಡಿ ದೇವೇಗೌಡ ಅವರು ಪ್ರಧಾನಮಂತ್ರಿಗಳಾಗಿದ್ದಾಗ ಈ ರೈಲು ಮಾರ್ಗ ಯೋಜನೆಗೆ ಅನುಮನೋದನೆ ನೀಡಿದ್ದರು. ಇದು ನಿಜವಾಗಿಯೂ ಬೆಂಗಳೂರಿನಿಂದ ಸತ್ಯಮಂಗಲದವರೆಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿತ್ತು.

ಆದರೆ, ಈ ಯೋಜನೆಗೂ ಪರಿಸರ ಇಲಾಖೆಯ ಅನುಮತಿ ಸಿಗದ ಕಾರಣ ಯೋಜನೆ ನೆನಗುದಿಗೆ ಬಿದ್ದಿದೆ. ಹೀಗಾಗಿ, ಕೇಂದ್ರ ಸರ್ಕಾರ ಈ ಬಗ್ಗೆ ಪರಾಮರ್ಶೆ ನಡೆಸಿ ಈ ಎರಡು ರೈಲ್ವೆ ಯೋಜನೆಗಳನ್ನು ಆರಂಭಿಸಬೇಕು ಎಂದು ಸಂಸದ ಪ್ರಜ್ವಲ್​ ರೇವಣ್ಣ ಲೋಕಸಭೆಗೆ ಕೋರಿದ್ದಾರೆ. ಇದಕ್ಕೆ ಉತ್ತರಿಸಿದ ರೈಲ್ವೆ ಇಲಾಖೆ ಸಚಿವರು, ಈ ಬಗ್ಗೆ ಮಾಹಿತಿ ಪಡೆದು ಯೋಜನೆಗಳ ಆರಂಭಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಓದಿ: ಮಹಿಳಾ ಡಿಎಸ್‌ಪಿ ಮೇಲೆ ದೌರ್ಜನ್ಯ; ಇಬ್ಬರು ಕಾನ್ಸ್​​ಟೇಬಲ್​​​​​​ ಸೇರಿ 15 ಜನರ ವಿರುದ್ಧ ಎಫ್‌ಐಆರ್ ದಾಖಲು

Last Updated : Feb 9, 2022, 8:05 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.