ETV Bharat / bharat

9 ಸಾವಿರ ಪುಟ ಆರ್​​ಟಿಐ ದಾಖಲೆ: ಚಕ್ಕಡಿಯಲ್ಲಿ ಹೊತ್ತೊಯ್ದ ಕಾರ್ಯಕರ್ತ

author img

By

Published : Nov 5, 2022, 12:27 PM IST

Updated : Nov 5, 2022, 3:17 PM IST

ಆರ್​ಟಿಐ ಕಾರ್ಯಕರ್ತ ಮಾಖನ್ ಧಾಕಡ್ ಎಂಬಾತ ಪ್ರಧಾನಮಂತ್ರಿ ಆವಾಸ್, ಸಂಬಲ್ ಯೋಜನೆ ಮತ್ತು ನಿರ್ಮಾಣ ಕಾರ್ಯದಲ್ಲಿ ಪಾವತಿ, ಸ್ವಚ್ಛತಾ ಮಿಷನ್ ಅಡಿಯಲ್ಲಿ ನಗರಸಭೆ ಖರೀದಿಸಿದ ವಸ್ತುಗಳ ಬಗ್ಗೆ ಮಾಹಿತಿ ಕೇಳಿದ್ದ. ಆದರೆ ಆತನಿಗೆ ಮಾಹಿತಿ ನೀಡಲಾಗಿರಲಿಲ್ಲ. ಇದಕ್ಕಾಗಿ ಅವರು ಗ್ವಾಲಿಯರ್​ನಿಂದ ಭೋಪಾಲದವರೆಗೆ ಅಪೀಲು ಅರ್ಜಿಗಳನ್ನು ಸಲ್ಲಿಸಿದ್ದರು.

9 ಸಾವಿರ ಪುಟ ಆರ್​​ಟಿಐ ದಾಖಲೆ: ಚಕ್ಕಡಿಯಲ್ಲಿ ಹೊತ್ತೊಯ್ದ ಕಾರ್ಯಕರ್ತ
man-reached-shivpuri-council-office-on-bullock-cart-took-9-thousand-pages-information-received-from-rti

ಶಿವಪುರಿ (ಮಧ್ಯ ಪ್ರದೇಶ): ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬನಿಗೆ ಬರೋಬ್ಬರಿ 9 ಸಾವಿರ ಪುಟಗಳ ದಾಖಲೆಗಳನ್ನು ನೀಡಲಾಗಿದೆ. ಇದಕ್ಕಾಗಿ ಆತ ಪಾವತಿಸಿದ ಶುಲ್ಕ 25 ಸಾವಿರ ರೂಪಾಯಿ. ಇನ್ನು ಈ ದಾಖಲೆಗಳನ್ನು ಆತ ಚಕ್ಕಡಿ ಗಾಡಿಯಲ್ಲಿ ತೆಗೆದುಕೊಂಡು ಹೋಗಿರುವುದು ಇನ್ನೊಂದು ವೈಶಿಷ್ಟ್ಯ.

ಆರ್​ಟಿಐ ಕಾರ್ಯಕರ್ತ ಮಾಖನ್ ಧಾಕಡ್ ಎಂಬಾತ ಪ್ರಧಾನಮಂತ್ರಿ ಆವಾಸ್, ಸಂಬಲ್ ಯೋಜನೆ ಮತ್ತು ನಿರ್ಮಾಣ ಕಾರ್ಯದಲ್ಲಿ ಪಾವತಿ, ಸ್ವಚ್ಛತಾ ಮಿಷನ್ ಅಡಿಯಲ್ಲಿ ನಗರಸಭೆ ಖರೀದಿಸಿದ ವಸ್ತುಗಳ ಬಗ್ಗೆ ಮಾಹಿತಿ ಕೇಳಿದ್ದ. ಆದರೆ ಆತನಿಗೆ ಮಾಹಿತಿ ನೀಡಲಾಗಿರಲಿಲ್ಲ. ಇದಕ್ಕಾಗಿ ಅವರು ಗ್ವಾಲಿಯರ್​ನಿಂದ ಭೋಪಾಲದವರೆಗೆ ಅಪೀಲು ಅರ್ಜಿಗಳನ್ನು ಸಲ್ಲಿಸಿದ್ದರು. ಕೊನೆಗೂ ಅವರಿಗೆ ಬೇಕಿದ್ದ ಮಾಹಿತಿ ಸಿಕ್ಕಿದ್ದು, ಇದಕ್ಕಾಗಿ ಅವರು 25 ಸಾವಿರ ರೂಪಾಯಿ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಿದ್ದಾರೆ. ತಮ್ಮ ಬಳಿ ಅಷ್ಟು ದುಡ್ಡಿಲ್ಲದಿದ್ದರೂ ಎಲ್ಲಿಂದಲೋ ಸಾಲ ಮಾಡಿತಂದು ಹಣ ಕಟ್ಟಿದ್ದಾರೆ.

ಚಕ್ಕಡಿಯಲ್ಲಿ ಆರ್​​ಟಿಐ ದಾಖಲೆ ಹೊತ್ತೊಯ್ದ ಕಾರ್ಯಕರ್ತ

ಕೊನೆಗೂ ಅವರಿಗೆ ದಾಖಲೆ ಸಿಕ್ಕಾಗ ಆದ ಖುಷಿ ಅಷ್ಟಿಷ್ಟಲ್ಲ. ಕೇವಲ ದಾಖಲೆಯ ಪುಟಗಳನ್ನು ಎಣಿಸಲು ಧಾಕಡ್ ತಮ್ಮೊಂದಿಗೆ 4 ಜನರನ್ನು ಕರೆತಂದಿದ್ದರು. ಇನ್ನು ಬಾಜಾ ಬಜಂತ್ರಿಗಳೊಂದಿಗೆ ಚಕ್ಕಡಿ ಗಾಡಿಯಲ್ಲಿ ದಾಖಲೆಗಳನ್ನು ಹೇರಿಕೊಂಡು ಹೋಗಿದ್ದು ಈಗ ಸಾಕಷ್ಟು ಚರ್ಚೆಯ ವಿಷಯವಾಗಿದೆ.

ಇದನ್ನೂ ಓದಿ: ವಾಹನ ವಿಮೆ ಕೊನೆಗೊಂಡರೂ ನವೀಕರಣ ಮಾಡದ ಪೊಲೀಸರು: ಆರ್​​ಟಿಐ ಕಾರ್ಯಕರ್ತರಿಂದ ಲೋಕಾಯುಕ್ತರಿಗೆ ದೂರು

ಶಿವಪುರಿ (ಮಧ್ಯ ಪ್ರದೇಶ): ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬನಿಗೆ ಬರೋಬ್ಬರಿ 9 ಸಾವಿರ ಪುಟಗಳ ದಾಖಲೆಗಳನ್ನು ನೀಡಲಾಗಿದೆ. ಇದಕ್ಕಾಗಿ ಆತ ಪಾವತಿಸಿದ ಶುಲ್ಕ 25 ಸಾವಿರ ರೂಪಾಯಿ. ಇನ್ನು ಈ ದಾಖಲೆಗಳನ್ನು ಆತ ಚಕ್ಕಡಿ ಗಾಡಿಯಲ್ಲಿ ತೆಗೆದುಕೊಂಡು ಹೋಗಿರುವುದು ಇನ್ನೊಂದು ವೈಶಿಷ್ಟ್ಯ.

ಆರ್​ಟಿಐ ಕಾರ್ಯಕರ್ತ ಮಾಖನ್ ಧಾಕಡ್ ಎಂಬಾತ ಪ್ರಧಾನಮಂತ್ರಿ ಆವಾಸ್, ಸಂಬಲ್ ಯೋಜನೆ ಮತ್ತು ನಿರ್ಮಾಣ ಕಾರ್ಯದಲ್ಲಿ ಪಾವತಿ, ಸ್ವಚ್ಛತಾ ಮಿಷನ್ ಅಡಿಯಲ್ಲಿ ನಗರಸಭೆ ಖರೀದಿಸಿದ ವಸ್ತುಗಳ ಬಗ್ಗೆ ಮಾಹಿತಿ ಕೇಳಿದ್ದ. ಆದರೆ ಆತನಿಗೆ ಮಾಹಿತಿ ನೀಡಲಾಗಿರಲಿಲ್ಲ. ಇದಕ್ಕಾಗಿ ಅವರು ಗ್ವಾಲಿಯರ್​ನಿಂದ ಭೋಪಾಲದವರೆಗೆ ಅಪೀಲು ಅರ್ಜಿಗಳನ್ನು ಸಲ್ಲಿಸಿದ್ದರು. ಕೊನೆಗೂ ಅವರಿಗೆ ಬೇಕಿದ್ದ ಮಾಹಿತಿ ಸಿಕ್ಕಿದ್ದು, ಇದಕ್ಕಾಗಿ ಅವರು 25 ಸಾವಿರ ರೂಪಾಯಿ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಿದ್ದಾರೆ. ತಮ್ಮ ಬಳಿ ಅಷ್ಟು ದುಡ್ಡಿಲ್ಲದಿದ್ದರೂ ಎಲ್ಲಿಂದಲೋ ಸಾಲ ಮಾಡಿತಂದು ಹಣ ಕಟ್ಟಿದ್ದಾರೆ.

ಚಕ್ಕಡಿಯಲ್ಲಿ ಆರ್​​ಟಿಐ ದಾಖಲೆ ಹೊತ್ತೊಯ್ದ ಕಾರ್ಯಕರ್ತ

ಕೊನೆಗೂ ಅವರಿಗೆ ದಾಖಲೆ ಸಿಕ್ಕಾಗ ಆದ ಖುಷಿ ಅಷ್ಟಿಷ್ಟಲ್ಲ. ಕೇವಲ ದಾಖಲೆಯ ಪುಟಗಳನ್ನು ಎಣಿಸಲು ಧಾಕಡ್ ತಮ್ಮೊಂದಿಗೆ 4 ಜನರನ್ನು ಕರೆತಂದಿದ್ದರು. ಇನ್ನು ಬಾಜಾ ಬಜಂತ್ರಿಗಳೊಂದಿಗೆ ಚಕ್ಕಡಿ ಗಾಡಿಯಲ್ಲಿ ದಾಖಲೆಗಳನ್ನು ಹೇರಿಕೊಂಡು ಹೋಗಿದ್ದು ಈಗ ಸಾಕಷ್ಟು ಚರ್ಚೆಯ ವಿಷಯವಾಗಿದೆ.

ಇದನ್ನೂ ಓದಿ: ವಾಹನ ವಿಮೆ ಕೊನೆಗೊಂಡರೂ ನವೀಕರಣ ಮಾಡದ ಪೊಲೀಸರು: ಆರ್​​ಟಿಐ ಕಾರ್ಯಕರ್ತರಿಂದ ಲೋಕಾಯುಕ್ತರಿಗೆ ದೂರು

Last Updated : Nov 5, 2022, 3:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.