ETV Bharat / bharat

ಕಳ್ಳತನ ಆರೋಪ ಹೊರಿಸಿ ಭೀಕರ ಹಲ್ಲೆ, ನೀರು ಕೇಳಿದ್ರೆ ಮೂತ್ರ ಕುಡಿಸಿ ಅಮಾನವೀಯತೆ

ಕಳ್ಳತನ ಆರೋಪ ಹೊರಿಸಿ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಬಿಹಾರದ ದರ್ಭಾಂಗದಲ್ಲಿ ಜರುಗಿದೆ.

author img

By

Published : Aug 26, 2022, 3:51 PM IST

Updated : Aug 26, 2022, 4:20 PM IST

Etv Bharatಕಳ್ಳತನ ಆರೋಪ ಹೊರಿಸಿ ಹಲ್ಲೆ, ನೀರು ಕೇಳಿದ್ರೆ ಮೂತ್ರ ಕುಡುಸಿದ ಕಿರಾತಕರು
Etv Bharatಕಳ್ಳತನ ಆರೋಪ ಹೊರಿಸಿ ಹಲ್ಲೆ, ನೀರು ಕೇಳಿದ್ರೆ ಮೂತ್ರ ಕುಡುಸಿದ ಕಿರಾತಕರು

ದರ್ಭಾಂಗ (ಬಿಹಾರ): ಕಳ್ಳತನ ಆರೋಪ ಹೊರಿಸಿ ವ್ಯಕ್ತಿಯೋರ್ವನನ್ನು ಅಮಾನುಷವಾಗಿ ಥಳಿಸಿ ಮೂಳೆಗಳನ್ನೇ ಮುರಿಯಲಾಗಿದೆ. ಅಷ್ಟೇ ಅಲ್ಲ, ನೀರು ಕೇಳಿದಾಗ ಮೂತ್ರ ಕುಡಿಸಿದ ಕಿರಾತಕರು ತಮ್ಮ ದುಷ್ಟತನ ಪ್ರದರ್ಶಿಸಿದ್ದಾರೆ. ಹಲ್ಲೆಗೊಳಗಾದವ ದಲಿತ ಸಮುದಾಯದವನಾಗಿದ್ದು, ನಿರ್ದಿಷ್ಟ ಕೋಮಿನ ಜನರು ಈ ಕೃತ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಘಟನೆಯ ನಂತರ ಈ ಪ್ರದೇಶದಲ್ಲಿ ಸಂಚಲನ ಉಂಟಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ದರ್ಭಾಂಗದ ಕಿಯೋಟಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೋರಾ ಗ್ರಾಮದ ನಿವಾಸಿ ರಾಮ್ ಪ್ರಕಾಶ್ ಪಾಸ್ವಾನ್ ಎಂಬಾತನ ಮೇಲೆ ಕಳ್ಳತನದ ಆರೋಪ ಹೊರಿಸಿ ಚಿತ್ರಹಿಂಸೆ ನೀಡಲಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವರು ರಾಮ್ ಪ್ರಕಾಶ್ ಪಾಸ್ವಾನ್ ಅವರ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ದೊಣ್ಣೆಯಿಂದ ಥಳಿಸಿದ್ದಾರೆ. ನಂತರ ಮನೆಯಿಂದ ಹೊರಗೆ ಎಳೆದು ತಂದು ಮತ್ತೆ ಹಲ್ಲೆ ನಡೆಸಿದ್ದಾರೆ.

ಮತ್ತಷ್ಟು ವಿವರ: ಆಗಸ್ಟ್ 16 ರ ರಾತ್ರಿ ಪಾಪಾ ಮಧುಬನಿಯಿಂದ ತನ್ನ ಚಿಕ್ಕಮ್ಮನ ಮನೆಗೆ ಹಿಂದಿರುಗುತ್ತಿದ್ದ. ಆ ಸಮಯದಲ್ಲಿ, ಆತ ರಹಿಕಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿಜ್ರಾ ಗ್ರಾಮವನ್ನು ತಲುಪಿದಾಗ ಯಾರೋ ಅವನನ್ನು ತಡೆದಿದ್ದಾರೆ. ನಂತರ ಅಲ್ಲಿದ್ದ ಅಪಾರ ಸಂಖ್ಯೆಯ ಜನರು ಕಟ್ಟಿ ಹಾಕಿ ದೊಣ್ಣೆಗಳಿಂದ ಮನಬಂದಂತೆ ಥಳಿಸಿದ್ದಾರೆ. ಈ ವಿಷಯ ತಿಳಿದು ಅವರನ್ನು ಬಿಡಿಸಲು ಸಂಬಂಧಿಕರು ಹೋದಾಗ 20 ಲಕ್ಷ ರೂ ಕಳ್ಳತನ ಆರೋಪ ಮಾಡಿ ಆ ಹಣವನ್ನು ಕೇಳಿದ್ದಾರೆ. ಆದರೆ, ಅವರನ್ನು ಕಾಪಾಡುವ ಉದ್ದೇಶದಿಂದ 50 ಸಾವಿರ ರೂ ನೀಡಿ ಅಲ್ಲಿಂದ ಬಿಡಿಸಿಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಆತನ ಮಗಳು ಪೂಜಾ ಕುಮಾರಿ ಹೇಳಿದ್ದಾಳೆ.

ಕಳ್ಳತನ ಆರೋಪ ಹೊರಿಸಿ ಭೀಕರ ಹಲ್ಲೆ, ನೀರು ಕೇಳಿದ್ರೆ ಮೂತ್ರ ಕುಡಿಸಿ ಅಮಾನವೀಯತೆ

ಎಚ್ಚೆತ್ತ ಪೊಲೀಸರು: ಥಳಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ದರ್ಭಾಂಗ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಸ್ಪತ್ರೆ ತಲುಪಿದ ಬಳಿಕ ದರ್ಭಾಂಗದ ಬೆಂಟ ಪೊಲೀಸ್ ಠಾಣೆಯ ಪೊಲೀಸರು ಸಂಪೂರ್ಣ ತನಿಖೆ ನಡೆಸಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಆಸ್ಪತ್ರೆಯಲ್ಲಿ ಸಂತ್ರಸ್ತ ರಾಮ್ ಪ್ರಕಾಶ್ ಪಾಸ್ವಾನ್ ಹೇಳಿಕೆಯನ್ನೂ ಸಹ ದಾಖಲಿಸಿಕೊಂಡಿದ್ದಾರೆ ಎಂದು ದರ್ಭಾಂಗ ಎಸ್‌ಡಿಪಿಒ ಕೃಷ್ಣಾನಂದ್ ಕುಮಾರ್ ಹೇಳಿದ್ದಾರೆ.

ಭಜರಂಗದಳ ಪ್ರವೇಶ: ಇದೀಗ ಭಜರಂಗದಳ ಕೂಡ ಘಟನೆ ಸಂಬಂಧ ಮಧ್ಯಪ್ರವೇಶ ಮಾಡಿದೆ. ದರ್ಭಾಂಗ ಜಿಲ್ಲಾ ಬಜರಂಗದಳದ ಸಂಚಾಲಕ ರಾಜೀವ್ ಕುಮಾರ್ ಮಧುಕರ್ ಅವರು ಮಾತನಾಡಿ, ಮಧುಬನಿ ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ. ಕಳ್ಳತನ ಮಾಡಿದರೂ ಸಹ ಆತನನ್ನು ಥಳಿಸುವ, ಕಾನೂನು ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಅವರಿಗೆ ಕೊಟ್ಟವರು ಯಾರು? ಎಂದು ಹರಿಹಾಯ್ದಿದ್ದಾರೆ.

ಹಲ್ಲೆಗೊಳಗಾದ ರಾಮ್ ಪ್ರಕಾಶ್ ಪಾಸ್ವಾನ್ ನಿರ್ದಿಷ್ಟ ಧರ್ಮದ ಪರ ಕೆಲಸದಲ್ಲಿ ನಿರತನಾಗಿದ್ದನಂತೆ. ಆದ್ದರಿಂದಲೇ ಇತರ ಸಮುದಾಯದವರ ಕಣ್ಣುಗಳು ಈತನ ಮೇಲೆ ಬಿದ್ದಿವೆ ಎನ್ನಲಾಗಿದೆ.

ಪಿಎಫ್‌ಐ ಸಂಘಟನೆ ಮೇಲೆ ಆರೋಪ: ಥಳಿತ ಪ್ರಕರಣ ನಡೆದ ಗ್ರಾಮದಲ್ಲಿ ಪಿಎಫ್‌ಐ ಸಂಘಟನೆಗೆ ಸೇರಿದ ಜನರು ವಾಸಿಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸುವ ಮೂಲಕ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಭಜರಂಗದಳ ಈ ಬಗ್ಗೆ ದೊಡ್ಡ ಪ್ರತಿಭಟನೆ ಮಾಡಲಿದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : ಮಗಳ ಜನ್ಮದಿನದಂದೇ ನಡೀತು ದುರಂತ.. ಒಂದೇ ಕುಟುಂಬದ ಆರು ಜನರ ಶವ ಪತ್ತೆ

ದರ್ಭಾಂಗ (ಬಿಹಾರ): ಕಳ್ಳತನ ಆರೋಪ ಹೊರಿಸಿ ವ್ಯಕ್ತಿಯೋರ್ವನನ್ನು ಅಮಾನುಷವಾಗಿ ಥಳಿಸಿ ಮೂಳೆಗಳನ್ನೇ ಮುರಿಯಲಾಗಿದೆ. ಅಷ್ಟೇ ಅಲ್ಲ, ನೀರು ಕೇಳಿದಾಗ ಮೂತ್ರ ಕುಡಿಸಿದ ಕಿರಾತಕರು ತಮ್ಮ ದುಷ್ಟತನ ಪ್ರದರ್ಶಿಸಿದ್ದಾರೆ. ಹಲ್ಲೆಗೊಳಗಾದವ ದಲಿತ ಸಮುದಾಯದವನಾಗಿದ್ದು, ನಿರ್ದಿಷ್ಟ ಕೋಮಿನ ಜನರು ಈ ಕೃತ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಘಟನೆಯ ನಂತರ ಈ ಪ್ರದೇಶದಲ್ಲಿ ಸಂಚಲನ ಉಂಟಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ದರ್ಭಾಂಗದ ಕಿಯೋಟಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೋರಾ ಗ್ರಾಮದ ನಿವಾಸಿ ರಾಮ್ ಪ್ರಕಾಶ್ ಪಾಸ್ವಾನ್ ಎಂಬಾತನ ಮೇಲೆ ಕಳ್ಳತನದ ಆರೋಪ ಹೊರಿಸಿ ಚಿತ್ರಹಿಂಸೆ ನೀಡಲಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವರು ರಾಮ್ ಪ್ರಕಾಶ್ ಪಾಸ್ವಾನ್ ಅವರ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ದೊಣ್ಣೆಯಿಂದ ಥಳಿಸಿದ್ದಾರೆ. ನಂತರ ಮನೆಯಿಂದ ಹೊರಗೆ ಎಳೆದು ತಂದು ಮತ್ತೆ ಹಲ್ಲೆ ನಡೆಸಿದ್ದಾರೆ.

ಮತ್ತಷ್ಟು ವಿವರ: ಆಗಸ್ಟ್ 16 ರ ರಾತ್ರಿ ಪಾಪಾ ಮಧುಬನಿಯಿಂದ ತನ್ನ ಚಿಕ್ಕಮ್ಮನ ಮನೆಗೆ ಹಿಂದಿರುಗುತ್ತಿದ್ದ. ಆ ಸಮಯದಲ್ಲಿ, ಆತ ರಹಿಕಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿಜ್ರಾ ಗ್ರಾಮವನ್ನು ತಲುಪಿದಾಗ ಯಾರೋ ಅವನನ್ನು ತಡೆದಿದ್ದಾರೆ. ನಂತರ ಅಲ್ಲಿದ್ದ ಅಪಾರ ಸಂಖ್ಯೆಯ ಜನರು ಕಟ್ಟಿ ಹಾಕಿ ದೊಣ್ಣೆಗಳಿಂದ ಮನಬಂದಂತೆ ಥಳಿಸಿದ್ದಾರೆ. ಈ ವಿಷಯ ತಿಳಿದು ಅವರನ್ನು ಬಿಡಿಸಲು ಸಂಬಂಧಿಕರು ಹೋದಾಗ 20 ಲಕ್ಷ ರೂ ಕಳ್ಳತನ ಆರೋಪ ಮಾಡಿ ಆ ಹಣವನ್ನು ಕೇಳಿದ್ದಾರೆ. ಆದರೆ, ಅವರನ್ನು ಕಾಪಾಡುವ ಉದ್ದೇಶದಿಂದ 50 ಸಾವಿರ ರೂ ನೀಡಿ ಅಲ್ಲಿಂದ ಬಿಡಿಸಿಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಆತನ ಮಗಳು ಪೂಜಾ ಕುಮಾರಿ ಹೇಳಿದ್ದಾಳೆ.

ಕಳ್ಳತನ ಆರೋಪ ಹೊರಿಸಿ ಭೀಕರ ಹಲ್ಲೆ, ನೀರು ಕೇಳಿದ್ರೆ ಮೂತ್ರ ಕುಡಿಸಿ ಅಮಾನವೀಯತೆ

ಎಚ್ಚೆತ್ತ ಪೊಲೀಸರು: ಥಳಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ದರ್ಭಾಂಗ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಸ್ಪತ್ರೆ ತಲುಪಿದ ಬಳಿಕ ದರ್ಭಾಂಗದ ಬೆಂಟ ಪೊಲೀಸ್ ಠಾಣೆಯ ಪೊಲೀಸರು ಸಂಪೂರ್ಣ ತನಿಖೆ ನಡೆಸಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಆಸ್ಪತ್ರೆಯಲ್ಲಿ ಸಂತ್ರಸ್ತ ರಾಮ್ ಪ್ರಕಾಶ್ ಪಾಸ್ವಾನ್ ಹೇಳಿಕೆಯನ್ನೂ ಸಹ ದಾಖಲಿಸಿಕೊಂಡಿದ್ದಾರೆ ಎಂದು ದರ್ಭಾಂಗ ಎಸ್‌ಡಿಪಿಒ ಕೃಷ್ಣಾನಂದ್ ಕುಮಾರ್ ಹೇಳಿದ್ದಾರೆ.

ಭಜರಂಗದಳ ಪ್ರವೇಶ: ಇದೀಗ ಭಜರಂಗದಳ ಕೂಡ ಘಟನೆ ಸಂಬಂಧ ಮಧ್ಯಪ್ರವೇಶ ಮಾಡಿದೆ. ದರ್ಭಾಂಗ ಜಿಲ್ಲಾ ಬಜರಂಗದಳದ ಸಂಚಾಲಕ ರಾಜೀವ್ ಕುಮಾರ್ ಮಧುಕರ್ ಅವರು ಮಾತನಾಡಿ, ಮಧುಬನಿ ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ. ಕಳ್ಳತನ ಮಾಡಿದರೂ ಸಹ ಆತನನ್ನು ಥಳಿಸುವ, ಕಾನೂನು ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಅವರಿಗೆ ಕೊಟ್ಟವರು ಯಾರು? ಎಂದು ಹರಿಹಾಯ್ದಿದ್ದಾರೆ.

ಹಲ್ಲೆಗೊಳಗಾದ ರಾಮ್ ಪ್ರಕಾಶ್ ಪಾಸ್ವಾನ್ ನಿರ್ದಿಷ್ಟ ಧರ್ಮದ ಪರ ಕೆಲಸದಲ್ಲಿ ನಿರತನಾಗಿದ್ದನಂತೆ. ಆದ್ದರಿಂದಲೇ ಇತರ ಸಮುದಾಯದವರ ಕಣ್ಣುಗಳು ಈತನ ಮೇಲೆ ಬಿದ್ದಿವೆ ಎನ್ನಲಾಗಿದೆ.

ಪಿಎಫ್‌ಐ ಸಂಘಟನೆ ಮೇಲೆ ಆರೋಪ: ಥಳಿತ ಪ್ರಕರಣ ನಡೆದ ಗ್ರಾಮದಲ್ಲಿ ಪಿಎಫ್‌ಐ ಸಂಘಟನೆಗೆ ಸೇರಿದ ಜನರು ವಾಸಿಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸುವ ಮೂಲಕ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಭಜರಂಗದಳ ಈ ಬಗ್ಗೆ ದೊಡ್ಡ ಪ್ರತಿಭಟನೆ ಮಾಡಲಿದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : ಮಗಳ ಜನ್ಮದಿನದಂದೇ ನಡೀತು ದುರಂತ.. ಒಂದೇ ಕುಟುಂಬದ ಆರು ಜನರ ಶವ ಪತ್ತೆ

Last Updated : Aug 26, 2022, 4:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.