ETV Bharat / bharat

ಆಸ್ತಿಗಾಗಿ ಅಕ್ಕ - ತಂಗಿ ಮದುವೆಯಾದ ಭೂಪ.. 2ನೇ ಹೆಂಡ್ತಿ ಪ್ರಿಯಕರನ ಕೊಲೆ ಮಾಡಿದ ಗಂಡ!

ಆಸ್ತಿಗಾಗಿ ಅಕ್ಕ-ತಂಗಿಯನ್ನು ಮದುವೆಯಾದ ವ್ಯಕ್ತಿಯೊಬ್ಬ ತನ್ನ ಎರಡನೇ ಹೆಂಡ್ತಿ ಲವರ್​ನನ್ನು ಕಾರಿನಿಂದ ಡಿಕ್ಕಿ ಹೊಡೆಸಿ, ಕೆಳಗೆ ಬಿದ್ದ ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿಸಿರುವ ಘಟನೆ ತೆಲಂಗಾಣದ ವಿಕಾರಾಬಾದ್​ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

author img

By

Published : Mar 9, 2022, 1:15 PM IST

Man killed over love issue in Telangana, Man killed over love issue in Vikarabad, Vikarabad crime news, Telangana news, ತೆಲಂಗಾಣದಲ್ಲಿ ಪ್ರೀತಿ ವಿಷಯಕ್ಕೆ ವ್ಯಕ್ತಿ ಕೊಲೆ, ವಿಕಾರಾಬಾದ್​ನಲ್ಲಿ ಪ್ರೀತಿ ವಿಷಯಕ್ಕೆ ವ್ಯಕ್ತಿ ಕೊಲೆ, ವಿಕಾರಾಬಾದ್​ ಅಪರಾಧ ಸುದ್ದಿ, ತೆಲಂಗಾಣ ಸುದ್ದಿ,
ಆಸ್ತಿಗಾಗಿ ಅಕ್ಕ-ತಂಗಿಯನ್ನೇ ಮದುವೆಯಾದ ಭೂಪ

ವಿಕಾರಾಬಾದ್​: ಮುಂದುವರಿದ ಪ್ರೀತಿ ಮತ್ತು ವಿವಾಹೇತರ ಸಂಬಂಧಕ್ಕೆ ಬ್ಯಾಂಕ್​ ಉದ್ಯೋಗಿಯೊಬ್ಬ ಬರ್ಬರ ಕೊಲೆಯಾಗಿರುವ ಘಟನೆ ಜಿಲ್ಲೆಯ ಮಂದಾನಪಲ್ಲಿ ಗ್ರಾಮದಲ್ಲಿ ನಡೆದಿದೆ.

ಏನಿದು ಘಟನೆ: ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ, ಮಂದಾನಪಲ್ಲಿ ಗ್ರಾಮದ ನಿವಾಸಿ ಅಕುಲ ವೆಂಕಟಯ್ಯ ಮತ್ತು ಪೆಂಟಮ್ಮ ದಂಪತಿಗೆ ಭಾಗ್ಯಮ್ಮ ಮತ್ತು ಪೂರ್ಣಮ್ಮ ಎಂಬ ಇಬ್ಬರು ಹೆಣ್ಮಕ್ಕಳು. ಇವರಿಗೆ 10 ಎಕರೆ ಜಮೀನಿದೆ. ನಾಲ್ಕು ವರ್ಷಗಳ ಹಿಂದೆ ಇದೇ ಗ್ರಾಮದ ನಿವಾಸಿ ನರೇಶ್​ ಭಾಗ್ಯ ಅವರನ್ನು ಮದುವೆಯಾಗಿದ್ದರು. ಆದರೆ, ಆಸ್ತಿಗೆ ಆಸೆಪಟ್ಟು ಎರಡು ವರ್ಷಗಳ ಹಿಂದೆ ಎಲ್ಲರ ಒಪ್ಪಿಗೆ ಪಡೆದು ಗುರು - ಹಿರಿಯರ ಮಧ್ಯೆ ಪೂರ್ಣಾಳನ್ನು ಮದುವೆ ಮಾಡಿಕೊಂಡರು.

ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ: ತಮಿಳುನಾಡು ಜಲಸಂಪನ್ಮೂಲ ಸಚಿವ

ಪೂರ್ಣಳಿಗೆ ಸಂತಾನ ಭಾಗ್ಯವಿಲ್ಲ. ಆದರೆ ಆಕೆಯ ಸಹೋದರಿ ಭಾಗ್ಯಮ್ಮಗೆ ಇಬ್ಬರು ಹೆಣ್ಮಕ್ಕಳಿವೆ. ಇನ್ನು ಪೂರ್ಣಾ ಮದುವೆಗೂ ಮುನ್ನ ಇದೇ ಗ್ರಾಮದ ನಿವಾಸಿ ಜನಾರ್ದನ ಜೊತೆ ಪ್ರೇಮದಲ್ಲಿದ್ದಳು. ಆದರೆ ಅವರಿಬ್ಬರ ಪ್ರೀತಿ ವಿಫಲವಾಯಿತು. ಹೀಗಾಗಿ ಜನಾರ್ದನ್​ ಸಂಗಾರೆಡ್ಡಿ ಜಿಲ್ಲೆಯ ಕೋಹಿರ್​ ತಾಲೂಕಿನ ನಿವಾಸಿ ವಿಜಯಲಕ್ಷ್ಮಿಯನ್ನು ಮದುವೆಯಾಗಿದ್ದ. ಇನ್ನು ಜನಾರ್ದನ ದಂಪತಿಗೆ ಒಬ್ಬ ಮುದ್ದಾದ ಮಗನಿದ್ದಾನೆ. ಆದರೆ, ಪೂರ್ಣಾ ಮತ್ತು ಜನರ್ದಾನ್​ ಮಧ್ಯೆ ಪ್ರೀತಿ ಸಾಗುತ್ತಲೇ ಇತ್ತು. ಅವರ ಪ್ರೀತಿ ವಿವಾಹೇತರ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು.

ಇವರಿಬ್ಬರ ವಿವಾಹೇತರ ಸಂಬಂಧ ಮನೆಯಲ್ಲಿ ತಿಳಿದಿತ್ತು. ಅದೆಷ್ಟೋ ಬಾರಿ ಪೂರ್ಣಾಳಿಗೆ ತಿಳಿ ಹೇಳಿದ್ರೂ ಸಹ ಉಪಯೋಗವಾಗಲಿಲ್ಲ. ಇದೇ ವಿಷಯಕ್ಕಾಗಿ ತಿಂಗಳ ಹಿಂದೆ ಹಿರಿಯರ ಮಧ್ಯೆ ಪಂಚಾಯಿತಿ ನಡೆಯಿತು. ಪಂಚಾಯಿತಿಯಲ್ಲಿ ಬುದ್ದಿ ಹೇಳಿದ್ರೂ ಸಹ ಪೂರ್ಣ ತನ್ನ ಚಾಳಿ ಮುಂದುವರಿಸಿದ್ದಳು. ಜನಾರ್ದನ್​ ಜೊತೆ ತನ್ನ ಆಟ ಮುಂದುವರಿಸಿದ್ದನು, ಇದನ್ನು ಅರಿತ ಗಂಡ ನರೇಶ್​ ತನ್ನ ಸ್ನೇಹಿತರೊಡನೆ ಸೇರಿ ಕೊಲೆಗೆ ಸ್ಕೆಚ್​ ಹಾಕಿದ್ದನು.

ಓದಿ: ಎಕ್ಸಿಟ್ ಪೋಲ್: ಉತ್ತರ ಪ್ರದೇಶದಲ್ಲಿ ಭವಿಷ್ಯ ನಿಜವಾಗುವುದೇ?, ಏನಿದರ ಲೆಕ್ಕಾಚಾರ?

ಮಂಗಳವಾರ ಕಾರ್ಯ ಮುಗಿಸಿಕೊಂಡು ಬರುತ್ತಿದ್ದ ಜನಾರ್ದನ್ ಬೈಕ್​ಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಜನಾರ್ದನ್​ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದರು. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಜನಾರ್ದನ್​ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ, ದಾರಿ ಮಧ್ಯೆದಲ್ಲೇ ಜನಾರ್ದನ್​ ಮೃತಪಟ್ಟಿದ್ದಾನೆ. ಇದರಿಂದ ಕುಪಿತಗೊಂಡ ಸಂಬಂಧಿಕರು ಮತ್ತು ಗ್ರಾಮಸ್ಥರು ನರೇಶ್​ಗೆ ಸೇರಿದ ಜೆಸಿಬಿ ಮತ್ತು ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಕಾರಾಬಾದ್​: ಮುಂದುವರಿದ ಪ್ರೀತಿ ಮತ್ತು ವಿವಾಹೇತರ ಸಂಬಂಧಕ್ಕೆ ಬ್ಯಾಂಕ್​ ಉದ್ಯೋಗಿಯೊಬ್ಬ ಬರ್ಬರ ಕೊಲೆಯಾಗಿರುವ ಘಟನೆ ಜಿಲ್ಲೆಯ ಮಂದಾನಪಲ್ಲಿ ಗ್ರಾಮದಲ್ಲಿ ನಡೆದಿದೆ.

ಏನಿದು ಘಟನೆ: ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ, ಮಂದಾನಪಲ್ಲಿ ಗ್ರಾಮದ ನಿವಾಸಿ ಅಕುಲ ವೆಂಕಟಯ್ಯ ಮತ್ತು ಪೆಂಟಮ್ಮ ದಂಪತಿಗೆ ಭಾಗ್ಯಮ್ಮ ಮತ್ತು ಪೂರ್ಣಮ್ಮ ಎಂಬ ಇಬ್ಬರು ಹೆಣ್ಮಕ್ಕಳು. ಇವರಿಗೆ 10 ಎಕರೆ ಜಮೀನಿದೆ. ನಾಲ್ಕು ವರ್ಷಗಳ ಹಿಂದೆ ಇದೇ ಗ್ರಾಮದ ನಿವಾಸಿ ನರೇಶ್​ ಭಾಗ್ಯ ಅವರನ್ನು ಮದುವೆಯಾಗಿದ್ದರು. ಆದರೆ, ಆಸ್ತಿಗೆ ಆಸೆಪಟ್ಟು ಎರಡು ವರ್ಷಗಳ ಹಿಂದೆ ಎಲ್ಲರ ಒಪ್ಪಿಗೆ ಪಡೆದು ಗುರು - ಹಿರಿಯರ ಮಧ್ಯೆ ಪೂರ್ಣಾಳನ್ನು ಮದುವೆ ಮಾಡಿಕೊಂಡರು.

ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ: ತಮಿಳುನಾಡು ಜಲಸಂಪನ್ಮೂಲ ಸಚಿವ

ಪೂರ್ಣಳಿಗೆ ಸಂತಾನ ಭಾಗ್ಯವಿಲ್ಲ. ಆದರೆ ಆಕೆಯ ಸಹೋದರಿ ಭಾಗ್ಯಮ್ಮಗೆ ಇಬ್ಬರು ಹೆಣ್ಮಕ್ಕಳಿವೆ. ಇನ್ನು ಪೂರ್ಣಾ ಮದುವೆಗೂ ಮುನ್ನ ಇದೇ ಗ್ರಾಮದ ನಿವಾಸಿ ಜನಾರ್ದನ ಜೊತೆ ಪ್ರೇಮದಲ್ಲಿದ್ದಳು. ಆದರೆ ಅವರಿಬ್ಬರ ಪ್ರೀತಿ ವಿಫಲವಾಯಿತು. ಹೀಗಾಗಿ ಜನಾರ್ದನ್​ ಸಂಗಾರೆಡ್ಡಿ ಜಿಲ್ಲೆಯ ಕೋಹಿರ್​ ತಾಲೂಕಿನ ನಿವಾಸಿ ವಿಜಯಲಕ್ಷ್ಮಿಯನ್ನು ಮದುವೆಯಾಗಿದ್ದ. ಇನ್ನು ಜನಾರ್ದನ ದಂಪತಿಗೆ ಒಬ್ಬ ಮುದ್ದಾದ ಮಗನಿದ್ದಾನೆ. ಆದರೆ, ಪೂರ್ಣಾ ಮತ್ತು ಜನರ್ದಾನ್​ ಮಧ್ಯೆ ಪ್ರೀತಿ ಸಾಗುತ್ತಲೇ ಇತ್ತು. ಅವರ ಪ್ರೀತಿ ವಿವಾಹೇತರ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು.

ಇವರಿಬ್ಬರ ವಿವಾಹೇತರ ಸಂಬಂಧ ಮನೆಯಲ್ಲಿ ತಿಳಿದಿತ್ತು. ಅದೆಷ್ಟೋ ಬಾರಿ ಪೂರ್ಣಾಳಿಗೆ ತಿಳಿ ಹೇಳಿದ್ರೂ ಸಹ ಉಪಯೋಗವಾಗಲಿಲ್ಲ. ಇದೇ ವಿಷಯಕ್ಕಾಗಿ ತಿಂಗಳ ಹಿಂದೆ ಹಿರಿಯರ ಮಧ್ಯೆ ಪಂಚಾಯಿತಿ ನಡೆಯಿತು. ಪಂಚಾಯಿತಿಯಲ್ಲಿ ಬುದ್ದಿ ಹೇಳಿದ್ರೂ ಸಹ ಪೂರ್ಣ ತನ್ನ ಚಾಳಿ ಮುಂದುವರಿಸಿದ್ದಳು. ಜನಾರ್ದನ್​ ಜೊತೆ ತನ್ನ ಆಟ ಮುಂದುವರಿಸಿದ್ದನು, ಇದನ್ನು ಅರಿತ ಗಂಡ ನರೇಶ್​ ತನ್ನ ಸ್ನೇಹಿತರೊಡನೆ ಸೇರಿ ಕೊಲೆಗೆ ಸ್ಕೆಚ್​ ಹಾಕಿದ್ದನು.

ಓದಿ: ಎಕ್ಸಿಟ್ ಪೋಲ್: ಉತ್ತರ ಪ್ರದೇಶದಲ್ಲಿ ಭವಿಷ್ಯ ನಿಜವಾಗುವುದೇ?, ಏನಿದರ ಲೆಕ್ಕಾಚಾರ?

ಮಂಗಳವಾರ ಕಾರ್ಯ ಮುಗಿಸಿಕೊಂಡು ಬರುತ್ತಿದ್ದ ಜನಾರ್ದನ್ ಬೈಕ್​ಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಜನಾರ್ದನ್​ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದರು. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಜನಾರ್ದನ್​ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ, ದಾರಿ ಮಧ್ಯೆದಲ್ಲೇ ಜನಾರ್ದನ್​ ಮೃತಪಟ್ಟಿದ್ದಾನೆ. ಇದರಿಂದ ಕುಪಿತಗೊಂಡ ಸಂಬಂಧಿಕರು ಮತ್ತು ಗ್ರಾಮಸ್ಥರು ನರೇಶ್​ಗೆ ಸೇರಿದ ಜೆಸಿಬಿ ಮತ್ತು ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.