ETV Bharat / bharat

ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಪತ್ರಕರ್ತೆ ಪ್ರಿಯಾ ಖುಲಾಸೆ: ತೀರ್ಪು ಪ್ರಶ್ನಿಸಿ ಎಂ.ಜೆ ಅಕ್ಬರ್​​ ಅರ್ಜಿ ಸಲ್ಲಿಕೆ

ಅಕ್ಬರ್ ವಿರುದ್ಧ 'ಮೀಟೂ' ಅಭಿಯಾನದಲ್ಲಿ ಲೈಂಗಿಕ ದುರ್ವರ್ತನೆ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಖುಲಾಸೆಗೊಂಡಿದ್ದು, ಇದನ್ನ ಪ್ರಶ್ನೆ ಮಾಡಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ.

author img

By

Published : May 5, 2021, 6:29 PM IST

MJ Akbar
MJ Akbar

ನವದೆಹಲಿ: ಕೇಂದ್ರದ ಮಾಜಿ ಸಚಿವ ಎಂಜೆ ಅಕ್ಬರ್​​ ಕ್ರಿಮಿನಲ್​ ಮಾನಹಾನಿ ಪ್ರಕರಣದಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ಖುಲಾಸೆಗೊಂಡಿದ್ದು, ಇದನ್ನ ಪ್ರಶ್ನೆ ಮಾಡಿ ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಕೇಂದ್ರದ ಮಾಜಿ ಸಚಿವ ಎಂಜೆ ಅಕ್ಬರ್​​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನಹಾನಿ ಪ್ರಕರಣ ಸಲ್ಲಿಕೆ ಮಾಡಲಾಗಿತ್ತು. ಇದರ ವಿಚಾರಣೆ ನಡೆಸುವುದಾಗಿ ಹೇಳಿರುವ ದೆಹಲಿ ಹೈಕೋರ್ಟ್​ನ ನ್ಯಾಯಮೂರ್ತಿ ಮುಕ್ತಾ ಗುಪ್ತಾ, ಆದಷ್ಟು ಬೇಗ ಹೇಳಿಕೆಯ ದಾಖಲೆಗೋಸ್ಕರ ಕೋರ್ಟ್​ಗೆ ಕರೆಯಿಸುವುದಾಗಿ ಹೇಳಿ, ವಿಚಾರಣೆಯನ್ನ ಆಗಸ್ಟ್​ 11ಕ್ಕೆ ಮುಂದೂಡಿಕೆ ಮಾಡಿದ್ದಾರೆ.

ಪತ್ರಕರ್ತೆ ವಿರುದ್ಧ ಅಕ್ಬರ್​ ಸಲ್ಲಿಕೆ ಮಾಡಿದ್ದ ಮಾನಹಾನಿ ಪ್ರಕರಣ ವಜಾಗೊಳಿಸಿದ್ದ ಹೈಕೋರ್ಟ್​​ ಅವರನ್ನ ಖುಲಾಸೆಗೊಳಿಸಿತ್ತು. ಇದನ್ನ ಪ್ರಶ್ನೆ ಮಾಡಿ ಅವರು ಮತ್ತೊಮ್ಮೆ ಅರ್ಜಿ ಸಲ್ಲಿಕೆ ಮಾಡಿದ್ದರು.

ಇದನ್ನೂ ಓದಿ: ಚುನಾವಣೆ ಅಂತ್ಯದ ಬೆನ್ನಲ್ಲೇ ತೈಲ ಬೆಲೆ ಏರಿಕೆ ಶುರು.. ಸತತ 2ನೇ ದಿನವೂ ಪೆಟ್ರೋಲ್​ ರೇಟ್​ ಏರಿಕೆ

ಏನಿದು ಪ್ರಕರಣ?: 2018ರಲ್ಲಿ 'ಮೀಟೂ' ಆಂದೋಲನದ ಸಂದರ್ಭದಲ್ಲಿ ಪತ್ರಕರ್ತೆ ಕೇಂದ್ರ ಮಾಜಿ ಸಚಿವ ಎಂ.ಜೆ ಅಕ್ಬರ್ ವಿರುದ್ಧ ಲೈಂಗಿಕ ಆರೋಪದ ಪ್ರಕರಣ ದಾಖಲು ಮಾಡಿದ್ದರು.

ಆದರೆ ತಮ್ಮ ವಿರುದ್ಧದ ಆರೋಪ ತಳ್ಳಿ ಹಾಕಿದ್ದ ಅಕ್ಬರ್​​ 2018ರ ಆಗಸ್ಟ್​ 15ರಂದು ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇನ್ನು ಇವರ ವಿರುದ್ಧ ವ್ಯಾಪಕ ಟೀಕೆ ಕೇಳಿ ಬಂದ ಕಾರಣ ಆಗಸ್ಟ್​ 17ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದರು.

ನವದೆಹಲಿ: ಕೇಂದ್ರದ ಮಾಜಿ ಸಚಿವ ಎಂಜೆ ಅಕ್ಬರ್​​ ಕ್ರಿಮಿನಲ್​ ಮಾನಹಾನಿ ಪ್ರಕರಣದಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ಖುಲಾಸೆಗೊಂಡಿದ್ದು, ಇದನ್ನ ಪ್ರಶ್ನೆ ಮಾಡಿ ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಕೇಂದ್ರದ ಮಾಜಿ ಸಚಿವ ಎಂಜೆ ಅಕ್ಬರ್​​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನಹಾನಿ ಪ್ರಕರಣ ಸಲ್ಲಿಕೆ ಮಾಡಲಾಗಿತ್ತು. ಇದರ ವಿಚಾರಣೆ ನಡೆಸುವುದಾಗಿ ಹೇಳಿರುವ ದೆಹಲಿ ಹೈಕೋರ್ಟ್​ನ ನ್ಯಾಯಮೂರ್ತಿ ಮುಕ್ತಾ ಗುಪ್ತಾ, ಆದಷ್ಟು ಬೇಗ ಹೇಳಿಕೆಯ ದಾಖಲೆಗೋಸ್ಕರ ಕೋರ್ಟ್​ಗೆ ಕರೆಯಿಸುವುದಾಗಿ ಹೇಳಿ, ವಿಚಾರಣೆಯನ್ನ ಆಗಸ್ಟ್​ 11ಕ್ಕೆ ಮುಂದೂಡಿಕೆ ಮಾಡಿದ್ದಾರೆ.

ಪತ್ರಕರ್ತೆ ವಿರುದ್ಧ ಅಕ್ಬರ್​ ಸಲ್ಲಿಕೆ ಮಾಡಿದ್ದ ಮಾನಹಾನಿ ಪ್ರಕರಣ ವಜಾಗೊಳಿಸಿದ್ದ ಹೈಕೋರ್ಟ್​​ ಅವರನ್ನ ಖುಲಾಸೆಗೊಳಿಸಿತ್ತು. ಇದನ್ನ ಪ್ರಶ್ನೆ ಮಾಡಿ ಅವರು ಮತ್ತೊಮ್ಮೆ ಅರ್ಜಿ ಸಲ್ಲಿಕೆ ಮಾಡಿದ್ದರು.

ಇದನ್ನೂ ಓದಿ: ಚುನಾವಣೆ ಅಂತ್ಯದ ಬೆನ್ನಲ್ಲೇ ತೈಲ ಬೆಲೆ ಏರಿಕೆ ಶುರು.. ಸತತ 2ನೇ ದಿನವೂ ಪೆಟ್ರೋಲ್​ ರೇಟ್​ ಏರಿಕೆ

ಏನಿದು ಪ್ರಕರಣ?: 2018ರಲ್ಲಿ 'ಮೀಟೂ' ಆಂದೋಲನದ ಸಂದರ್ಭದಲ್ಲಿ ಪತ್ರಕರ್ತೆ ಕೇಂದ್ರ ಮಾಜಿ ಸಚಿವ ಎಂ.ಜೆ ಅಕ್ಬರ್ ವಿರುದ್ಧ ಲೈಂಗಿಕ ಆರೋಪದ ಪ್ರಕರಣ ದಾಖಲು ಮಾಡಿದ್ದರು.

ಆದರೆ ತಮ್ಮ ವಿರುದ್ಧದ ಆರೋಪ ತಳ್ಳಿ ಹಾಕಿದ್ದ ಅಕ್ಬರ್​​ 2018ರ ಆಗಸ್ಟ್​ 15ರಂದು ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇನ್ನು ಇವರ ವಿರುದ್ಧ ವ್ಯಾಪಕ ಟೀಕೆ ಕೇಳಿ ಬಂದ ಕಾರಣ ಆಗಸ್ಟ್​ 17ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.