ETV Bharat / bharat

ಗಂಡನ ಅಗಲಿಕೆಯ ವೇದನೆ: ಪುತ್ರಿಯರೊಂದಿಗೆ ಕೆರೆಗೆ ಹಾರಿ ಪ್ರಾಣ ಬಿಟ್ಟಳು ಪತ್ನಿ

author img

By

Published : Apr 4, 2021, 10:03 AM IST

ಗಂಡ ಸಾವಿನಿಂದ ತೀವ್ರವಾಗಿ ಮನ ನೊಂದು ಮಹಿಳೆಯೊಬ್ಬಳು ತನ್ನಿಬ್ಬರು ಹೆಣ್ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

Mother commits suicide, Mother commits suicide with Two daughter, Mother commits suicide with Two daughter in Sangareddy, Sangareddy crime news, Sangareddy crime 2021 news, ತಾಯಿ ಆತ್ಮಹತ್ಯೆ, ಇಬ್ಬರು ಮಗಳೊಂದಿಗೆ ತಾಯಿ ಆತ್ಮಹತ್ಯೆ, ಸಂಗಾರೆಡ್ಡಿಯಲ್ಲಿ ಇಬ್ಬರು ಮಗಳೊಂದಿಗೆ ತಾಯಿ ಆತ್ಮಹತ್ಯೆ, ಸಂಗಾರೆಡ್ಡಿ ಅಪರಾಧ ಸುದ್ದಿ, ಸಂಗಾರೆಡ್ಡಿ ಅಪರಾಧ 2021 ಸುದ್ದಿ,
ತನ್ನ ಇಬ್ಬರು ಸುಪುತ್ರಿಯೊಂದಿಗೆ ಕೆರೆಗೆ ಹಾರಿ ಪ್ರಾಣ ಬಿಟ್ಟ ತಾಯಿ

ಸಂಗಾರೆಡ್ಡಿ: ತಾಯಿಯೊಬ್ಬಳು ಮುದ್ದಾದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕೆರೆಗೆ ಹಾರಿ ಸಾವಿಗೆ ಶರಣಾಗಿರುವ ಘಟನೆ ನ್ಯಾಲ್​ಕಲ್​ ತಾಲೂಕಿನ ರತ್ನಾಪೂರ್​ ಗ್ರಾಮದಲ್ಲಿ ನಡೆದಿದೆ.

ವಿವರ:

ರತ್ನಾಪೂರ್​ ನಿವಾಸಿ ನಾಗಪ್ಪ (36) ಎಂಬಾತ ತನ್ನ ಪತ್ನಿ ರುಕ್ಮಿಣಿ (29) ಮತ್ತು ಮಕ್ಕಳಾದ ಅಮ್ಮುಲು (6), ಭವಾನಿ (3) ಜೊತೆ ಹೈದರಾಬಾದ್​ನಲ್ಲಿ ಜೀವನ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ನಾಗಪ್ಪ ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದ. ಸ್ವಗ್ರಾಮದಲ್ಲಿ ನಾಗಪ್ಪನ ಅಂತ್ಯಕ್ರಿಯೆ ವಿಧಿವಿಧಾನಗಳ ಮೂಲಕ ನಡೆದಿತ್ತು.

ಬಳಿಕ ಗಂಡನ ಅಗಲಿಕೆಯ ನೋವಿನಿಂದ ಹೊರಬರದೆ ರತ್ನಾಪುರದಲ್ಲಿ ರುಕ್ಮಿಣಿ ಕಾಲ ಕಳೆಯುತ್ತಿದ್ದರು. ಏಕಾಏಕಿ ಶನಿವಾರ ರುಕ್ಮಿಣಿ ಮಕ್ಕಳೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಚಿನಿಗೆಪಲ್ಲಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕೆರೆಯಲ್ಲಿ ತೇಲುತ್ತಿದ್ದ ಮೃತದೇಹಗಳನ್ನು ನೋಡಿದ ಗ್ರಾಮಸ್ಥರು, ಅವುಗಳನ್ನು ಹೊರತೆಗೆದು ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ದೌಡಾಯಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಾಲ್ಕ ವರ್ಷಗಳ ಹಿಂದೆ ರುಕ್ಮಿಣಿ ನಾಗಪ್ಪ ದಂಪತಿಯ ಮಗ ಅನಾರೋಗ್ಯದಿಂದ ಮೃತಪಟ್ಟಿದ್ದ.

ತಾಯಿ ಮತ್ತು ಮಕ್ಕಳ ಆತ್ಮಹತ್ಯೆಯ ಯಾವುದೇ ದೂರು ನಮಗೆ ಬಂದಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಮೃತರ ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಿದ್ದಾರೆಂದು ಹದ್ನೂರು ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ತಿಳಿಸಿದ್ದಾರೆ.

ಸಂಗಾರೆಡ್ಡಿ: ತಾಯಿಯೊಬ್ಬಳು ಮುದ್ದಾದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕೆರೆಗೆ ಹಾರಿ ಸಾವಿಗೆ ಶರಣಾಗಿರುವ ಘಟನೆ ನ್ಯಾಲ್​ಕಲ್​ ತಾಲೂಕಿನ ರತ್ನಾಪೂರ್​ ಗ್ರಾಮದಲ್ಲಿ ನಡೆದಿದೆ.

ವಿವರ:

ರತ್ನಾಪೂರ್​ ನಿವಾಸಿ ನಾಗಪ್ಪ (36) ಎಂಬಾತ ತನ್ನ ಪತ್ನಿ ರುಕ್ಮಿಣಿ (29) ಮತ್ತು ಮಕ್ಕಳಾದ ಅಮ್ಮುಲು (6), ಭವಾನಿ (3) ಜೊತೆ ಹೈದರಾಬಾದ್​ನಲ್ಲಿ ಜೀವನ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ನಾಗಪ್ಪ ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದ. ಸ್ವಗ್ರಾಮದಲ್ಲಿ ನಾಗಪ್ಪನ ಅಂತ್ಯಕ್ರಿಯೆ ವಿಧಿವಿಧಾನಗಳ ಮೂಲಕ ನಡೆದಿತ್ತು.

ಬಳಿಕ ಗಂಡನ ಅಗಲಿಕೆಯ ನೋವಿನಿಂದ ಹೊರಬರದೆ ರತ್ನಾಪುರದಲ್ಲಿ ರುಕ್ಮಿಣಿ ಕಾಲ ಕಳೆಯುತ್ತಿದ್ದರು. ಏಕಾಏಕಿ ಶನಿವಾರ ರುಕ್ಮಿಣಿ ಮಕ್ಕಳೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಚಿನಿಗೆಪಲ್ಲಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕೆರೆಯಲ್ಲಿ ತೇಲುತ್ತಿದ್ದ ಮೃತದೇಹಗಳನ್ನು ನೋಡಿದ ಗ್ರಾಮಸ್ಥರು, ಅವುಗಳನ್ನು ಹೊರತೆಗೆದು ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ದೌಡಾಯಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಾಲ್ಕ ವರ್ಷಗಳ ಹಿಂದೆ ರುಕ್ಮಿಣಿ ನಾಗಪ್ಪ ದಂಪತಿಯ ಮಗ ಅನಾರೋಗ್ಯದಿಂದ ಮೃತಪಟ್ಟಿದ್ದ.

ತಾಯಿ ಮತ್ತು ಮಕ್ಕಳ ಆತ್ಮಹತ್ಯೆಯ ಯಾವುದೇ ದೂರು ನಮಗೆ ಬಂದಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಮೃತರ ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಿದ್ದಾರೆಂದು ಹದ್ನೂರು ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.