ETV Bharat / bharat

ಪಂಚರಾಜ್ಯಗಳಲ್ಲಿ ಕಾಂಗ್ರೆಸ್​ ಹೀನಾಯ ಸೋಲು: ದೆಹಲಿಯಲ್ಲಿ ಭಿನ್ನಮತೀಯ ನಾಯಕರ ಸಭೆ

author img

By

Published : Mar 11, 2022, 8:46 PM IST

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಹಿರಂಗಗೊಳ್ಳುತ್ತಿದ್ದಂತೆ ಕಾಂಗ್ರೆಸ್​​ನಲ್ಲಿ ಮತ್ತೊಮ್ಮೆ ಭಿನ್ನಮತೀಯ ನಾಯಕರ ಅಸಮಾಧಾನ ಹೊರಬಿದ್ದಿದ್ದು, ಇದರ ಬೆನ್ನಲ್ಲೇ ಪ್ರಮುಖ ನಾಯಕರು ದೆಹಲಿಯಲ್ಲಿ ಸಭೆ ನಡೆಸಿದರು.

Senior Dissident Cong Leaders Meet
Senior Dissident Cong Leaders Meet

ನವದೆಹಲಿ: ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣುವ ಮೂಲಕ ಮತ್ತಷ್ಟು ಮುಖಭಂಗಕ್ಕೊಳಗಾಗಿದೆ. ಇದರ ಬೆನ್ನಲ್ಲೇ ಪಕ್ಷದ ಭಿನ್ನಮತೀಯ ನಾಯಕರು ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದರು. ಪಕ್ಷದ ಹಿರಿಯ ಮುಖಂಡರಾದ ಕಪಿಲ್ ಸಿಬಲ್​ ಹಾಗೂ ಮನೀಷ್​ ಸಿಸೋಡಿಯಾ ಸಂಜೆ ಗುಲಾಂ ನಬಿ ಆಜಾದ್​​​ ಅವರ ನಿವಾಸಕ್ಕೆ ಭೇಟಿ ನೀಡಿದರು.

ಉತ್ತರ ಪ್ರದೇಶ, ಪಂಜಾಬ್​, ಮಣಿಪುರ, ಗೋವಾ, ಉತ್ತರಾಖಂಡದಲ್ಲಿ ಕಾಂಗ್ರೆಸ್​ ಸಂಪೂರ್ಣವಾಗಿ ನೆಲಕಚ್ಚಿದ್ದು, ಇದರ ಬೆನ್ನಲ್ಲೇ ಪಕ್ಷದಲ್ಲಿ ಮತ್ತೊಮ್ಮೆ ಭಿನ್ನಮತೀಯ ಸ್ಫೋಟ ಉಂಟಾಗುವ ಸಾಧ್ಯತೆ ಇದೆ. ಇದಕ್ಕೆ ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಕಪಿಲ್​ ಸಿಬಲ್​, ಮನೀಷ್​ ಸಿಸೋಡಿಯಾ ಹಾಗೂ ಗುಲಾಂ ನಬಿ ಆಜಾದ್ ಸಭೆ ನಡೆಸಿದರು.

ಇದನ್ನೂ ಓದಿ: 'ನಾಲ್ಕು ರಾಜ್ಯಗಳ ಬಿಜೆಪಿ ಗೆಲುವು 2024ರ ಚುನಾವಣೆ ಪ್ರತಿಬಿಂಬವಲ್ಲ; ಈ ಜಯ ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ': ಸಿಎಂ ಮಮತಾ

ಪಂಚರಾಜ್ಯ ಸೋಲಿನ ಬಗ್ಗೆ ಈಗಾಗಲೇ ಕೆಲ ಕಾಂಗ್ರೆಸ್​ ನಾಯಕರು ಪಕ್ಷದ ನಾಯಕತ್ವದ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ನಾಯಕತ್ವದ ಬದಲಾವಣೆ ಅವಶ್ಯಕತೆ ಇದೆ ಎಂದು ಶಶಿ ತರೂರ್ ಮಾತನಾಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ಭಿನ್ನಮತೀಯ ನಾಯಕರೆಂದು ಗುರುತಿಸಲ್ಪಟ್ಟಿರುವ ಕಪಿಲ್ ಸಿಬಲ್​, ಮನೀಶ್ ತಿವಾರಿ ಹಾಗೂ ಗುಲಾಂ ನಬಿ ಆಜಾದ್​ ಮಹತ್ವದ ಸಭೆ ನಡೆಸಿದರು.

ನವದೆಹಲಿ: ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣುವ ಮೂಲಕ ಮತ್ತಷ್ಟು ಮುಖಭಂಗಕ್ಕೊಳಗಾಗಿದೆ. ಇದರ ಬೆನ್ನಲ್ಲೇ ಪಕ್ಷದ ಭಿನ್ನಮತೀಯ ನಾಯಕರು ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದರು. ಪಕ್ಷದ ಹಿರಿಯ ಮುಖಂಡರಾದ ಕಪಿಲ್ ಸಿಬಲ್​ ಹಾಗೂ ಮನೀಷ್​ ಸಿಸೋಡಿಯಾ ಸಂಜೆ ಗುಲಾಂ ನಬಿ ಆಜಾದ್​​​ ಅವರ ನಿವಾಸಕ್ಕೆ ಭೇಟಿ ನೀಡಿದರು.

ಉತ್ತರ ಪ್ರದೇಶ, ಪಂಜಾಬ್​, ಮಣಿಪುರ, ಗೋವಾ, ಉತ್ತರಾಖಂಡದಲ್ಲಿ ಕಾಂಗ್ರೆಸ್​ ಸಂಪೂರ್ಣವಾಗಿ ನೆಲಕಚ್ಚಿದ್ದು, ಇದರ ಬೆನ್ನಲ್ಲೇ ಪಕ್ಷದಲ್ಲಿ ಮತ್ತೊಮ್ಮೆ ಭಿನ್ನಮತೀಯ ಸ್ಫೋಟ ಉಂಟಾಗುವ ಸಾಧ್ಯತೆ ಇದೆ. ಇದಕ್ಕೆ ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಕಪಿಲ್​ ಸಿಬಲ್​, ಮನೀಷ್​ ಸಿಸೋಡಿಯಾ ಹಾಗೂ ಗುಲಾಂ ನಬಿ ಆಜಾದ್ ಸಭೆ ನಡೆಸಿದರು.

ಇದನ್ನೂ ಓದಿ: 'ನಾಲ್ಕು ರಾಜ್ಯಗಳ ಬಿಜೆಪಿ ಗೆಲುವು 2024ರ ಚುನಾವಣೆ ಪ್ರತಿಬಿಂಬವಲ್ಲ; ಈ ಜಯ ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ': ಸಿಎಂ ಮಮತಾ

ಪಂಚರಾಜ್ಯ ಸೋಲಿನ ಬಗ್ಗೆ ಈಗಾಗಲೇ ಕೆಲ ಕಾಂಗ್ರೆಸ್​ ನಾಯಕರು ಪಕ್ಷದ ನಾಯಕತ್ವದ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ನಾಯಕತ್ವದ ಬದಲಾವಣೆ ಅವಶ್ಯಕತೆ ಇದೆ ಎಂದು ಶಶಿ ತರೂರ್ ಮಾತನಾಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ಭಿನ್ನಮತೀಯ ನಾಯಕರೆಂದು ಗುರುತಿಸಲ್ಪಟ್ಟಿರುವ ಕಪಿಲ್ ಸಿಬಲ್​, ಮನೀಶ್ ತಿವಾರಿ ಹಾಗೂ ಗುಲಾಂ ನಬಿ ಆಜಾದ್​ ಮಹತ್ವದ ಸಭೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.