ETV Bharat / bharat

ಅಮರಾವತಿ ಬಳಿ ಹಳಿ ತಪ್ಪಿದ ಗೂಡ್ಸ್​ ರೈಲು: 20 ಬೋಗಿಗಳು ಪಲ್ಟಿ..ಹಲವು ರೈಲುಗಳ ಮಾರ್ಗ ಬದಲಾವಣೆ

ಗೂಡ್ಸ್ ರೈಲು ಹಳಿತಪ್ಪಿದ್ದರಿಂದ ಮುಂಬೈ ಮತ್ತು ಹೌರಾ ಕಡೆಗೆ ಹೋಗುವ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ವಿಳಂಬವಾಗಿದೆ. ಅಪಘಾತದ ಕಾರಣ ಕೆಲವು ರೈಲುಗಳನ್ನು ರದ್ದುಗೊಳಿಸಲಾಯಿತು. ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.

author img

By

Published : Oct 24, 2022, 10:09 AM IST

Updated : Oct 24, 2022, 11:53 AM IST

Maharashtra: Goods train derailed near Malkhed in Amravati
ಅಮರಾವತಿ ಬಳಿ ಹಳಿ ತಪ್ಪಿದ ಗೂಡ್ಸ್​ ರೈಲು: 20 ಬೋಗಿಗಳು ಪಲ್ಟಿ

ಅಮರಾವತಿ: ಸರಕು ಸಾಗಣೆ ರೈಲು ಸೋಮವಾರ ಬೆಳಗ್ಗೆ ಮಲ್ಖೇಡ್ ರೈಲು ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ. ಪರಿಣಾಮ ಅದರ 20 ಬೋಗಿಗಳು ಪಲ್ಟಿಯಾಗಿವೆ.

ಗೂಡ್ಸ್ ರೈಲು ಹಳಿತಪ್ಪಿದ್ದರಿಂದ ಮುಂಬೈ ಮತ್ತು ಹೌರಾ ಕಡೆಗೆ ಹೋಗುವ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ವಿಳಂಬವಾಗಿದೆ. ಅಪಘಾತದ ಕಾರಣ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.

ಭಾನುವಾರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಅಮರಾವತಿ ನಗರದ ಸಮೀಪದ ಮಲ್ಖೇಡ್ ರೈಲ್ವೆ ಗ್ರಾಮದ ಬಳಿ ಬಲ್ಲಾರಶಾದಿಂದ ಭೂಸಾವಲ್‌ಗೆ ತೆರಳುತ್ತಿದ್ದ ಸರಕು ಸಾಗಣೆ ರೈಲು ಭೀಕರ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ 60 ಬೋಗಿಗಳ ಸರಕು ಸಾಗಣೆ ರೈಲಿನ ಒಟ್ಟು 20 ಬೋಗಿಗಳು ಪಲ್ಟಿಯಾಗಿವೆ.

ಈ ಅಪಘಾತದಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಆ ಪ್ರದೇಶದಲ್ಲಿ ಭಾರಿ ಶಬ್ಧ ಕೇಳಿ ಬಂದಿತ್ತು. ಅಪಘಾತದ ಮಾಹಿತಿ ತಿಳಿದ ತಕ್ಷಣ ರೈಲ್ವೆ ಅಧಿಕಾರಿಗಳು ಮತ್ತು ನೌಕರರು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕೆಲವು ರೈಲುಗಳ ಮಾರ್ಗ ಬದಲಾವಣೆ: ಏತನ್ಮಧ್ಯೆ ನಾಗ್ಪುರದಿಂದ ಮುಂಬೈಗೆ ಈ ಮಾರ್ಗದ ಮೂಲಕ ಹಾದುಹೋಗುವ ಸೇವಾಗ್ರಾಮ್ ಎಕ್ಸ್‌ಪ್ರೆಸ್ ಅನ್ನು ರಾತ್ರಿ ಹನ್ನೆರಡು ಗಂಟೆ ವೇಳೆಗೆ ಮಾರ್ಗ ಮಧ್ಯದಲ್ಲೇ ನಿಲುಗಡೆ ಮಾಡಲಾಗಿತ್ತು. ಎಲ್ಲ ವ್ಯವಸ್ಥೆ ಬಳಿಕ ಈ ರೈಲನ್ನು ನಾರ್ಖೇಡ್ ಮಾರ್ಗದಿಂದ ಮುಂಬೈ ಕಡೆಗೆ ಪ್ರಯಾಣಿಸಲು ಅನುವು ಮಾಡಿಕೊಡಲಾಯಿತು.

ಮುಂಬೈನಿಂದ ನಾಗ್ಪುರ ಮತ್ತು ಹೌರಾಕ್ಕೆ ತೆರಳುವ ಹಲವು ರೈಲುಗಳನ್ನು ಭೂಸಾವಲ್ ಮತ್ತು ಅಕೋಲಾ ರೈಲು ನಿಲ್ದಾಣಗಳಲ್ಲಿ ದೀರ್ಘಕಾಲ ನಿಲ್ಲಿಸಲಾಗಿತ್ತು. ಈ ರೈಲುಗಳನ್ನು ಕ್ರಮೇಣ ನಾರ್ಖೇಡ್ ಮಾರ್ಗದ ಮೂಲಕ ಅವುಗಳ ಸ್ಥಳಗಳಿಗೆ ಪ್ರಯಾಣ ಬೆಳಸಲು ವ್ಯವಸ್ಥೆ ಮಾಡಲಾಯಿತು.

ಮಾರ್ಗದ ಉದ್ದಕ್ಕೂ ಕಲ್ಲಿದ್ದಲು: ಸರಕು ಸಾಗಣೆ ರೈಲಿನ ಬೋಗಿಗಳು ಪಲ್ಟಿಯಾಗಿರುವುದರಿಂದ ಮಾರ್ಗದುದ್ದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಬಿದ್ದಿದ್ದು, ಭಾನುವಾರ ರಾತ್ರಿಯಿಂದಲೇ ರೈಲ್ವೆ ಹಳಿಯಿಂದ ಕಲ್ಲಿದ್ದಲು ಎತ್ತುವ ಕಾರ್ಯ ನಡೆಯುತ್ತಿದೆ. ಪೋಕ್ ಲಾಡ್ ನೆರವಿನಿಂದ ಬೇರಿನ ಕೆಳಗೆ ಕುಸಿದಿರುವ ಬೋಗಿಗಳಿಂದ ಕಲ್ಲಿದ್ದಲನ್ನು ಹೊರತೆಗೆಯುವ ಕಾರ್ಯ ಪ್ರಗತಿಯಲ್ಲಿದೆ. ಸಂಪೂರ್ಣ ಮಾರ್ಗವನ್ನು ಸುಗಮಗೊಳಿಸಲು 24 ಗಂಟೆಗಳಿಗೂ ಹೆಚ್ಚು ಸಮಯ ಬೇಕಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲವು ರೈಲುಗಳ ಪ್ರಯಾಣದಲ್ಲಿ ಅಡಚಣ, ಪ್ರಯಾಣಿಕರಿಗೆ ಕಿರಿಕಿರಿ: ದೀಪಾವಳಿಯ ದಿನ ಗೂಡ್ಸ್ ರೈಲಿಗೆ ಅವಘಡ ಸಂಭವಿಸಿದ್ದರಿಂದ ದೀಪಾವಳಿ ನಿಮಿತ್ತ ಮನೆಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ರಸ್ತೆಯಲ್ಲೇ ಬಹಳ ಹೊತ್ತು ಕಾಯಬೇಕಾಯಿತು. ಈ ಅವಘಡದಿಂದಾಗಿ ಹಲವು ರೈಲುಗಳು ಮೂರ್ನಾಲ್ಕು ಗಂಟೆ ತಡವಾಗಿ ಸಂಚರಿಸುವುದರಿಂದ ಪ್ರಯಾಣಿಕರು ದೀಪಾವಳಿಯಂದು ಮನೆಗೆ ತೆರಳಲು ಸ್ವಲ್ಪ ತಡವಾಗಿದ್ದರಿಂದ ಕಿರಿಕಿರಿ ಅನುಭವಿಸಬೇಕಾಯಿತು.

ಇದನ್ನು ಓದಿ:ಮಗುವಿನೊಂದಿಗೆ ರೈಲು ಹಳಿಗೆ ಬಿದ್ದ ಮಹಿಳೆ.. ದೇವದೂತನಾದ ಲೋಕೊ ಪೈಲೆಟ್​

ಅಮರಾವತಿ: ಸರಕು ಸಾಗಣೆ ರೈಲು ಸೋಮವಾರ ಬೆಳಗ್ಗೆ ಮಲ್ಖೇಡ್ ರೈಲು ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ. ಪರಿಣಾಮ ಅದರ 20 ಬೋಗಿಗಳು ಪಲ್ಟಿಯಾಗಿವೆ.

ಗೂಡ್ಸ್ ರೈಲು ಹಳಿತಪ್ಪಿದ್ದರಿಂದ ಮುಂಬೈ ಮತ್ತು ಹೌರಾ ಕಡೆಗೆ ಹೋಗುವ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ವಿಳಂಬವಾಗಿದೆ. ಅಪಘಾತದ ಕಾರಣ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.

ಭಾನುವಾರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಅಮರಾವತಿ ನಗರದ ಸಮೀಪದ ಮಲ್ಖೇಡ್ ರೈಲ್ವೆ ಗ್ರಾಮದ ಬಳಿ ಬಲ್ಲಾರಶಾದಿಂದ ಭೂಸಾವಲ್‌ಗೆ ತೆರಳುತ್ತಿದ್ದ ಸರಕು ಸಾಗಣೆ ರೈಲು ಭೀಕರ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ 60 ಬೋಗಿಗಳ ಸರಕು ಸಾಗಣೆ ರೈಲಿನ ಒಟ್ಟು 20 ಬೋಗಿಗಳು ಪಲ್ಟಿಯಾಗಿವೆ.

ಈ ಅಪಘಾತದಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಆ ಪ್ರದೇಶದಲ್ಲಿ ಭಾರಿ ಶಬ್ಧ ಕೇಳಿ ಬಂದಿತ್ತು. ಅಪಘಾತದ ಮಾಹಿತಿ ತಿಳಿದ ತಕ್ಷಣ ರೈಲ್ವೆ ಅಧಿಕಾರಿಗಳು ಮತ್ತು ನೌಕರರು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕೆಲವು ರೈಲುಗಳ ಮಾರ್ಗ ಬದಲಾವಣೆ: ಏತನ್ಮಧ್ಯೆ ನಾಗ್ಪುರದಿಂದ ಮುಂಬೈಗೆ ಈ ಮಾರ್ಗದ ಮೂಲಕ ಹಾದುಹೋಗುವ ಸೇವಾಗ್ರಾಮ್ ಎಕ್ಸ್‌ಪ್ರೆಸ್ ಅನ್ನು ರಾತ್ರಿ ಹನ್ನೆರಡು ಗಂಟೆ ವೇಳೆಗೆ ಮಾರ್ಗ ಮಧ್ಯದಲ್ಲೇ ನಿಲುಗಡೆ ಮಾಡಲಾಗಿತ್ತು. ಎಲ್ಲ ವ್ಯವಸ್ಥೆ ಬಳಿಕ ಈ ರೈಲನ್ನು ನಾರ್ಖೇಡ್ ಮಾರ್ಗದಿಂದ ಮುಂಬೈ ಕಡೆಗೆ ಪ್ರಯಾಣಿಸಲು ಅನುವು ಮಾಡಿಕೊಡಲಾಯಿತು.

ಮುಂಬೈನಿಂದ ನಾಗ್ಪುರ ಮತ್ತು ಹೌರಾಕ್ಕೆ ತೆರಳುವ ಹಲವು ರೈಲುಗಳನ್ನು ಭೂಸಾವಲ್ ಮತ್ತು ಅಕೋಲಾ ರೈಲು ನಿಲ್ದಾಣಗಳಲ್ಲಿ ದೀರ್ಘಕಾಲ ನಿಲ್ಲಿಸಲಾಗಿತ್ತು. ಈ ರೈಲುಗಳನ್ನು ಕ್ರಮೇಣ ನಾರ್ಖೇಡ್ ಮಾರ್ಗದ ಮೂಲಕ ಅವುಗಳ ಸ್ಥಳಗಳಿಗೆ ಪ್ರಯಾಣ ಬೆಳಸಲು ವ್ಯವಸ್ಥೆ ಮಾಡಲಾಯಿತು.

ಮಾರ್ಗದ ಉದ್ದಕ್ಕೂ ಕಲ್ಲಿದ್ದಲು: ಸರಕು ಸಾಗಣೆ ರೈಲಿನ ಬೋಗಿಗಳು ಪಲ್ಟಿಯಾಗಿರುವುದರಿಂದ ಮಾರ್ಗದುದ್ದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಬಿದ್ದಿದ್ದು, ಭಾನುವಾರ ರಾತ್ರಿಯಿಂದಲೇ ರೈಲ್ವೆ ಹಳಿಯಿಂದ ಕಲ್ಲಿದ್ದಲು ಎತ್ತುವ ಕಾರ್ಯ ನಡೆಯುತ್ತಿದೆ. ಪೋಕ್ ಲಾಡ್ ನೆರವಿನಿಂದ ಬೇರಿನ ಕೆಳಗೆ ಕುಸಿದಿರುವ ಬೋಗಿಗಳಿಂದ ಕಲ್ಲಿದ್ದಲನ್ನು ಹೊರತೆಗೆಯುವ ಕಾರ್ಯ ಪ್ರಗತಿಯಲ್ಲಿದೆ. ಸಂಪೂರ್ಣ ಮಾರ್ಗವನ್ನು ಸುಗಮಗೊಳಿಸಲು 24 ಗಂಟೆಗಳಿಗೂ ಹೆಚ್ಚು ಸಮಯ ಬೇಕಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲವು ರೈಲುಗಳ ಪ್ರಯಾಣದಲ್ಲಿ ಅಡಚಣ, ಪ್ರಯಾಣಿಕರಿಗೆ ಕಿರಿಕಿರಿ: ದೀಪಾವಳಿಯ ದಿನ ಗೂಡ್ಸ್ ರೈಲಿಗೆ ಅವಘಡ ಸಂಭವಿಸಿದ್ದರಿಂದ ದೀಪಾವಳಿ ನಿಮಿತ್ತ ಮನೆಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ರಸ್ತೆಯಲ್ಲೇ ಬಹಳ ಹೊತ್ತು ಕಾಯಬೇಕಾಯಿತು. ಈ ಅವಘಡದಿಂದಾಗಿ ಹಲವು ರೈಲುಗಳು ಮೂರ್ನಾಲ್ಕು ಗಂಟೆ ತಡವಾಗಿ ಸಂಚರಿಸುವುದರಿಂದ ಪ್ರಯಾಣಿಕರು ದೀಪಾವಳಿಯಂದು ಮನೆಗೆ ತೆರಳಲು ಸ್ವಲ್ಪ ತಡವಾಗಿದ್ದರಿಂದ ಕಿರಿಕಿರಿ ಅನುಭವಿಸಬೇಕಾಯಿತು.

ಇದನ್ನು ಓದಿ:ಮಗುವಿನೊಂದಿಗೆ ರೈಲು ಹಳಿಗೆ ಬಿದ್ದ ಮಹಿಳೆ.. ದೇವದೂತನಾದ ಲೋಕೊ ಪೈಲೆಟ್​

Last Updated : Oct 24, 2022, 11:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.