ETV Bharat / bharat

ಭಯೋತ್ಪಾದನೆಗೆ ಹಣವೇ ಜೀವಾಳ, ಹಣದ ಹರಿವು ನಿಲ್ಲಿಸಬೇಕಿದೆ: ಜೈಶಂಕರ್

author img

By

Published : Oct 28, 2022, 4:45 PM IST

ಭಯೋತ್ಪಾದನಾ ನಿಗ್ರಹ ಸಮಿತಿಯ ಅನೌಪಚಾರಿಕ ಬ್ರೀಫಿಂಗ್‌ಗೆ ಮುನ್ನ ಮಾತನಾಡಿದ ಜೈಶಂಕರ್, ಹಣವು ಭಯೋತ್ಪಾದನೆಯ ಜೀವಾಳ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಭಯೋತ್ಪಾದನೆಯು ಅಭಿವೃದ್ಧಿ ಹೊಂದಲು ಅಗತ್ಯವಾದ ಆರ್ಥಿಕ ಸಂಪನ್ಮೂಲಗಳನ್ನು ಪಡೆಯುವುದನ್ನು ಮುಂದುವರೆಸಿದೆ ಎಂದರು.

ಭಯೋತ್ಪಾದನೆಗೆ ಹಣವೇ ಜೀವಾಳ, ಹಣದ ಹರಿವು ನಿಲ್ಲಿಸಬೇಕಿದೆ: ಇಎಎಂ ಜೈಶಂಕರ್
Terrorism still thriving due to funds resources Jaishankar at UN counter terrorism meet

ಮುಂಬೈ: ಹಣದ ಹರಿವೇ ಭಯೋತ್ಪಾದನೆಯ ಜೀವನಾಡಿ ಎಂದು ಕರೆದಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಭಯೋತ್ಪಾದಕರು ಸಂಘಟಿತವಾಗಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ಆರ್ಥಿಕ ಸಂಪನ್ಮೂಲಗಳನ್ನು ಹೇಗೆ ಪಡೆಯುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಭಯೋತ್ಪಾದನೆಯು ಅಸ್ತಿತ್ವದಲ್ಲಿದೆ ಮತ್ತು ವಿಸ್ತರಿಸುತ್ತಿದೆ ಎಂಬುದು ವಾಸ್ತವಿಕ ಸತ್ಯ ಎಂದು ಅವರು ಹೇಳಿದ್ದಾರೆ.

2008 ರ ನವೆಂಬರ್​​ನಲ್ಲಿ ನಡೆದ ಮುಂಬೈ ದಾಳಿಯ 14 ನೇ ವಾರ್ಷಿಕೋತ್ಸವದ ಮೊದಲು, ಭಾರತವು ಶುಕ್ರವಾರದಿಂದ ಪ್ರಾರಂಭವಾಗುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಎರಡು ದಿನಗಳ ಭಯೋತ್ಪಾದನಾ ವಿರೋಧಿ ಸಭೆಯನ್ನು ಆಯೋಜಿಸಿದೆ. ಭಯೋತ್ಪಾದನಾ ನಿಗ್ರಹ ಸಮಿತಿಯ (CTC) ನವದೆಹಲಿಯ ಅಧ್ಯಕ್ಷರ ನೇತೃತ್ವದಲ್ಲಿ ಯುಎನ್‌ಎಸ್‌ಸಿಯ ಪ್ರಮುಖ ಸಭೆಯು ಭೀಕರ ಭಯೋತ್ಪಾದಕ ದಾಳಿಗಳನ್ನು ಕಂಡ ಪ್ರಮುಖ ತಾಣಗಳಲ್ಲಿ ಒಂದಾದ ಮುಂಬೈನ ತಾಜ್ ಹೋಟೆಲ್‌ನಲ್ಲಿ ನಡೆಯುತ್ತಿದೆ.

ಭಯೋತ್ಪಾದನಾ ನಿಗ್ರಹ ಸಮಿತಿಯ ಅನೌಪಚಾರಿಕ ಬ್ರೀಫಿಂಗ್‌ಗೆ ಮುನ್ನ ಮಾತನಾಡಿದ ಜೈಶಂಕರ್, ಹಣವು ಭಯೋತ್ಪಾದನೆಯ ಜೀವಾಳ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಭಯೋತ್ಪಾದಕ ಸಂಘಟನೆಗಳು ತಮ್ಮ ಸಾಂಸ್ಥಿಕ ಕಾರ್ಯಗಳನ್ನು ನಿರ್ವಹಿಸಲು ಮತ್ತು ಚಟುವಟಿಕೆಗಳನ್ನು ಕೈಗೊಳ್ಳಲು ಹಣ ಮತ್ತು ಸಂಪನ್ಮೂಲಗಳ ಅಗತ್ಯವಿರುತ್ತದೆ. ಭಯೋತ್ಪಾದನೆಯು ಅಸ್ತಿತ್ವದಲ್ಲಿದೆ. ಭಯೋತ್ಪಾದನೆಯು ಅಭಿವೃದ್ಧಿ ಹೊಂದಲು ಅಗತ್ಯವಾದ ಆರ್ಥಿಕ ಸಂಪನ್ಮೂಲಗಳನ್ನು ಪಡೆಯುವುದನ್ನು ಮುಂದುವರೆಸಿದೆ ಎಂದರು.

ಭಯೋತ್ಪಾದನೆಯನ್ನು ಎದುರಿಸುವ ಪ್ರಮುಖ ಮಾರ್ಗವೆಂದರೆ ಭಯೋತ್ಪಾದನೆಗೆ ಪೂರೈಕೆಯಾಗುತ್ತಿರುವ ಹಣಕಾಸನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವುದು. ಇಂದು ಭಯೋತ್ಪಾದನೆ ನಿಗ್ರಹ ಸಮಿತಿಯು ಸ್ಥಳೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ಎದುರಿಸುವ ಕುರಿತು ತಜ್ಞರಿಂದ ಮಾಹಿತಿ ಪಡೆಯಲಿದೆ ಎಂದು ಅವರು ಹೇಳಿದರು.

ನವೆಂಬರ್ 26, 2008 ರಂದು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ನಿಂದ ತರಬೇತಿ ಪಡೆದ 10 ಭಯೋತ್ಪಾದಕರು ಮುಂಬೈನಲ್ಲಿ ಅನೇಕ ಸ್ಥಳಗಳ ಮೇಲೆ ಸಂಘಟಿತ ದಾಳಿಗಳನ್ನು ನಡೆಸಿ 166 ಜನರನ್ನು ಕೊಂದಿದ್ದರು.

ಇದನ್ನೂ ಓದಿ: FATF Report: ಮತ್ತೆ ಬೂದು ಪಟ್ಟಿಯಲ್ಲೇ ಉಳಿದ ಪಾಕ್, ಟರ್ಕಿ ಹೊಸದಾಗಿ ಸೇರ್ಪಡೆ

ಮುಂಬೈ: ಹಣದ ಹರಿವೇ ಭಯೋತ್ಪಾದನೆಯ ಜೀವನಾಡಿ ಎಂದು ಕರೆದಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಭಯೋತ್ಪಾದಕರು ಸಂಘಟಿತವಾಗಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ಆರ್ಥಿಕ ಸಂಪನ್ಮೂಲಗಳನ್ನು ಹೇಗೆ ಪಡೆಯುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಭಯೋತ್ಪಾದನೆಯು ಅಸ್ತಿತ್ವದಲ್ಲಿದೆ ಮತ್ತು ವಿಸ್ತರಿಸುತ್ತಿದೆ ಎಂಬುದು ವಾಸ್ತವಿಕ ಸತ್ಯ ಎಂದು ಅವರು ಹೇಳಿದ್ದಾರೆ.

2008 ರ ನವೆಂಬರ್​​ನಲ್ಲಿ ನಡೆದ ಮುಂಬೈ ದಾಳಿಯ 14 ನೇ ವಾರ್ಷಿಕೋತ್ಸವದ ಮೊದಲು, ಭಾರತವು ಶುಕ್ರವಾರದಿಂದ ಪ್ರಾರಂಭವಾಗುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಎರಡು ದಿನಗಳ ಭಯೋತ್ಪಾದನಾ ವಿರೋಧಿ ಸಭೆಯನ್ನು ಆಯೋಜಿಸಿದೆ. ಭಯೋತ್ಪಾದನಾ ನಿಗ್ರಹ ಸಮಿತಿಯ (CTC) ನವದೆಹಲಿಯ ಅಧ್ಯಕ್ಷರ ನೇತೃತ್ವದಲ್ಲಿ ಯುಎನ್‌ಎಸ್‌ಸಿಯ ಪ್ರಮುಖ ಸಭೆಯು ಭೀಕರ ಭಯೋತ್ಪಾದಕ ದಾಳಿಗಳನ್ನು ಕಂಡ ಪ್ರಮುಖ ತಾಣಗಳಲ್ಲಿ ಒಂದಾದ ಮುಂಬೈನ ತಾಜ್ ಹೋಟೆಲ್‌ನಲ್ಲಿ ನಡೆಯುತ್ತಿದೆ.

ಭಯೋತ್ಪಾದನಾ ನಿಗ್ರಹ ಸಮಿತಿಯ ಅನೌಪಚಾರಿಕ ಬ್ರೀಫಿಂಗ್‌ಗೆ ಮುನ್ನ ಮಾತನಾಡಿದ ಜೈಶಂಕರ್, ಹಣವು ಭಯೋತ್ಪಾದನೆಯ ಜೀವಾಳ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಭಯೋತ್ಪಾದಕ ಸಂಘಟನೆಗಳು ತಮ್ಮ ಸಾಂಸ್ಥಿಕ ಕಾರ್ಯಗಳನ್ನು ನಿರ್ವಹಿಸಲು ಮತ್ತು ಚಟುವಟಿಕೆಗಳನ್ನು ಕೈಗೊಳ್ಳಲು ಹಣ ಮತ್ತು ಸಂಪನ್ಮೂಲಗಳ ಅಗತ್ಯವಿರುತ್ತದೆ. ಭಯೋತ್ಪಾದನೆಯು ಅಸ್ತಿತ್ವದಲ್ಲಿದೆ. ಭಯೋತ್ಪಾದನೆಯು ಅಭಿವೃದ್ಧಿ ಹೊಂದಲು ಅಗತ್ಯವಾದ ಆರ್ಥಿಕ ಸಂಪನ್ಮೂಲಗಳನ್ನು ಪಡೆಯುವುದನ್ನು ಮುಂದುವರೆಸಿದೆ ಎಂದರು.

ಭಯೋತ್ಪಾದನೆಯನ್ನು ಎದುರಿಸುವ ಪ್ರಮುಖ ಮಾರ್ಗವೆಂದರೆ ಭಯೋತ್ಪಾದನೆಗೆ ಪೂರೈಕೆಯಾಗುತ್ತಿರುವ ಹಣಕಾಸನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವುದು. ಇಂದು ಭಯೋತ್ಪಾದನೆ ನಿಗ್ರಹ ಸಮಿತಿಯು ಸ್ಥಳೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ಎದುರಿಸುವ ಕುರಿತು ತಜ್ಞರಿಂದ ಮಾಹಿತಿ ಪಡೆಯಲಿದೆ ಎಂದು ಅವರು ಹೇಳಿದರು.

ನವೆಂಬರ್ 26, 2008 ರಂದು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ನಿಂದ ತರಬೇತಿ ಪಡೆದ 10 ಭಯೋತ್ಪಾದಕರು ಮುಂಬೈನಲ್ಲಿ ಅನೇಕ ಸ್ಥಳಗಳ ಮೇಲೆ ಸಂಘಟಿತ ದಾಳಿಗಳನ್ನು ನಡೆಸಿ 166 ಜನರನ್ನು ಕೊಂದಿದ್ದರು.

ಇದನ್ನೂ ಓದಿ: FATF Report: ಮತ್ತೆ ಬೂದು ಪಟ್ಟಿಯಲ್ಲೇ ಉಳಿದ ಪಾಕ್, ಟರ್ಕಿ ಹೊಸದಾಗಿ ಸೇರ್ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.