ETV Bharat / bharat

ಕೋವಿಡ್​ ಗೆದ್ದು ಮನೆಗೆ ಬರುತ್ತಿದ್ದಂತೆ 5 ಕೋಟಿ ರೂ. ಲಾಟರಿ: ಕೊರೊನಾ ರೋಗಿಗಳ ಚಿಕಿತ್ಸೆಗೆ ಹಣ ದಾನ

author img

By

Published : Apr 25, 2021, 5:25 PM IST

ಡೆಡ್ಲಿ ವೈರಸ್ ಕೊರೊನಾ ಗೆದ್ದು ಮನೆಗೆ ಬಂದಿರುವ ವ್ಯಕ್ತಿಯೋರ್ವನಿಗೆ 5 ಕೋಟಿ ರೂ. ಲಾಟರಿ ಹೊಡೆದಿದ್ದು, ಮಹಾರಾಷ್ಟ್ರದ ದಿವಾದಲ್ಲಿ ಈ ಘಟನೆ ನಡೆದಿದೆ.

Maharashtra man wins Rs 5 crore lottery
Maharashtra man wins Rs 5 crore lottery

ಥಾಣೆ(ಮಹಾರಾಷ್ಟ್ರ): ದೇಶದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಶುರುವಾದಾಗಿನಿಂದಲೂ ಅನೇಕರು ನಿರುದ್ಯೋಗಿಗಳಾಗಿದ್ದಾರೆ. ಇನ್ನು ಕೆಲವರು ಡೆಡ್ಲಿ ವೈರಸ್​​ಗೊಳಗಾಗಿ ಉಳಿತಾಯ ಮಾಡಿದ್ದ ಹಣವನ್ನ ಆಸ್ಪತ್ರೆಗಳಿಗಾಗಿ ಖರ್ಚು ಮಾಡಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಮಹಾರಾಷ್ಟ್ರದ ವ್ಯಕ್ತಿಯೋರ್ವ ಕೋವಿಡ್​ನಿಂದ ಗುಣಮುಖರಾಗಿ ಬರೋಬ್ಬರಿ 5 ಕೋಟಿ ರೂ. ಲಾಟರಿ ಹಣ ಗೆದ್ದಿದ್ದಾರೆ.

ಮಹಾರಾಷ್ಟ್ರದ ದಿವಾ ನಿವಾಸಿ ರಾಜಕಾಂತ್​ ಪಾಟೀಲ್​​​ 5 ಕೋಟಿ ರೂ. ಲಾಟರಿ ಗೆದ್ದಿರುವ ವ್ಯಕ್ತಿ. ಉದ್ಯಮಿಯಾಗಿರುವ ರಾಜಕಾಂತ್​​ ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದರಿಂದ ಚೇತರಿಸಿಕೊಂಡು ಮನೆಗೆ ಬಂದಿದ್ದಾರೆ. ಈ ವೇಳೆ ಲಾಟರಿ ಕಂಪನಿಯಿಂದ 5 ಕೋಟಿ ರೂ. ಗೆದ್ದಿರುವುದಾಗಿ ಸಂದೇಶವೊಂದು ಬಂದಿದೆ.

5 ಕೋಟಿ ರೂ. ಲಾಟರಿ ಗೆದ್ದ ಮಹಾರಾಷ್ಟ್ರದ ವ್ಯಕ್ತಿ

ಆಗಷ್ಟೇ ಆಸ್ಪತ್ರೆಯಿಂದ ಮನೆಗೆ ಬಂದಿರುವ ಕಾರಣ ಮೊಬೈಲ್​ಗೆ ಬಂದ ಸಂದೇಶದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಆದರೆ ಕಂಪನಿಯಿಂದ ಕರೆ ಸ್ವೀಕರಿಸಿದ್ದಾರೆ. ಸ್ವಲ್ಪ ಸಮಯದವರೆಗೆ ಅದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಮೇಲಿಂದ ಮೇಲೆ ಕರೆ ಬಂದಿದ್ದರಿಂದ ಅಂತಿಮವಾಗಿ ಲಾಟರಿ ಕಂಪನಿಯವರೊಂದಿಗೆ ಮಾತನಾಡಿದ್ದಾರೆ. ಈ ವೇಳೆ 5 ಕೋಟಿ ರೂ. ಲಾಟರಿ ಗೆದ್ದಿರುವುದಾಗಿ ಮಾಹಿತಿ ನೀಡಿದ್ದಾರೆ. ಇದನ್ನು ನಂಬದ ರಾಜಕಾಂತ್​ ನಕಲಿ ಕರೆ ಇರಬಹುದು, ವಂಚನೆ ಮಾಡುವ ಉದ್ದೇಶದಿಂದ ಈ ರೀತಿಯಾಗಿ ಫೋನ್​ ಮಾಡ್ತಿದ್ದಾರೆ ಎಂದು ಭಾವಿಸಿದ್ದಾರೆ. ಆದರೆ ಇವರ ಪತ್ನಿ ಹಾಗೂ ಸೋದರ ಮಾವ ಲಾಟರಿ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಸಂಗ್ರಹ ಮಾಡಿದಾಗ ಸತ್ಯಾಂಶ ಗೊತ್ತಾಗಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಸಿಗದ ಬೆಡ್.. ಕೋವಿಡ್​ ಸೋಂಕಿತನಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡಿದ ವೈದ್ಯರು

ಕಳೆದ ಕೆಲ ತಿಂಗಳ ಹಿಂದೆ ಇವರು ಲಾಟರಿ ಟಿಕೆಟ್​ ಖರೀದಿ ಮಾಡಿದ್ದರು. ಸುಮಾರು 9 ಜನರ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ರಾಜಕಾಂತ್ ಕೂಡ ಒಬ್ಬರಾಗಿದ್ದರು. ಹೀಗಾಗಿ 5 ಕೋಟಿ ರೂ. ಗೆದ್ದಿರುವುದು ನಿಜ ಎಂದು ಗೊತ್ತಾಗಿದೆ.

ಕೊರೊನಾ ರೋಗಿಗಳ ಚಿಕಿತ್ಸೆ ಹಣ ಮೀಸಲು

ತಮಗೆ ಬಂದಿರುವ ಲಾಟರಿ ಹಣದಲ್ಲಿ ಒಂದು ಭಾಗ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಲು ನಿರ್ಧರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಅದಕ್ಕಾಗಿ ಸಚಿವ ಏಕನಾಥ್​ ಶಿಂಧೆ ಅವರ ಮಾರ್ಗದರ್ಶನ ಪಡೆದುಕೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.

ಥಾಣೆ(ಮಹಾರಾಷ್ಟ್ರ): ದೇಶದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಶುರುವಾದಾಗಿನಿಂದಲೂ ಅನೇಕರು ನಿರುದ್ಯೋಗಿಗಳಾಗಿದ್ದಾರೆ. ಇನ್ನು ಕೆಲವರು ಡೆಡ್ಲಿ ವೈರಸ್​​ಗೊಳಗಾಗಿ ಉಳಿತಾಯ ಮಾಡಿದ್ದ ಹಣವನ್ನ ಆಸ್ಪತ್ರೆಗಳಿಗಾಗಿ ಖರ್ಚು ಮಾಡಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಮಹಾರಾಷ್ಟ್ರದ ವ್ಯಕ್ತಿಯೋರ್ವ ಕೋವಿಡ್​ನಿಂದ ಗುಣಮುಖರಾಗಿ ಬರೋಬ್ಬರಿ 5 ಕೋಟಿ ರೂ. ಲಾಟರಿ ಹಣ ಗೆದ್ದಿದ್ದಾರೆ.

ಮಹಾರಾಷ್ಟ್ರದ ದಿವಾ ನಿವಾಸಿ ರಾಜಕಾಂತ್​ ಪಾಟೀಲ್​​​ 5 ಕೋಟಿ ರೂ. ಲಾಟರಿ ಗೆದ್ದಿರುವ ವ್ಯಕ್ತಿ. ಉದ್ಯಮಿಯಾಗಿರುವ ರಾಜಕಾಂತ್​​ ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದರಿಂದ ಚೇತರಿಸಿಕೊಂಡು ಮನೆಗೆ ಬಂದಿದ್ದಾರೆ. ಈ ವೇಳೆ ಲಾಟರಿ ಕಂಪನಿಯಿಂದ 5 ಕೋಟಿ ರೂ. ಗೆದ್ದಿರುವುದಾಗಿ ಸಂದೇಶವೊಂದು ಬಂದಿದೆ.

5 ಕೋಟಿ ರೂ. ಲಾಟರಿ ಗೆದ್ದ ಮಹಾರಾಷ್ಟ್ರದ ವ್ಯಕ್ತಿ

ಆಗಷ್ಟೇ ಆಸ್ಪತ್ರೆಯಿಂದ ಮನೆಗೆ ಬಂದಿರುವ ಕಾರಣ ಮೊಬೈಲ್​ಗೆ ಬಂದ ಸಂದೇಶದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಆದರೆ ಕಂಪನಿಯಿಂದ ಕರೆ ಸ್ವೀಕರಿಸಿದ್ದಾರೆ. ಸ್ವಲ್ಪ ಸಮಯದವರೆಗೆ ಅದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಮೇಲಿಂದ ಮೇಲೆ ಕರೆ ಬಂದಿದ್ದರಿಂದ ಅಂತಿಮವಾಗಿ ಲಾಟರಿ ಕಂಪನಿಯವರೊಂದಿಗೆ ಮಾತನಾಡಿದ್ದಾರೆ. ಈ ವೇಳೆ 5 ಕೋಟಿ ರೂ. ಲಾಟರಿ ಗೆದ್ದಿರುವುದಾಗಿ ಮಾಹಿತಿ ನೀಡಿದ್ದಾರೆ. ಇದನ್ನು ನಂಬದ ರಾಜಕಾಂತ್​ ನಕಲಿ ಕರೆ ಇರಬಹುದು, ವಂಚನೆ ಮಾಡುವ ಉದ್ದೇಶದಿಂದ ಈ ರೀತಿಯಾಗಿ ಫೋನ್​ ಮಾಡ್ತಿದ್ದಾರೆ ಎಂದು ಭಾವಿಸಿದ್ದಾರೆ. ಆದರೆ ಇವರ ಪತ್ನಿ ಹಾಗೂ ಸೋದರ ಮಾವ ಲಾಟರಿ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಸಂಗ್ರಹ ಮಾಡಿದಾಗ ಸತ್ಯಾಂಶ ಗೊತ್ತಾಗಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಸಿಗದ ಬೆಡ್.. ಕೋವಿಡ್​ ಸೋಂಕಿತನಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡಿದ ವೈದ್ಯರು

ಕಳೆದ ಕೆಲ ತಿಂಗಳ ಹಿಂದೆ ಇವರು ಲಾಟರಿ ಟಿಕೆಟ್​ ಖರೀದಿ ಮಾಡಿದ್ದರು. ಸುಮಾರು 9 ಜನರ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ರಾಜಕಾಂತ್ ಕೂಡ ಒಬ್ಬರಾಗಿದ್ದರು. ಹೀಗಾಗಿ 5 ಕೋಟಿ ರೂ. ಗೆದ್ದಿರುವುದು ನಿಜ ಎಂದು ಗೊತ್ತಾಗಿದೆ.

ಕೊರೊನಾ ರೋಗಿಗಳ ಚಿಕಿತ್ಸೆ ಹಣ ಮೀಸಲು

ತಮಗೆ ಬಂದಿರುವ ಲಾಟರಿ ಹಣದಲ್ಲಿ ಒಂದು ಭಾಗ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಲು ನಿರ್ಧರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಅದಕ್ಕಾಗಿ ಸಚಿವ ಏಕನಾಥ್​ ಶಿಂಧೆ ಅವರ ಮಾರ್ಗದರ್ಶನ ಪಡೆದುಕೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.